<p><strong>ಮೈಸೂರು</strong>: ‘ಕೆ.ವಿ.ಮಲ್ಲೇಶ್ರಿಗೆ ಇದು ಕೇವಲ ಸನ್ಮಾನವಲ್ಲ, ಅವರಿಗೆ ಒಲಿದ ಆಶೀರ್ವಾದ’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.</p>.<p>ಇಲ್ಲಿನ ರವೀಂದ್ರನಗರದ ರವಿತೇಜ ಕನ್ವೆನ್ಷನ್ ಹಾಲ್ನಲ್ಲಿ ಅನಿಕೇತನ ಟ್ರಸ್ಟ್ ವತಿಯಿಂದ ಶುಕ್ರವಾರ ನಡೆದ ಕೆ.ವಿ.ಮಲ್ಲೇಶ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೆ.ವಿ.ಮಲ್ಲೇಶ್ ಎಂದಿಗೂ ಸನ್ಮಾನ ಅಪೇಕ್ಷೆಸಿದವರಲ್ಲ. ಸಜ್ಜನ ವ್ಯಕ್ತಿತ್ವ ಉಳ್ಳವರು. ಉತ್ತಮ ನಡವಳಿಕೆ, ಸೌಮ್ಯ ಸ್ವಭಾವ ಮತ್ತು ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸುವ ಗುಣ ಅವರಲ್ಲಿದೆ. ಯಾರಿಗೂ ಕೆಟ್ಟದ್ದನ್ನು ಬಯಸದೆ, ಅಹಿತ ಉಂಟು ಮಾಡಿದವರಿಗೂ ಒಳಿತು ಬಯಸುವ ಮನೋಭಾವ ಹೊಂದಿರುವ ವ್ಯಕ್ತಿ’ ಎಂದು ಬಣ್ಣಿಸಿದರು.</p>.<p>‘ನಮ್ಮ ಸಖ್ಯ 20 ವರ್ಷಕ್ಕೂ ಹೆಚ್ಚು. ಅವರೊಬ್ಬ ಉತ್ತಮ ಸ್ನೇಹಜೀವಿ. ಅವರೊಂದಿಗಿನ ಒಡನಾಟ ದೀರ್ಘ’ ಎಂದರು.</p>.<p>ಸಮಾರಂಭದಲ್ಲಿ ಕೆ .ವಿ.ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.</p>.<p>ಎಂ.ಡಿ.ಪಲ್ಲವಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಹಾಗೂ ವಚನ ಗಾಯನ ನಡೆಯಿತು.</p>.<p>ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಮುಖಂಡರಾದ ಆರ್.ಮೂರ್ತಿ, ಎಚ್.ವಿ.ರಾಜೀವ್, ಬೈರಪ್ಪ, ಶಿವಪ್ಪ, ಮರಿ ತಿಬ್ಬೇಗೌಡ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-39-1663196445</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕೆ.ವಿ.ಮಲ್ಲೇಶ್ರಿಗೆ ಇದು ಕೇವಲ ಸನ್ಮಾನವಲ್ಲ, ಅವರಿಗೆ ಒಲಿದ ಆಶೀರ್ವಾದ’ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.</p>.<p>ಇಲ್ಲಿನ ರವೀಂದ್ರನಗರದ ರವಿತೇಜ ಕನ್ವೆನ್ಷನ್ ಹಾಲ್ನಲ್ಲಿ ಅನಿಕೇತನ ಟ್ರಸ್ಟ್ ವತಿಯಿಂದ ಶುಕ್ರವಾರ ನಡೆದ ಕೆ.ವಿ.ಮಲ್ಲೇಶ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೆ.ವಿ.ಮಲ್ಲೇಶ್ ಎಂದಿಗೂ ಸನ್ಮಾನ ಅಪೇಕ್ಷೆಸಿದವರಲ್ಲ. ಸಜ್ಜನ ವ್ಯಕ್ತಿತ್ವ ಉಳ್ಳವರು. ಉತ್ತಮ ನಡವಳಿಕೆ, ಸೌಮ್ಯ ಸ್ವಭಾವ ಮತ್ತು ಎಲ್ಲರೊಂದಿಗೂ ಪ್ರೀತಿಯಿಂದ ವರ್ತಿಸುವ ಗುಣ ಅವರಲ್ಲಿದೆ. ಯಾರಿಗೂ ಕೆಟ್ಟದ್ದನ್ನು ಬಯಸದೆ, ಅಹಿತ ಉಂಟು ಮಾಡಿದವರಿಗೂ ಒಳಿತು ಬಯಸುವ ಮನೋಭಾವ ಹೊಂದಿರುವ ವ್ಯಕ್ತಿ’ ಎಂದು ಬಣ್ಣಿಸಿದರು.</p>.<p>‘ನಮ್ಮ ಸಖ್ಯ 20 ವರ್ಷಕ್ಕೂ ಹೆಚ್ಚು. ಅವರೊಬ್ಬ ಉತ್ತಮ ಸ್ನೇಹಜೀವಿ. ಅವರೊಂದಿಗಿನ ಒಡನಾಟ ದೀರ್ಘ’ ಎಂದರು.</p>.<p>ಸಮಾರಂಭದಲ್ಲಿ ಕೆ .ವಿ.ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.</p>.<p>ಎಂ.ಡಿ.ಪಲ್ಲವಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಹಾಗೂ ವಚನ ಗಾಯನ ನಡೆಯಿತು.</p>.<p>ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಮುಖಂಡರಾದ ಆರ್.ಮೂರ್ತಿ, ಎಚ್.ವಿ.ರಾಜೀವ್, ಬೈರಪ್ಪ, ಶಿವಪ್ಪ, ಮರಿ ತಿಬ್ಬೇಗೌಡ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-39-1663196445</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>