ಸಿಎಂ ತವರಲ್ಲೇ ಹೀಗಾಗಿದೆ: ಯದುವೀರ್
‘ಚೆಲುವಾಂಬ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
‘ಮುಖ್ಯಮಂತ್ರಿಯವರ ತವರಿನ ಅಸ್ಪತ್ರೆಯಲ್ಲೇ ದುಃಸ್ಥಿತಿ ಇರುವುದನ್ನು ಒಪ್ಪಲಾಗದು. ಸರ್ಕಾರ ಇತ್ತ ನಿರ್ಲಕ್ಷ್ಯ ವಹಿಸಬಾರದು. ಶಿಶು ಮರಣ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.