<p>ಮೈಸೂರು: ‘ನಗರದ 100 ಅಟಿ ರಸ್ತೆಯಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ ವ್ಯವಸ್ಥಾಪಕರು ಕನ್ನಡ ಮಾತನಾಡುತ್ತಿಲ್ಲ’ ಎಂದು ಆರೋಪಿಸಿ ಉಪನ್ಯಾಸಕ ಬಾಲು ಎಸ್.ರಂಗಸ್ವಾಮಿ ಹಾಗೂ ಕನ್ನಡ ವೇದಿಕೆ ಸದಸ್ಯರು ಗುರುವಾರ ಅವರನ್ನು ತರಾಟೆಗೆ ತೆಗೆದುಕೊಂಡರು.</p>.<p>ರಂಗಸ್ವಾಮಿ ಅವರು ಬ್ಯಾಂಕ್ ಒಳಗಿರುವ ಎಟಿಎಂ ಹಾಳಾಗಿರುವುದರ ಕುರಿತ ಸೂಚನಾ ಫಲಕವನ್ನು ಹೊರಗಡೆ ಇಡುವಂತೆ ಮನವಿ ಮಾಡಿದರು.</p>.<p>‘ಈ ವೇಳೆ ವ್ಯವಸ್ಥಾಪಕರು ಇಂಗ್ಲಿಷ್ನಲ್ಲಿ ಮಾತನಾಡಿದರು. ಕನ್ನಡದಲ್ಲಿ ಉತ್ತರಿಸಿ ಎಂದಾಗ ಅವರು ಹಾಗೂ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು’ ಎಂದು ರಂಗಸ್ವಾಮಿ ದೂರಿದರು.</p>.<p>‘ನಂತರ ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಗೋಪಿ, ಬಾಬು, ರೈತಪರ್ವ ಅರುಣ್ ಕುಮಾರ್, ಮಲ್ಲೇಶ್ ತೆರಳಿ ಅವರಿಗೆ ತಪ್ಪಿನ ಮನವರಿಕೆ ಮಾಡಿದಾಗ, ತಪ್ಪು ಒಪ್ಪಿಕೊಂಡರು’ ಎಂದು ಅವರು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-37-1054450704</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ನಗರದ 100 ಅಟಿ ರಸ್ತೆಯಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ ವ್ಯವಸ್ಥಾಪಕರು ಕನ್ನಡ ಮಾತನಾಡುತ್ತಿಲ್ಲ’ ಎಂದು ಆರೋಪಿಸಿ ಉಪನ್ಯಾಸಕ ಬಾಲು ಎಸ್.ರಂಗಸ್ವಾಮಿ ಹಾಗೂ ಕನ್ನಡ ವೇದಿಕೆ ಸದಸ್ಯರು ಗುರುವಾರ ಅವರನ್ನು ತರಾಟೆಗೆ ತೆಗೆದುಕೊಂಡರು.</p>.<p>ರಂಗಸ್ವಾಮಿ ಅವರು ಬ್ಯಾಂಕ್ ಒಳಗಿರುವ ಎಟಿಎಂ ಹಾಳಾಗಿರುವುದರ ಕುರಿತ ಸೂಚನಾ ಫಲಕವನ್ನು ಹೊರಗಡೆ ಇಡುವಂತೆ ಮನವಿ ಮಾಡಿದರು.</p>.<p>‘ಈ ವೇಳೆ ವ್ಯವಸ್ಥಾಪಕರು ಇಂಗ್ಲಿಷ್ನಲ್ಲಿ ಮಾತನಾಡಿದರು. ಕನ್ನಡದಲ್ಲಿ ಉತ್ತರಿಸಿ ಎಂದಾಗ ಅವರು ಹಾಗೂ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರು’ ಎಂದು ರಂಗಸ್ವಾಮಿ ದೂರಿದರು.</p>.<p>‘ನಂತರ ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಗೋಪಿ, ಬಾಬು, ರೈತಪರ್ವ ಅರುಣ್ ಕುಮಾರ್, ಮಲ್ಲೇಶ್ ತೆರಳಿ ಅವರಿಗೆ ತಪ್ಪಿನ ಮನವರಿಕೆ ಮಾಡಿದಾಗ, ತಪ್ಪು ಒಪ್ಪಿಕೊಂಡರು’ ಎಂದು ಅವರು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-37-1054450704</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>