<p><strong>ಮೈಸೂರು</strong>: ‘ಹೃದಯದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅರಿವಳಿಕೆ ತಜ್ಞರ ಪಾತ್ರ ದೊಡ್ಡದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.</p>.<p>ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಕರ್ನಾಟಕ ಚಾಪ್ಟರ್ ಆಫ್ ಐಯಾಕ್ಟ್ (ಐಎಸಿಟಿಎ) ಮತ್ತು ಗ್ಲೋಬಲ್ ಹಾರ್ಟ್ಕೇರ್ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಹೃದಯ ಅರಿವಳಿಕೆಯಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ’ (ಸಿಎಂಇ) ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಅರಿವಳಿಕೆ ತಜ್ಞರು ಎಲೆಮರೆ ಕಾಯಿಯಂತೆ 4 ಗೋಡೆಗಳ ಒಳಗೆ ಕೆಲಸ ಮಾಡಿದರೂ ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಅವರ ಪಾತ್ರ ತುಂಬಾ ದೊಡ್ಡದಾಗಿದೆ’ ಎಂದರು.</p>.<p>‘ಶಸ್ತ್ರಚಿಕಿತ್ಸೆ ಮಾಡುವಾಗ ಸರ್ಜನ್ಗಳು, ನರ್ಸ್ಗಳು, ಒಟಿ ಟೆಕ್ನೀಷಿಯನ್ಗಳ ಜೊತೆ ಅರಿವಳಿಕೆ ತಜ್ಞರು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ.ರೋಗಿಯು ಸಮಸ್ಯೆಯಿಂದ ಹೊರಬಂದು ಗುಣಮುಖರಾಗುವವರೆಗೆ ಗಂಟೆಗಟ್ಟಲೆ ನಿಂತುಕೊಂಡೇ ಕೆಲಸ ನಿರ್ವಹಿಸಬೇಕಾಗುತ್ತದೆ’ ಎಂದು ಹೇಳಿದರು.</p>.<p>8 ಮಂದಿ ನೇಮಕ: ‘ರೋಗಿಯು ಗುಣಮುಖವಾಗುವುದನ್ನು ಆಧುನಿಕ ಎ.ಐ. ಬಳಸಿಕೊಂಡು ನಿಖರವಾಗಿ ತಿಳಿದುಕೊಳ್ಳಬಹುದು’ ಎಂದರು.</p>.<p>‘ದೇಶದಲ್ಲಿ ಇತ್ತೀಚೆಗೆ ಅರಿವಳಿಕೆ ತಜ್ಞರ ಕೊರತೆ ಇದೆ. ನಮ್ಮ ಆಸ್ಪತ್ರೆಯಲ್ಲಿಈ ತಜ್ಞರಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ. 38 ಮಂದಿ ಡಿ.ಎಂ. ಅರಿವಳಿಕೆ ತಜ್ಞರಿದ್ದು, ಇನ್ನು 8 ಮಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.</p>.<p>‘ಇಂತಹ ಸಮ್ಮೇಳನಗಳು ಪ್ರತಿ ವರ್ಷ ನಡೆಯಬೇಕು. ಜಯದೇವ ಆಸ್ಪತ್ರೆ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು’ ಎಂದರು.</p>.<p>ಡಾ.ರಂಜಿತ್ ಕಾರ್ತಿಕೇಯನ್, ಡಾ.ಮುರಳೀಧರ್, ಡಾ.ಮಂಜುನಾಥ್, ಡಾ.ಪರಿಮಳಾ, ಡಾ.ಪ್ರಭಾಕರ್, ಡಾ.ಮಂಜುಳಾ, ಸಂಘಟನಾ ಕಾರ್ಯದರ್ಶಿ ಡಾ.ಕೆ.ಎಸ್. ಭಾರತಿ, ಡಾ.ನಂಜಪ್ಪ, ಡಾ.ಹರ್ಷಬಸಪ್ಪ, ಡಾ.ರಜಿತ್, ಡಾ.ಜಯಶೀಲನ್, ಪಿಆರ್ಒಗಳಾದ ವಾಣಿ ಮೋಹನ್, ಚಂಪಕಮಾಲ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-39-1891685289</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಹೃದಯದ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅರಿವಳಿಕೆ ತಜ್ಞರ ಪಾತ್ರ ದೊಡ್ಡದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.</p>.<p>ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಕರ್ನಾಟಕ ಚಾಪ್ಟರ್ ಆಫ್ ಐಯಾಕ್ಟ್ (ಐಎಸಿಟಿಎ) ಮತ್ತು ಗ್ಲೋಬಲ್ ಹಾರ್ಟ್ಕೇರ್ ಫೌಂಡೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಹೃದಯ ಅರಿವಳಿಕೆಯಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ’ (ಸಿಎಂಇ) ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಅರಿವಳಿಕೆ ತಜ್ಞರು ಎಲೆಮರೆ ಕಾಯಿಯಂತೆ 4 ಗೋಡೆಗಳ ಒಳಗೆ ಕೆಲಸ ಮಾಡಿದರೂ ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಅವರ ಪಾತ್ರ ತುಂಬಾ ದೊಡ್ಡದಾಗಿದೆ’ ಎಂದರು.</p>.<p>‘ಶಸ್ತ್ರಚಿಕಿತ್ಸೆ ಮಾಡುವಾಗ ಸರ್ಜನ್ಗಳು, ನರ್ಸ್ಗಳು, ಒಟಿ ಟೆಕ್ನೀಷಿಯನ್ಗಳ ಜೊತೆ ಅರಿವಳಿಕೆ ತಜ್ಞರು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ.ರೋಗಿಯು ಸಮಸ್ಯೆಯಿಂದ ಹೊರಬಂದು ಗುಣಮುಖರಾಗುವವರೆಗೆ ಗಂಟೆಗಟ್ಟಲೆ ನಿಂತುಕೊಂಡೇ ಕೆಲಸ ನಿರ್ವಹಿಸಬೇಕಾಗುತ್ತದೆ’ ಎಂದು ಹೇಳಿದರು.</p>.<p>8 ಮಂದಿ ನೇಮಕ: ‘ರೋಗಿಯು ಗುಣಮುಖವಾಗುವುದನ್ನು ಆಧುನಿಕ ಎ.ಐ. ಬಳಸಿಕೊಂಡು ನಿಖರವಾಗಿ ತಿಳಿದುಕೊಳ್ಳಬಹುದು’ ಎಂದರು.</p>.<p>‘ದೇಶದಲ್ಲಿ ಇತ್ತೀಚೆಗೆ ಅರಿವಳಿಕೆ ತಜ್ಞರ ಕೊರತೆ ಇದೆ. ನಮ್ಮ ಆಸ್ಪತ್ರೆಯಲ್ಲಿಈ ತಜ್ಞರಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗಿದೆ. 38 ಮಂದಿ ಡಿ.ಎಂ. ಅರಿವಳಿಕೆ ತಜ್ಞರಿದ್ದು, ಇನ್ನು 8 ಮಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.</p>.<p>‘ಇಂತಹ ಸಮ್ಮೇಳನಗಳು ಪ್ರತಿ ವರ್ಷ ನಡೆಯಬೇಕು. ಜಯದೇವ ಆಸ್ಪತ್ರೆ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು’ ಎಂದರು.</p>.<p>ಡಾ.ರಂಜಿತ್ ಕಾರ್ತಿಕೇಯನ್, ಡಾ.ಮುರಳೀಧರ್, ಡಾ.ಮಂಜುನಾಥ್, ಡಾ.ಪರಿಮಳಾ, ಡಾ.ಪ್ರಭಾಕರ್, ಡಾ.ಮಂಜುಳಾ, ಸಂಘಟನಾ ಕಾರ್ಯದರ್ಶಿ ಡಾ.ಕೆ.ಎಸ್. ಭಾರತಿ, ಡಾ.ನಂಜಪ್ಪ, ಡಾ.ಹರ್ಷಬಸಪ್ಪ, ಡಾ.ರಜಿತ್, ಡಾ.ಜಯಶೀಲನ್, ಪಿಆರ್ಒಗಳಾದ ವಾಣಿ ಮೋಹನ್, ಚಂಪಕಮಾಲ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-39-1891685289</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>