<p>ಮೈಸೂರು: ಮೈಸೂರು ಸಂಸ್ಥಾನದ ದಿವಾನರುಗಳಲ್ಲಿ ಒಬ್ಬರಾದ ಸರ್.ಎಂ.ಕಾಂತರಾಜ ಅರಸ್ ಆಡಳಿತದ ಕುರಿತ ಸ್ಮರಣೆಯ ಅಲೆಗಳು ನಗರದ ಕಾಸ್ಮೊಪಾಲಿಟನ್ ಕ್ಲಬ್ನಲ್ಲಿ ಶನಿವಾರ ಏಳುತ್ತಿದ್ದಾಗ ನೆರೆದವರು ತನ್ಮಯರಾಗಿ ಆ ಕಾಲಕ್ಕೆ ತೆರಳಿದ್ದರು.</p>.<p>50ರ ದಶಕದಲ್ಲಿ ಸರ್ದಾರ್ ಕೆ.ಬಸವರಾಜ ಅರಸ್ ಅವರು ಕಾಂತರಾಜ ಅರಸು ಅವರ ಬಗ್ಗೆ ಬರೆದ ‘ಸ್ಪೀಚಸ್ ಆಫ್ ಸರ್ದಾರ್ ಎಂ.ಕಾಂತರಾಜ ಅರಸ್’ ಕೃತಿಯ ಅನುವಾದ ‘ಮರೆತೇಹೋದ ಮಹಾನು ಭಾವ’ ಲೋಕಾರ್ಪಣೆ ಸಮಾರಂಭವು ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.</p>.<p>ಅನುವಾದಕರಾದ ಪ್ರೊ.ವಿಕ್ರಂ ಚದುರಂಗ ಅವರಿಗೆ ಬಸವರಾಜ ಅರಸ್ ದೊಡ್ಡಪ್ಪ. ಬಸವರಾಜ ಅರಸ್ ಅವರು ಕಾಂತರಾಜ ಅರಸರ ಅಳಿಯ. ಕಾಂತರಾಜ ಅರಸರು ನಾಲ್ವಡಿಯವರ ತಾಯಿ ಕೆಂಪನಂಜಮ್ಮಣಿಯವರ ಸಹೋದರ. ಆದರೆ, ಈ ಕೌಟುಂಬಿಕ ಸಂಬಂಧಗಳಾಚೆಗೆ ಕಾರ್ಯಕ್ರಮವು, ಮೈಸೂರು ಸಂಸ್ಥಾನವು ಕಾಂತರಾಜ ಅರಸು ಅವರ ಅವಧಿಯಲ್ಲಿ ಕಂಡ ಪ್ರಜಾಸತ್ತಾತ್ಮ ಬೆಳವಣಿಗೆಯ ಕುರಿತ ವಿಶ್ಲೇಷಣೆಗೆ ದಾರಿ ಮಾಡಿದ್ದು ವಿಶೇಷ. ಕಾಂತರಾಜ ಅರಸ್ ನಿರ್ಮಿಸಿದ ಕ್ಲಬ್ನಲ್ಲೇ ಕಾರ್ಯಕ್ರಮ ನಡೆದಿದ್ದು ಇನ್ನೊಂದು ವಿಶೇಷ.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಪ್ರೊ.ಮನು ಚಕ್ರವರ್ತಿ, ‘70ರ ದಶಕದಲ್ಲಿ ಇಂಗ್ಲೆಂಡ್ನಲ್ಲಿ ಮಕ್ಕಳಿಗೆ ಹಾಲು ಪೂರೈಸುವ ಯೋಜನೆಯನ್ನು ರದ್ದುಪಡಿಸಿದ ಕಾರಣಕ್ಕೆ ಇಂಗ್ಲೆಂಡ್ನ ಶಿಕ್ಷಣ ಕಾರ್ಯದರ್ಶಿ ಮಾರ್ಗರೆಟ್ ಥ್ಯಾಚರ್ ಅವರನ್ನು ಮಿಲ್ಕ್ ಸ್ನ್ಯಾಚರ್- ಹಾಲು ದೋಚಿದಾಕೆ ಎಂದು ಜನ ಜರಿದಿದ್ದರು. ಆದರೆ ಮೈಸೂರು ಸಂಸ್ಥಾನದಲ್ಲಿ 20ರ ದಶಕದಲ್ಲೇ ಸರ್.ಎಂ.ಕಾಂತರಾಜ ಅರಸ್ ಅವರು ಮಕ್ಕಳಿಗೆ–ತಾಯಂದಿರಿಗೆ ಉಚಿತವಾಗಿ ಹಾಲು ಪೂರೈಸುವ ವ್ಯವಸ್ಥೆ ಮಾಡಿದ್ದು ಘನವಾದ ಕಾರ್ಯ’ ಎಂದು ಬಣ್ಣಿಸಿದರು.</p>.<p>‘ಕೃತಿಯನ್ನು ವ್ಯಕ್ತಿಯ ಜೀವನ ಚರಿತ್ರೆ ಎಂಬುದಕ್ಕಿಂತ ಸಂಸ್ಥಾನದ ಜೀವನಚರಿತ್ರೆ ಎಂಬ ನೆಲೆಯಲ್ಲಿ ನೋಡಿದರೆ, ರಾಜಪ್ರಭುತ್ವ ಹಾಗೂ ಸಾರ್ವಜನಿಕ ಆಡಳಿತವು ಜನಸಮುದಾಯದೊ ಳಗೆ ಪ್ರವೇಶಿಸಿದ ಬಗೆ ಅರ್ಥವಾಗುತ್ತದೆ’ ಎಂದರು.</p>.<p>ಕೃತಿಯ ಕುರಿತು ಪ್ರೊ.ಬಿ.ವಿ.ಸುಧಾಮಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ವಿಕ್ರಂ ಚದುರಂಗ ಅವರ ಇನ್ನೊಂದು ಕೃತಿ ‘70ರ ಆಚೆ’ ಕುರಿತು ಸಂತೋಷ್ ಚೊಕ್ಕಾಡಿ ಮಾತನಾಡಿದರು. ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ನಲ್ನುಡಿಗಳನ್ನಾಡಿದರು. ಕೃತಿಗಳನ್ನು ಪ್ರಕಟಿಸಿರುವ ಅಭಿರುಚಿ ಪ್ರಕಾಶನದ ಗಣೇಶ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-39-1438704288</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಮೈಸೂರು ಸಂಸ್ಥಾನದ ದಿವಾನರುಗಳಲ್ಲಿ ಒಬ್ಬರಾದ ಸರ್.ಎಂ.ಕಾಂತರಾಜ ಅರಸ್ ಆಡಳಿತದ ಕುರಿತ ಸ್ಮರಣೆಯ ಅಲೆಗಳು ನಗರದ ಕಾಸ್ಮೊಪಾಲಿಟನ್ ಕ್ಲಬ್ನಲ್ಲಿ ಶನಿವಾರ ಏಳುತ್ತಿದ್ದಾಗ ನೆರೆದವರು ತನ್ಮಯರಾಗಿ ಆ ಕಾಲಕ್ಕೆ ತೆರಳಿದ್ದರು.</p>.<p>50ರ ದಶಕದಲ್ಲಿ ಸರ್ದಾರ್ ಕೆ.ಬಸವರಾಜ ಅರಸ್ ಅವರು ಕಾಂತರಾಜ ಅರಸು ಅವರ ಬಗ್ಗೆ ಬರೆದ ‘ಸ್ಪೀಚಸ್ ಆಫ್ ಸರ್ದಾರ್ ಎಂ.ಕಾಂತರಾಜ ಅರಸ್’ ಕೃತಿಯ ಅನುವಾದ ‘ಮರೆತೇಹೋದ ಮಹಾನು ಭಾವ’ ಲೋಕಾರ್ಪಣೆ ಸಮಾರಂಭವು ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.</p>.<p>ಅನುವಾದಕರಾದ ಪ್ರೊ.ವಿಕ್ರಂ ಚದುರಂಗ ಅವರಿಗೆ ಬಸವರಾಜ ಅರಸ್ ದೊಡ್ಡಪ್ಪ. ಬಸವರಾಜ ಅರಸ್ ಅವರು ಕಾಂತರಾಜ ಅರಸರ ಅಳಿಯ. ಕಾಂತರಾಜ ಅರಸರು ನಾಲ್ವಡಿಯವರ ತಾಯಿ ಕೆಂಪನಂಜಮ್ಮಣಿಯವರ ಸಹೋದರ. ಆದರೆ, ಈ ಕೌಟುಂಬಿಕ ಸಂಬಂಧಗಳಾಚೆಗೆ ಕಾರ್ಯಕ್ರಮವು, ಮೈಸೂರು ಸಂಸ್ಥಾನವು ಕಾಂತರಾಜ ಅರಸು ಅವರ ಅವಧಿಯಲ್ಲಿ ಕಂಡ ಪ್ರಜಾಸತ್ತಾತ್ಮ ಬೆಳವಣಿಗೆಯ ಕುರಿತ ವಿಶ್ಲೇಷಣೆಗೆ ದಾರಿ ಮಾಡಿದ್ದು ವಿಶೇಷ. ಕಾಂತರಾಜ ಅರಸ್ ನಿರ್ಮಿಸಿದ ಕ್ಲಬ್ನಲ್ಲೇ ಕಾರ್ಯಕ್ರಮ ನಡೆದಿದ್ದು ಇನ್ನೊಂದು ವಿಶೇಷ.</p>.<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಪ್ರೊ.ಮನು ಚಕ್ರವರ್ತಿ, ‘70ರ ದಶಕದಲ್ಲಿ ಇಂಗ್ಲೆಂಡ್ನಲ್ಲಿ ಮಕ್ಕಳಿಗೆ ಹಾಲು ಪೂರೈಸುವ ಯೋಜನೆಯನ್ನು ರದ್ದುಪಡಿಸಿದ ಕಾರಣಕ್ಕೆ ಇಂಗ್ಲೆಂಡ್ನ ಶಿಕ್ಷಣ ಕಾರ್ಯದರ್ಶಿ ಮಾರ್ಗರೆಟ್ ಥ್ಯಾಚರ್ ಅವರನ್ನು ಮಿಲ್ಕ್ ಸ್ನ್ಯಾಚರ್- ಹಾಲು ದೋಚಿದಾಕೆ ಎಂದು ಜನ ಜರಿದಿದ್ದರು. ಆದರೆ ಮೈಸೂರು ಸಂಸ್ಥಾನದಲ್ಲಿ 20ರ ದಶಕದಲ್ಲೇ ಸರ್.ಎಂ.ಕಾಂತರಾಜ ಅರಸ್ ಅವರು ಮಕ್ಕಳಿಗೆ–ತಾಯಂದಿರಿಗೆ ಉಚಿತವಾಗಿ ಹಾಲು ಪೂರೈಸುವ ವ್ಯವಸ್ಥೆ ಮಾಡಿದ್ದು ಘನವಾದ ಕಾರ್ಯ’ ಎಂದು ಬಣ್ಣಿಸಿದರು.</p>.<p>‘ಕೃತಿಯನ್ನು ವ್ಯಕ್ತಿಯ ಜೀವನ ಚರಿತ್ರೆ ಎಂಬುದಕ್ಕಿಂತ ಸಂಸ್ಥಾನದ ಜೀವನಚರಿತ್ರೆ ಎಂಬ ನೆಲೆಯಲ್ಲಿ ನೋಡಿದರೆ, ರಾಜಪ್ರಭುತ್ವ ಹಾಗೂ ಸಾರ್ವಜನಿಕ ಆಡಳಿತವು ಜನಸಮುದಾಯದೊ ಳಗೆ ಪ್ರವೇಶಿಸಿದ ಬಗೆ ಅರ್ಥವಾಗುತ್ತದೆ’ ಎಂದರು.</p>.<p>ಕೃತಿಯ ಕುರಿತು ಪ್ರೊ.ಬಿ.ವಿ.ಸುಧಾಮಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ವಿಕ್ರಂ ಚದುರಂಗ ಅವರ ಇನ್ನೊಂದು ಕೃತಿ ‘70ರ ಆಚೆ’ ಕುರಿತು ಸಂತೋಷ್ ಚೊಕ್ಕಾಡಿ ಮಾತನಾಡಿದರು. ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ನಲ್ನುಡಿಗಳನ್ನಾಡಿದರು. ಕೃತಿಗಳನ್ನು ಪ್ರಕಟಿಸಿರುವ ಅಭಿರುಚಿ ಪ್ರಕಾಶನದ ಗಣೇಶ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-39-1438704288</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>