<p><strong>ಮೈಸೂರು</strong>: ‘ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಸಲಹೆ ನೀಡಿದರು.</p><p>ಇಲ್ಲಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಿಂದ ಇಲ್ಲಿನ ಓವೆಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಆಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ. ಸೋಲು–ಗೆಲುವನ್ನು ಸಮಾನವಾಗಿ ಒಪ್ಪಿಕೊಳ್ಳುವ ಮನೋಭಾವವನ್ನೂ ಬೆಳೆಸುತ್ತವೆ. ತಂಡ ಸ್ಫೂರ್ತಿ, ಸಹಕಾರ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ’ ಎಂದರು.</p><p>ನಿವೃತ್ತ ಕೋಚ್ ಪ್ರಭಾಕರ್ ಜಿ.ಆರ್. ಮಾತನಾಡಿ, ‘ಇಡೀ ದಿನ ಲವಲವಿಕೆಯಿಂದ ಇರಲು ಬೆಳಿಗ್ಗೆಯ ವೇಳೆ ಯಾವುದಾದರೊಂದು ಆಟದಲ್ಲಿ ತೊಡಗಬೇಕು. ನಿಯಮಿತವಾಗಿ ಅಭ್ಯಾಸ ಮಾಡಬೇಕು’ ಎಂದು ತಿಳಿಸಿದರು.</p><p>ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ. ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್., ಐಕ್ಯೂಎಸಿ ಸಂಚಾಲಕ ನಂದಕುಮಾರ್ ವಿ., ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ಸಹಾಯಕ ಪ್ರಾಧ್ಯಾಪಕಿ ಚಂದ್ರಕಲಾ ಹಾಗೂ ಪ್ರಾಧ್ಯಾಪಕ ರವಿಶಂಕರ್ ಡಿ.ಕೆ. ಪಾಲ್ಗೊಂಡಿದ್ದರು.</p>. <p>ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>. <h2>ಫಲಿತಾಂಶ ಇಂತಿದೆ: </h2> <p>ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು.</p><p>100 ಮೀ. ಓಟ: ಬಿಂದು, ಜರೀನಾ ಜೆ. ಸಿಂಚನಾ.</p><p>200 ಮೀ. ಓಟ: ಲಕ್ಷ್ಮಿ ಕೆ.ಎಸ್., ರಕ್ಷಿತಾ ಎಚ್.ಕೆ., ಪ್ರಕೃತಿ ಎಚ್.ಕೆ.</p><p>400 ಮೀ. ಓಟ: ಭುವನಾ, ಐಶ್ವರ್ಯಾ, ನಯನಾ.</p><p>800 ಮೀ. ಓಟ: ಲಕ್ಷ್ಮಿ ಕೆ.ಎಸ್., ಸಹನಾ ಎಸ್.ಪಿ., ಪೊನ್ನಮ್ಮ ಸಿ.ಎನ್.</p><p>4x100 ಓಟ: ಲಕ್ಷ್ಮಿ ಕೆ.ಎಸ್., ತೇಜಸ್ವಿನಿ ಎಚ್.ವಿ., ಅಫ್ರೀನಾ.</p><p>ಜಾವಲಿನ್ ಎಸೆತ: ಶಮಿತಾ, ಜರೀನಾ ಜೆ., ರಕ್ಷಿತಾ ಎಚ್.ಕೆ.</p><p>ಗುಂಡು ಎಸೆತ: ರಮ್ಯಾ ಡಿ., ಪೊನ್ನಮ್ಮ ಸಿ.ಎನ್., ಮಾಧುರಿ ಜಿ.</p><p>ತಟ್ಟೆ ಎಸೆತ: ಸಿಂಚನಾ ಎಂ.ಎಸ್., ರಮ್ಯಾ ಡಿ., ಸಾಕ್ಷಿ.</p><p><strong>ಅಧ್ಯಾಪಕರ ವಿಭಾಗ:</strong></p><p>100 ಮೀ. ಓಟ: ರವಿಶಂಕರ್ ಡಿ.ಕೆ., ಪರಶಿವಮೂರ್ತಿ, ಶ್ರೀನಿವಾಸ್.</p><p>200 ಮಿ. ಓಟ: ಪ್ರದೀಪ್ಕುಮಾರ್, ಶಶಿಕುಮಾರ್ ಎಸ್., ಕೆ.ಎಸ್. ರಘುನಂದನ್.</p><p>100 ಮೀ. ಓಟ: ಗೀತಾ ಡಿ., ವೀಣಾ ಎಂ., ಕವಿತಾ.ಕೆ.ಆರ್.</p><p>ಗುಂಡು ಎಸೆತ: ಸೋಮಶೇಖರ್ ಪಿ., ಲೋಕೆಶ್ ಟಿ.ವಿ., ಪ್ರದೀಪ್ ಕುಮಾರ್.</p><p>ಗುಂಡು ಎಸೆತ (ಮಹಿಳಾ ವಿಭಾಗ): ಗೀತಾ ಡಿ., ಶ್ಯಾಮಲಾ ಜಿ., ವಿದ್ಯಾ ಕೆ.</p><p>ಸಂಗೀತ ಕುರ್ಚಿ: ಗೀತಾ ಡಿ., ಕಾವೇರಿ, ಶ್ಯಾಮಲಾ ಜಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಸಲಹೆ ನೀಡಿದರು.</p><p>ಇಲ್ಲಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಿಂದ ಇಲ್ಲಿನ ಓವೆಲ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಆಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತವೆ. ಸೋಲು–ಗೆಲುವನ್ನು ಸಮಾನವಾಗಿ ಒಪ್ಪಿಕೊಳ್ಳುವ ಮನೋಭಾವವನ್ನೂ ಬೆಳೆಸುತ್ತವೆ. ತಂಡ ಸ್ಫೂರ್ತಿ, ಸಹಕಾರ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ’ ಎಂದರು.</p><p>ನಿವೃತ್ತ ಕೋಚ್ ಪ್ರಭಾಕರ್ ಜಿ.ಆರ್. ಮಾತನಾಡಿ, ‘ಇಡೀ ದಿನ ಲವಲವಿಕೆಯಿಂದ ಇರಲು ಬೆಳಿಗ್ಗೆಯ ವೇಳೆ ಯಾವುದಾದರೊಂದು ಆಟದಲ್ಲಿ ತೊಡಗಬೇಕು. ನಿಯಮಿತವಾಗಿ ಅಭ್ಯಾಸ ಮಾಡಬೇಕು’ ಎಂದು ತಿಳಿಸಿದರು.</p><p>ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ. ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ.ಆರ್., ಐಕ್ಯೂಎಸಿ ಸಂಚಾಲಕ ನಂದಕುಮಾರ್ ವಿ., ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್., ಸಹಾಯಕ ಪ್ರಾಧ್ಯಾಪಕಿ ಚಂದ್ರಕಲಾ ಹಾಗೂ ಪ್ರಾಧ್ಯಾಪಕ ರವಿಶಂಕರ್ ಡಿ.ಕೆ. ಪಾಲ್ಗೊಂಡಿದ್ದರು.</p>. <p>ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>. <h2>ಫಲಿತಾಂಶ ಇಂತಿದೆ: </h2> <p>ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರು.</p><p>100 ಮೀ. ಓಟ: ಬಿಂದು, ಜರೀನಾ ಜೆ. ಸಿಂಚನಾ.</p><p>200 ಮೀ. ಓಟ: ಲಕ್ಷ್ಮಿ ಕೆ.ಎಸ್., ರಕ್ಷಿತಾ ಎಚ್.ಕೆ., ಪ್ರಕೃತಿ ಎಚ್.ಕೆ.</p><p>400 ಮೀ. ಓಟ: ಭುವನಾ, ಐಶ್ವರ್ಯಾ, ನಯನಾ.</p><p>800 ಮೀ. ಓಟ: ಲಕ್ಷ್ಮಿ ಕೆ.ಎಸ್., ಸಹನಾ ಎಸ್.ಪಿ., ಪೊನ್ನಮ್ಮ ಸಿ.ಎನ್.</p><p>4x100 ಓಟ: ಲಕ್ಷ್ಮಿ ಕೆ.ಎಸ್., ತೇಜಸ್ವಿನಿ ಎಚ್.ವಿ., ಅಫ್ರೀನಾ.</p><p>ಜಾವಲಿನ್ ಎಸೆತ: ಶಮಿತಾ, ಜರೀನಾ ಜೆ., ರಕ್ಷಿತಾ ಎಚ್.ಕೆ.</p><p>ಗುಂಡು ಎಸೆತ: ರಮ್ಯಾ ಡಿ., ಪೊನ್ನಮ್ಮ ಸಿ.ಎನ್., ಮಾಧುರಿ ಜಿ.</p><p>ತಟ್ಟೆ ಎಸೆತ: ಸಿಂಚನಾ ಎಂ.ಎಸ್., ರಮ್ಯಾ ಡಿ., ಸಾಕ್ಷಿ.</p><p><strong>ಅಧ್ಯಾಪಕರ ವಿಭಾಗ:</strong></p><p>100 ಮೀ. ಓಟ: ರವಿಶಂಕರ್ ಡಿ.ಕೆ., ಪರಶಿವಮೂರ್ತಿ, ಶ್ರೀನಿವಾಸ್.</p><p>200 ಮಿ. ಓಟ: ಪ್ರದೀಪ್ಕುಮಾರ್, ಶಶಿಕುಮಾರ್ ಎಸ್., ಕೆ.ಎಸ್. ರಘುನಂದನ್.</p><p>100 ಮೀ. ಓಟ: ಗೀತಾ ಡಿ., ವೀಣಾ ಎಂ., ಕವಿತಾ.ಕೆ.ಆರ್.</p><p>ಗುಂಡು ಎಸೆತ: ಸೋಮಶೇಖರ್ ಪಿ., ಲೋಕೆಶ್ ಟಿ.ವಿ., ಪ್ರದೀಪ್ ಕುಮಾರ್.</p><p>ಗುಂಡು ಎಸೆತ (ಮಹಿಳಾ ವಿಭಾಗ): ಗೀತಾ ಡಿ., ಶ್ಯಾಮಲಾ ಜಿ., ವಿದ್ಯಾ ಕೆ.</p><p>ಸಂಗೀತ ಕುರ್ಚಿ: ಗೀತಾ ಡಿ., ಕಾವೇರಿ, ಶ್ಯಾಮಲಾ ಜಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>