<p><strong>ಮೈಸೂರು</strong>: ‘ಪೊಲೀಸ್ ಇಲಾಖೆಯ ಕಡೆ ಬೆರಳು ತೋರಿಸಿ ಮಾತನಾಡುವವರೇ ಜಾಸ್ತಿ. ಪೊಲೀಸರ ಕರ್ತವ್ಯವನ್ನು, ಅವರ ಸೇವೆಯನ್ನು ಗುರುತಿಸಿ ಮಾತನಾಡಿದಾಗ ನಮಗೂ ಪ್ರೋತ್ಸಾಹ ದೊರೆಯುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.</p>.<p>ನಗರದ ವಿಂಡ್ ಚೀಮ್ಸ್ ಸಭಾಂಗಣದಲ್ಲಿ ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್- 9ರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ನೈಟ್ಸ್ ಇನ್ ಖಾಕಿ’ ಪ್ರಶಸ್ತಿ ಪ್ರದಾನ ಉದ್ಘಾಟಿಸಿ ಮಾತನಾಡಿದರು.</p>.<p>‘ಪೊಲೀಸರು ಯಾವ ಹೊತ್ತಿನಲ್ಲೂ ಕರ್ತವ್ಯದ ಕರೆ ಬಂದಾಗ ಸನ್ನದ್ಧರಾಗಿ ಬರುತ್ತಾರೆ. ಆದ್ದರಿಂದ ಈ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದರೆ ಮುಂದೆ ಇನ್ನೂ ಉತ್ತಮವಾಗಿ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ. ಎಲ್ಲ ಧರ್ಮದವರು ಅವರವರ ಧರ್ಮದ ಹಬ್ಬಗಳನ್ನು, ಆಚರಣೆಗಳನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆ ಸಮಯದಲ್ಲಿ ಪೊಲೀಸರು ಬಂದೋಬಸ್ತ್ ಕಾರ್ಯ, ಸಂಚಾರ ನಿರ್ವಹಣೆ ಕೆಲಸ ಮಾಡುತ್ತಾರೆ. ವೈಯಕ್ತಿಕ ಜೀವನವನ್ನು ಬದಿಗಿರಿಸಿ ಅವರು ಇಲಾಖೆಯಲ್ಲಿ ಕರ್ತವ್ಯ ಪಾಲನೆ ಮಾಡುತ್ತಾರೆ’ ಎಂದರು.</p>.<p>ಡಿಸಿಪಿ ಕೆ.ಎಸ್. ಸುಂದರ್ ರಾಜ್ ಮಾತನಾಡಿ, ‘ಪ್ರಶಸ್ತಿಗಳು ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತವೆ. ಇನ್ನೂ ಮುಂದೆ ಪ್ರಶಸ್ತಿ ಪಡೆದವರು ಮೈಯಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಹಲವು ಬಾರಿ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕು’ ಎಂದು ಹೇಳಿದರು.</p>.<p>ಪೊಲೀಸ್ ಸಿಬ್ಬಂದಿ ಎನ್.ಮಹೇಶ್, ಎ.ಬಾಲಸುಬ್ರಹ್ಮಣ್ಯ, ಲಿಂಗರಾಜಪ್ಪ, ಕೆ.ಜೆ.ಸುರೇಶ್, ಕೆ.ಅಜ್ರಾ, ವನಜಾಕ್ಷಿ, ಎಂ.ಡಿ.ಪ್ರದೀಪ್, ಎ.ಎನ್.ಲೋಕೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ರೌಂಡ್ ಟೇಬಲ್ 13ರ ವಲಯ ಅಧ್ಯಕ್ಷ ಶುಶ್ರೂತ್ ಬೆಳಗೂರ್, ಸೂರಜ್ ಕೃಷ್ಣಂ, ಸುನಿಲ್ ಶಂಕರ್, ಲೇಡಿಸ್ ಸರ್ಕಲ್ನ ವಲಯಾಧ್ಯಕ್ಷೆ ನಾಗಶ್ರೀ ನಿಖಿಲೇಶ್, ಮೈಸೂರು ರೌಂಡ್ ಟೇಬಲ್ 21ರ ಅಧ್ಯಕ್ಷ ಅಕ್ಷಯ್ ಕೋನೆರಿ, ಲೇಡಿಸ್ ಸರ್ಕಲ್ -9ರ ಅಧ್ಯಕ್ಷೆ ಎಸ್.ಶ್ರೀನಿಜಾ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-39-46456437</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಪೊಲೀಸ್ ಇಲಾಖೆಯ ಕಡೆ ಬೆರಳು ತೋರಿಸಿ ಮಾತನಾಡುವವರೇ ಜಾಸ್ತಿ. ಪೊಲೀಸರ ಕರ್ತವ್ಯವನ್ನು, ಅವರ ಸೇವೆಯನ್ನು ಗುರುತಿಸಿ ಮಾತನಾಡಿದಾಗ ನಮಗೂ ಪ್ರೋತ್ಸಾಹ ದೊರೆಯುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.</p>.<p>ನಗರದ ವಿಂಡ್ ಚೀಮ್ಸ್ ಸಭಾಂಗಣದಲ್ಲಿ ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್- 9ರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ನೈಟ್ಸ್ ಇನ್ ಖಾಕಿ’ ಪ್ರಶಸ್ತಿ ಪ್ರದಾನ ಉದ್ಘಾಟಿಸಿ ಮಾತನಾಡಿದರು.</p>.<p>‘ಪೊಲೀಸರು ಯಾವ ಹೊತ್ತಿನಲ್ಲೂ ಕರ್ತವ್ಯದ ಕರೆ ಬಂದಾಗ ಸನ್ನದ್ಧರಾಗಿ ಬರುತ್ತಾರೆ. ಆದ್ದರಿಂದ ಈ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದರೆ ಮುಂದೆ ಇನ್ನೂ ಉತ್ತಮವಾಗಿ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ. ಎಲ್ಲ ಧರ್ಮದವರು ಅವರವರ ಧರ್ಮದ ಹಬ್ಬಗಳನ್ನು, ಆಚರಣೆಗಳನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆ ಸಮಯದಲ್ಲಿ ಪೊಲೀಸರು ಬಂದೋಬಸ್ತ್ ಕಾರ್ಯ, ಸಂಚಾರ ನಿರ್ವಹಣೆ ಕೆಲಸ ಮಾಡುತ್ತಾರೆ. ವೈಯಕ್ತಿಕ ಜೀವನವನ್ನು ಬದಿಗಿರಿಸಿ ಅವರು ಇಲಾಖೆಯಲ್ಲಿ ಕರ್ತವ್ಯ ಪಾಲನೆ ಮಾಡುತ್ತಾರೆ’ ಎಂದರು.</p>.<p>ಡಿಸಿಪಿ ಕೆ.ಎಸ್. ಸುಂದರ್ ರಾಜ್ ಮಾತನಾಡಿ, ‘ಪ್ರಶಸ್ತಿಗಳು ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತವೆ. ಇನ್ನೂ ಮುಂದೆ ಪ್ರಶಸ್ತಿ ಪಡೆದವರು ಮೈಯಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಹಲವು ಬಾರಿ ಆಲೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕು’ ಎಂದು ಹೇಳಿದರು.</p>.<p>ಪೊಲೀಸ್ ಸಿಬ್ಬಂದಿ ಎನ್.ಮಹೇಶ್, ಎ.ಬಾಲಸುಬ್ರಹ್ಮಣ್ಯ, ಲಿಂಗರಾಜಪ್ಪ, ಕೆ.ಜೆ.ಸುರೇಶ್, ಕೆ.ಅಜ್ರಾ, ವನಜಾಕ್ಷಿ, ಎಂ.ಡಿ.ಪ್ರದೀಪ್, ಎ.ಎನ್.ಲೋಕೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ರೌಂಡ್ ಟೇಬಲ್ 13ರ ವಲಯ ಅಧ್ಯಕ್ಷ ಶುಶ್ರೂತ್ ಬೆಳಗೂರ್, ಸೂರಜ್ ಕೃಷ್ಣಂ, ಸುನಿಲ್ ಶಂಕರ್, ಲೇಡಿಸ್ ಸರ್ಕಲ್ನ ವಲಯಾಧ್ಯಕ್ಷೆ ನಾಗಶ್ರೀ ನಿಖಿಲೇಶ್, ಮೈಸೂರು ರೌಂಡ್ ಟೇಬಲ್ 21ರ ಅಧ್ಯಕ್ಷ ಅಕ್ಷಯ್ ಕೋನೆರಿ, ಲೇಡಿಸ್ ಸರ್ಕಲ್ -9ರ ಅಧ್ಯಕ್ಷೆ ಎಸ್.ಶ್ರೀನಿಜಾ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-39-46456437</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>