<p><strong>ಮೈಸೂರು:</strong> ನಗರದ ಹೊರವಲಯದ ಚಿಕ್ಕಹಳ್ಳಿಯ ಮೈಸೆಮ್ ಕಾಲೇಜಿನಲ್ಲಿ ಸೋಮವಾರ ಪಿಯು ಪರೀಕ್ಷೆ ಬರೆದು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಪದವಿ ಪಡೆಯುವ ಕನಸು ಹೊಂದಿದ್ದ ವಿದ್ಯಾರ್ಥಿಗಳು ಸಿಇಟಿ ಮಾರ್ಗದರ್ಶನ ಪಡೆದರು. </p>.ಮೈಸೂರು ನಗರದ ಪ್ರಮುಖ ರಸ್ತೆಗಳಿಗೆ ‘ಕಾಂಕ್ರೀಟ್ ಗ್ಯಾರಂಟಿ’. <p>'ಪ್ರಜಾವಾಣಿ' ಮತ್ತು 'ಡೆಕ್ಕನ್ ಹೆರಾಲ್ಡ್' ಹಾಗೂ ಮೈಸೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ (ಮೈಸೆಮ್) ಸಹಯೋಗದಲ್ಲಿ ನಡೆದ ಸಿಇಟಿ ಮಾರ್ಗದರ್ಶನ ಮತ್ತು ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ'ವು ವಿದ್ಯಾರ್ಥಿಗಳ ಗೊಂದಲ ಬಗೆಹರಿಸಿದರೆ, ಪೋಷಕರಿಗೆ ಮಕ್ಕಳ ಭವಿಷ್ಯಕ್ಕೆ ನೆರವಾಗುವ ಬಗೆಗಳನ್ನು ತೋರಿಕೊಟ್ಟಿತು. </p><p>ಮಹಾರಾಜ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಾಗೂ ಸಿಇಟಿ ಪರಿಣತ ಉದಯಶಂಕರ್ ಮಾತನಾಡಿ, 'ನಿರಂತರ ಅಭ್ಯಾಸದಿಂದ ಮಾತ್ರವೇ ಯಶಸ್ಸು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ನಿತ್ಯ ದಿನಪತ್ರಿಕೆ ಓದಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಜಗತ್ತಿನ ಉನ್ನತ ಸ್ಥಾನ ಪಡೆದವರೆಲ್ಲರೂ ಜ್ಞಾನ ಮತ್ತು ಕೌಶಲ ಹೊಂದಿದ್ದವರು' ಎಂದರು. </p><p>'ಪೋಷಕರು ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು. ಅವರ ಇಷ್ಟದ ಕಲಿಕೆಗೆ ಅನುವು ಮಾಡಿಕೊಡಬೇಕು. ಬದುಕುವ ದಾರಿ ತೋರಿಸಿ, ಆದರೆ, ನೀವೇ ಅವರನ್ನು ಮುನ್ನಡೆಸಬೇಡಿ. ಅವರ ಸಾಮರ್ಥ್ಯ ಹೆಚ್ಚಿಸಲು ಪ್ರೋತ್ಸಾಹ ಕೊಡಿ' ಎಂದು ಕಿವಿಮಾತು ಹೇಳಿದರು. </p>.ಮೈಸೂರು | ಬಿಜೆವಿಗೆ ಎಂಎಲ್ಸಿ ಸ್ಥಾನ: ‘ಮುಂಚೂಣಿ’ ಘಟಕಗಳ ಒತ್ತಾಯ.<p>ಸಿಇಟಿ ತಜ್ಞೆ ಆರ್.ರಕ್ಷಿತಾ ಅವರು, 'ಸಿಇಟಿ ನಂತರ ಪರೀಕ್ಷೆ ನಂತರ ಪದವಿ ಕೋರ್ಸ್ ಆಯ್ಕೆ ಹೇಗೆ? ಸೀಟ್ ಮ್ಯಾಟ್ರಿಕ್ಸ್ ಎಂದರೇನು? ಪ್ರವೇಶ ಪಡೆಯಲು ಏನು ಮಾಡಬೇಕು? ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ? ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ?ಯಾವೆಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ?ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು?'ಎಂಬುದನ್ನು ವಿವರಿಸಿದರು. </p><p>ಜ್ಞಾನವಾಹಿನಿ ಸಂಸ್ಥೆ ಅಧ್ಯಕ್ಷ ಶಿವಪ್ಪ, ಟ್ರಸ್ಟಿಗಳಾದ ಪುಟ್ಟಬುದ್ಧಿ, ಕಾರ್ಯದರ್ಶಿ ಮಂಜುನಾಥ್, ಟಿಪಿಎಂಎಲ್ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ.ರವಿ, ಉಪಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್, 'ಪ್ರಜಾವಾಣಿ' ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, 'ಡೆಕ್ಕನ್ ಹೆರಾಲ್ಡ್' ಮೈಸೂರು ಬ್ಯೂರೋ ಮುಖ್ಯಸ್ಥ ಟಿ.ಆರ್.ಸತೀಶ್ಕುಮಾರ್ ಪಾಲ್ಗೊಂಡಿದ್ದರು.</p>.ಮೈಸೂರು: ತಾತ್ಕಾಲಿಕ ಮಳಿಗೆಯಲ್ಲಿ ಖಾದಿ ಬಟ್ಟೆಗಳಿಗೆ ಉತ್ತಮ ವ್ಯಾಪಾರ, ಬೇಡಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದ ಹೊರವಲಯದ ಚಿಕ್ಕಹಳ್ಳಿಯ ಮೈಸೆಮ್ ಕಾಲೇಜಿನಲ್ಲಿ ಸೋಮವಾರ ಪಿಯು ಪರೀಕ್ಷೆ ಬರೆದು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಪದವಿ ಪಡೆಯುವ ಕನಸು ಹೊಂದಿದ್ದ ವಿದ್ಯಾರ್ಥಿಗಳು ಸಿಇಟಿ ಮಾರ್ಗದರ್ಶನ ಪಡೆದರು. </p>.ಮೈಸೂರು ನಗರದ ಪ್ರಮುಖ ರಸ್ತೆಗಳಿಗೆ ‘ಕಾಂಕ್ರೀಟ್ ಗ್ಯಾರಂಟಿ’. <p>'ಪ್ರಜಾವಾಣಿ' ಮತ್ತು 'ಡೆಕ್ಕನ್ ಹೆರಾಲ್ಡ್' ಹಾಗೂ ಮೈಸೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ (ಮೈಸೆಮ್) ಸಹಯೋಗದಲ್ಲಿ ನಡೆದ ಸಿಇಟಿ ಮಾರ್ಗದರ್ಶನ ಮತ್ತು ಕೆರಿಯರ್ ಗೈಡೆನ್ಸ್ ಕಾರ್ಯಕ್ರಮ'ವು ವಿದ್ಯಾರ್ಥಿಗಳ ಗೊಂದಲ ಬಗೆಹರಿಸಿದರೆ, ಪೋಷಕರಿಗೆ ಮಕ್ಕಳ ಭವಿಷ್ಯಕ್ಕೆ ನೆರವಾಗುವ ಬಗೆಗಳನ್ನು ತೋರಿಕೊಟ್ಟಿತು. </p><p>ಮಹಾರಾಜ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಾಗೂ ಸಿಇಟಿ ಪರಿಣತ ಉದಯಶಂಕರ್ ಮಾತನಾಡಿ, 'ನಿರಂತರ ಅಭ್ಯಾಸದಿಂದ ಮಾತ್ರವೇ ಯಶಸ್ಸು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ನಿತ್ಯ ದಿನಪತ್ರಿಕೆ ಓದಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಜಗತ್ತಿನ ಉನ್ನತ ಸ್ಥಾನ ಪಡೆದವರೆಲ್ಲರೂ ಜ್ಞಾನ ಮತ್ತು ಕೌಶಲ ಹೊಂದಿದ್ದವರು' ಎಂದರು. </p><p>'ಪೋಷಕರು ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು. ಅವರ ಇಷ್ಟದ ಕಲಿಕೆಗೆ ಅನುವು ಮಾಡಿಕೊಡಬೇಕು. ಬದುಕುವ ದಾರಿ ತೋರಿಸಿ, ಆದರೆ, ನೀವೇ ಅವರನ್ನು ಮುನ್ನಡೆಸಬೇಡಿ. ಅವರ ಸಾಮರ್ಥ್ಯ ಹೆಚ್ಚಿಸಲು ಪ್ರೋತ್ಸಾಹ ಕೊಡಿ' ಎಂದು ಕಿವಿಮಾತು ಹೇಳಿದರು. </p>.ಮೈಸೂರು | ಬಿಜೆವಿಗೆ ಎಂಎಲ್ಸಿ ಸ್ಥಾನ: ‘ಮುಂಚೂಣಿ’ ಘಟಕಗಳ ಒತ್ತಾಯ.<p>ಸಿಇಟಿ ತಜ್ಞೆ ಆರ್.ರಕ್ಷಿತಾ ಅವರು, 'ಸಿಇಟಿ ನಂತರ ಪರೀಕ್ಷೆ ನಂತರ ಪದವಿ ಕೋರ್ಸ್ ಆಯ್ಕೆ ಹೇಗೆ? ಸೀಟ್ ಮ್ಯಾಟ್ರಿಕ್ಸ್ ಎಂದರೇನು? ಪ್ರವೇಶ ಪಡೆಯಲು ಏನು ಮಾಡಬೇಕು? ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ? ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ?ಯಾವೆಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ?ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು?'ಎಂಬುದನ್ನು ವಿವರಿಸಿದರು. </p><p>ಜ್ಞಾನವಾಹಿನಿ ಸಂಸ್ಥೆ ಅಧ್ಯಕ್ಷ ಶಿವಪ್ಪ, ಟ್ರಸ್ಟಿಗಳಾದ ಪುಟ್ಟಬುದ್ಧಿ, ಕಾರ್ಯದರ್ಶಿ ಮಂಜುನಾಥ್, ಟಿಪಿಎಂಎಲ್ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ.ರವಿ, ಉಪಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್, 'ಪ್ರಜಾವಾಣಿ' ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, 'ಡೆಕ್ಕನ್ ಹೆರಾಲ್ಡ್' ಮೈಸೂರು ಬ್ಯೂರೋ ಮುಖ್ಯಸ್ಥ ಟಿ.ಆರ್.ಸತೀಶ್ಕುಮಾರ್ ಪಾಲ್ಗೊಂಡಿದ್ದರು.</p>.ಮೈಸೂರು: ತಾತ್ಕಾಲಿಕ ಮಳಿಗೆಯಲ್ಲಿ ಖಾದಿ ಬಟ್ಟೆಗಳಿಗೆ ಉತ್ತಮ ವ್ಯಾಪಾರ, ಬೇಡಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>