<p><strong>ಮೈಸೂರು</strong>: ನಗರದ ಅಲಂಕಾರಿಕ ಹೂಮಾಲೆ ಎಂದೇ ಕವಿ ಡಿವಿಜಿಯು ವರ್ಣಿಸಿದ್ದ ಲ್ಯಾನ್ಸ್ಡೌನ್ ಕಟ್ಟಡಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ 13 ವರ್ಷಗಳೇ ಕಳೆದಿದೆ. ಕಟ್ಟಡದ ಭವಿಷ್ಯ ಸುಪ್ರೀಂ ಕೋರ್ಟ್ನಲ್ಲಿದ್ದು, ದಿನದಿನಕ್ಕೂ ಶಿಥಿಲವಾಗುತ್ತಿದೆ.</p>.<p>ನಗರದ ಆರ್ಥಿಕತೆಗೆ ಚೈತನ್ಯ ನೀಡಿದ್ದ 134 ವರ್ಷಗಳ ಈ ಪಾರಂಪರಿಕ ಕಟ್ಟಡವು ಪ್ರತಿ ಮಳೆಗಾಲದಲ್ಲೂ ಅಳಿವು ಉಳಿವಿನ ಹೋರಾಟ ನಡೆಸುತ್ತಿದೆ. ಪುನರುಜ್ಜೀವನದ ನಿರೀಕ್ಷೆಯಲ್ಲಿದೆ.</p>.<p>ದಶಕದ ಹಿಂದೆ ಎರಡು ಮಳಿಗೆಗಳ ಛಾವಣಿ ಕುಸಿದು ಜೀವಹಾನಿಯಾದ ಬಳಿಕ ಕಟ್ಟಡದಿಂದ ಹೊರಬಿದ್ದ ವಿವಿಧ ವರ್ತಕರು, ಎದುರಿನ ರಸ್ತೆ ಪಕ್ಕದ ತಾತ್ಕಾಲಿಕ ಶೆಡ್ಗಳಲ್ಲಿಯೇ ವ್ಯಾಪಾರ ಮುಂದುವರಿಸುತ್ತಾ ತಾವು ಹಿಂದಿದ್ದ ಸ್ಥಳದ ಅವಸ್ಥೆಯನ್ನು ಕಂಡು ವ್ಯಥೆ ಪಡುತ್ತಿದ್ದಾರೆ.</p>.<p>ನಿತ್ಯವೂ ಶಿಥಿಲದತ್ತ.. : ಕಟ್ಟಡ ಹಿಂಬದಿಯ ಚರಂಡಿಯಲ್ಲಿ ಚಲನೆಯಿಲ್ಲದೇ ನಿಂತ ಕೊಳಚೆ ನೀರು ನೆಲಗಟ್ಟನ್ನು ನಿತ್ಯವೂ ಶಿಥಿಲ ಮಾಡುತ್ತಿದೆ. ಇಲಿ, ಹೆಗ್ಗಣಗಳು ಕಟ್ಟಡ ಇಟ್ಟಿಗೆಗಳನ್ನು ಕೊರೆದು ಒಳ ನುಗ್ಗಿವೆ. ಕೆಲ ಮಳಿಗೆಗಳ ಕಮಾನುಗಳು ಕುಸಿಯುತ್ತಿವೆ. ಮೇಲಿನ ಮಹಡಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಆ ಬಿರುಕುಗಳಲ್ಲಿ ಗಿಡಗಳು ಚಿಗುರಿ ಮತ್ತಷ್ಟು ಹಾನಿ ಮಾಡುತ್ತಿದೆ.</p>.<p>ಮಳೆ ಬಂದಾಗ ಕಟ್ಟಡದ ಹಲವೆಡೆಗಳಿಂದ ನೀರು ಸೋರುತ್ತಿದ್ದು, ಗೋಡೆಗಳು ಸತ್ವ ಕಳೆದುಕೊಂಡು ಗಾರೆ ಕಳಚಿ ಬೀಳುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಭಾಗಗಳಲ್ಲಿ ಮೇಲ್ಚಾವಣಿಯ ಮರದ ಅಳವಡಿಕೆಗಳು ಬಿಸಿಲು, ಮಳೆಗೆ ಹಾಳಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಮತ್ತಷ್ಟು ಹಾನಿ ಸಂಭವಿಸಬಹುದೆಂಬ ಭೀತಿ ಪಾರಂಪರಿಕ ತಜ್ಞರು ಹಾಗೂ ನಾಗರಿಕರಿಂದ ವ್ಯಕ್ತವಾಗಿದೆ.</p>.<p>ಲ್ಯಾನ್ಸ್ಡೌನ್ ಕಟ್ಟಡದ ಹಿಂಭಾಗದ ರಸ್ತೆಯು ಕಿರಿದಾದ ದಾರಿಯಾಗಿದ್ದು, ‘ಜಗನ್ಮೋಹನ ಬಂಗ್ಲೆ ರಸ್ತೆ 1ನೇ ಕ್ರಾಸ್’ ಎಂಬ ನಾಮಫಲಕವಿರುವ ಈ ರಸ್ತೆಯಲ್ಲಿ ಹಲವು ಮಳಿಗೆಗಳು ಕಾರ್ಯಾಚರಿಸುತ್ತಿವೆ. ಕಟ್ಟಡದ ಶಿಥಿಲತೆಯು ಅಲ್ಲಿನ ಮಾಲೀಕರಲ್ಲಿ ಆತಂಕ ಮೂಡಿಸಿದೆ.</p>.<p>ಸುಪ್ರೀಂ ತೀರ್ಪಿನ ಭರವಸೆ: ಶಿಥಿಲದತ್ತ ಸಾಗಿರುವ ಕಟ್ಟಡದ ಉಳಿವಿಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವುದು ಭರವಸೆ ಮೂಡಿಸಿದೆ. ಕಟ್ಟಡವನ್ನು ಸಂರಕ್ಷಿಸಬೇಕು. ಅಗತ್ಯ ನವೀಕರಣದೊಂದಿಗೆ ಪುನರ್ಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಜುಲೈ 30ರಂದು ಅಂತಿಮ ತೀರ್ಪು ನೀಡಲಿದ್ದು, ಮತ್ತೆ ಮಳೆಗಾಲ ಎದುರಿಸುವ ಅನಿವಾರ್ಯತೆಯಲ್ಲಿ ಕಟ್ಟಡವು ಸಿಲುಕಿದ್ದು, ಪಾರಂಪರಿಕ ಕಟ್ಟಡ ಪ್ರಿಯರಲ್ಲಿ ಆತಂಕ ಮೂಡಿಸಿದೆ.</p>.<p><strong>ವಿಭಜನ ಗೋಡೆ ಇಲ್ಲಿನ ವಿಶೇಷ</strong></p><p>1892ರಲ್ಲಿ ಬ್ರಿಟಿಷ್ ವೈಸರಾಯ್ ಹೆನ್ರಿ ಪೆಟ್ಟಿ– ಫಿಟ್ಜ್ಮೌರಿಸ್(ಮಾರ್ಕ್ವೆಸ್ ಆಫ್ ಲ್ಯಾನ್ಸ್ಡೌನ್) ಮೈಸೂರಿಗೆ ಭೇಟಿ ನೀಡಿದ ನೆನಪಿಗಾಗಿ ಈ ಕಟ್ಟಡಕ್ಕೆ ‘ಲ್ಯಾನ್ಸ್ಡೌನ್’ ಎಂಬ ಹೆಸರು ನೀಡಲಾಗಿತ್ತು. ಅಂದಿನ ಮಹಾರಾಜ ಹತ್ತನೇ ಚಾಮರಾಜ ಒಡೆಯರ್ ಅವರು ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ದೊರೆಯಬೇಕು ಎಂಬ ಉದ್ದೇಶದಿಂದ ಕಟ್ಟಡವನ್ನು ನಿರ್ಮಿಸಿದ್ದರು. </p><p>ಮರ, ಕಬ್ಬಿಣ, ಸುಣ್ಣದ ಕಲ್ಲು ಬಳಸಿ ನಿರ್ಮಿಸಲಾಗಿದೆ. ಸುಮಾರು 200 ಗಿರ್ಡರ್ (ಕಬ್ಬಿಣದ ಬೀಮ್)ಗಳನ್ನು ಬಳಸಲಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಸುಭದ್ರವಾದ ಮದ್ರಾಸ್ ಟೆರೇಸ್ ಹಾಗೂ ಯಾವ ಪಾರಂಪರಿಕ ಕಟ್ಟಡಗಳಲ್ಲೂ ಕಾಣದ ವಿಭಜನ ಗೋಡೆ. ಈ ಗೋಡೆಗಳು ಭಾರ ಹೊರದೇ ಕೇವಲ ಮಳಿಗೆಗಳನ್ನು ಬೇರ್ಪಡಿಸಲು ನಿರ್ಮಿಸಲಾಗಿದೆ. ಇದಕ್ಕೆ ಬಿದಿರಿನ ತಟ್ಟಿಗೆ ಹಾಗೂ ಸುಣ್ಣದ ಗಾರೆಯನ್ನು ಬಳಸಲಾಗಿದೆ’ ಎಂದು ಪಾರಂಪರಿಕ ತಜ್ಞ<br>ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.</p><p>ಔಷಧಾಲಯ, ಉಪಾಹಾರ ಕೊಠಡಿಗಳು, ಪುಸ್ತಕ ಮಳಿಗೆಗಳು, ಹೋಟೆಲ್, ಮುದ್ರಣಾಲಯಗಳು, ಪ್ರಕಾಶನ, ಪತ್ರ ಟೈಪಿಂಗ್, ಲೇಖನ ಸಾಮಗ್ರಿಗಳು, ಫೋಟೊ ಫ್ರೇಮಿಂಗ್ ಮತ್ತು ವಾಲ್ಪೇಪರ್ ಮಾರಾಟ ಮುಂತಾದ ವ್ಯಾಪಾರಕ್ಕೆ ಕಟ್ಟಡವು ಬಳಕೆಯಾಗುತ್ತಿತ್ತು.</p>.<p><strong>‘ಪರಂಪರೆ ತಜ್ಞರ ಸಮಿತಿ ಸ್ಥಾಪಿಸಿ’</strong></p><p>‘ಸುಪ್ರೀಂ ಕೋರ್ಟ್ ಮೇ 4ರಂದು ನೀಡಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡವನ್ನು ಸಂರಕ್ಷಿಸಿ, ನವೀಕರಿಸಬೇಕು ಎಂಬ ಅಭಿಪ್ರಾಯವೇ ಜುಲೈ 30ರಂದು ತೀರ್ಪಾಗಿ ಬರಬಹುದು’ ಎನ್ನುತ್ತಾರೆ ಪಾರಂಪರಿಕ ತಜ್ಞ<br>ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.</p><p>‘ಇವುಗಳ ಮರುನಿರ್ಮಾಣ ಉದ್ದೇಶಕ್ಕೆಂದು ಸರ್ಕಾರ ಎತ್ತಿಟ್ಟಿರುವ ಹಣವನ್ನೇ ಸಂರಕ್ಷಣೆ ಹಾಗೂ ನವೀಕರಣಕ್ಕೆ ಬಿಡುಗಡೆ ಮಾಡಿದರೂ ಸಾಕು ಉತ್ತಮ ಕೆಲಸವಾಗಲಿದೆ. ಸರ್ಕಾರವು ಪರಂಪರೆ ತಜ್ಞರ ಸಮಿತಿ ಸ್ಥಾಪಿಸಿ, ಅದರ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಬೇಕು. ಪಾರಂಪರಿಕೆ ಕಟ್ಟಡಗಳ ಸಂರಕ್ಷಣೆ ಬಗ್ಗೆ ಅನುಭವ ಇರುವ, ಕನಿಷ್ಠ 10 ವರ್ಷ ನಿರ್ವಹಣೆಯನ್ನು ಮಾಡಲು ಬದ್ಧವಾಗಿರುವ ಸಂಸ್ಥೆಗೆ ಕಾಮಗಾರಿ ನೀಡಬೇಕು’ ಎಂದು ಒತ್ತಾಯಿಸಿದರು.</p>.<div><blockquote><p class="quote">ಕಟ್ಟಡದ ಹಿಂಬದಿ ಸ್ಥಳವು ಸಾರ್ವಜನಿಕರ ಮೂತ್ರ ವಿಸರ್ಜನೆ ತಾಣವಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ</p> <p class="quote">ಆರಿಫ್ ಪಾಷಾ,<span class="Designate"> ಕಿಸಾನ್ ಅಗ್ರಿ ಸ್ಪ್ರೆ ಅಂಗಡಿ ಮಾಲೀಕ</span></p></blockquote><span class="attribution"></span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260514-39-635379120</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ನಗರದ ಅಲಂಕಾರಿಕ ಹೂಮಾಲೆ ಎಂದೇ ಕವಿ ಡಿವಿಜಿಯು ವರ್ಣಿಸಿದ್ದ ಲ್ಯಾನ್ಸ್ಡೌನ್ ಕಟ್ಟಡಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿ 13 ವರ್ಷಗಳೇ ಕಳೆದಿದೆ. ಕಟ್ಟಡದ ಭವಿಷ್ಯ ಸುಪ್ರೀಂ ಕೋರ್ಟ್ನಲ್ಲಿದ್ದು, ದಿನದಿನಕ್ಕೂ ಶಿಥಿಲವಾಗುತ್ತಿದೆ.</p>.<p>ನಗರದ ಆರ್ಥಿಕತೆಗೆ ಚೈತನ್ಯ ನೀಡಿದ್ದ 134 ವರ್ಷಗಳ ಈ ಪಾರಂಪರಿಕ ಕಟ್ಟಡವು ಪ್ರತಿ ಮಳೆಗಾಲದಲ್ಲೂ ಅಳಿವು ಉಳಿವಿನ ಹೋರಾಟ ನಡೆಸುತ್ತಿದೆ. ಪುನರುಜ್ಜೀವನದ ನಿರೀಕ್ಷೆಯಲ್ಲಿದೆ.</p>.<p>ದಶಕದ ಹಿಂದೆ ಎರಡು ಮಳಿಗೆಗಳ ಛಾವಣಿ ಕುಸಿದು ಜೀವಹಾನಿಯಾದ ಬಳಿಕ ಕಟ್ಟಡದಿಂದ ಹೊರಬಿದ್ದ ವಿವಿಧ ವರ್ತಕರು, ಎದುರಿನ ರಸ್ತೆ ಪಕ್ಕದ ತಾತ್ಕಾಲಿಕ ಶೆಡ್ಗಳಲ್ಲಿಯೇ ವ್ಯಾಪಾರ ಮುಂದುವರಿಸುತ್ತಾ ತಾವು ಹಿಂದಿದ್ದ ಸ್ಥಳದ ಅವಸ್ಥೆಯನ್ನು ಕಂಡು ವ್ಯಥೆ ಪಡುತ್ತಿದ್ದಾರೆ.</p>.<p>ನಿತ್ಯವೂ ಶಿಥಿಲದತ್ತ.. : ಕಟ್ಟಡ ಹಿಂಬದಿಯ ಚರಂಡಿಯಲ್ಲಿ ಚಲನೆಯಿಲ್ಲದೇ ನಿಂತ ಕೊಳಚೆ ನೀರು ನೆಲಗಟ್ಟನ್ನು ನಿತ್ಯವೂ ಶಿಥಿಲ ಮಾಡುತ್ತಿದೆ. ಇಲಿ, ಹೆಗ್ಗಣಗಳು ಕಟ್ಟಡ ಇಟ್ಟಿಗೆಗಳನ್ನು ಕೊರೆದು ಒಳ ನುಗ್ಗಿವೆ. ಕೆಲ ಮಳಿಗೆಗಳ ಕಮಾನುಗಳು ಕುಸಿಯುತ್ತಿವೆ. ಮೇಲಿನ ಮಹಡಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಆ ಬಿರುಕುಗಳಲ್ಲಿ ಗಿಡಗಳು ಚಿಗುರಿ ಮತ್ತಷ್ಟು ಹಾನಿ ಮಾಡುತ್ತಿದೆ.</p>.<p>ಮಳೆ ಬಂದಾಗ ಕಟ್ಟಡದ ಹಲವೆಡೆಗಳಿಂದ ನೀರು ಸೋರುತ್ತಿದ್ದು, ಗೋಡೆಗಳು ಸತ್ವ ಕಳೆದುಕೊಂಡು ಗಾರೆ ಕಳಚಿ ಬೀಳುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಭಾಗಗಳಲ್ಲಿ ಮೇಲ್ಚಾವಣಿಯ ಮರದ ಅಳವಡಿಕೆಗಳು ಬಿಸಿಲು, ಮಳೆಗೆ ಹಾಳಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಮತ್ತಷ್ಟು ಹಾನಿ ಸಂಭವಿಸಬಹುದೆಂಬ ಭೀತಿ ಪಾರಂಪರಿಕ ತಜ್ಞರು ಹಾಗೂ ನಾಗರಿಕರಿಂದ ವ್ಯಕ್ತವಾಗಿದೆ.</p>.<p>ಲ್ಯಾನ್ಸ್ಡೌನ್ ಕಟ್ಟಡದ ಹಿಂಭಾಗದ ರಸ್ತೆಯು ಕಿರಿದಾದ ದಾರಿಯಾಗಿದ್ದು, ‘ಜಗನ್ಮೋಹನ ಬಂಗ್ಲೆ ರಸ್ತೆ 1ನೇ ಕ್ರಾಸ್’ ಎಂಬ ನಾಮಫಲಕವಿರುವ ಈ ರಸ್ತೆಯಲ್ಲಿ ಹಲವು ಮಳಿಗೆಗಳು ಕಾರ್ಯಾಚರಿಸುತ್ತಿವೆ. ಕಟ್ಟಡದ ಶಿಥಿಲತೆಯು ಅಲ್ಲಿನ ಮಾಲೀಕರಲ್ಲಿ ಆತಂಕ ಮೂಡಿಸಿದೆ.</p>.<p>ಸುಪ್ರೀಂ ತೀರ್ಪಿನ ಭರವಸೆ: ಶಿಥಿಲದತ್ತ ಸಾಗಿರುವ ಕಟ್ಟಡದ ಉಳಿವಿಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವುದು ಭರವಸೆ ಮೂಡಿಸಿದೆ. ಕಟ್ಟಡವನ್ನು ಸಂರಕ್ಷಿಸಬೇಕು. ಅಗತ್ಯ ನವೀಕರಣದೊಂದಿಗೆ ಪುನರ್ಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಜುಲೈ 30ರಂದು ಅಂತಿಮ ತೀರ್ಪು ನೀಡಲಿದ್ದು, ಮತ್ತೆ ಮಳೆಗಾಲ ಎದುರಿಸುವ ಅನಿವಾರ್ಯತೆಯಲ್ಲಿ ಕಟ್ಟಡವು ಸಿಲುಕಿದ್ದು, ಪಾರಂಪರಿಕ ಕಟ್ಟಡ ಪ್ರಿಯರಲ್ಲಿ ಆತಂಕ ಮೂಡಿಸಿದೆ.</p>.<p><strong>ವಿಭಜನ ಗೋಡೆ ಇಲ್ಲಿನ ವಿಶೇಷ</strong></p><p>1892ರಲ್ಲಿ ಬ್ರಿಟಿಷ್ ವೈಸರಾಯ್ ಹೆನ್ರಿ ಪೆಟ್ಟಿ– ಫಿಟ್ಜ್ಮೌರಿಸ್(ಮಾರ್ಕ್ವೆಸ್ ಆಫ್ ಲ್ಯಾನ್ಸ್ಡೌನ್) ಮೈಸೂರಿಗೆ ಭೇಟಿ ನೀಡಿದ ನೆನಪಿಗಾಗಿ ಈ ಕಟ್ಟಡಕ್ಕೆ ‘ಲ್ಯಾನ್ಸ್ಡೌನ್’ ಎಂಬ ಹೆಸರು ನೀಡಲಾಗಿತ್ತು. ಅಂದಿನ ಮಹಾರಾಜ ಹತ್ತನೇ ಚಾಮರಾಜ ಒಡೆಯರ್ ಅವರು ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ದೊರೆಯಬೇಕು ಎಂಬ ಉದ್ದೇಶದಿಂದ ಕಟ್ಟಡವನ್ನು ನಿರ್ಮಿಸಿದ್ದರು. </p><p>ಮರ, ಕಬ್ಬಿಣ, ಸುಣ್ಣದ ಕಲ್ಲು ಬಳಸಿ ನಿರ್ಮಿಸಲಾಗಿದೆ. ಸುಮಾರು 200 ಗಿರ್ಡರ್ (ಕಬ್ಬಿಣದ ಬೀಮ್)ಗಳನ್ನು ಬಳಸಲಾಗಿದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಸುಭದ್ರವಾದ ಮದ್ರಾಸ್ ಟೆರೇಸ್ ಹಾಗೂ ಯಾವ ಪಾರಂಪರಿಕ ಕಟ್ಟಡಗಳಲ್ಲೂ ಕಾಣದ ವಿಭಜನ ಗೋಡೆ. ಈ ಗೋಡೆಗಳು ಭಾರ ಹೊರದೇ ಕೇವಲ ಮಳಿಗೆಗಳನ್ನು ಬೇರ್ಪಡಿಸಲು ನಿರ್ಮಿಸಲಾಗಿದೆ. ಇದಕ್ಕೆ ಬಿದಿರಿನ ತಟ್ಟಿಗೆ ಹಾಗೂ ಸುಣ್ಣದ ಗಾರೆಯನ್ನು ಬಳಸಲಾಗಿದೆ’ ಎಂದು ಪಾರಂಪರಿಕ ತಜ್ಞ<br>ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.</p><p>ಔಷಧಾಲಯ, ಉಪಾಹಾರ ಕೊಠಡಿಗಳು, ಪುಸ್ತಕ ಮಳಿಗೆಗಳು, ಹೋಟೆಲ್, ಮುದ್ರಣಾಲಯಗಳು, ಪ್ರಕಾಶನ, ಪತ್ರ ಟೈಪಿಂಗ್, ಲೇಖನ ಸಾಮಗ್ರಿಗಳು, ಫೋಟೊ ಫ್ರೇಮಿಂಗ್ ಮತ್ತು ವಾಲ್ಪೇಪರ್ ಮಾರಾಟ ಮುಂತಾದ ವ್ಯಾಪಾರಕ್ಕೆ ಕಟ್ಟಡವು ಬಳಕೆಯಾಗುತ್ತಿತ್ತು.</p>.<p><strong>‘ಪರಂಪರೆ ತಜ್ಞರ ಸಮಿತಿ ಸ್ಥಾಪಿಸಿ’</strong></p><p>‘ಸುಪ್ರೀಂ ಕೋರ್ಟ್ ಮೇ 4ರಂದು ನೀಡಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡವನ್ನು ಸಂರಕ್ಷಿಸಿ, ನವೀಕರಿಸಬೇಕು ಎಂಬ ಅಭಿಪ್ರಾಯವೇ ಜುಲೈ 30ರಂದು ತೀರ್ಪಾಗಿ ಬರಬಹುದು’ ಎನ್ನುತ್ತಾರೆ ಪಾರಂಪರಿಕ ತಜ್ಞ<br>ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.</p><p>‘ಇವುಗಳ ಮರುನಿರ್ಮಾಣ ಉದ್ದೇಶಕ್ಕೆಂದು ಸರ್ಕಾರ ಎತ್ತಿಟ್ಟಿರುವ ಹಣವನ್ನೇ ಸಂರಕ್ಷಣೆ ಹಾಗೂ ನವೀಕರಣಕ್ಕೆ ಬಿಡುಗಡೆ ಮಾಡಿದರೂ ಸಾಕು ಉತ್ತಮ ಕೆಲಸವಾಗಲಿದೆ. ಸರ್ಕಾರವು ಪರಂಪರೆ ತಜ್ಞರ ಸಮಿತಿ ಸ್ಥಾಪಿಸಿ, ಅದರ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಬೇಕು. ಪಾರಂಪರಿಕೆ ಕಟ್ಟಡಗಳ ಸಂರಕ್ಷಣೆ ಬಗ್ಗೆ ಅನುಭವ ಇರುವ, ಕನಿಷ್ಠ 10 ವರ್ಷ ನಿರ್ವಹಣೆಯನ್ನು ಮಾಡಲು ಬದ್ಧವಾಗಿರುವ ಸಂಸ್ಥೆಗೆ ಕಾಮಗಾರಿ ನೀಡಬೇಕು’ ಎಂದು ಒತ್ತಾಯಿಸಿದರು.</p>.<div><blockquote><p class="quote">ಕಟ್ಟಡದ ಹಿಂಬದಿ ಸ್ಥಳವು ಸಾರ್ವಜನಿಕರ ಮೂತ್ರ ವಿಸರ್ಜನೆ ತಾಣವಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ</p> <p class="quote">ಆರಿಫ್ ಪಾಷಾ,<span class="Designate"> ಕಿಸಾನ್ ಅಗ್ರಿ ಸ್ಪ್ರೆ ಅಂಗಡಿ ಮಾಲೀಕ</span></p></blockquote><span class="attribution"></span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260514-39-635379120</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>