<p><strong>ಮೈಸೂರು: ‘</strong>ಜಿಲ್ಲೆಯ ಹುಣಸೂರು ತಾಲ್ಲೂಕಿನ ದಾಸನಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಬೃಹತ್ ಡ್ರಗ್ಸ್ ದಾಸ್ತಾನು ಕೊಠಡಿ ಪತ್ತೆಯಾಗಿದೆ. ಅಲ್ಲಿ 41 ಕೆ.ಜಿ. ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ₹ 12 ಕೋಟಿ ಎಂದು ಅಂದಾಜಿಸಲಾಗಿದೆ.</p>.<p>‘ಸನ್ಮಿತ್ರ’ ಯೋಜನೆಯಡಿ ಡ್ರಗ್ಸ್ ಸೇವನೆ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಅವರ ಚಲನವಲನ ಗಮನಿಸಿದಾಗ, ದಾಸನಪುರದ ಡ್ರಗ್ಸ್ ದಾಸ್ತಾನು ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. </p>.<p>ಹುಣಸೂರು ನಗರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದ ಐವರ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿ, ಮೈಸೂರು ನಗರದ ಸಿದ್ದಿಕಿ ನಗರದ ನಿವಾಸಿ ಮೊಹಮ್ಮದ್ ಇರ್ಫಾನ್(30) ಹಾಗೂ ಜಮೀನಿನ ಮಾಲೀಕ ಹುಣಸೂರು ಪಟ್ಟಣದ ರೆಹಮತ್ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ (42) ಎನ್ನುವವರನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.</p>.<p>ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ‘ಆರೋಪಿಗಳು ಶುಂಠಿ ಕೃಷಿ ಮಾಡುವುದಾಗಿ ತಿಳಿಸಿ ಫೆಬ್ರುವರಿಯಲ್ಲಿ ತೋಟದ ಮನೆಯನ್ನು ಬಾಡಿಗೆಗೆ ಪಡೆದಿದ್ದರು’ ಎಂದು ಮಾಹಿತಿ ನೀಡಿದರು.</p>.<p>‘ಅವರು ಮಾರ್ಚ್ 22ರಂದು ಬಂದು ಚಟುವಟಿಕೆ ಆರಂಭಿಸಿದ್ದರು. ಗೂಡ್ಸ್ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಕಚ್ಚಾ ಸಾಮಗ್ರಿಗಳನ್ನು ತಂದಿದ್ದರು. 50 ಗ್ರಾಂ.ನಿಂದ ಅರ್ಧ ಕೆ.ಜಿ.ಯವರೆಗೆ ಪ್ಯಾಕ್ ಮಾಡಿದ್ದ 16 ಪ್ಯಾಕೆಟ್ಗಳಲ್ಲಿ ಒಟ್ಟು 7.35 ಕೆ.ಜಿ. ಮೆಫೆಡ್ರೋನ್ ತುಂಬಿಟ್ಟಿದ್ದರು. ಅದರೊಂದಿಗೆ 41 ಕೆ.ಜಿ. ತೂಕದ ಮಾದಕ ವಸ್ತು ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತು ಪತ್ತೆಯಾಗಿವೆ. ಅವನ್ನು ಶುಕ್ರವಾರ ರಾತ್ರಿ ಮುಂಬೈಗೆ ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದಾಗ ತಂಡ ದಾಳಿ ನಡೆಸಿದೆ’ ಎಂದು ತಿಳಿಸಿದರು.</p>.<p>‘ಆರೋಪಿಗಳು ಜನಸಂಪರ್ಕ ಇಲ್ಲದ ಸ್ಥಳ ಆರಿಸಿಕೊಂಡಿದ್ದರು. ಈ ಕಟ್ಟಡಕ್ಕೆ ಕಚ್ಛಾ ರಸ್ತೆ ಇದ್ದು, ಕಟ್ಟಡದ ಸುತ್ತಲೂ 3–4 ಕಿ.ಮೀ. ದೂರದಲ್ಲಿ ಯಾವುದೇ ಮನೆಗಳಿಲ್ಲ. ಮುಂಬೈನಿಂದ ಡ್ರಗ್ಸ್ ತಯಾರಿಸಿ, ಕೊನೆಯ ಹಂತದಲ್ಲಿ ರಾಸಾಯನಿಕ ಮಿಶ್ರಣ ಮಾಡಿ, ಅವನ್ನು ಒಣಗಿಸಲು ಇಟ್ಟಿದ್ದರು’ ಎಂದು ವಿವರಿಸಿದರು.</p>.<p><strong>ಮುಂಬೈ ನಂಟು:</strong> ‘ಸಿದ್ದಿಕಿ ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್ ಇರ್ಫಾನ್ಗೆ ಆರು ತಿಂಗಳಿಂದ ಮುಂಬೈ ವ್ಯಕ್ತಿಯೊಬ್ಬನ ಸಂಪರ್ಕ ಇತ್ತು. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಇದರ ನಂಟು ಹೊರ ರಾಜ್ಯಕ್ಕೂ ವಿಸ್ತರಿಸಿದೆ. ಈ ತಂಡದಲ್ಲಿ ಇಬ್ಬರು ಸ್ಥಳೀಯರು ಹಾಗೂ ನಾಲ್ವರು ಹೊರರಾಜ್ಯದವರು ಇರುವುದು ಗೊತ್ತಾಗಿದೆ. ಅವರ ಪತ್ತೆಗಾಗಿ ಹುಣಸೂರು ಉಪ ವಿಭಾಗದ ಡಿವೈೆಎಸ್ಪಿ ರವಿ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದೇವೆ’ ಎಂದು ಹೇಳಿದರು.</p>.<p>‘ತಂಡದಲ್ಲಿ ಒಬ್ಬ ಡ್ರಗ್ಸ್ ತಯಾರಿಸುವ ತಜ್ಞ ಇದ್ದ. ಪ್ಯಾಕಿಂಗ್ಗೆ ಬಳಸುವ ಯಂತ್ರಗಳಷ್ಟೆ ಪತ್ತೆಯಾಗಿವೆ. ಆನ್ಲೈನ್ ಮೂಲಕ ಕೆಮಿಕಲ್ ತರಿಸಿಕೊಂಡಿದ್ದರು. ಡ್ರಗ್ಸ್ ತಯಾರಿಸುತ್ತಿರುವುದಕ್ಕೆ ಕುರುಹು ಸಿಕ್ಕಿಲ್ಲ. ದಾಸ್ತಾನಿಗಾಗಿ ಆ ಕಟ್ಟಡವನ್ನು ಬಳಸಿಕೊಂಡಿದ್ದರು. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಲ್ಲಿಂದ ಎಲ್ಲಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.</p>.<p>‘ಹುಣಸೂರು ಹೊರವಲಯದ ರತ್ನಾಪುರ ರಸ್ತೆಯ ಸಲೀಂ ಪ್ಯಾಲೇಸ್ ಬಳಿ ಟೀ ಅಂಗಡಿಯಲ್ಲಿ ಇಬ್ಬರು ಗಾಂಜಾ ಸೇವಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದ್ದಿದ್ದರು. ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದಾಸನಪುರದಲ್ಲಿ ಡ್ರಗ್ಸ್ ದಾಸ್ತಾನು ಇರುವ ಮಾಹಿತಿ ಪೊಲೀಸರಿಗೆ ದೊರೆತಿದೆ’ ಎಂದು ಹೇಳಿದರು. </p>.<div><blockquote>‘ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆಹಚ್ಚಿರುವ ಬಗ್ಗೆ ಗೊತ್ತಾಗಿದೆ. ನಂಟು ಎಲ್ಲಿಗಾದರೂ ಇರಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುತ್ತಿದ್ದೇವೆ.ಡ್ರಗ್ಸ್ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿ. </blockquote><span class="attribution"> ಸಿದ್ದರಾಮಯ್ಯ ಮುಖ್ಯಮಂತ್ರಿ</span></div>.<p><strong>- 3 ತಿಂಗಳಲ್ಲಿ 77 ಕೇಸ್ ಪತ್ತೆ</strong> </p><p>ಜಿಲ್ಲಾ ಪೊಲೀಸರು ಕಳೆದ 3 ತಿಂಗಳಲ್ಲಿ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿದ್ದು 77 ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಡ್ರಗ್ಸ್ ಸೇವಿಸಿದ 63 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘ಸನ್ಮಿತ್ರ’ ಯೋಜನೆಯಡಿ ಅವರ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು. ಈ ಮೂಲಕವೇ ಜಾಲ ಪತ್ತೆಯಾಗಿದೆ. </p>.<p> <strong>ಹೆಚ್ಚುತ್ತಿದೆ ಹೊರರಾಜ್ಯದ ನಂಟು</strong> </p><p>ಮೈಸೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಪ್ರಕರಣಗಳಲ್ಲಿ ಹೊರ ರಾಜ್ಯದವರಿಗೆ ಕೃತ್ಯಕ್ಕೆ ಮೈಸೂರು ಆಪ್ತವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈಚೆಗೆ ಉನ್ನತಿ ನಗರ ಹಾಗೂ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾದ ಡ್ರಗ್ಸ್ ತಯಾರಿಕ ಘಟಕದಲ್ಲಿ ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಆರೋಪಿಗಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಜಿಲ್ಲೆಯ ಹುಣಸೂರು ತಾಲ್ಲೂಕಿನ ದಾಸನಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಬೃಹತ್ ಡ್ರಗ್ಸ್ ದಾಸ್ತಾನು ಕೊಠಡಿ ಪತ್ತೆಯಾಗಿದೆ. ಅಲ್ಲಿ 41 ಕೆ.ಜಿ. ಡ್ರಗ್ಸ್ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ₹ 12 ಕೋಟಿ ಎಂದು ಅಂದಾಜಿಸಲಾಗಿದೆ.</p>.<p>‘ಸನ್ಮಿತ್ರ’ ಯೋಜನೆಯಡಿ ಡ್ರಗ್ಸ್ ಸೇವನೆ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಅವರ ಚಲನವಲನ ಗಮನಿಸಿದಾಗ, ದಾಸನಪುರದ ಡ್ರಗ್ಸ್ ದಾಸ್ತಾನು ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. </p>.<p>ಹುಣಸೂರು ನಗರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದ ಐವರ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿ, ಮೈಸೂರು ನಗರದ ಸಿದ್ದಿಕಿ ನಗರದ ನಿವಾಸಿ ಮೊಹಮ್ಮದ್ ಇರ್ಫಾನ್(30) ಹಾಗೂ ಜಮೀನಿನ ಮಾಲೀಕ ಹುಣಸೂರು ಪಟ್ಟಣದ ರೆಹಮತ್ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ (42) ಎನ್ನುವವರನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.</p>.<p>ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ‘ಆರೋಪಿಗಳು ಶುಂಠಿ ಕೃಷಿ ಮಾಡುವುದಾಗಿ ತಿಳಿಸಿ ಫೆಬ್ರುವರಿಯಲ್ಲಿ ತೋಟದ ಮನೆಯನ್ನು ಬಾಡಿಗೆಗೆ ಪಡೆದಿದ್ದರು’ ಎಂದು ಮಾಹಿತಿ ನೀಡಿದರು.</p>.<p>‘ಅವರು ಮಾರ್ಚ್ 22ರಂದು ಬಂದು ಚಟುವಟಿಕೆ ಆರಂಭಿಸಿದ್ದರು. ಗೂಡ್ಸ್ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಕಚ್ಚಾ ಸಾಮಗ್ರಿಗಳನ್ನು ತಂದಿದ್ದರು. 50 ಗ್ರಾಂ.ನಿಂದ ಅರ್ಧ ಕೆ.ಜಿ.ಯವರೆಗೆ ಪ್ಯಾಕ್ ಮಾಡಿದ್ದ 16 ಪ್ಯಾಕೆಟ್ಗಳಲ್ಲಿ ಒಟ್ಟು 7.35 ಕೆ.ಜಿ. ಮೆಫೆಡ್ರೋನ್ ತುಂಬಿಟ್ಟಿದ್ದರು. ಅದರೊಂದಿಗೆ 41 ಕೆ.ಜಿ. ತೂಕದ ಮಾದಕ ವಸ್ತು ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತು ಪತ್ತೆಯಾಗಿವೆ. ಅವನ್ನು ಶುಕ್ರವಾರ ರಾತ್ರಿ ಮುಂಬೈಗೆ ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದಾಗ ತಂಡ ದಾಳಿ ನಡೆಸಿದೆ’ ಎಂದು ತಿಳಿಸಿದರು.</p>.<p>‘ಆರೋಪಿಗಳು ಜನಸಂಪರ್ಕ ಇಲ್ಲದ ಸ್ಥಳ ಆರಿಸಿಕೊಂಡಿದ್ದರು. ಈ ಕಟ್ಟಡಕ್ಕೆ ಕಚ್ಛಾ ರಸ್ತೆ ಇದ್ದು, ಕಟ್ಟಡದ ಸುತ್ತಲೂ 3–4 ಕಿ.ಮೀ. ದೂರದಲ್ಲಿ ಯಾವುದೇ ಮನೆಗಳಿಲ್ಲ. ಮುಂಬೈನಿಂದ ಡ್ರಗ್ಸ್ ತಯಾರಿಸಿ, ಕೊನೆಯ ಹಂತದಲ್ಲಿ ರಾಸಾಯನಿಕ ಮಿಶ್ರಣ ಮಾಡಿ, ಅವನ್ನು ಒಣಗಿಸಲು ಇಟ್ಟಿದ್ದರು’ ಎಂದು ವಿವರಿಸಿದರು.</p>.<p><strong>ಮುಂಬೈ ನಂಟು:</strong> ‘ಸಿದ್ದಿಕಿ ನಗರದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಮೊಹಮ್ಮದ್ ಇರ್ಫಾನ್ಗೆ ಆರು ತಿಂಗಳಿಂದ ಮುಂಬೈ ವ್ಯಕ್ತಿಯೊಬ್ಬನ ಸಂಪರ್ಕ ಇತ್ತು. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಇದರ ನಂಟು ಹೊರ ರಾಜ್ಯಕ್ಕೂ ವಿಸ್ತರಿಸಿದೆ. ಈ ತಂಡದಲ್ಲಿ ಇಬ್ಬರು ಸ್ಥಳೀಯರು ಹಾಗೂ ನಾಲ್ವರು ಹೊರರಾಜ್ಯದವರು ಇರುವುದು ಗೊತ್ತಾಗಿದೆ. ಅವರ ಪತ್ತೆಗಾಗಿ ಹುಣಸೂರು ಉಪ ವಿಭಾಗದ ಡಿವೈೆಎಸ್ಪಿ ರವಿ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದೇವೆ’ ಎಂದು ಹೇಳಿದರು.</p>.<p>‘ತಂಡದಲ್ಲಿ ಒಬ್ಬ ಡ್ರಗ್ಸ್ ತಯಾರಿಸುವ ತಜ್ಞ ಇದ್ದ. ಪ್ಯಾಕಿಂಗ್ಗೆ ಬಳಸುವ ಯಂತ್ರಗಳಷ್ಟೆ ಪತ್ತೆಯಾಗಿವೆ. ಆನ್ಲೈನ್ ಮೂಲಕ ಕೆಮಿಕಲ್ ತರಿಸಿಕೊಂಡಿದ್ದರು. ಡ್ರಗ್ಸ್ ತಯಾರಿಸುತ್ತಿರುವುದಕ್ಕೆ ಕುರುಹು ಸಿಕ್ಕಿಲ್ಲ. ದಾಸ್ತಾನಿಗಾಗಿ ಆ ಕಟ್ಟಡವನ್ನು ಬಳಸಿಕೊಂಡಿದ್ದರು. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಲ್ಲಿಂದ ಎಲ್ಲಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.</p>.<p>‘ಹುಣಸೂರು ಹೊರವಲಯದ ರತ್ನಾಪುರ ರಸ್ತೆಯ ಸಲೀಂ ಪ್ಯಾಲೇಸ್ ಬಳಿ ಟೀ ಅಂಗಡಿಯಲ್ಲಿ ಇಬ್ಬರು ಗಾಂಜಾ ಸೇವಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದ್ದಿದ್ದರು. ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದಾಸನಪುರದಲ್ಲಿ ಡ್ರಗ್ಸ್ ದಾಸ್ತಾನು ಇರುವ ಮಾಹಿತಿ ಪೊಲೀಸರಿಗೆ ದೊರೆತಿದೆ’ ಎಂದು ಹೇಳಿದರು. </p>.<div><blockquote>‘ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆಹಚ್ಚಿರುವ ಬಗ್ಗೆ ಗೊತ್ತಾಗಿದೆ. ನಂಟು ಎಲ್ಲಿಗಾದರೂ ಇರಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುತ್ತಿದ್ದೇವೆ.ಡ್ರಗ್ಸ್ ಮುಕ್ತ ರಾಜ್ಯ ನಿರ್ಮಾಣ ನಮ್ಮ ಗುರಿ. </blockquote><span class="attribution"> ಸಿದ್ದರಾಮಯ್ಯ ಮುಖ್ಯಮಂತ್ರಿ</span></div>.<p><strong>- 3 ತಿಂಗಳಲ್ಲಿ 77 ಕೇಸ್ ಪತ್ತೆ</strong> </p><p>ಜಿಲ್ಲಾ ಪೊಲೀಸರು ಕಳೆದ 3 ತಿಂಗಳಲ್ಲಿ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿದ್ದು 77 ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಡ್ರಗ್ಸ್ ಸೇವಿಸಿದ 63 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘ಸನ್ಮಿತ್ರ’ ಯೋಜನೆಯಡಿ ಅವರ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು. ಈ ಮೂಲಕವೇ ಜಾಲ ಪತ್ತೆಯಾಗಿದೆ. </p>.<p> <strong>ಹೆಚ್ಚುತ್ತಿದೆ ಹೊರರಾಜ್ಯದ ನಂಟು</strong> </p><p>ಮೈಸೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಪ್ರಕರಣಗಳಲ್ಲಿ ಹೊರ ರಾಜ್ಯದವರಿಗೆ ಕೃತ್ಯಕ್ಕೆ ಮೈಸೂರು ಆಪ್ತವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈಚೆಗೆ ಉನ್ನತಿ ನಗರ ಹಾಗೂ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾದ ಡ್ರಗ್ಸ್ ತಯಾರಿಕ ಘಟಕದಲ್ಲಿ ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಆರೋಪಿಗಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>