<p><strong>ಮೈಸೂರು</strong>: ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ಸಮೀಪ, ಕೇಂದ್ರದ ಮಾಜಿ ಸಚಿವ ಗುರುಪಾದಸ್ವಾಮಿ ಅವರ ಮನೆಯ ಮುಂಭಾಗದ ಚರಂಡಿಗೆ ಮುಚ್ಚಿದ್ದ ಕಾಂಕ್ರೀಟ್ ಹಾಸು ಒಡೆದು ಹೋಗಿದ್ದು, ಶನಿವಾರ ಬೆಳಿಗ್ಗೆ ಹಸುವೊಂದು ಅದರೊಳಗೆ ಬಿದ್ದು ಸಿಲುಕಿಕೊಂಡಿತ್ತು.</p>.<p>ಹಸು ಮೇಲೆ ಬರಲಾಗದೆ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಎಸ್. ಪ್ರಕಾಶ್ ಹಾಗೂ ಸಾರ್ವಜನಿಕರು, ನಗರಪಾಲಿಕೆ ಸಿಬ್ಬಂದಿ ಮತ್ತು ಕೆ.ಆರ್. ಸಂಚಾರ ಠಾಣೆಯ ಸಿಬ್ಬಂದಿ ಎಂ.ಸುನೀಲ್ ಜೊತೆ ಸೇರಿಕೊಂಡು ಹಸುವನ್ನು ಮೇಲೆ ಎತ್ತುವಲ್ಲಿ ಯಶಸ್ವಿಯಾದರು. ಚರಂಡಿಯ ಬಳಿ ಬ್ಯಾರಿಕೇಡ್ ಇಡಲಾಗಿದೆ.</p>.<p>‘ತಾತ್ಕಾಲಿಕವಾಗಿ ಇಡಲಾಗಿದೆಯಾದರೂ, ಗುಂಡಿಯನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಪಾದಚಾರಿಗಳೂ ಗುಂಡಿಗೆ ಬಿದ್ದು, ತೊಂದರೆ ಅನುಭವಿಸುವ ಅಪಾಯವಿದೆ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-39-1791738967</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ಸಮೀಪ, ಕೇಂದ್ರದ ಮಾಜಿ ಸಚಿವ ಗುರುಪಾದಸ್ವಾಮಿ ಅವರ ಮನೆಯ ಮುಂಭಾಗದ ಚರಂಡಿಗೆ ಮುಚ್ಚಿದ್ದ ಕಾಂಕ್ರೀಟ್ ಹಾಸು ಒಡೆದು ಹೋಗಿದ್ದು, ಶನಿವಾರ ಬೆಳಿಗ್ಗೆ ಹಸುವೊಂದು ಅದರೊಳಗೆ ಬಿದ್ದು ಸಿಲುಕಿಕೊಂಡಿತ್ತು.</p>.<p>ಹಸು ಮೇಲೆ ಬರಲಾಗದೆ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಎಸ್. ಪ್ರಕಾಶ್ ಹಾಗೂ ಸಾರ್ವಜನಿಕರು, ನಗರಪಾಲಿಕೆ ಸಿಬ್ಬಂದಿ ಮತ್ತು ಕೆ.ಆರ್. ಸಂಚಾರ ಠಾಣೆಯ ಸಿಬ್ಬಂದಿ ಎಂ.ಸುನೀಲ್ ಜೊತೆ ಸೇರಿಕೊಂಡು ಹಸುವನ್ನು ಮೇಲೆ ಎತ್ತುವಲ್ಲಿ ಯಶಸ್ವಿಯಾದರು. ಚರಂಡಿಯ ಬಳಿ ಬ್ಯಾರಿಕೇಡ್ ಇಡಲಾಗಿದೆ.</p>.<p>‘ತಾತ್ಕಾಲಿಕವಾಗಿ ಇಡಲಾಗಿದೆಯಾದರೂ, ಗುಂಡಿಯನ್ನು ತಕ್ಷಣವೇ ಮುಚ್ಚಬೇಕು. ಇಲ್ಲದಿದ್ದರೆ ಪಾದಚಾರಿಗಳೂ ಗುಂಡಿಗೆ ಬಿದ್ದು, ತೊಂದರೆ ಅನುಭವಿಸುವ ಅಪಾಯವಿದೆ. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-39-1791738967</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>