<p><strong>ಮೈಸೂರು</strong>: ‘ರೈತರು ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಬಾರದು. ಹೊಲದಲ್ಲಿ ಸಾವಯವ ಕೃಷಿ ಮಾಡಿ ಗೆಡ್ಡೆ ಗೆಣಸು, ಸೊಪ್ಪು, ತರಕಾರಿ ಬೆಳೆದು ತಿನ್ನಬೇಕು. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡಿ, ವೈದ್ಯರಿಗೆ ಹಣ ಸುರಿಯಬೇಡಿ’ ಎಂದು ಸಿರಿಧಾನ್ಯ ಜಾಗೃತಿ ನೇತಾರ ಡಾ.ಖಾದರ್ ವಲ್ಲಿ ತಿಳಿಸಿದರು.</p>.<p>ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಪರಿಸರ ಆರೋಗ್ಯ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನಾವು ನಮ್ಮ ಆಹಾರದಲ್ಲಿ ಏನಿರಬೇಕು ಎಂಬುದನ್ನು ಮರೆತಿದ್ದೇವೆ. ಒಂದು ಬೆಳೆಗೆ ಮಾತ್ರ ಸೀಮಿತರಾಗಿದ್ದೇವೆ. ಇದು ನಿಜ ರೈತನ ಮಾದರಿ ಅಲ್ಲ. ಯಾವುದನ್ನು ಊಟ ಮಾಡಿದರೆ ನಮ್ಮ ಆರೋಗ್ಯ ಜೀವನಪರ್ಯಂತವೂ ಇರುತ್ತದೋ, ಆ ಊಟವನ್ನು ಬೆಳೆಯುವವನೇ ನಿಜವಾದ ರೈತ’ ಎಂದರು.</p>.<p>‘ರೈತನೇ ನಿಜವಾದ ವೈದ್ಯ. ದೇಶವನ್ನು ರೋಗಮುಕ್ತ ಮಾಡಲು ರೈತರಿಂದ ಸಾಧ್ಯ. ಅಕ್ಕಿ, ಗೋಧಿ, ಸಕ್ಕರೆ ಇವುಗಳನ್ನು ಮೂರು ತಿಂಗಳು ನಮ್ಮ ಆಹಾರದಿಂದ ದೂರ ಇಟ್ಟರೆ ಹಲವು ಆಸ್ಪತ್ರೆಗಳು ಬಾಗಿಲು ಮುಚ್ಚುತ್ತವೆ. ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಹೇಳಿದರು.</p>.<p>‘ರೈತರು ಬದಲಾದರೆ ಮುಂದಿನ ಐದು ವರ್ಷಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು. 25ಸಾವಿರ ರೈತರಿಗೆ ಬಿತ್ತನೆ ಬೀಜ ನೀಡಿ ಸಿರಿಧಾನ್ಯ ಬೆಳೆಯಲು ತರಬೇತಿ ನೀಡಲಾಗಿದೆ’ ಎಂದರು.</p>.<p>ಸೊಪ್ಪಲ್ಲಿರುವ ನಾರು ಮನುಷ್ಶನ ದೇಹವನ್ನು ಶುದ್ಧ ಮಾಡುವ ಅದ್ಭುತ ಪದಾರ್ಥ. ಮಾತ್ರೆಗಳಿಂದ ಮಾಡಿದ ಬೇರೆ ಪದಾರ್ಥಗಳು ದೇಹದ ಇತರ ಭಾಗಗಳನ್ನು ಹಾನಿಗೊಳಿಸುತ್ತವೆ ಎಂದರು.</p>.<p>‘ರಕ್ತ ಸಮತೋಲನಕ್ಕೆ 5 ಗ್ರಾಂ. ಸಕ್ಕರೆ ಅಂಶ ಸಾಕಾಗುತ್ತದೆ. ಅಕ್ಕಿ, ಗೋಧಿ ತಿಂದು ರಕ್ತ ಮಂದ ಆಗಿದೆ. ಇಂದು ಒಬ್ಬ ಮನುಷ್ಯ 170 ಕೆ.ಜಿಯವರೆಗೂ ತೂಗುತ್ತಾನೆ. ಬುಡಕಟ್ಟು ಪ್ರದೇಶದಲ್ಲೂ ಈಗ 80 ಕೆ.ಜಿ ತೂಗುವ ಜನರಿದ್ದಾರೆ. ಇದು ಮನುಷ್ಯನ ಊಟದ ಅಸ್ತವ್ಯಸ್ಥತೆಯನ್ನು ತೋರಿಸುತ್ತದೆ’ ಎಂದು ಬೇಸರಿಸಿದರು.</p>.<p>‘ಈ ಹಿಂದೆ ದೇವಸ್ಥಾನದ ಎದುರು ಹೂಮಾಲೆಗಳು ಇರುತ್ತಿದ್ದವು. ಇಂದು ಗುಟ್ಕಾ ಮಾಲೆಗಳು ನೇತಾಡುತ್ತಿವೆ. ಸರ್ಕಾರಗಳೂ ಮಾತನಾಡದಷ್ಟು ಕಾರ್ಪೋರೇಟೀಕರಣ ಮಾಡಲಾಗಿದೆ’ ಎಂದರು.</p>.<p>ಸತ್ಯಸಾಯಿ ಸೇವಾ ಟ್ರಸ್ಟ್ ಆಸ್ಪತ್ರೆಯ ಶಾಲಿನಿ ಶ್ರೀನಿವಾಸ್ ಮಾತನಾಡಿ, ‘ಇಂದು ನಾವು ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಹೀಗಾಗಿ ನಮಗೆ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತಿದೆ’ ಎಂದರು.</p>.<p>ನಯನಕುಮಾರ್ಸ್ ಆಸ್ಪತ್ರೆಯ ಗಜಾನನ ಹೆಗಡೆ ಮಾತನಾಡಿದರು. ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ವರಕೋಡು ನಾಗೇಶ್, ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-39-2102542390</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ರೈತರು ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಬಾರದು. ಹೊಲದಲ್ಲಿ ಸಾವಯವ ಕೃಷಿ ಮಾಡಿ ಗೆಡ್ಡೆ ಗೆಣಸು, ಸೊಪ್ಪು, ತರಕಾರಿ ಬೆಳೆದು ತಿನ್ನಬೇಕು. ಹಣ ಸಂಪಾದನೆಗಾಗಿ ಆರೋಗ್ಯ ಹಾಳು ಮಾಡಿ, ವೈದ್ಯರಿಗೆ ಹಣ ಸುರಿಯಬೇಡಿ’ ಎಂದು ಸಿರಿಧಾನ್ಯ ಜಾಗೃತಿ ನೇತಾರ ಡಾ.ಖಾದರ್ ವಲ್ಲಿ ತಿಳಿಸಿದರು.</p>.<p>ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಪರಿಸರ ಆರೋಗ್ಯ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ನಾವು ನಮ್ಮ ಆಹಾರದಲ್ಲಿ ಏನಿರಬೇಕು ಎಂಬುದನ್ನು ಮರೆತಿದ್ದೇವೆ. ಒಂದು ಬೆಳೆಗೆ ಮಾತ್ರ ಸೀಮಿತರಾಗಿದ್ದೇವೆ. ಇದು ನಿಜ ರೈತನ ಮಾದರಿ ಅಲ್ಲ. ಯಾವುದನ್ನು ಊಟ ಮಾಡಿದರೆ ನಮ್ಮ ಆರೋಗ್ಯ ಜೀವನಪರ್ಯಂತವೂ ಇರುತ್ತದೋ, ಆ ಊಟವನ್ನು ಬೆಳೆಯುವವನೇ ನಿಜವಾದ ರೈತ’ ಎಂದರು.</p>.<p>‘ರೈತನೇ ನಿಜವಾದ ವೈದ್ಯ. ದೇಶವನ್ನು ರೋಗಮುಕ್ತ ಮಾಡಲು ರೈತರಿಂದ ಸಾಧ್ಯ. ಅಕ್ಕಿ, ಗೋಧಿ, ಸಕ್ಕರೆ ಇವುಗಳನ್ನು ಮೂರು ತಿಂಗಳು ನಮ್ಮ ಆಹಾರದಿಂದ ದೂರ ಇಟ್ಟರೆ ಹಲವು ಆಸ್ಪತ್ರೆಗಳು ಬಾಗಿಲು ಮುಚ್ಚುತ್ತವೆ. ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಹೇಳಿದರು.</p>.<p>‘ರೈತರು ಬದಲಾದರೆ ಮುಂದಿನ ಐದು ವರ್ಷಕ್ಕೆ ಎಲ್ಲಾ ರೋಗವನ್ನು ದೂರ ಮಾಡಬಹುದು. 25ಸಾವಿರ ರೈತರಿಗೆ ಬಿತ್ತನೆ ಬೀಜ ನೀಡಿ ಸಿರಿಧಾನ್ಯ ಬೆಳೆಯಲು ತರಬೇತಿ ನೀಡಲಾಗಿದೆ’ ಎಂದರು.</p>.<p>ಸೊಪ್ಪಲ್ಲಿರುವ ನಾರು ಮನುಷ್ಶನ ದೇಹವನ್ನು ಶುದ್ಧ ಮಾಡುವ ಅದ್ಭುತ ಪದಾರ್ಥ. ಮಾತ್ರೆಗಳಿಂದ ಮಾಡಿದ ಬೇರೆ ಪದಾರ್ಥಗಳು ದೇಹದ ಇತರ ಭಾಗಗಳನ್ನು ಹಾನಿಗೊಳಿಸುತ್ತವೆ ಎಂದರು.</p>.<p>‘ರಕ್ತ ಸಮತೋಲನಕ್ಕೆ 5 ಗ್ರಾಂ. ಸಕ್ಕರೆ ಅಂಶ ಸಾಕಾಗುತ್ತದೆ. ಅಕ್ಕಿ, ಗೋಧಿ ತಿಂದು ರಕ್ತ ಮಂದ ಆಗಿದೆ. ಇಂದು ಒಬ್ಬ ಮನುಷ್ಯ 170 ಕೆ.ಜಿಯವರೆಗೂ ತೂಗುತ್ತಾನೆ. ಬುಡಕಟ್ಟು ಪ್ರದೇಶದಲ್ಲೂ ಈಗ 80 ಕೆ.ಜಿ ತೂಗುವ ಜನರಿದ್ದಾರೆ. ಇದು ಮನುಷ್ಯನ ಊಟದ ಅಸ್ತವ್ಯಸ್ಥತೆಯನ್ನು ತೋರಿಸುತ್ತದೆ’ ಎಂದು ಬೇಸರಿಸಿದರು.</p>.<p>‘ಈ ಹಿಂದೆ ದೇವಸ್ಥಾನದ ಎದುರು ಹೂಮಾಲೆಗಳು ಇರುತ್ತಿದ್ದವು. ಇಂದು ಗುಟ್ಕಾ ಮಾಲೆಗಳು ನೇತಾಡುತ್ತಿವೆ. ಸರ್ಕಾರಗಳೂ ಮಾತನಾಡದಷ್ಟು ಕಾರ್ಪೋರೇಟೀಕರಣ ಮಾಡಲಾಗಿದೆ’ ಎಂದರು.</p>.<p>ಸತ್ಯಸಾಯಿ ಸೇವಾ ಟ್ರಸ್ಟ್ ಆಸ್ಪತ್ರೆಯ ಶಾಲಿನಿ ಶ್ರೀನಿವಾಸ್ ಮಾತನಾಡಿ, ‘ಇಂದು ನಾವು ಪ್ರಕೃತಿಗೆ ವಿರುದ್ಧವಾಗಿ ಜೀವಿಸುತ್ತಿದ್ದೇವೆ. ಹೀಗಾಗಿ ನಮಗೆ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತಿದೆ’ ಎಂದರು.</p>.<p>ನಯನಕುಮಾರ್ಸ್ ಆಸ್ಪತ್ರೆಯ ಗಜಾನನ ಹೆಗಡೆ ಮಾತನಾಡಿದರು. ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ವರಕೋಡು ನಾಗೇಶ್, ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-39-2102542390</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>