<p><strong>ಮೈಸೂರು:</strong> ‘ಅಂಬೇಡ್ಕರ್ ವಿಚಾರ ಮರೆತರೆ, ಆಶಯಗಳನ್ನು ಪಾಲಿಸದೇ ಹೋದರೆ ದೇಶಕ್ಕೆ ಭವಿಷ್ಯವಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಬಾಬು ಜಗಜೀವನ್ರಾಮ್ ಅಧ್ಯಯನ ಪೀಠದ ಸಂಶೋಧನಾ ಅಧಿಕಾರಿ ಎಂ.ಶ್ರೀನಿವಾಸಮೂರ್ತಿ ಪ್ರತಿಪಾದಿಸಿದರು.</p>.<p>ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಚಂದ್ರು ಗ್ರಾಮೀಣ ಸಂಗೀತ ಕಲಾ ಸಂಘವು ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಸದೃಢ ಆಡಳಿತಕ್ಕೆ ಸಂವಿಧಾನವೇ ದೊಡ್ಡ ಶಕ್ತಿಯಾಗಿದೆ. ಬಾಬಾಸಾಹೇಬರ ವಿಚಾರಧಾರೆಗಳು ಎಂದಿಗೂ ಪ್ರಸ್ತುತ. ದೇಶದ ಅಭಿವೃದ್ಧಿಗೆ ಸಾಮಾಜಿಕ ಸಮಸ್ಯೆ, ಜಾತಿ ತಾರತಮ್ಯಗಳೇ ತಡೆಯಾಗಿವೆ. ಸಮಸಮಾಜ ನಿರ್ಮಾಣಕ್ಕೆ ಸಂವಿಧಾನದ ಆಶಯಗಳನ್ನು ಯಥಾವತ್ ಜಾರಿಗೊಳಿಸಬೇಕು’ ಎಂದರು.</p>.<p>ಹೋರಾಟ ದೊಡ್ಡದು: ‘ರಾಜ್ಯದಲ್ಲಿ ದಲಿತರ ಬದುಕು ಸುಧಾರಣೆಯಾಗಲು ದಲಿತ ಸಂಘರ್ಷ ಸಮಿತಿ ಹೋರಾಟವೇ ಕಾರಣ. ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಇಂಗ್ಲಿಷ್ನಲ್ಲಿದ್ದ ಅಂಬೇಡ್ಕರ್ ಅವರ ಬರಹಗಳನ್ನು ಕನ್ನಡದಲ್ಲಿ ಅಧ್ಯಯನ ಮಾಡಲು ದಸಂಸ ಪ್ರೇರೇಪಿಸಿತು’ ಎಂದರು.</p>.<p>‘ದಲಿತ ಸಮುದಾಯ ಅಧ್ಯಯನಶೀಲವಾಗಿ ಉನ್ನತ ಶಿಕ್ಷಣ ಪಡೆಯಬೇಕು. ಮದ್ಯಪಾನದಿಂದ ಬದುಕು ನಾಶವಾಗುತ್ತಿದ್ದು, ಸಮುದಾಯವು ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು’ ಎಂದರು.</p>.<p>ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ಎಸ್.ರವಿ, ಉದ್ಯಮಿ ಎಚ್.ಕೆ.ಸೋಮಶೇಖರ್, ನಿವೃತ್ತ ಅಧಿಕಾರಿಗಳಾದ ಆರ್.ರಂಗನಾಥ್, ಎಂ.ಮಹದೇವ್, ಕೆಂಚಯ್ಯ, ಬಿ.ಎಂ.ಮಹದೇವಯ್ಯ, ಜೈ ಭೀಮ್ ಕ್ರಾಂತಿಕಾರಿ ಸೈನ್ಯದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-39-2088878718</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಅಂಬೇಡ್ಕರ್ ವಿಚಾರ ಮರೆತರೆ, ಆಶಯಗಳನ್ನು ಪಾಲಿಸದೇ ಹೋದರೆ ದೇಶಕ್ಕೆ ಭವಿಷ್ಯವಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಬಾಬು ಜಗಜೀವನ್ರಾಮ್ ಅಧ್ಯಯನ ಪೀಠದ ಸಂಶೋಧನಾ ಅಧಿಕಾರಿ ಎಂ.ಶ್ರೀನಿವಾಸಮೂರ್ತಿ ಪ್ರತಿಪಾದಿಸಿದರು.</p>.<p>ನಗರದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಚಂದ್ರು ಗ್ರಾಮೀಣ ಸಂಗೀತ ಕಲಾ ಸಂಘವು ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಸದೃಢ ಆಡಳಿತಕ್ಕೆ ಸಂವಿಧಾನವೇ ದೊಡ್ಡ ಶಕ್ತಿಯಾಗಿದೆ. ಬಾಬಾಸಾಹೇಬರ ವಿಚಾರಧಾರೆಗಳು ಎಂದಿಗೂ ಪ್ರಸ್ತುತ. ದೇಶದ ಅಭಿವೃದ್ಧಿಗೆ ಸಾಮಾಜಿಕ ಸಮಸ್ಯೆ, ಜಾತಿ ತಾರತಮ್ಯಗಳೇ ತಡೆಯಾಗಿವೆ. ಸಮಸಮಾಜ ನಿರ್ಮಾಣಕ್ಕೆ ಸಂವಿಧಾನದ ಆಶಯಗಳನ್ನು ಯಥಾವತ್ ಜಾರಿಗೊಳಿಸಬೇಕು’ ಎಂದರು.</p>.<p>ಹೋರಾಟ ದೊಡ್ಡದು: ‘ರಾಜ್ಯದಲ್ಲಿ ದಲಿತರ ಬದುಕು ಸುಧಾರಣೆಯಾಗಲು ದಲಿತ ಸಂಘರ್ಷ ಸಮಿತಿ ಹೋರಾಟವೇ ಕಾರಣ. ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಇಂಗ್ಲಿಷ್ನಲ್ಲಿದ್ದ ಅಂಬೇಡ್ಕರ್ ಅವರ ಬರಹಗಳನ್ನು ಕನ್ನಡದಲ್ಲಿ ಅಧ್ಯಯನ ಮಾಡಲು ದಸಂಸ ಪ್ರೇರೇಪಿಸಿತು’ ಎಂದರು.</p>.<p>‘ದಲಿತ ಸಮುದಾಯ ಅಧ್ಯಯನಶೀಲವಾಗಿ ಉನ್ನತ ಶಿಕ್ಷಣ ಪಡೆಯಬೇಕು. ಮದ್ಯಪಾನದಿಂದ ಬದುಕು ನಾಶವಾಗುತ್ತಿದ್ದು, ಸಮುದಾಯವು ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು’ ಎಂದರು.</p>.<p>ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ಎಸ್.ರವಿ, ಉದ್ಯಮಿ ಎಚ್.ಕೆ.ಸೋಮಶೇಖರ್, ನಿವೃತ್ತ ಅಧಿಕಾರಿಗಳಾದ ಆರ್.ರಂಗನಾಥ್, ಎಂ.ಮಹದೇವ್, ಕೆಂಚಯ್ಯ, ಬಿ.ಎಂ.ಮಹದೇವಯ್ಯ, ಜೈ ಭೀಮ್ ಕ್ರಾಂತಿಕಾರಿ ಸೈನ್ಯದ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-39-2088878718</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>