<p>ಮೈಸೂರು: ‘ಮಹಿಳೆಯರು ಆರೋಗ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಟಿ20 ಬ್ಲೈಂಡ್ (ಅಂಧ) ಮಹಿಳಾ ಕ್ರಿಕೆಟ್ ವರ್ಲ್ಡ್ ಕಪ್ ವಿಜೇತ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ ಸಲಹೆ ನೀಡಿದರು.</p>.<p>ಇಲ್ಲಿನ ಕ್ಲಿಯರ್ಮೆಡಿ ಹೆಲ್ತ್ಕೇರ್ ಆಸ್ಪತ್ರೆ ವತಿಯಿಂದ ‘ವುಮೆನ್ ಫಾರ್ ವುಮೆನ್’ ಯೋಜನೆಯಡಿ ಈಚೆಗೆ ಪ್ರಾರಂಭಿಸಲಾದ ‘ಮಹಿಳಾ ಕ್ಯಾನ್ಸರ್ ಆರೈಕೆ ಕ್ಲಿನಿಕ್’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಹಿಳೆಯರ ಆರೋಗ್ಯ ಸೇವೆಗೆ ಮಹತ್ವದ ಹೆಜ್ಜೆಯಾಗಿ ಕ್ಯಾನ್ಸರ್ ಆರೈಕೆ ಕ್ಲಿನಿಕ್ ತೆರೆಯಲಾಗಿದೆ’ ಎಂದರು.</p>.<p>ಕ್ಲಿಯರ್ಮೆಡಿ ಹೆಲ್ತ್ಕೇರ್ ನಿರ್ದೇಶಕ ಡಾ.ಶ್ರೀನಿವಾಸ್, ‘ಈ ಯೋಜನೆ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ಬದ್ಧತೆ ತೋರಿಸುತ್ತದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಬದುಕುಳಿಯುವ ಪ್ರಮಾಣ ಹೆಚ್ಚಿಸಬಹುದು’ ಎಂದು ಹೇಳಿದರು.</p>.<p>ಹಿರಿಯ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಡಾ.ರಕ್ಷಿತ್ ಶ್ರೀಂಗೇರಿ, ರೇಡಿಯೇಷನ್ ಆಂಕಾಲಜಿಸ್ಟ್ ಡಾ.ಮೆಖಲಾ, ಶಸ್ತ್ರ ಚಿಕಿತ್ಸಾ ಆಂಕಾಲಜಿಸ್ಟ್ ಡಾ.ರಾಜಲಕ್ಷ್ಮಿ ಇ.ಎಸ್ ಮಾತನಾಡಿದರು.</p>.<p>ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಪ್ರಿಯಾಂಕಾ ಸತೀಶ್, ‘ಮಹಿಳೆಯರು ಕುಟುಂಬದಲ್ಲಿ ಪ್ರಮುಖ ಪಾತ್ರ ವಹಿಸುವರು. ಹೀಗಾಗಿ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p>ಈ ವೇಳೆ ₹999 ದರದ ವಿಶೇಷ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಘೋಷಿಸಿದರು. ಈ ಪ್ರತಿ ಬುಧವಾರ, ಶನಿವಾರ ಸಾಮಾನ್ಯ ಆರೋಗ್ಯ ತಪಾಸಣೆ ಪ್ಯಾಕೇಜ್ ಒದಗಿಸಲಾಗುವುದು ಎಂದು ತಿಳಿಸಿದರು.</p>.<p>ಬ್ಯುಸಿನೆಸ್ ಹೆಡ್ ವೆಲ್ಮುಲ ಚಲಂ, ದಕ್ಷಿಣ ವಲಯ ನಿರ್ದೇಶಕ ರವಿಕುಮಾರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-39-1222623773</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಮಹಿಳೆಯರು ಆರೋಗ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಟಿ20 ಬ್ಲೈಂಡ್ (ಅಂಧ) ಮಹಿಳಾ ಕ್ರಿಕೆಟ್ ವರ್ಲ್ಡ್ ಕಪ್ ವಿಜೇತ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ ಸಲಹೆ ನೀಡಿದರು.</p>.<p>ಇಲ್ಲಿನ ಕ್ಲಿಯರ್ಮೆಡಿ ಹೆಲ್ತ್ಕೇರ್ ಆಸ್ಪತ್ರೆ ವತಿಯಿಂದ ‘ವುಮೆನ್ ಫಾರ್ ವುಮೆನ್’ ಯೋಜನೆಯಡಿ ಈಚೆಗೆ ಪ್ರಾರಂಭಿಸಲಾದ ‘ಮಹಿಳಾ ಕ್ಯಾನ್ಸರ್ ಆರೈಕೆ ಕ್ಲಿನಿಕ್’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮಹಿಳೆಯರ ಆರೋಗ್ಯ ಸೇವೆಗೆ ಮಹತ್ವದ ಹೆಜ್ಜೆಯಾಗಿ ಕ್ಯಾನ್ಸರ್ ಆರೈಕೆ ಕ್ಲಿನಿಕ್ ತೆರೆಯಲಾಗಿದೆ’ ಎಂದರು.</p>.<p>ಕ್ಲಿಯರ್ಮೆಡಿ ಹೆಲ್ತ್ಕೇರ್ ನಿರ್ದೇಶಕ ಡಾ.ಶ್ರೀನಿವಾಸ್, ‘ಈ ಯೋಜನೆ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ಬದ್ಧತೆ ತೋರಿಸುತ್ತದೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಬದುಕುಳಿಯುವ ಪ್ರಮಾಣ ಹೆಚ್ಚಿಸಬಹುದು’ ಎಂದು ಹೇಳಿದರು.</p>.<p>ಹಿರಿಯ ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಡಾ.ರಕ್ಷಿತ್ ಶ್ರೀಂಗೇರಿ, ರೇಡಿಯೇಷನ್ ಆಂಕಾಲಜಿಸ್ಟ್ ಡಾ.ಮೆಖಲಾ, ಶಸ್ತ್ರ ಚಿಕಿತ್ಸಾ ಆಂಕಾಲಜಿಸ್ಟ್ ಡಾ.ರಾಜಲಕ್ಷ್ಮಿ ಇ.ಎಸ್ ಮಾತನಾಡಿದರು.</p>.<p>ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಪ್ರಿಯಾಂಕಾ ಸತೀಶ್, ‘ಮಹಿಳೆಯರು ಕುಟುಂಬದಲ್ಲಿ ಪ್ರಮುಖ ಪಾತ್ರ ವಹಿಸುವರು. ಹೀಗಾಗಿ ಆರೋಗ್ಯವನ್ನು ಆದ್ಯತೆಯಾಗಿ ಪರಿಗಣಿಸಬೇಕು’ ಎಂದು ಕಿವಿಮಾತು ಹೇಳಿದರು.</p>.<p>ಈ ವೇಳೆ ₹999 ದರದ ವಿಶೇಷ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಘೋಷಿಸಿದರು. ಈ ಪ್ರತಿ ಬುಧವಾರ, ಶನಿವಾರ ಸಾಮಾನ್ಯ ಆರೋಗ್ಯ ತಪಾಸಣೆ ಪ್ಯಾಕೇಜ್ ಒದಗಿಸಲಾಗುವುದು ಎಂದು ತಿಳಿಸಿದರು.</p>.<p>ಬ್ಯುಸಿನೆಸ್ ಹೆಡ್ ವೆಲ್ಮುಲ ಚಲಂ, ದಕ್ಷಿಣ ವಲಯ ನಿರ್ದೇಶಕ ರವಿಕುಮಾರ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-39-1222623773</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>