<p>ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ‘ಚೈತ್ರ ಶುದ್ಧ ಹುಣ್ಣಿಮೆ’ ಅಂಗವಾಗಿ ಹನುಮ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.</p><p>ಆಶ್ರಮದ ಕಿರಿಯ ಪೀಠಾಧಿಪತಿ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.</p><p>ಹನುಮಂತನ ಮೂರ್ತಿಗೆ ‘ವಜ್ರಾಲಂಕಾರ’ ಮಾಡಿದ್ದು ಗಮನಸೆಳೆಯಿತು. ಜೊತೆಗೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.</p><p>ಈ ವೇಳೆ ಮಾತನಾಡಿದ ಸ್ವಾಮೀಜಿ, ‘ಬಜರಂಗಿ ಎಂದರೆ ವಜ್ರಾಂಗಿ ಎಂದರ್ಥ. ಸ್ವಾಮಿಯು ಭಕ್ತರಿಗೆ ವಜ್ರದಂತಹ ದೈಹಿಕ ಸಾಮರ್ಥ್ಯವನ್ನು ಮತ್ತು ಹೂವಿನಂತಹ ಮೃದುವಾದ ಮನಸ್ಸನ್ನು ಕರುಣಿಸಲಿ’ ಎಂದು ಪ್ರಾರ್ಥಿಸಿದರು.</p><p>ವೀಳ್ಯದೆಲೆ ಅರ್ಚನೆಯ ವಿಶೇಷತೆಯನ್ನು ವಿವರಿಸಿದ ಅವರು, ‘ವೀಳ್ಯದೆಲೆಯು ನಮ್ಮ ಹೃದಯದ ಸಂಕೇತ. ನಮ್ಮ ಮನಸ್ಸು ಮತ್ತು ಹೃದಯವನ್ನು ಸ್ವಾಮಿಗೆ ಅರ್ಪಿಸುವುದೇ ಈ ಅರ್ಚನೆಯ ಮೂಲ ಉದ್ದೇಶ’ ಎಂದು ಹೇಳಿದರು.</p><p>‘ಸೀತಾಮಾತೆಯು ಅಶೋಕವನದಲ್ಲಿದ್ದಾಗ ಹನುಮಂತನಿಗೆ ವೀಳ್ಯದೆಲೆಯಿಂದ ಆಶೀರ್ವದಿಸಿದ ನೆನಪಿಗಾಗಿ ಈ ಪದ್ಧತಿ ಬೆಳೆದುಬಂದಿದೆ. ಇದು ಭಕ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ’ ಎಂದು ತಿಳಿಸಿದರು.</p><p>ಈ ದೇವಸ್ಥಾನದಲ್ಲಿ, ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವರ್ಷದಲ್ಲಿ ಆರು ಬಾರಿ ಹನುಮ ಜಯಂತಿ ಆಚರಿಸಲಾಗುತ್ತದೆ. ನೂರಾರು ಮಂದಿ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಸೇವಾರ್ಥಿಗಳಿಗೆ 13 ಗಂಟುಗಳಿರುವ ವಿಶೇಷ ‘ಕಾರ್ಯಸಿದ್ದಿ ರಕ್ಷೆ’ಯನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಇಲ್ಲಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ‘ಚೈತ್ರ ಶುದ್ಧ ಹುಣ್ಣಿಮೆ’ ಅಂಗವಾಗಿ ಹನುಮ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.</p><p>ಆಶ್ರಮದ ಕಿರಿಯ ಪೀಠಾಧಿಪತಿ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು.</p><p>ಹನುಮಂತನ ಮೂರ್ತಿಗೆ ‘ವಜ್ರಾಲಂಕಾರ’ ಮಾಡಿದ್ದು ಗಮನಸೆಳೆಯಿತು. ಜೊತೆಗೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.</p><p>ಈ ವೇಳೆ ಮಾತನಾಡಿದ ಸ್ವಾಮೀಜಿ, ‘ಬಜರಂಗಿ ಎಂದರೆ ವಜ್ರಾಂಗಿ ಎಂದರ್ಥ. ಸ್ವಾಮಿಯು ಭಕ್ತರಿಗೆ ವಜ್ರದಂತಹ ದೈಹಿಕ ಸಾಮರ್ಥ್ಯವನ್ನು ಮತ್ತು ಹೂವಿನಂತಹ ಮೃದುವಾದ ಮನಸ್ಸನ್ನು ಕರುಣಿಸಲಿ’ ಎಂದು ಪ್ರಾರ್ಥಿಸಿದರು.</p><p>ವೀಳ್ಯದೆಲೆ ಅರ್ಚನೆಯ ವಿಶೇಷತೆಯನ್ನು ವಿವರಿಸಿದ ಅವರು, ‘ವೀಳ್ಯದೆಲೆಯು ನಮ್ಮ ಹೃದಯದ ಸಂಕೇತ. ನಮ್ಮ ಮನಸ್ಸು ಮತ್ತು ಹೃದಯವನ್ನು ಸ್ವಾಮಿಗೆ ಅರ್ಪಿಸುವುದೇ ಈ ಅರ್ಚನೆಯ ಮೂಲ ಉದ್ದೇಶ’ ಎಂದು ಹೇಳಿದರು.</p><p>‘ಸೀತಾಮಾತೆಯು ಅಶೋಕವನದಲ್ಲಿದ್ದಾಗ ಹನುಮಂತನಿಗೆ ವೀಳ್ಯದೆಲೆಯಿಂದ ಆಶೀರ್ವದಿಸಿದ ನೆನಪಿಗಾಗಿ ಈ ಪದ್ಧತಿ ಬೆಳೆದುಬಂದಿದೆ. ಇದು ಭಕ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ’ ಎಂದು ತಿಳಿಸಿದರು.</p><p>ಈ ದೇವಸ್ಥಾನದಲ್ಲಿ, ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವರ್ಷದಲ್ಲಿ ಆರು ಬಾರಿ ಹನುಮ ಜಯಂತಿ ಆಚರಿಸಲಾಗುತ್ತದೆ. ನೂರಾರು ಮಂದಿ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು. ಸೇವಾರ್ಥಿಗಳಿಗೆ 13 ಗಂಟುಗಳಿರುವ ವಿಶೇಷ ‘ಕಾರ್ಯಸಿದ್ದಿ ರಕ್ಷೆ’ಯನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>