<p><strong>ಮೈಸೂರು:</strong> ‘ನಮ್ಮೊಂದಿಗೆ ನಾವು ಸ್ಪರ್ಧಿಸಿದಾಗ ಶ್ರದ್ಧೆ ಬೆಳೆಯುತ್ತದೆ’ ಎಂದು ವಾಗ್ಮಿ ಎಂ.ಕೃಷ್ಣೇಗೌಡ ಹೇಳಿದರು.</p><p>ಇಲ್ಲಿನ ಜಯಲಕ್ಷ್ಮೀಪುರಂನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಮಹಮ್ 2ಕೆ26’ ರಾಜ್ಯ ಮಟ್ಟದ ಅಂತರ ಕಾಲೇಜು ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.</p><p>‘ಆಲೋಚನೆಗೆ ತಕ್ಕಂತೆ ಬದುಕು ರೂಪಿಸಿಕೊಳ್ಳಬೇಕೇ ಹೊರತು, ಬದುಕಿಗೆ ತಕ್ಕಂತೆ ಆಲೋಚನೆ ಬದಲಿಸಬಾರದು’ ಎಂದು ಸಲಹೆ ನೀಡಿದರು.</p><p>‘ಇತರರೊಂದಿಗೆ ಸ್ಪರ್ಧಿಸಿದರೆ ವಿಕೃತಿ ಬೆಳೆಯಬಹುದು. ಇತರರನ್ನು ಮೀರಿಸುವ ಬದಲು ನಮ್ಮ ಮಿತಿಗಳನ್ನು ಮೀರಿ ಬೆಳೆಯಬೇಕು. ಇತರರನ್ನು ಮೀರಿಸುವ ಹಟ ಕ್ರೌರ್ಯಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಎಚ್ಚರಿಸಿದರು.</p><p>ಅಮೃತ ವಿಶ್ವವಿದ್ಯಾಪೀಠ ತಂಡದವರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮೈಕಾಸ್ ಕಾಲೇಜು ರನ್ನರ್ಅಪ್ ಪ್ರಶಸ್ತಿ ಪಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. </p><p>ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮಿ ಮುರಳೀಧರ್, ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ, ಸಿಇಒ ಎಸ್.ಆರ್. ರಮೇಶ್, ‘ಮಹಮ್’ ಸಂಚಾಲಕಿ ಪುಷ್ಪಾರಾಣಿ, ಪಿ.ಜಿ., ವಿದ್ಯಾರ್ಥಿ ಸಂಚಾಲಕರಾದ ನಿಹಾರಿಕ ಹೆಗಡೆ, ಸುಮಂತ್ ಎಸ್. ಉಪಸ್ಥಿತರಿದ್ದರು.</p><p>ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಗೀತಾ ಡಿ., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನೀಲ್ ಎನ್. ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ನಮ್ಮೊಂದಿಗೆ ನಾವು ಸ್ಪರ್ಧಿಸಿದಾಗ ಶ್ರದ್ಧೆ ಬೆಳೆಯುತ್ತದೆ’ ಎಂದು ವಾಗ್ಮಿ ಎಂ.ಕೃಷ್ಣೇಗೌಡ ಹೇಳಿದರು.</p><p>ಇಲ್ಲಿನ ಜಯಲಕ್ಷ್ಮೀಪುರಂನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಮಹಮ್ 2ಕೆ26’ ರಾಜ್ಯ ಮಟ್ಟದ ಅಂತರ ಕಾಲೇಜು ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.</p><p>‘ಆಲೋಚನೆಗೆ ತಕ್ಕಂತೆ ಬದುಕು ರೂಪಿಸಿಕೊಳ್ಳಬೇಕೇ ಹೊರತು, ಬದುಕಿಗೆ ತಕ್ಕಂತೆ ಆಲೋಚನೆ ಬದಲಿಸಬಾರದು’ ಎಂದು ಸಲಹೆ ನೀಡಿದರು.</p><p>‘ಇತರರೊಂದಿಗೆ ಸ್ಪರ್ಧಿಸಿದರೆ ವಿಕೃತಿ ಬೆಳೆಯಬಹುದು. ಇತರರನ್ನು ಮೀರಿಸುವ ಬದಲು ನಮ್ಮ ಮಿತಿಗಳನ್ನು ಮೀರಿ ಬೆಳೆಯಬೇಕು. ಇತರರನ್ನು ಮೀರಿಸುವ ಹಟ ಕ್ರೌರ್ಯಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ಎಚ್ಚರಿಸಿದರು.</p><p>ಅಮೃತ ವಿಶ್ವವಿದ್ಯಾಪೀಠ ತಂಡದವರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಮೈಕಾಸ್ ಕಾಲೇಜು ರನ್ನರ್ಅಪ್ ಪ್ರಶಸ್ತಿ ಪಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. </p><p>ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಟಿ. ವಿಜಯಲಕ್ಷ್ಮಿ ಮುರಳೀಧರ್, ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ, ಸಿಇಒ ಎಸ್.ಆರ್. ರಮೇಶ್, ‘ಮಹಮ್’ ಸಂಚಾಲಕಿ ಪುಷ್ಪಾರಾಣಿ, ಪಿ.ಜಿ., ವಿದ್ಯಾರ್ಥಿ ಸಂಚಾಲಕರಾದ ನಿಹಾರಿಕ ಹೆಗಡೆ, ಸುಮಂತ್ ಎಸ್. ಉಪಸ್ಥಿತರಿದ್ದರು.</p><p>ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಗೀತಾ ಡಿ., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುನೀಲ್ ಎನ್. ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>