<p><strong>ಮೈಸೂರು:</strong> ಹೊಸ ಸಂವತ್ಸರಕ್ಕೆ ಮುನ್ನಡಿ ಆಗಿರುವ ಯುಗಾದಿ ಹಬ್ಬದ ಸ್ವಾಗತಕ್ಕೆ ನಗರವೂ ಸೇರಿದಂತೆ ಜಿಲ್ಲೆಯ ಜನರು ಸಜ್ಜಾಗಿದ್ದು, ಹಬ್ಬದ ಮುನ್ನಾ ದಿನವಾದ ಬುಧವಾರ ಸಿದ್ಧತೆ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೆಚ್ಚಿತ್ತು.</p>.<p>ಮಾವು–ಬೇವಿನೊಂದಿಗೆ ಹಬ್ಬವನ್ನು ಸ್ವಾಗತಿಸುವುದು ವಾಡಿಕೆ. ಈ ಎರಡೂ ಸೊಪ್ಪುಗಳ ಮಿಶ್ರಣವನ್ನುಳ್ಳ ಸಣ್ಣ ಕಟ್ಟುಗಳನ್ನು ಕೊಳ್ಳಲು ಮಾರುಕಟ್ಟೆಗೆ ಬಂದ ಗ್ರಾಹಕರು ಅದರೊಟ್ಟಿಗೆ ಹಬ್ಬಕ್ಕೆ ಬೇಕಾದ ಇನ್ನಿತರ ಹೂ–ಹಣ್ಣು , ಪೂಜಾ ಸಾಮಗ್ರಿಗಳನ್ನೂ ಕೊಂಡೊಯ್ದರು. ಮಾವಿನ ಸೊಪ್ಪು ಸಣ್ಣ ಕಟ್ಟಿಗೆ ₹20 ಹಾಗೂ ಬೇವು ₹10ರಂತೆ ಚೌಕಾಸಿಯ ವ್ಯಾಪಾರ ನಡೆಯಿತು.</p>.<p>ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಅದಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಗಡಿಯಾರ ವೃತ್ತಗಳಲ್ಲಿ ಬೆಳಿಗ್ಗೆಯಿಂದಲೇ ಜನಜಂಗುಳಿ ಹೆಚ್ಚಿತ್ತು. ಸಂಜೆಯಾಗುತ್ತಲೇ ಗ್ರಾಹಕರ ಸಂಖ್ಯೆ ದುಪ್ಪಟ್ಟಾಯಿತು.</p>.<p>ಯುಗಾದಿಯಂದು ಹೋಳಿಗೆ ಮಾಡಿ ಸವಿಯುವುದು ವಾಡಿಕೆ. ಹಬ್ಬಕ್ಕೆ ಬೇಕಾದ ಪದಾರ್ಥಗಳ ಖರೀದಿಗೆ ಜನರು ಆಸಕ್ತಿ ತೋರಿದರು. ಈ ಬಾರಿ ತೊಗರಿ ಬೇಳೆ ಸೇರಿದಂತೆ ಹೆಚ್ಚಿನ ಪದಾರ್ಥಗಳು ಕೈಗೆ ಎಟಕುವ ದರದಲ್ಲೇ ಇವೆ. ಬೇಳೆ ಪ್ರತಿ ಕೆ.ಜಿ.ಗೆ ₹110–120, ಹೆಸರುಬೇಳೆ ₹110, ಮೈದಾ ₹50, ಬೆಲ್ಲ ₹60ರಂತೆ ವ್ಯಾಪಾರ ನಡೆದಿತ್ತು. ಕಡಲೆಬೀಜ ಕೊಂಚ ದರ ಏರಿಸಿಕೊಂಡಿದ್ದು ₹200–220ರಂತೆ ಮಾರಾಟವಾಯಿತು. ಈ ಹಬ್ಬಕ್ಕೆ ಅಡುಗೆ ಎಣ್ಣೆಗಳು ದುಬಾರಿ ಆಗಿದ್ದು, ಸೂರ್ಯಕಾಂತಿ ಎಣ್ಣೆ ಲೀಟರ್ಗೆ ₹180ಕ್ಕೆ ದರ ಹೆಚ್ಚಾಗಿತ್ತು.</p>.<p>ಹಣ್ಣುಗಳ ದರದಲ್ಲಿ ಹೆಚ್ಚು ವ್ಯತ್ಯಾಸ ಇರಲಿಲ್ಲ. ಸೇಬು ಹಾಗೂ ದಾಳಿಂಬೆ ದುಬಾರಿ ಆಗಿದ್ದು, ಕೆ.ಜಿ.ಗೆ ₹250ರವರೆಗೂ ಮಾರಾಟವಾದವು. ಏಲಕ್ಕಿ ಬಾಳೆ ಬೆಲೆ ಕೊಂಚ ತಗ್ಗಿದ್ದು, ಹಬ್ಬದಲ್ಲೂ ₹70–80ರ ಸರಾಸರಿಯಲ್ಲಿ ವ್ಯಾಪಾರವಾಯಿತು. ದ್ರಾಕ್ಷಿ ಅಗ್ಗವಾಗಿದ್ದು, ಕೆ.ಜಿ.ಗೆ ₹100, ಸಪೋಟ –₹60, ಮೂಸಂಬಿ ಹಾಗೂ ಕಿತ್ತಳೆ–₹60, ಕಲ್ಲಂಗಡಿ–₹25, ಖರ್ಬೂಜ–₹40ರಂತೆ ವ್ಯಾಪಾರವಾಯಿತು.</p>.<p><strong>ಜವಳಿ ಖರೀದಿ ಸಂಭ್ರಮ</strong>: ಹಬ್ಬಕ್ಕೆಂದು ಹೊಸ ಬಟ್ಟೆ ಖರೀದಿ ಜೋರಾಗಿದ್ದು, ನಗರದ ಜವಳಿ ಮಳಿಗೆಗಳಿಗೆ ಗ್ರಾಹಕರು ಲಗ್ಗೆ ಇಟ್ಟರು. ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶ ಗಳಲ್ಲಿ ಸಂಜೆ ಹೆಚ್ಚಿನ ಜನಸಂದಣಿ ಕಂಡುಬಂತು.</p>.<p><strong>ದೇವಸ್ಥಾನಗಳಲ್ಲಿ ಸ್ವಚ್ಛತೆ:</strong> ಯುಗಾದಿ ಅಮಾವಾಸ್ಯೆ ಅಂಗವಾಗಿ ಬುಧವಾರ ಬಹುತೇಕ ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು. ಗುರುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಜೋರಾಗಿದ್ದವು.</p>.<p><strong>ಹೊನ್ನೇರು ಕಟ್ಟಲು ಸಿದ್ಧತೆ:</strong> ಯುಗಾದಿ ಯಂದು ‘ಹೊನ್ನೇರು’ ಕಟ್ಟುವುದಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ. ಎತ್ತುಗಳನ್ನು ಸಾಕಿರುವವರು ಕಡ್ಡಾಯವಾಗಿ ತಮ್ಮ ಹೊಲಕ್ಕೆ ಹೋಗಿ ಉಳುಮೆ ಕಾರ್ಯ ಆರಂಭಿಸುವುದು ಯುಗಾದಿ ವಿಶೇಷ. ಅದಕ್ಕೆಂದೇ ಅವರೆಲ್ಲ ತಮ್ಮ ತಮ್ಮ ಎತ್ತುಗಳ ಸಿಂಗಾರ ಕಾರ್ಯದಲ್ಲಿ ತೊಡಗಿದ್ದರು.</p>.<h2> ಕನಕಾಂಬರ ಕೆ.ಜಿ.ಗೆ ₹1 ಸಾವಿರ</h2><p> ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಕನಕಾಂಬರ ಪ್ರತಿ ಕೆ.ಜಿ.ಗೆ ₹1 ಸಾವಿರದವರೆಗೂ ಬೆಲೆ ಏರಿಸಿಕೊಂಡಿತ್ತು. ಮಂಗಳ ವಾರ ಅಲ್ಲಲ್ಲಿ ವ್ಯಾಪಕ ಮಳೆಯಾದ ಕಾರಣಕ್ಕೆ ಮಾರುಕಟ್ಟೆಗೆ ಗುಣ ಮಟ್ಟದ ಹೂವು ಬಂದಿರಲಿಲ್ಲ. ಹೀಗಾಗಿ ಬುಧವಾರ ಮಧ್ಯಾಹ್ನದ ತರುವಾಯ ಬೆಲೆ ಇನ್ನಷ್ಟು ಹೆಚ್ಚಾಯಿತು. 100 ಗ್ರಾಂಗೆ ₹100ರಂತೆ ಮಾರಾಟ ನಡೆದಿತ್ತು. ಘಮ್ಮೆನ್ನುವ ಮೈಸೂರು ಮಲ್ಲಿಗೆಗೂ ಬೇಡಿಕೆ ಹೆಚ್ಚಿದ್ದು ಕೆ.ಜಿ.ಗೆ ₹600ರಂತೆ ವ್ಯಾಪಾರ ವಾಯಿತು. ಸೇವಂತಿಗೆ ಪ್ರತಿ ಕೆ.ಜಿ.ಗೆ ₹200 ಹಾಗೂ ಮಾರಿಗೆ ₹80–100 ಬೆಲೆ ಇತ್ತು. ಬಿಡಿ ಗುಲಾಬಿ ₹300 ಕಾಕಡ–₹400 ರಂತೆ ಮಾರಾಟ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಹೊಸ ಸಂವತ್ಸರಕ್ಕೆ ಮುನ್ನಡಿ ಆಗಿರುವ ಯುಗಾದಿ ಹಬ್ಬದ ಸ್ವಾಗತಕ್ಕೆ ನಗರವೂ ಸೇರಿದಂತೆ ಜಿಲ್ಲೆಯ ಜನರು ಸಜ್ಜಾಗಿದ್ದು, ಹಬ್ಬದ ಮುನ್ನಾ ದಿನವಾದ ಬುಧವಾರ ಸಿದ್ಧತೆ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೆಚ್ಚಿತ್ತು.</p>.<p>ಮಾವು–ಬೇವಿನೊಂದಿಗೆ ಹಬ್ಬವನ್ನು ಸ್ವಾಗತಿಸುವುದು ವಾಡಿಕೆ. ಈ ಎರಡೂ ಸೊಪ್ಪುಗಳ ಮಿಶ್ರಣವನ್ನುಳ್ಳ ಸಣ್ಣ ಕಟ್ಟುಗಳನ್ನು ಕೊಳ್ಳಲು ಮಾರುಕಟ್ಟೆಗೆ ಬಂದ ಗ್ರಾಹಕರು ಅದರೊಟ್ಟಿಗೆ ಹಬ್ಬಕ್ಕೆ ಬೇಕಾದ ಇನ್ನಿತರ ಹೂ–ಹಣ್ಣು , ಪೂಜಾ ಸಾಮಗ್ರಿಗಳನ್ನೂ ಕೊಂಡೊಯ್ದರು. ಮಾವಿನ ಸೊಪ್ಪು ಸಣ್ಣ ಕಟ್ಟಿಗೆ ₹20 ಹಾಗೂ ಬೇವು ₹10ರಂತೆ ಚೌಕಾಸಿಯ ವ್ಯಾಪಾರ ನಡೆಯಿತು.</p>.<p>ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಅದಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಗಡಿಯಾರ ವೃತ್ತಗಳಲ್ಲಿ ಬೆಳಿಗ್ಗೆಯಿಂದಲೇ ಜನಜಂಗುಳಿ ಹೆಚ್ಚಿತ್ತು. ಸಂಜೆಯಾಗುತ್ತಲೇ ಗ್ರಾಹಕರ ಸಂಖ್ಯೆ ದುಪ್ಪಟ್ಟಾಯಿತು.</p>.<p>ಯುಗಾದಿಯಂದು ಹೋಳಿಗೆ ಮಾಡಿ ಸವಿಯುವುದು ವಾಡಿಕೆ. ಹಬ್ಬಕ್ಕೆ ಬೇಕಾದ ಪದಾರ್ಥಗಳ ಖರೀದಿಗೆ ಜನರು ಆಸಕ್ತಿ ತೋರಿದರು. ಈ ಬಾರಿ ತೊಗರಿ ಬೇಳೆ ಸೇರಿದಂತೆ ಹೆಚ್ಚಿನ ಪದಾರ್ಥಗಳು ಕೈಗೆ ಎಟಕುವ ದರದಲ್ಲೇ ಇವೆ. ಬೇಳೆ ಪ್ರತಿ ಕೆ.ಜಿ.ಗೆ ₹110–120, ಹೆಸರುಬೇಳೆ ₹110, ಮೈದಾ ₹50, ಬೆಲ್ಲ ₹60ರಂತೆ ವ್ಯಾಪಾರ ನಡೆದಿತ್ತು. ಕಡಲೆಬೀಜ ಕೊಂಚ ದರ ಏರಿಸಿಕೊಂಡಿದ್ದು ₹200–220ರಂತೆ ಮಾರಾಟವಾಯಿತು. ಈ ಹಬ್ಬಕ್ಕೆ ಅಡುಗೆ ಎಣ್ಣೆಗಳು ದುಬಾರಿ ಆಗಿದ್ದು, ಸೂರ್ಯಕಾಂತಿ ಎಣ್ಣೆ ಲೀಟರ್ಗೆ ₹180ಕ್ಕೆ ದರ ಹೆಚ್ಚಾಗಿತ್ತು.</p>.<p>ಹಣ್ಣುಗಳ ದರದಲ್ಲಿ ಹೆಚ್ಚು ವ್ಯತ್ಯಾಸ ಇರಲಿಲ್ಲ. ಸೇಬು ಹಾಗೂ ದಾಳಿಂಬೆ ದುಬಾರಿ ಆಗಿದ್ದು, ಕೆ.ಜಿ.ಗೆ ₹250ರವರೆಗೂ ಮಾರಾಟವಾದವು. ಏಲಕ್ಕಿ ಬಾಳೆ ಬೆಲೆ ಕೊಂಚ ತಗ್ಗಿದ್ದು, ಹಬ್ಬದಲ್ಲೂ ₹70–80ರ ಸರಾಸರಿಯಲ್ಲಿ ವ್ಯಾಪಾರವಾಯಿತು. ದ್ರಾಕ್ಷಿ ಅಗ್ಗವಾಗಿದ್ದು, ಕೆ.ಜಿ.ಗೆ ₹100, ಸಪೋಟ –₹60, ಮೂಸಂಬಿ ಹಾಗೂ ಕಿತ್ತಳೆ–₹60, ಕಲ್ಲಂಗಡಿ–₹25, ಖರ್ಬೂಜ–₹40ರಂತೆ ವ್ಯಾಪಾರವಾಯಿತು.</p>.<p><strong>ಜವಳಿ ಖರೀದಿ ಸಂಭ್ರಮ</strong>: ಹಬ್ಬಕ್ಕೆಂದು ಹೊಸ ಬಟ್ಟೆ ಖರೀದಿ ಜೋರಾಗಿದ್ದು, ನಗರದ ಜವಳಿ ಮಳಿಗೆಗಳಿಗೆ ಗ್ರಾಹಕರು ಲಗ್ಗೆ ಇಟ್ಟರು. ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶ ಗಳಲ್ಲಿ ಸಂಜೆ ಹೆಚ್ಚಿನ ಜನಸಂದಣಿ ಕಂಡುಬಂತು.</p>.<p><strong>ದೇವಸ್ಥಾನಗಳಲ್ಲಿ ಸ್ವಚ್ಛತೆ:</strong> ಯುಗಾದಿ ಅಮಾವಾಸ್ಯೆ ಅಂಗವಾಗಿ ಬುಧವಾರ ಬಹುತೇಕ ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು. ಗುರುವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ಜೋರಾಗಿದ್ದವು.</p>.<p><strong>ಹೊನ್ನೇರು ಕಟ್ಟಲು ಸಿದ್ಧತೆ:</strong> ಯುಗಾದಿ ಯಂದು ‘ಹೊನ್ನೇರು’ ಕಟ್ಟುವುದಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ. ಎತ್ತುಗಳನ್ನು ಸಾಕಿರುವವರು ಕಡ್ಡಾಯವಾಗಿ ತಮ್ಮ ಹೊಲಕ್ಕೆ ಹೋಗಿ ಉಳುಮೆ ಕಾರ್ಯ ಆರಂಭಿಸುವುದು ಯುಗಾದಿ ವಿಶೇಷ. ಅದಕ್ಕೆಂದೇ ಅವರೆಲ್ಲ ತಮ್ಮ ತಮ್ಮ ಎತ್ತುಗಳ ಸಿಂಗಾರ ಕಾರ್ಯದಲ್ಲಿ ತೊಡಗಿದ್ದರು.</p>.<h2> ಕನಕಾಂಬರ ಕೆ.ಜಿ.ಗೆ ₹1 ಸಾವಿರ</h2><p> ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಕನಕಾಂಬರ ಪ್ರತಿ ಕೆ.ಜಿ.ಗೆ ₹1 ಸಾವಿರದವರೆಗೂ ಬೆಲೆ ಏರಿಸಿಕೊಂಡಿತ್ತು. ಮಂಗಳ ವಾರ ಅಲ್ಲಲ್ಲಿ ವ್ಯಾಪಕ ಮಳೆಯಾದ ಕಾರಣಕ್ಕೆ ಮಾರುಕಟ್ಟೆಗೆ ಗುಣ ಮಟ್ಟದ ಹೂವು ಬಂದಿರಲಿಲ್ಲ. ಹೀಗಾಗಿ ಬುಧವಾರ ಮಧ್ಯಾಹ್ನದ ತರುವಾಯ ಬೆಲೆ ಇನ್ನಷ್ಟು ಹೆಚ್ಚಾಯಿತು. 100 ಗ್ರಾಂಗೆ ₹100ರಂತೆ ಮಾರಾಟ ನಡೆದಿತ್ತು. ಘಮ್ಮೆನ್ನುವ ಮೈಸೂರು ಮಲ್ಲಿಗೆಗೂ ಬೇಡಿಕೆ ಹೆಚ್ಚಿದ್ದು ಕೆ.ಜಿ.ಗೆ ₹600ರಂತೆ ವ್ಯಾಪಾರ ವಾಯಿತು. ಸೇವಂತಿಗೆ ಪ್ರತಿ ಕೆ.ಜಿ.ಗೆ ₹200 ಹಾಗೂ ಮಾರಿಗೆ ₹80–100 ಬೆಲೆ ಇತ್ತು. ಬಿಡಿ ಗುಲಾಬಿ ₹300 ಕಾಕಡ–₹400 ರಂತೆ ಮಾರಾಟ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>