<p><strong>ಮೈಸೂರು:</strong> ‘ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲವೇ ಕೆಲವು ವಿಭಾಗಗಳಿಗೆ ಹಲವು ವರ್ಷಗಳಿಂದಲೂ ಪ್ರವೇಶಾತಿ ಕಡಿಮೆ ಇದೆ. ಆದರೆ, ಯಾವುದೇ ಕೋರ್ಸ್ ಅಥವಾ ವಿಭಾಗವನ್ನು ಮುಚ್ಚಿಲ್ಲ’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.</p><p>ಇಲ್ಲಿನ ಕ್ರಾಫರ್ಡ್ ಹಾಲ್ನಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆಲವರು ಇಲ್ಲಸಲ್ಲದ ಹಾಗೂ ಮಾಹಿತಿ ಕೊರತೆಯಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು’ ಎಂದು ಹೇಳಿದರು.</p><p>ಮೈಸೂರಿನ ಯುವರಾಜ ಕಾಲೇಜಿನ ಸ್ವಾಯತ್ತ ಸ್ಥಾನಮಾನ ಹಿಂಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಕಾಲೇಜಿನವರ ಕೋರಿಕೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.</p><p>‘ಆ ಕಾಲೇಜಿನವರು ₹ 1.06 ಕೋಟಿ ಅನುದಾನಕ್ಕೆ ಮೂರು ವರ್ಷಗಳಾದರೂ ಬಳಕೆ ಪ್ರಮಾಣಪತ್ರ (ಯುಸಿ) ಸಲ್ಲಿಸಿಲ್ಲ. ಇದಕ್ಕೆ ಆಕ್ಷೇಪಣೆ ಇದೆ. ವಿಚಾರಣೆಯೂ ನಡೆಯಬೇಕಾಗಿದೆ. ಈ ನಡುವೆ, ಅಲ್ಲಿನ ಕ್ಲರ್ಕ್ ಹಾಗೂ ಎಸ್ಡಿಎ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2009ರಿಂದ 2025ರವರೆಗೆ ಆ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಇರಲಿಲ್ಲ. ನಾನು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಯುಜಿಸಿಯೊಂದಿಗೆ ವ್ಯವಹರಿಸಿ ಸ್ಥಾನಮಾನ ಕೊಡಿಸಿದ್ದೆ. ಆರ್ಥಿಕ ಅಶಿಸ್ತಿನ ಕಾರಣದಿಂದ ಎಲ್ಲವೂ ಸಮಸ್ಯೆಯಾಗಿದೆ’ ಎಂದು ಹೇಳಿದರು. </p><p>ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ, ‘ಥಿಯರಿ ಜೊತೆಯಲ್ಲೇ ಲ್ಯಾಬ್ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಯನ್ನೂ ಮುಗಿಸಬೇಕು. ಕೆಲವು ವಿಭಾಗಗಳಲ್ಲಿ ತಡವಾಗುವುದರಿಂದಾಗಿ, ಹಾಸ್ಟೆಲ್ನಲ್ಲಿ ಸೀಟು ಹಂಚಿಕೆಯಲ್ಲಿ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.</p><p>ಹೀಗಾಗಿ, ಪರೀಕ್ಷೆಗೆ ಗಡುವು ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು.</p><p>ಪೌರಕಾರ್ಮಿಕರಿಗೆ ಬೇಕಾಗುವ ಸ್ವಚ್ಛತಾ ಸಾಮಗ್ರಿಗಳನ್ನು ಒಮ್ಮೆಲೆ ಖರೀದಿಸಲು ನಿರ್ಣಯಿಸಲಾಯಿತು.</p><p>ಮಂಡಳಿಯ ಸದಸ್ಯ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ‘ಸಿಎಸ್ಆರ್ ನಿಧಿಯಲ್ಲಿ ಚಟುವಟಿಕೆ ನಡೆಸುತ್ತೇವೆ ಎಂದುಕೊಂಡು ಬರುವವರಿಗೆ ಪ್ರವೇಶ ಕೊಡದಿರುವುದು ಒಳ್ಳೆಯದು. ಒಂದು ವಿವಿಯಲ್ಲಿ ಕಾರ್ಯಕ್ರಮ ಮಾಡಿ, ಮತ್ತೊಂದು ವಿವಿಯಲ್ಲಿ ಹೇಳಿ ಲಾಭ ಪಡೆದುಕೊಳ್ಳುತ್ತಾರೆ. ದುರ್ಬಳಕೆ ಮಾಡಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ’ ಎಂದು ಹೇಳಿದರು.</p><p>ಇದಕ್ಕೆ ಪ್ರತಿಕ್ರಿಯಿಸಿದ ಕುಲಸಚಿವೆ ಎಂ.ಕೆ. ಸವಿತಾ, ‘ಹಲವು ಕಂಪನಿಗಳು ಸಮರ್ಪಕವಾಗಿ ತರಬೇತಿ ಕೊಡುವುದಿಲ್ಲ. ಹೀಗಾಗಿ, ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲವೇ ಕೆಲವು ವಿಭಾಗಗಳಿಗೆ ಹಲವು ವರ್ಷಗಳಿಂದಲೂ ಪ್ರವೇಶಾತಿ ಕಡಿಮೆ ಇದೆ. ಆದರೆ, ಯಾವುದೇ ಕೋರ್ಸ್ ಅಥವಾ ವಿಭಾಗವನ್ನು ಮುಚ್ಚಿಲ್ಲ’ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.</p><p>ಇಲ್ಲಿನ ಕ್ರಾಫರ್ಡ್ ಹಾಲ್ನಲ್ಲಿ ಗುರುವಾರ ನಡೆದ ಶಿಕ್ಷಣ ಮಂಡಳಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕೆಲವರು ಇಲ್ಲಸಲ್ಲದ ಹಾಗೂ ಮಾಹಿತಿ ಕೊರತೆಯಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು’ ಎಂದು ಹೇಳಿದರು.</p><p>ಮೈಸೂರಿನ ಯುವರಾಜ ಕಾಲೇಜಿನ ಸ್ವಾಯತ್ತ ಸ್ಥಾನಮಾನ ಹಿಂಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಕಾಲೇಜಿನವರ ಕೋರಿಕೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.</p><p>‘ಆ ಕಾಲೇಜಿನವರು ₹ 1.06 ಕೋಟಿ ಅನುದಾನಕ್ಕೆ ಮೂರು ವರ್ಷಗಳಾದರೂ ಬಳಕೆ ಪ್ರಮಾಣಪತ್ರ (ಯುಸಿ) ಸಲ್ಲಿಸಿಲ್ಲ. ಇದಕ್ಕೆ ಆಕ್ಷೇಪಣೆ ಇದೆ. ವಿಚಾರಣೆಯೂ ನಡೆಯಬೇಕಾಗಿದೆ. ಈ ನಡುವೆ, ಅಲ್ಲಿನ ಕ್ಲರ್ಕ್ ಹಾಗೂ ಎಸ್ಡಿಎ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2009ರಿಂದ 2025ರವರೆಗೆ ಆ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಇರಲಿಲ್ಲ. ನಾನು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಯುಜಿಸಿಯೊಂದಿಗೆ ವ್ಯವಹರಿಸಿ ಸ್ಥಾನಮಾನ ಕೊಡಿಸಿದ್ದೆ. ಆರ್ಥಿಕ ಅಶಿಸ್ತಿನ ಕಾರಣದಿಂದ ಎಲ್ಲವೂ ಸಮಸ್ಯೆಯಾಗಿದೆ’ ಎಂದು ಹೇಳಿದರು. </p><p>ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ, ‘ಥಿಯರಿ ಜೊತೆಯಲ್ಲೇ ಲ್ಯಾಬ್ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಯನ್ನೂ ಮುಗಿಸಬೇಕು. ಕೆಲವು ವಿಭಾಗಗಳಲ್ಲಿ ತಡವಾಗುವುದರಿಂದಾಗಿ, ಹಾಸ್ಟೆಲ್ನಲ್ಲಿ ಸೀಟು ಹಂಚಿಕೆಯಲ್ಲಿ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.</p><p>ಹೀಗಾಗಿ, ಪರೀಕ್ಷೆಗೆ ಗಡುವು ನೀಡುವ ನಿರ್ಣಯವನ್ನು ಕೈಗೊಳ್ಳಲಾಯಿತು.</p><p>ಪೌರಕಾರ್ಮಿಕರಿಗೆ ಬೇಕಾಗುವ ಸ್ವಚ್ಛತಾ ಸಾಮಗ್ರಿಗಳನ್ನು ಒಮ್ಮೆಲೆ ಖರೀದಿಸಲು ನಿರ್ಣಯಿಸಲಾಯಿತು.</p><p>ಮಂಡಳಿಯ ಸದಸ್ಯ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ‘ಸಿಎಸ್ಆರ್ ನಿಧಿಯಲ್ಲಿ ಚಟುವಟಿಕೆ ನಡೆಸುತ್ತೇವೆ ಎಂದುಕೊಂಡು ಬರುವವರಿಗೆ ಪ್ರವೇಶ ಕೊಡದಿರುವುದು ಒಳ್ಳೆಯದು. ಒಂದು ವಿವಿಯಲ್ಲಿ ಕಾರ್ಯಕ್ರಮ ಮಾಡಿ, ಮತ್ತೊಂದು ವಿವಿಯಲ್ಲಿ ಹೇಳಿ ಲಾಭ ಪಡೆದುಕೊಳ್ಳುತ್ತಾರೆ. ದುರ್ಬಳಕೆ ಮಾಡಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ’ ಎಂದು ಹೇಳಿದರು.</p><p>ಇದಕ್ಕೆ ಪ್ರತಿಕ್ರಿಯಿಸಿದ ಕುಲಸಚಿವೆ ಎಂ.ಕೆ. ಸವಿತಾ, ‘ಹಲವು ಕಂಪನಿಗಳು ಸಮರ್ಪಕವಾಗಿ ತರಬೇತಿ ಕೊಡುವುದಿಲ್ಲ. ಹೀಗಾಗಿ, ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>