<p>ಮೈಸೂರು: ‘ಜಗತ್ತು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಭಗವಾನ್ ಬುದ್ಧನೇ ಅಂತಿಮ ಪರಿಹಾರ’ ಎಂದು ಸಾಹಿತಿ ಕೆ.ಪಿ. ಮಹಾದೇವಯ್ಯ ಹೇಳಿದರು.</p>.<p>ಇಲ್ಲಿನ ಕಲಾಮಂದಿರ ಆವರಣದ ಚಿಂತಕರ ಚಾವಡಿಯಲ್ಲಿ ತನುಮನ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ‘ಧಮ್ಮ ಸಂಗೀತಯಾನ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಜಗತ್ತು ಯುದ್ಧ ಯುದ್ಧ ಎಂದು ಆ ದಿಕ್ಕಿನಲ್ಲಿ ಸಾಗುತ್ತಿರುವುದು ಅಪಾಯಕಾರಿಯಾಗಿದೆ. ಹೀಗಾಗಿ, ಬುದ್ಧರ ಕರುಣೆ, ಮೈತ್ರಿ, ಮಮತೆ, ಸಹ ಜೀವನ ಈಗ ಬಹಳ ಅಗತ್ಯವಿದೆ’ ಎಂದರು.</p>.<p>ನೃತ್ಯ ಕಲಾವಿದ ಸಂತೋಷ್, ‘ಹಲವು ಕಲೆಗಳಿಗೆ ಬುದ್ಧ ಧಮ್ಮ ಅಡಿಪಾಯವಾಗಿದೆ. ಧಮ್ಮ ಸಂದೇಶ ಸಾರಲು ಲಕ್ಷ್ಮಿರಾಮ್ ಅವರು ಈ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.</p>.<p>ಗಾಯಕ ಲಕ್ಷ್ಮಿರಾಮ್ ಮತ್ತು ಆರ್. ರೂಪಾ ಶಿಬಿರಾರ್ಥಿಗಳಿಗೆ ಅಂಬೇಡ್ಕರ್ ಗೀತೆಗಳನ್ನು ಪರಿಚಯಿಸಿದರು. ಹಿನಕಲ್ ಸೋಮಣ್ಣ, ಸುಕನ್ಯಾ ಶಿವರಾಮ, ಚಂದ್ರ, ಲಲಿತಾದ್ರಿಪುರ ಶಿವು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-39-1207927259</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಜಗತ್ತು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಭಗವಾನ್ ಬುದ್ಧನೇ ಅಂತಿಮ ಪರಿಹಾರ’ ಎಂದು ಸಾಹಿತಿ ಕೆ.ಪಿ. ಮಹಾದೇವಯ್ಯ ಹೇಳಿದರು.</p>.<p>ಇಲ್ಲಿನ ಕಲಾಮಂದಿರ ಆವರಣದ ಚಿಂತಕರ ಚಾವಡಿಯಲ್ಲಿ ತನುಮನ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ‘ಧಮ್ಮ ಸಂಗೀತಯಾನ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಜಗತ್ತು ಯುದ್ಧ ಯುದ್ಧ ಎಂದು ಆ ದಿಕ್ಕಿನಲ್ಲಿ ಸಾಗುತ್ತಿರುವುದು ಅಪಾಯಕಾರಿಯಾಗಿದೆ. ಹೀಗಾಗಿ, ಬುದ್ಧರ ಕರುಣೆ, ಮೈತ್ರಿ, ಮಮತೆ, ಸಹ ಜೀವನ ಈಗ ಬಹಳ ಅಗತ್ಯವಿದೆ’ ಎಂದರು.</p>.<p>ನೃತ್ಯ ಕಲಾವಿದ ಸಂತೋಷ್, ‘ಹಲವು ಕಲೆಗಳಿಗೆ ಬುದ್ಧ ಧಮ್ಮ ಅಡಿಪಾಯವಾಗಿದೆ. ಧಮ್ಮ ಸಂದೇಶ ಸಾರಲು ಲಕ್ಷ್ಮಿರಾಮ್ ಅವರು ಈ ಕಾರ್ಯಾಗಾರ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.</p>.<p>ಗಾಯಕ ಲಕ್ಷ್ಮಿರಾಮ್ ಮತ್ತು ಆರ್. ರೂಪಾ ಶಿಬಿರಾರ್ಥಿಗಳಿಗೆ ಅಂಬೇಡ್ಕರ್ ಗೀತೆಗಳನ್ನು ಪರಿಚಯಿಸಿದರು. ಹಿನಕಲ್ ಸೋಮಣ್ಣ, ಸುಕನ್ಯಾ ಶಿವರಾಮ, ಚಂದ್ರ, ಲಲಿತಾದ್ರಿಪುರ ಶಿವು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-39-1207927259</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>