<p>ಹುಣಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಹಾಡಿ ಜನರು 3 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಜೀವನ ನಡೆಸುತ್ತಿದ್ದಾರೆ.</p>.<p>ಇಡೀ ರಾಜ್ಯದಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಇದ್ದರೂ ತಾಲ್ಲೂಕಿನ ಮಾದಯ್ಯನಕಟ್ಟೆ ಹಾಡಿಯ ಗಿರಿಜನರಿಗೆ ಮಾತ್ರ ಕತ್ತಲೆಯೇ ಬದುಕಿನ ಭಾಗವಾಗಿದೆ. 40 ಕುಟುಂಬಗಳ 300ಕ್ಕೂ ಹೆಚ್ಚು ಜನರು ವಿದ್ಯುತ್ ಇಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ.</p>.<p>ಮೂರು ವರ್ಷಗಳಿಂದ ವಿದ್ಯುತ್ ಇಲ್ಲದೆ ಎಣ್ಣೆ ದೀಪಕ್ಕೆ ಮೊರೆ ಹೋಗಿದ್ದು, ಮಕ್ಕಳು ಕತ್ತಲಾಗುತ್ತಿದ್ದಂತೆ ಪಠ್ಯ ಚಟುವಟಿಕೆಗೆ ಪೂರ್ಣ ವಿರಾಮ ಹೇರಬೇಕಿದೆ.</p>.<p>ಮೂರು ವರ್ಷಗಳ ಹಿಂದೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಹಾಡಿಯ ಎಲ್ಲ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆ ಬಳಿಕ ವಿದ್ಯುತ್ ಸಂಪರ್ಕ ನೀಡುವ ಪ್ರಯತ್ನವೇ ನಡೆದಿಲ್ಲ. ಸಾಮಾಜಿಕ ಧ್ವನಿ ಇಲ್ಲದ ಇವರತ್ತ ಗ್ಯಾರಂಟಿ ಯೋಜನೆಯೂ ಸುಳಿದಿಲ್ಲ.</p>.<p>‘ಹಾಡಿಯ ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯಲ್ಲಿ ಒಂದು ಬಲ್ಬ್ ಹಾಕಲಾಗಿತ್ತು. ಅದಕ್ಕೆ ₹300ರಿಂದ ₹400 ಬಿಲ್ ನೀಡಿದ್ದು ಇಷ್ಟೊಂದು ಹಣ ತರುವುದಾದರೂ ಎಲ್ಲಿಂದ ? ಆಗ, ಮನೆಗಳಿಗೆ ವಿದ್ಯುತ್ ಕಡಿತಗೊಳಿಸುವ ಜೊತೆಗೆ ಕುಡಿಯುವ ನೀರಿಗೂ ವಿದ್ಯುತ್ ಕಡಿತ ಮಾಡಲಾಯಿತು’ ಎನ್ನುತ್ತಾರೆ ಹಾಡಿಯ ನಿವಾಸಿ ಮಣಿ.</p>.<p>ಅರ್ಜಿ ಸಲ್ಲಿಸಿದರೂ ಪ್ರಯೋಜನವಿಲ್ಲ: ಹಾಡಿಯ 20 ಮಕ್ಕಳು ಶಾಲೆಗೆ ಹೋಗುತ್ತಿದ್ದು, ಈ ಮಕ್ಕಳ ಓದು ಬರಹಕ್ಕೆ ಮೂರು ವರ್ಷಗಳಿಂದ ಸೂರ್ಯನ ಬೆಳಕು ಮಾತ್ರ ಆಧಾರವಾಗಿದೆ. ಗಿರಿಜನ ಕಲ್ಯಾಣ ಇಲಾಖೆಗೆ 3 ತಿಂಗಳ ಹಿಂದೆಯೇ ವಿದ್ಯುತ್ ಸಮಸ್ಯೆ ಕುರಿತ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹಾಡಿಯ ಮುಖಂಡ ರಾಜು</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-38-1049356233</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಹಾಡಿ ಜನರು 3 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೇ ಜೀವನ ನಡೆಸುತ್ತಿದ್ದಾರೆ.</p>.<p>ಇಡೀ ರಾಜ್ಯದಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಇದ್ದರೂ ತಾಲ್ಲೂಕಿನ ಮಾದಯ್ಯನಕಟ್ಟೆ ಹಾಡಿಯ ಗಿರಿಜನರಿಗೆ ಮಾತ್ರ ಕತ್ತಲೆಯೇ ಬದುಕಿನ ಭಾಗವಾಗಿದೆ. 40 ಕುಟುಂಬಗಳ 300ಕ್ಕೂ ಹೆಚ್ಚು ಜನರು ವಿದ್ಯುತ್ ಇಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ.</p>.<p>ಮೂರು ವರ್ಷಗಳಿಂದ ವಿದ್ಯುತ್ ಇಲ್ಲದೆ ಎಣ್ಣೆ ದೀಪಕ್ಕೆ ಮೊರೆ ಹೋಗಿದ್ದು, ಮಕ್ಕಳು ಕತ್ತಲಾಗುತ್ತಿದ್ದಂತೆ ಪಠ್ಯ ಚಟುವಟಿಕೆಗೆ ಪೂರ್ಣ ವಿರಾಮ ಹೇರಬೇಕಿದೆ.</p>.<p>ಮೂರು ವರ್ಷಗಳ ಹಿಂದೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಹಾಡಿಯ ಎಲ್ಲ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆ ಬಳಿಕ ವಿದ್ಯುತ್ ಸಂಪರ್ಕ ನೀಡುವ ಪ್ರಯತ್ನವೇ ನಡೆದಿಲ್ಲ. ಸಾಮಾಜಿಕ ಧ್ವನಿ ಇಲ್ಲದ ಇವರತ್ತ ಗ್ಯಾರಂಟಿ ಯೋಜನೆಯೂ ಸುಳಿದಿಲ್ಲ.</p>.<p>‘ಹಾಡಿಯ ಮನೆಗಳಿಗೆ ಭಾಗ್ಯಜ್ಯೋತಿ ಯೋಜನೆಯಲ್ಲಿ ಒಂದು ಬಲ್ಬ್ ಹಾಕಲಾಗಿತ್ತು. ಅದಕ್ಕೆ ₹300ರಿಂದ ₹400 ಬಿಲ್ ನೀಡಿದ್ದು ಇಷ್ಟೊಂದು ಹಣ ತರುವುದಾದರೂ ಎಲ್ಲಿಂದ ? ಆಗ, ಮನೆಗಳಿಗೆ ವಿದ್ಯುತ್ ಕಡಿತಗೊಳಿಸುವ ಜೊತೆಗೆ ಕುಡಿಯುವ ನೀರಿಗೂ ವಿದ್ಯುತ್ ಕಡಿತ ಮಾಡಲಾಯಿತು’ ಎನ್ನುತ್ತಾರೆ ಹಾಡಿಯ ನಿವಾಸಿ ಮಣಿ.</p>.<p>ಅರ್ಜಿ ಸಲ್ಲಿಸಿದರೂ ಪ್ರಯೋಜನವಿಲ್ಲ: ಹಾಡಿಯ 20 ಮಕ್ಕಳು ಶಾಲೆಗೆ ಹೋಗುತ್ತಿದ್ದು, ಈ ಮಕ್ಕಳ ಓದು ಬರಹಕ್ಕೆ ಮೂರು ವರ್ಷಗಳಿಂದ ಸೂರ್ಯನ ಬೆಳಕು ಮಾತ್ರ ಆಧಾರವಾಗಿದೆ. ಗಿರಿಜನ ಕಲ್ಯಾಣ ಇಲಾಖೆಗೆ 3 ತಿಂಗಳ ಹಿಂದೆಯೇ ವಿದ್ಯುತ್ ಸಮಸ್ಯೆ ಕುರಿತ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹಾಡಿಯ ಮುಖಂಡ ರಾಜು</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-38-1049356233</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>