<p><strong>ಮೈಸೂರು</strong>: ‘ಏಕಾಗ್ರತೆ ಸಾಧಿಸಲು ಮತ್ತು ಸಂಯಮದಿಂದ ವರ್ತಿಸಲು ಯೋಗವು ನೆರವಾಗುತ್ತದೆ. ಪೊಲೀಸರು ಯೋಗ– ಧ್ಯಾನವನ್ನು ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.</p>.<p>ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಇಲಾಖೆಯು ಶುಕ್ರವಾರ ಆಯೋಜಿಸಿದ್ದ 5 ದಿನಗಳ ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ನಾಗರಿಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು. ಸಂಯಮ ದಿಂದ ವರ್ತಿಸಲು ಯೋಗವು ರಾಮಬಾಣವಾಗಿದೆ’ ಎಂದರು.</p>.<p>‘ಪೊಲೀಸರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಮಾಜದ ಆರೋಗ್ಯ ಉತ್ತಮವಾಗಿರುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ವ್ಯಾಯಾಮದ ಜೊತೆಗೆ ಯೋಗವನ್ನೂ ಮಾಡಬೇಕು. ಅದರಿಂದ ಎಲ್ಲರಿಗೂ ಒಳ್ಳಿತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕಾನೂನು ಸುವ್ಯವಸ್ಥೆ ಕಾಪಾಡಲು ಮಳೆ– ಬಿಸಿಲೆನ್ನದೆ ಹಗಲು– ರಾತ್ರಿ ದುಡಿಯುವ ಪೊಲೀಸರು ಸದಾ ಒತ್ತಡದಲ್ಲಿರುತ್ತಾರೆ. ಇಂಥ ಒತ್ತಡದ ವಾತಾವರಣವನ್ನು ಯೋಗಾಭ್ಯಾಸ ತಿಳಿಗೊಳಿಸುತ್ತದೆ’ ಎಂದರು.</p>.<p>400 ಪೊಲೀಸರಿಗೆ ತರಬೇತಿ: ಯೋಗಪಟು ಭಾಗೀರಥಿ ಅವರು 400 ಪೊಲೀಸರಿಗೆ ನಿತ್ಯ ಯೋಗ ತರಬೇತಿ ನೀಡಿದ್ದು, ಸೂರ್ಯ ನಮಸ್ಕಾರ, ಸುಖಾಸನ, ತಾಡಾಸನ, ಭುಜಂಗಾಸನ ಮತ್ತು ವಜ್ರಾಸನ ಸೇರಿದಂತೆ ವಿವಿಧ ಆಸನಗಳ ಜೊತೆ ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಿದರು.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಸಿ.ಮಲ್ಲಿಕ್, ಡಿಎಆರ್ ಡಿವೈಎಸ್ಪಿ ವೀರಣ್ಣ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-39-1325532570</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಏಕಾಗ್ರತೆ ಸಾಧಿಸಲು ಮತ್ತು ಸಂಯಮದಿಂದ ವರ್ತಿಸಲು ಯೋಗವು ನೆರವಾಗುತ್ತದೆ. ಪೊಲೀಸರು ಯೋಗ– ಧ್ಯಾನವನ್ನು ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.</p>.<p>ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಇಲಾಖೆಯು ಶುಕ್ರವಾರ ಆಯೋಜಿಸಿದ್ದ 5 ದಿನಗಳ ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ನಾಗರಿಕರೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು. ಸಂಯಮ ದಿಂದ ವರ್ತಿಸಲು ಯೋಗವು ರಾಮಬಾಣವಾಗಿದೆ’ ಎಂದರು.</p>.<p>‘ಪೊಲೀಸರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸಮಾಜದ ಆರೋಗ್ಯ ಉತ್ತಮವಾಗಿರುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ವ್ಯಾಯಾಮದ ಜೊತೆಗೆ ಯೋಗವನ್ನೂ ಮಾಡಬೇಕು. ಅದರಿಂದ ಎಲ್ಲರಿಗೂ ಒಳ್ಳಿತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಕಾನೂನು ಸುವ್ಯವಸ್ಥೆ ಕಾಪಾಡಲು ಮಳೆ– ಬಿಸಿಲೆನ್ನದೆ ಹಗಲು– ರಾತ್ರಿ ದುಡಿಯುವ ಪೊಲೀಸರು ಸದಾ ಒತ್ತಡದಲ್ಲಿರುತ್ತಾರೆ. ಇಂಥ ಒತ್ತಡದ ವಾತಾವರಣವನ್ನು ಯೋಗಾಭ್ಯಾಸ ತಿಳಿಗೊಳಿಸುತ್ತದೆ’ ಎಂದರು.</p>.<p>400 ಪೊಲೀಸರಿಗೆ ತರಬೇತಿ: ಯೋಗಪಟು ಭಾಗೀರಥಿ ಅವರು 400 ಪೊಲೀಸರಿಗೆ ನಿತ್ಯ ಯೋಗ ತರಬೇತಿ ನೀಡಿದ್ದು, ಸೂರ್ಯ ನಮಸ್ಕಾರ, ಸುಖಾಸನ, ತಾಡಾಸನ, ಭುಜಂಗಾಸನ ಮತ್ತು ವಜ್ರಾಸನ ಸೇರಿದಂತೆ ವಿವಿಧ ಆಸನಗಳ ಜೊತೆ ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಿದರು.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಸಿ.ಮಲ್ಲಿಕ್, ಡಿಎಆರ್ ಡಿವೈಎಸ್ಪಿ ವೀರಣ್ಣ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-39-1325532570</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>