<p>ಮೈಸೂರು: ‘ಮಹನೀಯರ ಚಿಂತನೆ, ಆದರ್ಶಗಳನ್ನು ಜನರು ಪಾಲಿಸಿದಲ್ಲಿ ವಿಶೇಷ ಕಾನೂನುಗಳನ್ನು ರೂಪಿಸುವ ಅಗತ್ಯವಿಲ್ಲ’ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.</p>.<p>ಮೈಸೂರು ವಕೀಲರ ಸಂಘದಿಂದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾರ್ಶನಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.</p>.<p>‘ಶಂಕರಾಚಾರ್ಯರು,ರಾಮಾನುಜಾಚಾರ್ಯ ಹಾಗೂಮಧ್ವಾಚಾರ್ಯರು ಭಾರತೀಯವೇದಾಂತ ತತ್ವಶಾಸ್ತ್ರದ ಪ್ರಮುಖರು. ಇವರ ವಿಚಾರಗಳು ದೇಶದಾದ್ಯಂತ ಸಾವಿರಾರು ಜನರಿಗೆ ದಾರಿದೀಪವಾಯಿತು. ಅವರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲು ಜಯಂತಿ ಆಚರಣೆ ಮುಖ್ಯ’ ಎಂದರು.</p>.<p>‘ಇವರ ಕೊಡುಗೆಗಳು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ್ದಾಗಿದೆ. ಶಂಕರಾಚಾರ್ಯರು ತತ್ತ್ವಶಾಸ್ತ್ರದಲ್ಲಿ ಜ್ಞಾನದ ಪ್ರಾಧಾನ್ಯತೆಯನ್ನು ಸ್ಥಾಪಿಸಿದರು. ಹಿಂದೂ ಧರ್ಮವನ್ನು ಏಕೀಕರಿಸಿ, ಬೌದ್ಧಾದಿ ಪ್ರಭಾವವನ್ನು ಕಡಿಮೆ ಮಾಡಿದರು. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ, ಮಧ್ವಾಚಾರ್ಯರ ದ್ವೈತ ಸಿದ್ಧಾಂತವೂ ಹಿಂದೂ ಧರ್ಮಕ್ಕೆ ವಿಶೇಷ ನೆಲೆಗಟ್ಟನ್ನು ನೀಡಿದೆ’ ಎಂದರು.</p>.<p>ವಕೀಲ ಕೆ.ಆರ್.ನಾಗರಾಜ್, ಆಚಾರ್ಯತ್ರಯರ ತತ್ತ್ವ, ಸಿದ್ಧಾಂತಗಳಿಂದ ಅಂದಿನ ಕಾಲದಲ್ಲಿ ಉಂಟಾದ ಪರಿಣಾಮಗಳು ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.</p>.<p>ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಕಾರ್ಯದರ್ಶಿ ಎ.ಜಿ.ಸುಧೀರ್, ಜಂಟಿ ಕಾರ್ಯದರ್ಶಿ ಚರಣ್ ರಾಜ್, ಖಜಾಂಚಿ ಎಚ್.ಬಿ. ಬಸವರಾಜ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-39-1204216885</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಮಹನೀಯರ ಚಿಂತನೆ, ಆದರ್ಶಗಳನ್ನು ಜನರು ಪಾಲಿಸಿದಲ್ಲಿ ವಿಶೇಷ ಕಾನೂನುಗಳನ್ನು ರೂಪಿಸುವ ಅಗತ್ಯವಿಲ್ಲ’ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.</p>.<p>ಮೈಸೂರು ವಕೀಲರ ಸಂಘದಿಂದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾರ್ಶನಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.</p>.<p>‘ಶಂಕರಾಚಾರ್ಯರು,ರಾಮಾನುಜಾಚಾರ್ಯ ಹಾಗೂಮಧ್ವಾಚಾರ್ಯರು ಭಾರತೀಯವೇದಾಂತ ತತ್ವಶಾಸ್ತ್ರದ ಪ್ರಮುಖರು. ಇವರ ವಿಚಾರಗಳು ದೇಶದಾದ್ಯಂತ ಸಾವಿರಾರು ಜನರಿಗೆ ದಾರಿದೀಪವಾಯಿತು. ಅವರ ಕೊಡುಗೆಗಳ ಬಗ್ಗೆ ಅರಿವು ಮೂಡಿಸಲು ಜಯಂತಿ ಆಚರಣೆ ಮುಖ್ಯ’ ಎಂದರು.</p>.<p>‘ಇವರ ಕೊಡುಗೆಗಳು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ್ದಾಗಿದೆ. ಶಂಕರಾಚಾರ್ಯರು ತತ್ತ್ವಶಾಸ್ತ್ರದಲ್ಲಿ ಜ್ಞಾನದ ಪ್ರಾಧಾನ್ಯತೆಯನ್ನು ಸ್ಥಾಪಿಸಿದರು. ಹಿಂದೂ ಧರ್ಮವನ್ನು ಏಕೀಕರಿಸಿ, ಬೌದ್ಧಾದಿ ಪ್ರಭಾವವನ್ನು ಕಡಿಮೆ ಮಾಡಿದರು. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ, ಮಧ್ವಾಚಾರ್ಯರ ದ್ವೈತ ಸಿದ್ಧಾಂತವೂ ಹಿಂದೂ ಧರ್ಮಕ್ಕೆ ವಿಶೇಷ ನೆಲೆಗಟ್ಟನ್ನು ನೀಡಿದೆ’ ಎಂದರು.</p>.<p>ವಕೀಲ ಕೆ.ಆರ್.ನಾಗರಾಜ್, ಆಚಾರ್ಯತ್ರಯರ ತತ್ತ್ವ, ಸಿದ್ಧಾಂತಗಳಿಂದ ಅಂದಿನ ಕಾಲದಲ್ಲಿ ಉಂಟಾದ ಪರಿಣಾಮಗಳು ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.</p>.<p>ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಕಾರ್ಯದರ್ಶಿ ಎ.ಜಿ.ಸುಧೀರ್, ಜಂಟಿ ಕಾರ್ಯದರ್ಶಿ ಚರಣ್ ರಾಜ್, ಖಜಾಂಚಿ ಎಚ್.ಬಿ. ಬಸವರಾಜ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-39-1204216885</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>