<p><strong>ಮೈಸೂರು</strong>: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಈ ಬಾರಿ 11 ದಿನ ನಡೆಯಲಿದೆ. ಹೀಗೆ, ಪಂಚಾಂಗದಲ್ಲಿ ಮುಹೂರ್ತ ಬಂದಿರುವುದು ಉತ್ಸವದ ಇತಿಹಾಸದಲ್ಲಿ ಇದೇ ಮೊದಲು.</p>.<p>‘ಸಂಪ್ರದಾಯದಂತೆ, ಹಿಂದಿನಿಂದಲೂ 10 ದಿನಗಳವರೆಗೆ ಉತ್ಸವ ನಡೆಸಲಾಗುತ್ತಿತ್ತು. ಈ ಬಾರಿ ‘ಪಂಚಮಿ’ಯು 2 ದಿನಗಳವರೆಗೆ ಬಂದಿದೆ. ಹೀಗಾಗಿ, ಸೆ.22ರಿಂದ ಅ.2ರವರೆಗೆ ದಸರಾ ನಿಗದಿಯಾಗಿದೆ. ಇದೇ 26ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಿಗದಿಯಾಗಿದ್ದು, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.</p>.<p>ಈವರೆಗೆ 11 ದಿನಗಳವರೆಗೆ ಉತ್ಸವ ನಡೆಸಿದ ಉದಾಹರಣೆ ಇರಲಿಲ್ಲ. ಈ ಬಾರಿ ನಡೆದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಸೆ. 26 ಹಾಗೂ 27–ಎರಡೂ ದಿನ ‘ಪಂಚಮಿ’ ಬಂದಿರುವುದೇ ಇದಕ್ಕೆ ಕಾರಣ. ಪಂಚಾಂಗದ ಪ್ರಕಾರವೇ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ.</p>.<p>‘ಪಂಚಮಿ ಎರಡು ದಿನ ಬಂದಿರುವುದು ಈ ಬಾರಿಯ ವಿಶೇಷ. ಹೀಗಾಗಿ, 11 ದಿನಗಳ ಪೂಜೆ ನಡೆಯಬೇಕಾಗುತ್ತದೆ. ‘ದಶಮಿ’ಯೇ ಈ ಸಲ 1ನೇ ದಿನ ಬಂದಿದೆ. ಸಂಪ್ರದಾಯದಂತೆ ಆಯುಧಪೂಜೆಯ ಮರು ದಿನ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಮಾಡಬೇಕಾಗುತ್ತದೆ’ ಎಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಪ್ರತಿಕ್ರಿಯಿಸಿದರು.</p>.<p>‘ಪಂಚಾಂಗದ ಪ್ರಕಾರ ನಡೆಸಲಾಗುವ ಉತ್ಸವವಿದು. ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಸರ್ಕಾರ ಅಂತಿಮವಾಗಿ ತೀರ್ಮಾನಿಸಬೇಕಾಗುತ್ತದೆ’ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಈ ಬಾರಿ 11 ದಿನ ನಡೆಯಲಿದೆ. ಹೀಗೆ, ಪಂಚಾಂಗದಲ್ಲಿ ಮುಹೂರ್ತ ಬಂದಿರುವುದು ಉತ್ಸವದ ಇತಿಹಾಸದಲ್ಲಿ ಇದೇ ಮೊದಲು.</p>.<p>‘ಸಂಪ್ರದಾಯದಂತೆ, ಹಿಂದಿನಿಂದಲೂ 10 ದಿನಗಳವರೆಗೆ ಉತ್ಸವ ನಡೆಸಲಾಗುತ್ತಿತ್ತು. ಈ ಬಾರಿ ‘ಪಂಚಮಿ’ಯು 2 ದಿನಗಳವರೆಗೆ ಬಂದಿದೆ. ಹೀಗಾಗಿ, ಸೆ.22ರಿಂದ ಅ.2ರವರೆಗೆ ದಸರಾ ನಿಗದಿಯಾಗಿದೆ. ಇದೇ 26ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಿಗದಿಯಾಗಿದ್ದು, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.</p>.<p>ಈವರೆಗೆ 11 ದಿನಗಳವರೆಗೆ ಉತ್ಸವ ನಡೆಸಿದ ಉದಾಹರಣೆ ಇರಲಿಲ್ಲ. ಈ ಬಾರಿ ನಡೆದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಸೆ. 26 ಹಾಗೂ 27–ಎರಡೂ ದಿನ ‘ಪಂಚಮಿ’ ಬಂದಿರುವುದೇ ಇದಕ್ಕೆ ಕಾರಣ. ಪಂಚಾಂಗದ ಪ್ರಕಾರವೇ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ.</p>.<p>‘ಪಂಚಮಿ ಎರಡು ದಿನ ಬಂದಿರುವುದು ಈ ಬಾರಿಯ ವಿಶೇಷ. ಹೀಗಾಗಿ, 11 ದಿನಗಳ ಪೂಜೆ ನಡೆಯಬೇಕಾಗುತ್ತದೆ. ‘ದಶಮಿ’ಯೇ ಈ ಸಲ 1ನೇ ದಿನ ಬಂದಿದೆ. ಸಂಪ್ರದಾಯದಂತೆ ಆಯುಧಪೂಜೆಯ ಮರು ದಿನ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಮಾಡಬೇಕಾಗುತ್ತದೆ’ ಎಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಪ್ರತಿಕ್ರಿಯಿಸಿದರು.</p>.<p>‘ಪಂಚಾಂಗದ ಪ್ರಕಾರ ನಡೆಸಲಾಗುವ ಉತ್ಸವವಿದು. ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಸರ್ಕಾರ ಅಂತಿಮವಾಗಿ ತೀರ್ಮಾನಿಸಬೇಕಾಗುತ್ತದೆ’ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>