ಮಾರ್ಚ್ 26ರಂದು ಬೆಳಿಗ್ಗೆ 10.30ಕ್ಕೆ ‘ಹವ್ಯಾಸಿ ರಂಗಭೂಮಿ- ನಿನ್ನೆ, ಇಂದು, ನಾಳೆ’ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ರಂಗಕರ್ಮಿಗಳಾದ ಎಚ್.ಎಸ್.ಉಮೇಶ್, ನಾಟಕಕಾರ ಹೊರೆಯಾಲ ದೊರೆಸ್ವಾಮಿ ವಿಚಾರ ಮಂಡಿಸಲಿದ್ದಾರೆ. ಎಚ್.ಆರ್.ಅಧ್ಯಾಪಕ್, ಬಿ.ಎಸ್.ಸತೀಶ್, ಎನ್.ಎಸ್.ಶ್ರೀಧರ್, ಕೆ.ಆರ್.ಸುಮತಿ, ಮೈಮ್ ರಮೇಶ್, ನಾಗೇಂದ್ರ ಕುಮಾರ್, ಎನ್. ಧನಂಜಯ, ನಾಗಭೂಷಣ್, ರವಿ ಪ್ರಸಾದ್ ಸೇರಿದಂತೆ ರಂಗಕರ್ಮಿಗಳು ಪ್ರತಿಕ್ರಿಯೆ ನೀಡಲಿದ್ದಾರೆ. ರಾಜಶೇಖರ ಕದಂಬ ಅಧ್ಯಕ್ಷತೆ ಹಾಗೂ ಮಾಧವ್ ಖರೆ ಸಂಕಿರಣವನ್ನು ನಿರೂಪಿಸಲಿದ್ದಾರೆ.