<p><strong>ಮೈಸೂರು:</strong> ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 2026–27ನೇ ಸಾಲಿನ ಅಂದಾಜು ₹ 71.45 ಕೋಟಿ ಕೊರತೆ ಬಜೆಟ್ಗೆ ಅನುಮೋದನೆ ನೀಡಲಾಯಿತು.</p><p>ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ಬಜೆಟ್ ಮಂಡಿಸಿದರು.</p><p>‘ಅಂದಾಜು ₹ 384.28 ಕೋಟಿ ಆದಾಯ (ದತ್ತಿ ನಿಧಿ ಹೊರತುಪಡಿಸಿ) ನಿರೀಕ್ಷಿಸಲಾಗಿದೆ. ₹ 438 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2026–27ನೇ ಸಾಲಿನಲ್ಲಿ ವಿವಿಯಿಂದ ನಿವೃತ್ತರಾಗುವ ನೌಕರರ ಪಿಂಚಣಿಗಾಗಿ ₹ 171.45 ಕೋಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರವು ₹ 100 ಕೋಟಿ ಬಿಡುಗಡೆ ಮಾಡಿದೆ. ಇದರಿಂದಾಗಿ ಪಿಂಚಣಿ ಸೌಲಭ್ಯಗಳಿಗಾಗಿ ₹ 71.45 ಕೋಟಿ ಕೊರತೆ ಎದುರಿಸುವಂತಾಗಿದೆ’ ಎಂದು ಹೇಳಿದರು.</p><p><strong>ನಿರೀಕ್ಷೆ, ವೆಚ್ಚ:</strong> </p><p>‘ರಾಜ್ಯ ಸರ್ಕಾರದಿಂದ ಕಾಯಂ ಸಿಬ್ಬಂದಿ ವೇತನ ಹಾಗೂ ಪಿಂಚಣಿಗೆ ₹ 222.48 ಕೋಟಿ ಮಂಜೂರಾಗಿದೆ. ಅಭಿವೃದ್ಧಿ ಅನುದಾನ ₹ 10 ಕೋಟಿ, ಪರಿಶಿಷ್ಟ ಜಾತಿ ಹಾಗೂ ವರ್ಗದ ವಿದ್ಯಾರ್ಥಿಗಳಿಗೆ ₹ 6 ಕೋಟಿ ಅನುದಾನ ಮಂಜೂರಾತಿಯನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟು ₹ 238.57 ಕೋಟಿ ಆದಾಯವಾಗಿ ಪರಿಗಣಿಸಲಾಗಿದೆ’ ಎಂದು ಮಾಹಿತಿ ನೀಡಿದರು.</p><p>‘111ನೇ ವಸಂತಕ್ಕೆ ಕಾಲಿಡುತ್ತಿರುವ ವಿ.ವಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಯಂ ಉದ್ಯೋಗಿಗಳ (ಬೋಧಕ–200 ಹಾಗೂ ಬೋಧಕೇತರ 400) ವೇತನಕ್ಕಾಗಿ ₹ 122.48 ಕೋಟಿ ನಿಗದಿಪಡಿಸಲಾಗಿದೆ. ಇದನ್ನು ಎಚ್ಆರ್ಎಂಎಸ್ ಪೋರ್ಟಲ್ ಮೂಲಕ ನೌಕರರಿಗೆ ನೇರವಾಗಿ ‘ಕೆ–2’ ಖಾತೆಯಿಂದ ಜಮಾ ಮಾಡಲಾಗುತ್ತಿದೆ. ಪ್ರಸ್ತುತ 1,864 ಪಿಂಚಣಿ/ಕುಟುಂಬ ಪಿಂಚಣಿದಾರರು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. 2026–27ನೇ ಸಾಲಿಗೆ ಪಿಂಚಣಿದಾರರ ಸಂಖ್ಯೆ 1,906 ಆಗಲಿದ್ದು, ಪ್ರಸ್ತುತ ಸಾಲಿನಲ್ಲಿ 42 ಉದ್ಯೋಗಿಗಳು (18 ಬೋಧಕರು, 24 ಬೋಧಕೇತರರು) ನಿವೃತ್ತರಾಗುತ್ತಿದ್ದಾರೆ. ಹೀಗಾಗಿ, ಪಿಂಚಣಿಗಾಗಿ ₹ 171.45 ಕೋಟಿ ನಿಗದಿಪಡಿಸಲಾಗಿದೆ. ಸರ್ಕಾರದಿಂದ ₹ 100 ಕೋಟಿ ಬರುವುದರಿಂದಾಗಿ ₹ 71.45 ಕೋಟಿ ಕೊರತೆ ಎದುರಿಸುವಂತಾಗಿದೆ’ ಎಂದು ವಿವರಿಸಿದರು.</p><p><strong>ಆಂತರಿಕ ಸಂಪನ್ಮೂಲ:</strong> </p><p>‘ಪ್ರವೇಶ, ನೋಂದಣಿ, ಸಂಯೋಜನೆ, ಪರೀಕ್ಷಾ ಚಟುವಟಿಕೆಗಳು ಮೊದಲಾದ ಶುಲ್ಕಗಳಿಂದ, ವಿಶ್ವವಿದ್ಯಾಲಯದ ವಿವಿಧ ಆಸ್ತಿಗಳಿಂದ ಹಾಗೂ ಇತರ ಮೂಲಗಳಿಂದ ಒಟ್ಟು ₹ 108.75 ಕೋಟಿ ಆಂತರಿಕ ಆದಾಯ ನಿರೀಕ್ಷಿಸಲಾಗಿದೆ. ಇದರಿಂದ ವೇತನ ಭತ್ಯೆಗಳು, ಸಾಮಾನ್ಯ ಆಡಳಿತ ವೆಚ್ಚಗಳು ಹಾಗೂ ಇನ್ನುಳಿದ ನಿರೀಕ್ಷಿತ ಯೋಜನೇತರ ವೆಚ್ಚಗಳನ್ನು ಪರಿಗಣಿಸಿ ₹ 108.54 ಕೋಟಿಗೆ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.</p><p>ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ‘ರಾಜ್ಯ ಸರ್ಕಾರವು ಕಷ್ಟದ ಸನ್ನಿವೇಶದಲ್ಲಿ ನಮ್ಮ ಕೈಹಿಡಿದಿದೆ. ಹೋದ ವರ್ಷ ಪಿಂಚಣಿಗಾಗಿ ಹೆಚ್ಚುವರಿಯಾಗಿ ₹ 25 ಕೋಟಿ ಸೇರಿದಂತೆ ಒಟ್ಟು ₹ 75 ಕೋಟಿ ಒದಗಿಸಿತ್ತು. ಈ ಬಾರಿ ₹ 100 ಕೋಟಿ ಕೊಟ್ಟಿರುವುದರಿಂದ ಬಹಳ ಅನುಕೂಲ ಆಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು’ ಎಂದರು.</p><p>‘ದೈನಂದಿನ ಖರ್ಚುಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಆದರೂ ಪಿಂಚಣಿಗೆ ತೊಂದರೆ ಇದ್ದೇ ಇದೆ. ಸದ್ಯ ನಮ್ಮಲ್ಲಿ ಆದಾಯ ಹೆಚ್ಚಿಸುವಂತಹ ಕೋರ್ಸ್ಗಳಿಲ್ಲ. ಡಿಸೆಂಬರ್ ನಂತರ, ಪ್ರಸ್ತಾವದೊಂದಿಗೆ ಬಂದರೆ ಮತ್ತಷ್ಟು ಸಹಾಯ ಮಾಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ, ಈ ಸಾಲಿನಲ್ಲಿ ಪಿಂಚಣಿ ಸರಿದೂಗಿಸಬಹುದಾಗಿದೆ’ ಎಂದು ಹೇಳಿದರು.</p><p>₹ 100 ಕೋಟಿ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನಾ ನಿರ್ಣಯವನ್ನು ಸಭೆ ಕೈಗೊಂಡಿತು.</p><p><strong>ಜನಪ್ರತಿನಿಧಿಗಳ ಗೈರು:</strong></p><p>ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರದ ಪ್ರೊ.ಜೆ. ಸೋಮಶೇಖರ್ ಮಾತನಾಡಿ, ‘ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕಿತ್ತು. ಆಗ, ಅವರಿಗೆ ಇಲ್ಲಿನ ಆರ್ಥಿಕ ಸ್ಥಿತಿ ಗೊತ್ತಾಗುತ್ತಿತ್ತು’ ಎಂದರು.</p><p>‘ಅಧಿವೇಶನದ ಕಾರಣದಿಂದ ಅವರು ಬಂದಿಲ್ಲ. ಹೊಸ ಆರ್ಥಿಕ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದಾಗಿ ನಾವು ಬಜೆಟ್ ಮಂಡಿಸಿದ್ದೇವೆ’ ಎಂದು ಕುಲಪತಿ ತಿಳಿಸಿದರು.</p><p>‘ಆರ್ಥಿಕ ಶಿಸ್ತು ಇಲ್ಲದಿದ್ದರಿಂದಾಗಿ ಸಮಸ್ಯೆ ಆಗುತ್ತಿದೆ. ಶತಮಾನದ ಇತಿಹಾಸವುಳ್ಳ ವಿವಿಯಲ್ಲಿ ವಿತ್ತೀಯಶಿಸ್ತಿನ ಮಾದರಿ ಇರಬೇಕಾಗಿತ್ತು. ಆದರೆ, ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ’ ಎಂದು ಸೋಮಶೇಖರ್ ಹೇಳಿದರು.</p><p>ಕುಲಸಚಿವರಾದ ಎಂ.ಕೆ. ಸವಿತಾ ಹಾಗೂ ಪ್ರೊ.ನಾಗರಾಜ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 2026–27ನೇ ಸಾಲಿನ ಅಂದಾಜು ₹ 71.45 ಕೋಟಿ ಕೊರತೆ ಬಜೆಟ್ಗೆ ಅನುಮೋದನೆ ನೀಡಲಾಯಿತು.</p><p>ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿಯ ವಿಶೇಷ ಸಭೆಯಲ್ಲಿ ಪ್ರಭಾರ ಹಣಕಾಸು ಅಧಿಕಾರಿ ಪ್ರೊ.ಮಂಜುನಾಥ್ ಬಜೆಟ್ ಮಂಡಿಸಿದರು.</p><p>‘ಅಂದಾಜು ₹ 384.28 ಕೋಟಿ ಆದಾಯ (ದತ್ತಿ ನಿಧಿ ಹೊರತುಪಡಿಸಿ) ನಿರೀಕ್ಷಿಸಲಾಗಿದೆ. ₹ 438 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2026–27ನೇ ಸಾಲಿನಲ್ಲಿ ವಿವಿಯಿಂದ ನಿವೃತ್ತರಾಗುವ ನೌಕರರ ಪಿಂಚಣಿಗಾಗಿ ₹ 171.45 ಕೋಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರವು ₹ 100 ಕೋಟಿ ಬಿಡುಗಡೆ ಮಾಡಿದೆ. ಇದರಿಂದಾಗಿ ಪಿಂಚಣಿ ಸೌಲಭ್ಯಗಳಿಗಾಗಿ ₹ 71.45 ಕೋಟಿ ಕೊರತೆ ಎದುರಿಸುವಂತಾಗಿದೆ’ ಎಂದು ಹೇಳಿದರು.</p><p><strong>ನಿರೀಕ್ಷೆ, ವೆಚ್ಚ:</strong> </p><p>‘ರಾಜ್ಯ ಸರ್ಕಾರದಿಂದ ಕಾಯಂ ಸಿಬ್ಬಂದಿ ವೇತನ ಹಾಗೂ ಪಿಂಚಣಿಗೆ ₹ 222.48 ಕೋಟಿ ಮಂಜೂರಾಗಿದೆ. ಅಭಿವೃದ್ಧಿ ಅನುದಾನ ₹ 10 ಕೋಟಿ, ಪರಿಶಿಷ್ಟ ಜಾತಿ ಹಾಗೂ ವರ್ಗದ ವಿದ್ಯಾರ್ಥಿಗಳಿಗೆ ₹ 6 ಕೋಟಿ ಅನುದಾನ ಮಂಜೂರಾತಿಯನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟು ₹ 238.57 ಕೋಟಿ ಆದಾಯವಾಗಿ ಪರಿಗಣಿಸಲಾಗಿದೆ’ ಎಂದು ಮಾಹಿತಿ ನೀಡಿದರು.</p><p>‘111ನೇ ವಸಂತಕ್ಕೆ ಕಾಲಿಡುತ್ತಿರುವ ವಿ.ವಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾಯಂ ಉದ್ಯೋಗಿಗಳ (ಬೋಧಕ–200 ಹಾಗೂ ಬೋಧಕೇತರ 400) ವೇತನಕ್ಕಾಗಿ ₹ 122.48 ಕೋಟಿ ನಿಗದಿಪಡಿಸಲಾಗಿದೆ. ಇದನ್ನು ಎಚ್ಆರ್ಎಂಎಸ್ ಪೋರ್ಟಲ್ ಮೂಲಕ ನೌಕರರಿಗೆ ನೇರವಾಗಿ ‘ಕೆ–2’ ಖಾತೆಯಿಂದ ಜಮಾ ಮಾಡಲಾಗುತ್ತಿದೆ. ಪ್ರಸ್ತುತ 1,864 ಪಿಂಚಣಿ/ಕುಟುಂಬ ಪಿಂಚಣಿದಾರರು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. 2026–27ನೇ ಸಾಲಿಗೆ ಪಿಂಚಣಿದಾರರ ಸಂಖ್ಯೆ 1,906 ಆಗಲಿದ್ದು, ಪ್ರಸ್ತುತ ಸಾಲಿನಲ್ಲಿ 42 ಉದ್ಯೋಗಿಗಳು (18 ಬೋಧಕರು, 24 ಬೋಧಕೇತರರು) ನಿವೃತ್ತರಾಗುತ್ತಿದ್ದಾರೆ. ಹೀಗಾಗಿ, ಪಿಂಚಣಿಗಾಗಿ ₹ 171.45 ಕೋಟಿ ನಿಗದಿಪಡಿಸಲಾಗಿದೆ. ಸರ್ಕಾರದಿಂದ ₹ 100 ಕೋಟಿ ಬರುವುದರಿಂದಾಗಿ ₹ 71.45 ಕೋಟಿ ಕೊರತೆ ಎದುರಿಸುವಂತಾಗಿದೆ’ ಎಂದು ವಿವರಿಸಿದರು.</p><p><strong>ಆಂತರಿಕ ಸಂಪನ್ಮೂಲ:</strong> </p><p>‘ಪ್ರವೇಶ, ನೋಂದಣಿ, ಸಂಯೋಜನೆ, ಪರೀಕ್ಷಾ ಚಟುವಟಿಕೆಗಳು ಮೊದಲಾದ ಶುಲ್ಕಗಳಿಂದ, ವಿಶ್ವವಿದ್ಯಾಲಯದ ವಿವಿಧ ಆಸ್ತಿಗಳಿಂದ ಹಾಗೂ ಇತರ ಮೂಲಗಳಿಂದ ಒಟ್ಟು ₹ 108.75 ಕೋಟಿ ಆಂತರಿಕ ಆದಾಯ ನಿರೀಕ್ಷಿಸಲಾಗಿದೆ. ಇದರಿಂದ ವೇತನ ಭತ್ಯೆಗಳು, ಸಾಮಾನ್ಯ ಆಡಳಿತ ವೆಚ್ಚಗಳು ಹಾಗೂ ಇನ್ನುಳಿದ ನಿರೀಕ್ಷಿತ ಯೋಜನೇತರ ವೆಚ್ಚಗಳನ್ನು ಪರಿಗಣಿಸಿ ₹ 108.54 ಕೋಟಿಗೆ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.</p><p>ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ‘ರಾಜ್ಯ ಸರ್ಕಾರವು ಕಷ್ಟದ ಸನ್ನಿವೇಶದಲ್ಲಿ ನಮ್ಮ ಕೈಹಿಡಿದಿದೆ. ಹೋದ ವರ್ಷ ಪಿಂಚಣಿಗಾಗಿ ಹೆಚ್ಚುವರಿಯಾಗಿ ₹ 25 ಕೋಟಿ ಸೇರಿದಂತೆ ಒಟ್ಟು ₹ 75 ಕೋಟಿ ಒದಗಿಸಿತ್ತು. ಈ ಬಾರಿ ₹ 100 ಕೋಟಿ ಕೊಟ್ಟಿರುವುದರಿಂದ ಬಹಳ ಅನುಕೂಲ ಆಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು’ ಎಂದರು.</p><p>‘ದೈನಂದಿನ ಖರ್ಚುಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಆದರೂ ಪಿಂಚಣಿಗೆ ತೊಂದರೆ ಇದ್ದೇ ಇದೆ. ಸದ್ಯ ನಮ್ಮಲ್ಲಿ ಆದಾಯ ಹೆಚ್ಚಿಸುವಂತಹ ಕೋರ್ಸ್ಗಳಿಲ್ಲ. ಡಿಸೆಂಬರ್ ನಂತರ, ಪ್ರಸ್ತಾವದೊಂದಿಗೆ ಬಂದರೆ ಮತ್ತಷ್ಟು ಸಹಾಯ ಮಾಡುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ, ಈ ಸಾಲಿನಲ್ಲಿ ಪಿಂಚಣಿ ಸರಿದೂಗಿಸಬಹುದಾಗಿದೆ’ ಎಂದು ಹೇಳಿದರು.</p><p>₹ 100 ಕೋಟಿ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನಾ ನಿರ್ಣಯವನ್ನು ಸಭೆ ಕೈಗೊಂಡಿತು.</p><p><strong>ಜನಪ್ರತಿನಿಧಿಗಳ ಗೈರು:</strong></p><p>ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರದ ಪ್ರೊ.ಜೆ. ಸೋಮಶೇಖರ್ ಮಾತನಾಡಿ, ‘ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕಿತ್ತು. ಆಗ, ಅವರಿಗೆ ಇಲ್ಲಿನ ಆರ್ಥಿಕ ಸ್ಥಿತಿ ಗೊತ್ತಾಗುತ್ತಿತ್ತು’ ಎಂದರು.</p><p>‘ಅಧಿವೇಶನದ ಕಾರಣದಿಂದ ಅವರು ಬಂದಿಲ್ಲ. ಹೊಸ ಆರ್ಥಿಕ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದಾಗಿ ನಾವು ಬಜೆಟ್ ಮಂಡಿಸಿದ್ದೇವೆ’ ಎಂದು ಕುಲಪತಿ ತಿಳಿಸಿದರು.</p><p>‘ಆರ್ಥಿಕ ಶಿಸ್ತು ಇಲ್ಲದಿದ್ದರಿಂದಾಗಿ ಸಮಸ್ಯೆ ಆಗುತ್ತಿದೆ. ಶತಮಾನದ ಇತಿಹಾಸವುಳ್ಳ ವಿವಿಯಲ್ಲಿ ವಿತ್ತೀಯಶಿಸ್ತಿನ ಮಾದರಿ ಇರಬೇಕಾಗಿತ್ತು. ಆದರೆ, ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ’ ಎಂದು ಸೋಮಶೇಖರ್ ಹೇಳಿದರು.</p><p>ಕುಲಸಚಿವರಾದ ಎಂ.ಕೆ. ಸವಿತಾ ಹಾಗೂ ಪ್ರೊ.ನಾಗರಾಜ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>