<p>ತಿ.ನರಸೀಪುರ : ತಾಲ್ಲೂಕಿನ ತಲಕಾಡು ಹೋಬಳಿಯ ಪ್ರಸಿದ್ಧ ಸೋಮಶೈಲ ಖ್ಯಾತಿಯ ಮುಡುಕುತೊರೆಯ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಪರ್ವತ ಪರಿಷೆ (ಬಟ್ಟಲು ಪೂಜೆ) ಅಂಗವಾಗಿ ಶುಕ್ರವಾರ ಸಹಸ್ರಾರು ಭಕ್ತರು ಮುಡುಕುತೊರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.</p>.<p>ಮೈಸೂರು ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.ಬಟ್ಟಲು ಪೂಜೆಯ ವಿಶೇಷ ಹಿನ್ನೆಲೆ : ಪಾರ್ವತಿ ದೇವಿ ಅಮ್ಮನವರು ತವರು ಮನೆಯಾದ ಶ್ರೀಶೈಲ ಪರ್ವತದಿಂದ ಗಂಡನ ಮನೆಯಾದ ಮುಡುಕುತೊರೆಯ ಮಲ್ಲಿಕಾರ್ಜುನ ಸ್ವಾಮಿಯ ಗಿರಿಗೆ ಆಗಮಿಸುತ್ತಾರೆ ಎಂಬ ಶುಭ ಸಂದರ್ಭವೇ ಈ ಪೂಜೆ ಇದಾಗಿದೆ. ಬಟ್ಟಲು ಪೂಜೆಯ ವೇಳೆ ಮುತ್ತೈದೆಯರಿಗೆ ಅರಿಸಿನ, ಕುಂಕುಮ, ಬಾಗಿನ ಹಾಗೂ ಮಡಿಲಕ್ಕಿ ಸಮರ್ಪಿಸಲಾಗುತ್ತದೆ.</p>.<p>ಪರ್ವತ ಪರಿಷೆಗೆ ಆಗಮಿಸಿದ ಮುತ್ತೈದೆಯರು ಅರಿಶಿನ-ಕುಂಕುಮ ಬಾಗಿನ ನೀಡಿದರು. ಈ ಪೂಜೆಯಿಂದ ಮುತ್ತೈದೆಯರಿಗೆ ಸೌಭಾಗ್ಯ, ಸನ್ಮಂಗಳ ದೊರೆಯುತ್ತದೆ ಎಂಬ ನಂಬಿಕೆ ಇದೆ. ಕಾವೇರಿ ತೀರದಲ್ಲಿ ಬಟ್ಟಲು ಪೂಜೆ ಸಲ್ಲಿಸಿದ ಬಳಿಕ ಭಕ್ತರು ಬೆಟ್ಟಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದರು</p>.<p>ಗುರುವಾರವೇ ಮುಡುಕುತೊರೆಗೆಬಂದಿದ್ದ ಹಲವು ಭಕ್ತರು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಅಲ್ಲಲ್ಲಿ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-38-15012746</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ : ತಾಲ್ಲೂಕಿನ ತಲಕಾಡು ಹೋಬಳಿಯ ಪ್ರಸಿದ್ಧ ಸೋಮಶೈಲ ಖ್ಯಾತಿಯ ಮುಡುಕುತೊರೆಯ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿಯ ಪರ್ವತ ಪರಿಷೆ (ಬಟ್ಟಲು ಪೂಜೆ) ಅಂಗವಾಗಿ ಶುಕ್ರವಾರ ಸಹಸ್ರಾರು ಭಕ್ತರು ಮುಡುಕುತೊರೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.</p>.<p>ಮೈಸೂರು ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.ಬಟ್ಟಲು ಪೂಜೆಯ ವಿಶೇಷ ಹಿನ್ನೆಲೆ : ಪಾರ್ವತಿ ದೇವಿ ಅಮ್ಮನವರು ತವರು ಮನೆಯಾದ ಶ್ರೀಶೈಲ ಪರ್ವತದಿಂದ ಗಂಡನ ಮನೆಯಾದ ಮುಡುಕುತೊರೆಯ ಮಲ್ಲಿಕಾರ್ಜುನ ಸ್ವಾಮಿಯ ಗಿರಿಗೆ ಆಗಮಿಸುತ್ತಾರೆ ಎಂಬ ಶುಭ ಸಂದರ್ಭವೇ ಈ ಪೂಜೆ ಇದಾಗಿದೆ. ಬಟ್ಟಲು ಪೂಜೆಯ ವೇಳೆ ಮುತ್ತೈದೆಯರಿಗೆ ಅರಿಸಿನ, ಕುಂಕುಮ, ಬಾಗಿನ ಹಾಗೂ ಮಡಿಲಕ್ಕಿ ಸಮರ್ಪಿಸಲಾಗುತ್ತದೆ.</p>.<p>ಪರ್ವತ ಪರಿಷೆಗೆ ಆಗಮಿಸಿದ ಮುತ್ತೈದೆಯರು ಅರಿಶಿನ-ಕುಂಕುಮ ಬಾಗಿನ ನೀಡಿದರು. ಈ ಪೂಜೆಯಿಂದ ಮುತ್ತೈದೆಯರಿಗೆ ಸೌಭಾಗ್ಯ, ಸನ್ಮಂಗಳ ದೊರೆಯುತ್ತದೆ ಎಂಬ ನಂಬಿಕೆ ಇದೆ. ಕಾವೇರಿ ತೀರದಲ್ಲಿ ಬಟ್ಟಲು ಪೂಜೆ ಸಲ್ಲಿಸಿದ ಬಳಿಕ ಭಕ್ತರು ಬೆಟ್ಟಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದರು</p>.<p>ಗುರುವಾರವೇ ಮುಡುಕುತೊರೆಗೆಬಂದಿದ್ದ ಹಲವು ಭಕ್ತರು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಅಲ್ಲಲ್ಲಿ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-38-15012746</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>