<p>ಮೈಸೂರು: ‘ಸನಾತನ ಹಿಂದೂ ಧರ್ಮದ ಪ್ರಚಾರ ನಿರಂತರವಾಗಿ ನಡೆಯಬೇಕು. ಅದನ್ನು ಶ್ರೀಕೃಷ್ಣ ಮಿತ್ರ ಮಂಡಳಿಯು ಕಳೆದ 50 ವರ್ಷದಿಂದ ವೈಭವದಿಂದ ನಡೆಸಿಕೊಂಡು ಬಂದಿದೆ’ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಶ್ಲಾಘಿಸಿದರು.</p>.<p>ಇಲ್ಲಿನ ಸರಸ್ವತಿಪುರಂನ ಕೃಷ್ಣಧಾಮ ದಲ್ಲಿ ಸೋಮವಾರ ಆರಂಭವಾದ ‘ಶ್ರೀಕೃಷ್ಣ ಮಿತ್ರ ಮಂಡಳಿ’ಯ ಸುವರ್ಣ ಸಂಭ್ರಮದಲ್ಲಿ ಪತ್ರಕರ್ತ ರವೀಂದ್ರ ಜೋಶಿ ಅವರಿಗೆ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.</p>.<p>‘ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸ್ಫೂರ್ತಿಯಲ್ಲಿ ಕೆಲಸ ಮಾಡಿರುವ ಮಂಡಳಿಯು ಧರ್ಮ ಸಂರಕ್ಷಣೆಗೆ ಮೈಯೊಡ್ಡಿ ನಿಂತಿದೆ. ಮುಂದಿನ 50 ವರ್ಷವೂ ದೇಶ- ಧರ್ಮ ಭಕ್ತಿಯ ಕೆಲಸ ಮಾಡಲಿ’ ಎಂದು ಆಶಿಸಿದರು.</p>.<p>‘ದೇಶಭಕ್ತಿ ಮರೆತಿದ್ದೇವೆ. ಆರ್ಥಿಕ ಸುಭದ್ರತೆಗಾಗಿ ಅನಗತ್ಯ ಖರ್ಚು ಮಾಡುವುದನ್ನು ಕಡಿಮೆ ಮಾಡಬೇಕು. ಪ್ರಯಾಣ ಹಾಗೂ ಚಿನ್ನ ಖರೀದಿಯನ್ನು ಮುಂದೂಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪಾಲಿಸಬೇಕು’ ಎಂದರು.</p>.<p>ಆದರ್ಶ ಪಾಲಿಸಿ: ‘ಸುವರ್ಣಮಯ ಶ್ರೀಲಂಕಾವನ್ನು ಗೆದ್ದ ರಾಮ ಅಲ್ಲಿಯೇ ಇರಬಹುದಿತ್ತು. ಆದರೆ, ಹೆತ್ತ ತಾಯಿ, ಹುಟ್ಟಿದ ನೆಲ ಸ್ವರ್ಗಕ್ಕಿಂತಲು ಮಿಗಿಲೆಂದು ಲಕ್ಷ್ಮಣನಿಗೆ ಹೇಳಿ ಮರಳಿದ. ರಾಮನ ಆದರ್ಶವನ್ನು ನಾವು ಪಾಲಿಸಬೇಕು’ ಎಂದು ಸ್ವಾಮೀಜಿ ಹೇಳಿದರು.</p>.<p>ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ‘ಕೃಷ್ಣನಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತುವ ಆಕರ್ಷಣ ಶಕ್ತಿಯಿತ್ತು. ಜರಾಸಂಧ, ನರಕಾಸುರರನ್ನು ಸಂಹರಿಸಿದರೂ ಅವರ ವಂಶದವರಿಗೆ ರಾಜ್ಯ ಮರಳಿಸಿದ. ಅವನಿಗೆ ಲೋಭದ ದೃಷ್ಟಿ ಇರಲಿಲ್ಲ; ಧರ್ಮದೃಷ್ಟಿಯಿತ್ತು. ಕೃಷ್ಣನನ್ನು ನೆನೆಯುತ್ತಲೇ ದೇಶ ರಕ್ಷಣೆ ಮಾಡಬೇಕು. ಸಹಕಾರ ತತ್ವದಲ್ಲಿ ಅಭಿವೃದ್ಧಿ ಸಾಧಿಸಬೇಕು’ ಎಂದರು.</p>.<p>ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಸನಾತನ ಧರ್ಮದ ನಂಬಿಕೆಗಳ ಮೇಲೆ ಕೆಲ ದುಷ್ಟಶಕ್ತಿಗಳು ಮೊದಲಿನಿಂದಲೂ ಗದಾಪ್ರಹಾರ ನಡೆಸಿವೆ. ತಿರುಪತಿ, ಶಬರಿಮಲೆ, ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರ ಮಾಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಜನಿವಾರ ತೆಗೆಸಲಾಗಿದೆ. ಧರ್ಮದ ಉಳಿವಿಗೆ ಒಂದಾಗಬೇಕು’ ಎಂದರು.</p>.<p>ಎಂ.ಎಸ್.ಕೀರ್ತನಾ ಪ್ರಾರ್ಥನಾ ಗೀತೆ ಹಾಡಿದರು. ಮಂಡಳಿಯ ಅಧ್ಯಕ್ಷ ಎನ್.ಗೋಪಾಲಕೃಷ್ಣ, ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್.ಶೇಖರ್, ಸದಸ್ಯರಾದ ಪಿ.ಜಯರಾಮ ಭಟ್ , ಕೆ.ವಿ.ಶ್ರೀಧರ, ಟಿ.ಜಿ.ಗುರುಪ್ರಸಾದ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-39-1448475312</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಸನಾತನ ಹಿಂದೂ ಧರ್ಮದ ಪ್ರಚಾರ ನಿರಂತರವಾಗಿ ನಡೆಯಬೇಕು. ಅದನ್ನು ಶ್ರೀಕೃಷ್ಣ ಮಿತ್ರ ಮಂಡಳಿಯು ಕಳೆದ 50 ವರ್ಷದಿಂದ ವೈಭವದಿಂದ ನಡೆಸಿಕೊಂಡು ಬಂದಿದೆ’ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಶ್ಲಾಘಿಸಿದರು.</p>.<p>ಇಲ್ಲಿನ ಸರಸ್ವತಿಪುರಂನ ಕೃಷ್ಣಧಾಮ ದಲ್ಲಿ ಸೋಮವಾರ ಆರಂಭವಾದ ‘ಶ್ರೀಕೃಷ್ಣ ಮಿತ್ರ ಮಂಡಳಿ’ಯ ಸುವರ್ಣ ಸಂಭ್ರಮದಲ್ಲಿ ಪತ್ರಕರ್ತ ರವೀಂದ್ರ ಜೋಶಿ ಅವರಿಗೆ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.</p>.<p>‘ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸ್ಫೂರ್ತಿಯಲ್ಲಿ ಕೆಲಸ ಮಾಡಿರುವ ಮಂಡಳಿಯು ಧರ್ಮ ಸಂರಕ್ಷಣೆಗೆ ಮೈಯೊಡ್ಡಿ ನಿಂತಿದೆ. ಮುಂದಿನ 50 ವರ್ಷವೂ ದೇಶ- ಧರ್ಮ ಭಕ್ತಿಯ ಕೆಲಸ ಮಾಡಲಿ’ ಎಂದು ಆಶಿಸಿದರು.</p>.<p>‘ದೇಶಭಕ್ತಿ ಮರೆತಿದ್ದೇವೆ. ಆರ್ಥಿಕ ಸುಭದ್ರತೆಗಾಗಿ ಅನಗತ್ಯ ಖರ್ಚು ಮಾಡುವುದನ್ನು ಕಡಿಮೆ ಮಾಡಬೇಕು. ಪ್ರಯಾಣ ಹಾಗೂ ಚಿನ್ನ ಖರೀದಿಯನ್ನು ಮುಂದೂಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪಾಲಿಸಬೇಕು’ ಎಂದರು.</p>.<p>ಆದರ್ಶ ಪಾಲಿಸಿ: ‘ಸುವರ್ಣಮಯ ಶ್ರೀಲಂಕಾವನ್ನು ಗೆದ್ದ ರಾಮ ಅಲ್ಲಿಯೇ ಇರಬಹುದಿತ್ತು. ಆದರೆ, ಹೆತ್ತ ತಾಯಿ, ಹುಟ್ಟಿದ ನೆಲ ಸ್ವರ್ಗಕ್ಕಿಂತಲು ಮಿಗಿಲೆಂದು ಲಕ್ಷ್ಮಣನಿಗೆ ಹೇಳಿ ಮರಳಿದ. ರಾಮನ ಆದರ್ಶವನ್ನು ನಾವು ಪಾಲಿಸಬೇಕು’ ಎಂದು ಸ್ವಾಮೀಜಿ ಹೇಳಿದರು.</p>.<p>ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ‘ಕೃಷ್ಣನಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತುವ ಆಕರ್ಷಣ ಶಕ್ತಿಯಿತ್ತು. ಜರಾಸಂಧ, ನರಕಾಸುರರನ್ನು ಸಂಹರಿಸಿದರೂ ಅವರ ವಂಶದವರಿಗೆ ರಾಜ್ಯ ಮರಳಿಸಿದ. ಅವನಿಗೆ ಲೋಭದ ದೃಷ್ಟಿ ಇರಲಿಲ್ಲ; ಧರ್ಮದೃಷ್ಟಿಯಿತ್ತು. ಕೃಷ್ಣನನ್ನು ನೆನೆಯುತ್ತಲೇ ದೇಶ ರಕ್ಷಣೆ ಮಾಡಬೇಕು. ಸಹಕಾರ ತತ್ವದಲ್ಲಿ ಅಭಿವೃದ್ಧಿ ಸಾಧಿಸಬೇಕು’ ಎಂದರು.</p>.<p>ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಸನಾತನ ಧರ್ಮದ ನಂಬಿಕೆಗಳ ಮೇಲೆ ಕೆಲ ದುಷ್ಟಶಕ್ತಿಗಳು ಮೊದಲಿನಿಂದಲೂ ಗದಾಪ್ರಹಾರ ನಡೆಸಿವೆ. ತಿರುಪತಿ, ಶಬರಿಮಲೆ, ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರ ಮಾಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಜನಿವಾರ ತೆಗೆಸಲಾಗಿದೆ. ಧರ್ಮದ ಉಳಿವಿಗೆ ಒಂದಾಗಬೇಕು’ ಎಂದರು.</p>.<p>ಎಂ.ಎಸ್.ಕೀರ್ತನಾ ಪ್ರಾರ್ಥನಾ ಗೀತೆ ಹಾಡಿದರು. ಮಂಡಳಿಯ ಅಧ್ಯಕ್ಷ ಎನ್.ಗೋಪಾಲಕೃಷ್ಣ, ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ.ಎಸ್.ಶೇಖರ್, ಸದಸ್ಯರಾದ ಪಿ.ಜಯರಾಮ ಭಟ್ , ಕೆ.ವಿ.ಶ್ರೀಧರ, ಟಿ.ಜಿ.ಗುರುಪ್ರಸಾದ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-39-1448475312</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>