<p>ನಂಜನಗೂಡು: ‘ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧು– ಸಂತರು ಹಾಗೂ ಮಹಾತ್ಮರ ಮಾರ್ಗದರ್ಶನ ಅವಶ್ಯ’ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ‘ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿ’ ಕೃತಿಯ ಕುರಿತು ಮಠಾಧಿಪತಿಗಳು, ಮಾತಾಜಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಹಾಗೂ ಸಾಧಕರಿಗೆ ಏರ್ಪಡಿಸಿರುವ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಭಾರತೀಯ ಪರಂಪರೆಯಲ್ಲಿ ಸತ್ಪುರುಷರಿಗೆ ವಿಶೇಷ ಸ್ಥಾನವಿದೆ. ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಸಾಧು– ಸಂತರು ಮಾಡುತ್ತಿರುತ್ತಾರೆ’ ಎಂದರು.</p>.<p>ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ‘ಮಾನವೀಯ ಮೌಲ್ಯಗಳಿಂದ ಕೂಡಿರುವ ಸಮಾಜವನ್ನು ನಿರ್ಮಿಸಬೇಕು. ಭಾರತೀಯ ಪರಂಪರೆಗೆ ಅತ್ಯುತ್ತಮ ಹಿನ್ನೆಲೆ ಇದ್ದು, ವಿಜ್ಞಾನ ಮತ್ತು ತತ್ವಜ್ಞಾನವನ್ನು ಸಮನ್ವಯಗೊಳಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>‘ಶ್ರೀಮಠದ ದಾಸೋಹ ಸೇವೆಯು ಸರ್ವದಿಕ್ಕುಗಳಲ್ಲಿ ಪಸರಿಸಿದೆ. ಅನ್ನ, ಆರೋಗ್ಯ, ಸಂಸ್ಕೃತಿ, ಅಧ್ಯಾತ್ಮ, ವಿದ್ಯೆ, ಜ್ಞಾನ ಹಾಗೂ ಜನ ಜಾಗೃತಿ ಮೊದಲಾದ ಸಾಮಾಜಿಕ, ಧಾರ್ಮಿಕ ಸೇವೆಯನ್ನು ಇಡೀ ನಾಡಿಗೆ ನೀಡುತ್ತಿದೆ. ವಿವೇಕ ಚಿಂತಾಮಣಿ ಗ್ರಂಥವು ವಿಶ್ವಕೋಶವಾಗಿದೆ’ ಎಂದರು.</p>.<p>ಮಾಜಿ ಸಂಸದ ಐ.ಜಿ. ಸನದಿ, ‘ವ್ಯಕ್ತಿಯ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಸಾರ್ವಜನಿಕ ಜೀವನದಲ್ಲಿ ಪರಿಶುದ್ಧರಾಗಿರಬೇಕು. ಜೀವನ ಸಂಗ್ರಾಮದಲ್ಲಿ ಗೆಲ್ಲಬೇಕಾದರೆ ನಿರ್ಮೋಹಿಗಳಾಗಿರಬೇಕು. ನಿಜಗುಣ ಶಿವಯೋಗಿಗಳು ಮಹಾನ್ ಜ್ಞಾನಿಯಾಗಿದ್ದರು. ಅವರು ಕಾವ್ಯದ ತೆರೆಯ ಮೇಲೆ ನಿಂತು ಆಧ್ಯಾತ್ಮಿಕ ಮುಗಿಲನ್ನು ಮುಟ್ಟಿದವರು’ ಎಂದು ಸ್ಮರಿಸಿದರು.</p>.<p>ನಿವೃತ್ತ ಪ್ರಾಧ್ಯಾಪಕ ಕೆ. ಅನಂತರಾಮು, ‘ಭಾರತೀಯ ಸಂಸ್ಕೃತಿಯು ಋಷಿಮುನಿಗಳಿಂದ ಬೆಳೆದ ಸಂಸ್ಕೃತಿಯಾಗಿದೆ’ಎಂದರು.</p>.<p>ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ‘ಹೂವು ತನ್ನ ಪರಿಮಳವನ್ನು ಜಗತ್ತಿಗೆ ಹರಡುವಂತೆ ನಮ್ಮ ಬದುಕು ಸಮಾಜಕ್ಕೆ ಸಮರ್ಪಣೆಯಾಗಬೇಕು. ವಿವೇಕ ಚಿಂತಾಮಣಿ ಗ್ರಂಥವು ಶ್ರೇಷ್ಠ ಗ್ರಂಥವಾಗಿದ್ದು, ಇದುವರೆಗೆ ಯಾರೂ ಇದರ ಕುರಿತು ವ್ಯಾಖ್ಯಾನ ಗ್ರಂಥವನ್ನು ರಚಿಸಿಲ್ಲ’ ಎಂದು ತಿಳಿಸಿದರು.</p>.<p>ಚಿಲಕವಾಡಿಯ ಗುರುರಾಮಯೋಗೀಶ್ವರ ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ ಮಾತನಾಡಿದರು.</p>.<p>ಎಸ್. ಶಾಂತಾ ಪ್ರಾರ್ಥಿಸಿದರು. ಕೆ.ಪಿ. ಬಸವರಾಜು ಸ್ವಾಗತಿಸಿದರು.</p>.<p>ಗವಿಯಪ್ಪದೇವರು ವಂದಿಸಿದರು. ಎಸ್. ನಂದೀಶ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-38-1772687156</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಂಜನಗೂಡು: ‘ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧು– ಸಂತರು ಹಾಗೂ ಮಹಾತ್ಮರ ಮಾರ್ಗದರ್ಶನ ಅವಶ್ಯ’ ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ ‘ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿ’ ಕೃತಿಯ ಕುರಿತು ಮಠಾಧಿಪತಿಗಳು, ಮಾತಾಜಿಗಳು, ಆಧ್ಯಾತ್ಮಿಕ ಜಿಜ್ಞಾಸುಗಳು ಹಾಗೂ ಸಾಧಕರಿಗೆ ಏರ್ಪಡಿಸಿರುವ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಭಾರತೀಯ ಪರಂಪರೆಯಲ್ಲಿ ಸತ್ಪುರುಷರಿಗೆ ವಿಶೇಷ ಸ್ಥಾನವಿದೆ. ಸಮಾಜದ ಅಂಕು–ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಸಾಧು– ಸಂತರು ಮಾಡುತ್ತಿರುತ್ತಾರೆ’ ಎಂದರು.</p>.<p>ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ‘ಮಾನವೀಯ ಮೌಲ್ಯಗಳಿಂದ ಕೂಡಿರುವ ಸಮಾಜವನ್ನು ನಿರ್ಮಿಸಬೇಕು. ಭಾರತೀಯ ಪರಂಪರೆಗೆ ಅತ್ಯುತ್ತಮ ಹಿನ್ನೆಲೆ ಇದ್ದು, ವಿಜ್ಞಾನ ಮತ್ತು ತತ್ವಜ್ಞಾನವನ್ನು ಸಮನ್ವಯಗೊಳಿಸಿಕೊಳ್ಳಬೇಕು’ ಎಂದು ಹೇಳಿದರು.</p>.<p>‘ಶ್ರೀಮಠದ ದಾಸೋಹ ಸೇವೆಯು ಸರ್ವದಿಕ್ಕುಗಳಲ್ಲಿ ಪಸರಿಸಿದೆ. ಅನ್ನ, ಆರೋಗ್ಯ, ಸಂಸ್ಕೃತಿ, ಅಧ್ಯಾತ್ಮ, ವಿದ್ಯೆ, ಜ್ಞಾನ ಹಾಗೂ ಜನ ಜಾಗೃತಿ ಮೊದಲಾದ ಸಾಮಾಜಿಕ, ಧಾರ್ಮಿಕ ಸೇವೆಯನ್ನು ಇಡೀ ನಾಡಿಗೆ ನೀಡುತ್ತಿದೆ. ವಿವೇಕ ಚಿಂತಾಮಣಿ ಗ್ರಂಥವು ವಿಶ್ವಕೋಶವಾಗಿದೆ’ ಎಂದರು.</p>.<p>ಮಾಜಿ ಸಂಸದ ಐ.ಜಿ. ಸನದಿ, ‘ವ್ಯಕ್ತಿಯ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಸಾರ್ವಜನಿಕ ಜೀವನದಲ್ಲಿ ಪರಿಶುದ್ಧರಾಗಿರಬೇಕು. ಜೀವನ ಸಂಗ್ರಾಮದಲ್ಲಿ ಗೆಲ್ಲಬೇಕಾದರೆ ನಿರ್ಮೋಹಿಗಳಾಗಿರಬೇಕು. ನಿಜಗುಣ ಶಿವಯೋಗಿಗಳು ಮಹಾನ್ ಜ್ಞಾನಿಯಾಗಿದ್ದರು. ಅವರು ಕಾವ್ಯದ ತೆರೆಯ ಮೇಲೆ ನಿಂತು ಆಧ್ಯಾತ್ಮಿಕ ಮುಗಿಲನ್ನು ಮುಟ್ಟಿದವರು’ ಎಂದು ಸ್ಮರಿಸಿದರು.</p>.<p>ನಿವೃತ್ತ ಪ್ರಾಧ್ಯಾಪಕ ಕೆ. ಅನಂತರಾಮು, ‘ಭಾರತೀಯ ಸಂಸ್ಕೃತಿಯು ಋಷಿಮುನಿಗಳಿಂದ ಬೆಳೆದ ಸಂಸ್ಕೃತಿಯಾಗಿದೆ’ಎಂದರು.</p>.<p>ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ‘ಹೂವು ತನ್ನ ಪರಿಮಳವನ್ನು ಜಗತ್ತಿಗೆ ಹರಡುವಂತೆ ನಮ್ಮ ಬದುಕು ಸಮಾಜಕ್ಕೆ ಸಮರ್ಪಣೆಯಾಗಬೇಕು. ವಿವೇಕ ಚಿಂತಾಮಣಿ ಗ್ರಂಥವು ಶ್ರೇಷ್ಠ ಗ್ರಂಥವಾಗಿದ್ದು, ಇದುವರೆಗೆ ಯಾರೂ ಇದರ ಕುರಿತು ವ್ಯಾಖ್ಯಾನ ಗ್ರಂಥವನ್ನು ರಚಿಸಿಲ್ಲ’ ಎಂದು ತಿಳಿಸಿದರು.</p>.<p>ಚಿಲಕವಾಡಿಯ ಗುರುರಾಮಯೋಗೀಶ್ವರ ಮಠದ ಇಮ್ಮಡಿ ಗುರುಲಿಂಗ ಸ್ವಾಮೀಜಿ ಮಾತನಾಡಿದರು.</p>.<p>ಎಸ್. ಶಾಂತಾ ಪ್ರಾರ್ಥಿಸಿದರು. ಕೆ.ಪಿ. ಬಸವರಾಜು ಸ್ವಾಗತಿಸಿದರು.</p>.<p>ಗವಿಯಪ್ಪದೇವರು ವಂದಿಸಿದರು. ಎಸ್. ನಂದೀಶ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-38-1772687156</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>