<p>ಮೈಸೂರು: ಪಾಲುದಾರರ ಅನುಮತಿ ಇಲ್ಲದೆ ಒಪ್ಪಂದ ಮುರಿದು ₹4.70 ಕೋಟಿ ಪಡೆದು ವಂಚಿಸಿದ ಆರೋಪದಲ್ಲಿ ಶ್ರೀರಾಂಪುರದ ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಎಸ್.ಗುರುರಾಜ್ ಅವರನ್ನು ಗುರುವಾರ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>‘ಚೈತ್ರ ಸಂಸ್ಥೆಯು ಎನ್ಎಸ್ಪಿಐಆರ್ಎ ಮ್ಯಾನೇಜ್ಮೆಂಟ್ ಟ್ರಸ್ಟ್ನೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿತ್ತು. ಅದರನ್ವಯ ವ್ಯವಹಾರಕ್ಕೆ ಎರಡು ಸಂಸ್ಥೆಯ ಹೆಸರಿನಲ್ಲಿ ಒಂದೇ ಖಾತೆ ತೆರೆಯಲಾಗಿತ್ತು. ಆದರೆ, ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಂಚನೆ ಮಾಡುವ ಉದ್ದೇಶದಿಂದ ಬಿ.ವಿ.ಪುಷ್ಪಲತಾ, ಕಾಲೇಜಿನ ಪ್ರಾಂಶುಪಾಲೆ ದೇಚಮ್ಮ ಅವರ ಸಹಕಾರದಲ್ಲಿ ಬ್ಯಾಂಕ್ ಖಾತೆಯಿಂದ ₹4.70 ಕೋಟಿ ಪಡೆದಿದ್ದಾರೆ. ನಮ್ಮ ಸಂಸ್ಥೆಯ ಜವಾಬ್ದಾರಿಯಲ್ಲಿರುವವರ ಸಹಿಯ ಬದಲು ದೇಚಮ್ಮ ಅವರ ಸಹಿ ಬಳಸಿದ್ದಾರೆ. ಘಟನೆ ತಿಳಿದ ತಕ್ಷಣ ಐಸಿಐಸಿಐ ಬ್ಯಾಂಕ್ ಸರಸ್ವತಿಪುರಂ ಶಾಖೆಗೆ ಮಾಹಿತಿ ನೀಡಿದ್ದು, ಅವರಿಂದ ಉತ್ತರ ಬಂದಿಲ್ಲ’ ಎಂದು ಹೈದರಾಬಾದ್ನ ಎನ್ಎಸ್ಪಿಐಆರ್ಎ ಸಂಸ್ಥೆಯ ಆಂಜನೇಯುಳು ನಿಡ್ಜೆಳಿ ದೂರು ಸಲ್ಲಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-39-578398845</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಪಾಲುದಾರರ ಅನುಮತಿ ಇಲ್ಲದೆ ಒಪ್ಪಂದ ಮುರಿದು ₹4.70 ಕೋಟಿ ಪಡೆದು ವಂಚಿಸಿದ ಆರೋಪದಲ್ಲಿ ಶ್ರೀರಾಂಪುರದ ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಎಸ್.ಗುರುರಾಜ್ ಅವರನ್ನು ಗುರುವಾರ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>‘ಚೈತ್ರ ಸಂಸ್ಥೆಯು ಎನ್ಎಸ್ಪಿಐಆರ್ಎ ಮ್ಯಾನೇಜ್ಮೆಂಟ್ ಟ್ರಸ್ಟ್ನೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿತ್ತು. ಅದರನ್ವಯ ವ್ಯವಹಾರಕ್ಕೆ ಎರಡು ಸಂಸ್ಥೆಯ ಹೆಸರಿನಲ್ಲಿ ಒಂದೇ ಖಾತೆ ತೆರೆಯಲಾಗಿತ್ತು. ಆದರೆ, ಚೈತ್ರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಂಚನೆ ಮಾಡುವ ಉದ್ದೇಶದಿಂದ ಬಿ.ವಿ.ಪುಷ್ಪಲತಾ, ಕಾಲೇಜಿನ ಪ್ರಾಂಶುಪಾಲೆ ದೇಚಮ್ಮ ಅವರ ಸಹಕಾರದಲ್ಲಿ ಬ್ಯಾಂಕ್ ಖಾತೆಯಿಂದ ₹4.70 ಕೋಟಿ ಪಡೆದಿದ್ದಾರೆ. ನಮ್ಮ ಸಂಸ್ಥೆಯ ಜವಾಬ್ದಾರಿಯಲ್ಲಿರುವವರ ಸಹಿಯ ಬದಲು ದೇಚಮ್ಮ ಅವರ ಸಹಿ ಬಳಸಿದ್ದಾರೆ. ಘಟನೆ ತಿಳಿದ ತಕ್ಷಣ ಐಸಿಐಸಿಐ ಬ್ಯಾಂಕ್ ಸರಸ್ವತಿಪುರಂ ಶಾಖೆಗೆ ಮಾಹಿತಿ ನೀಡಿದ್ದು, ಅವರಿಂದ ಉತ್ತರ ಬಂದಿಲ್ಲ’ ಎಂದು ಹೈದರಾಬಾದ್ನ ಎನ್ಎಸ್ಪಿಐಆರ್ಎ ಸಂಸ್ಥೆಯ ಆಂಜನೇಯುಳು ನಿಡ್ಜೆಳಿ ದೂರು ಸಲ್ಲಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-39-578398845</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>