<p>ಮೈಸೂರು: ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದಾಗಿ, ಶೀಘ್ರದಲ್ಲೇ ಆಯ್ಕೆಯಾಗಲಿರುವ ‘ಹೊಸ ಮುಖ್ಯಮಂತ್ರಿ ಆಡಳಿತದಲ್ಲಿ’ ಜಿಲ್ಲೆಯ ಯಾರು ಸ್ಥಾನ ಪಡೆಯುತ್ತಾರೆ, ಯಾರ್ಯಾರು ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಅರಂಭವಾಗಿದೆ.</p>.<p>ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ದಟ್ಟವಾಗಿದ್ದು, ಅವರು ಯಾರ್ಯಾರಿಗೆ ಅಧಿಕಾರದ ಅವಕಾಶ ಕಲ್ಪಿಸುತ್ತಾರೆ ಎಂಬ ಕುತೂಹಲವೂ ಇಲ್ಲಿನ ಜನರು ಹಾಗೂ ರಾಜಕೀಯ ವಲಯದವರಲ್ಲಿದೆ.</p>.<p>ಜಿಲ್ಲೆಯಿಂದ ಸಚಿವ ಸಂಪುಟ ಸೇರುವವರಾರು, ಎಷ್ಟು ಮಂದಿಗೆ ಅವಕಾಶ ದೊರೆಯಲಿದೆ, ಯಾವ್ಯಾವ ಖಾತೆಗಳು ಸಿಗಲಿವೆ, ಜಿಲ್ಲಾ ಉಸ್ತುವಾರಿ ಸಚಿವ ಆಗುವವರಾರು ಎಂಬಿತ್ಯಾದಿ ಚರ್ಚೆಗಳು ನಡೆದಿವೆ. ಇವರಲ್ಲಿ ಸಿದ್ದರಾಮಯ್ಯ ಬೆಂಬಲಿಗರ ಪಾಲೆಷ್ಟು, ಡಿಕೆಶಿ ಆಪ್ತರಿಗೆ ದೊರೆಯುವ ಅವಕಾಶಗಳೆಷ್ಟು ಎನ್ನುವ ಪ್ರಶ್ನೆಗಳು ಮೂಡಿವೆ.</p>.<p>ಎಂಟು ಮಂದಿ ‘ಕೈ’ ಶಾಸಕರು: ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 2023ರ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಸಿದ್ದರಾಮಯ್ಯ (ವರುಣ), ಡಾ.ಎಚ್.ಸಿ.ಮಹದೇವಪ್ಪ (ತಿ.ನರಸೀಪುರ), ತನ್ವೀರ್ ಸೇಠ್ (ನರಸಿಂಹರಾಜ), ಕೆ.ವೆಂಕಟೇಶ್ (ಪಿರಿಯಾಪಟ್ಟಣ), ಅನಿಲ್ ಚಿಕ್ಕಮಾದು (ಎಚ್.ಡಿ.ಕೋಟೆ), ದರ್ಶನ್ ಧ್ರುವನಾರಾಯಣ (ನಂಜನಗೂಡು), ಡಿ.ರವಿಶಂಕರ್ (ಕೆ.ಆರ್.ನಗರ) ಹಾಗೂ ಕೆ.ಹರೀಶ್ ಗೌಡ (ಚಾಮರಾಜ) ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ.</p>.<p>ಇವರಲ್ಲಿ ತನ್ವೀರ್ ಸೇಠ್ ಸತತ 6ನೇ ಬಾರಿಗೆ ಗೆದ್ದವರು. ಕೆ.ವೆಂಕಟೇಶ್ (ಪಿರಿಯಾಪಟ್ಟಣ) ಮತ್ತು ಡಾ.ಎಚ್.ಸಿ.ಮಹದೇವಪ್ಪ (ತಿ.ನರಸೀಪುರ) ತಲಾ 6ನೇ ಬಾರಿಗೆ ಗೆದ್ದಿದ್ದಾರೆ. ಈ ಮೂವರಿಗೂ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೇ, ಸಿದ್ದರಾಮಯ್ಯ ಅವರ ಆಪ್ತರೂ ಹೌದು. ಈ ಅನುಭವಿ ಶಾಸಕರಲ್ಲಿ ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಗಳಿಸಿದ್ದರು. ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ, ವೆಂಕಟೇಶ್ ಅವರಿಗೆ ನೆರೆಯ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದರು. ಇವರ ಮುಂದಿನ ಭವಿಷ್ಯವೇನು ಎನ್ನುವ ಪ್ರಶ್ನೆ ಈಗ ಎದುರಾಗಿದೆ.</p>.<p>ಜಿಲ್ಲೆಯ ಪ್ರಾತಿನಿಧ್ಯ ಏನಾಗಲಿದೆ, ಹೊಸಬರಿಗೆ ಮಣೆಯೋ ಅಥವಾ ಅನುಭವಿಗಳಿಗೆ ಹೊಣೆಯೋ ಎಂಬ ಕುತೂಹಲವೂ ಇದೆ.</p>.<p>ಎಷ್ಟು ಅವಕಾಶ?: ತನ್ವೀರ್ ಸೇಠ್ ಅಲ್ಪಸಂಖ್ಯಾತ ಮುಸ್ಲಿಂ ಸಮಾಜಕ್ಕೆ ಸೇರಿದವರು. ಡಿಕೆಶಿ ಆಪ್ತರೂ ಹೌದು. ಅನಿಲ್ ಚಿಕ್ಕಮಾದು ಸತತ 2ನೇ ಬಾರಿಗೆ ಗೆದ್ದವರು. ಅವರು ಪರಿಶಿಷ್ಟ ಪಂಗಡ (ನಾಯಕ) ಸಮಾಜದವರು. ದರ್ಶನ್ ಧ್ರುವನಾರಾಯಣ (ಪರಿಶಿಷ್ಟ ಜಾತಿ), ಹರೀಶ್ಗೌಡ(ಒಕ್ಕಲಿಗ), ಡಿ. ರವಿಶಂಕರ್ (ಕುರುಬ) ಇದೇ ಮೊದಲಿಗೆ ಗೆದ್ದವರು.</p>.<p>ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದುಡಿದ ಮುಖಂಡರು, ಪದಾಧಿಕಾರಿಗಳು ಹಾಗೂ ನಾಯಕರು ನಿಗಮ–ಮಂಡಳಿಗಳ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಸರ್ಕಾರ ರಚನೆಯಾಗಿ ಮೂರು ವರ್ಷಗಳು ಕಳೆದಿದ್ದರೂ ಕಾರ್ಯಕರ್ತರಿಗೆ ಇನ್ನೂ ನಿಗಮ–ಮಂಡಳಿಗಳಲ್ಲಿ ಅವಕಾಶ ಸಿಕ್ಕಿಲ್ಲ. ಕೆಲವು ಮುಖಂಡರಷ್ಟೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ. ಅವರು ಅದೇ ಸ್ಥಾನದಲ್ಲಿ ಮುಂದುವರಿಯುವರೇ ಇಲ್ಲವೇ ಪಲ್ಲಟ ಆಗುವುದೇ ಎಂಬ ಚರ್ಚೆಯೂ ನಡೆದಿದೆ.</p>.<p>‘ಹೊಸ ಮುಖ್ಯಮಂತ್ರಿಯು ಎಲ್ಲ ನೇಮಕಾತಿಯನ್ನೂ ರದ್ದುಪಡಿಸುವ ಸಾಧ್ಯತೆ ಇದೆ ಹಾಗೂ ಹೊಸದಾಗಿ ಪ್ರಕ್ರಿಯೆ ನಡೆಸುತ್ತಾರೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-39-426334867</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದಾಗಿ, ಶೀಘ್ರದಲ್ಲೇ ಆಯ್ಕೆಯಾಗಲಿರುವ ‘ಹೊಸ ಮುಖ್ಯಮಂತ್ರಿ ಆಡಳಿತದಲ್ಲಿ’ ಜಿಲ್ಲೆಯ ಯಾರು ಸ್ಥಾನ ಪಡೆಯುತ್ತಾರೆ, ಯಾರ್ಯಾರು ಹುದ್ದೆ ಕಳೆದುಕೊಳ್ಳುತ್ತಾರೆ ಎಂಬ ಚರ್ಚೆ ಅರಂಭವಾಗಿದೆ.</p>.<p>ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ದಟ್ಟವಾಗಿದ್ದು, ಅವರು ಯಾರ್ಯಾರಿಗೆ ಅಧಿಕಾರದ ಅವಕಾಶ ಕಲ್ಪಿಸುತ್ತಾರೆ ಎಂಬ ಕುತೂಹಲವೂ ಇಲ್ಲಿನ ಜನರು ಹಾಗೂ ರಾಜಕೀಯ ವಲಯದವರಲ್ಲಿದೆ.</p>.<p>ಜಿಲ್ಲೆಯಿಂದ ಸಚಿವ ಸಂಪುಟ ಸೇರುವವರಾರು, ಎಷ್ಟು ಮಂದಿಗೆ ಅವಕಾಶ ದೊರೆಯಲಿದೆ, ಯಾವ್ಯಾವ ಖಾತೆಗಳು ಸಿಗಲಿವೆ, ಜಿಲ್ಲಾ ಉಸ್ತುವಾರಿ ಸಚಿವ ಆಗುವವರಾರು ಎಂಬಿತ್ಯಾದಿ ಚರ್ಚೆಗಳು ನಡೆದಿವೆ. ಇವರಲ್ಲಿ ಸಿದ್ದರಾಮಯ್ಯ ಬೆಂಬಲಿಗರ ಪಾಲೆಷ್ಟು, ಡಿಕೆಶಿ ಆಪ್ತರಿಗೆ ದೊರೆಯುವ ಅವಕಾಶಗಳೆಷ್ಟು ಎನ್ನುವ ಪ್ರಶ್ನೆಗಳು ಮೂಡಿವೆ.</p>.<p>ಎಂಟು ಮಂದಿ ‘ಕೈ’ ಶಾಸಕರು: ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 2023ರ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಸಿದ್ದರಾಮಯ್ಯ (ವರುಣ), ಡಾ.ಎಚ್.ಸಿ.ಮಹದೇವಪ್ಪ (ತಿ.ನರಸೀಪುರ), ತನ್ವೀರ್ ಸೇಠ್ (ನರಸಿಂಹರಾಜ), ಕೆ.ವೆಂಕಟೇಶ್ (ಪಿರಿಯಾಪಟ್ಟಣ), ಅನಿಲ್ ಚಿಕ್ಕಮಾದು (ಎಚ್.ಡಿ.ಕೋಟೆ), ದರ್ಶನ್ ಧ್ರುವನಾರಾಯಣ (ನಂಜನಗೂಡು), ಡಿ.ರವಿಶಂಕರ್ (ಕೆ.ಆರ್.ನಗರ) ಹಾಗೂ ಕೆ.ಹರೀಶ್ ಗೌಡ (ಚಾಮರಾಜ) ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ.</p>.<p>ಇವರಲ್ಲಿ ತನ್ವೀರ್ ಸೇಠ್ ಸತತ 6ನೇ ಬಾರಿಗೆ ಗೆದ್ದವರು. ಕೆ.ವೆಂಕಟೇಶ್ (ಪಿರಿಯಾಪಟ್ಟಣ) ಮತ್ತು ಡಾ.ಎಚ್.ಸಿ.ಮಹದೇವಪ್ಪ (ತಿ.ನರಸೀಪುರ) ತಲಾ 6ನೇ ಬಾರಿಗೆ ಗೆದ್ದಿದ್ದಾರೆ. ಈ ಮೂವರಿಗೂ ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಅಲ್ಲದೇ, ಸಿದ್ದರಾಮಯ್ಯ ಅವರ ಆಪ್ತರೂ ಹೌದು. ಈ ಅನುಭವಿ ಶಾಸಕರಲ್ಲಿ ಮಹದೇವಪ್ಪ ಮತ್ತು ಕೆ.ವೆಂಕಟೇಶ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಗಳಿಸಿದ್ದರು. ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ, ವೆಂಕಟೇಶ್ ಅವರಿಗೆ ನೆರೆಯ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದರು. ಇವರ ಮುಂದಿನ ಭವಿಷ್ಯವೇನು ಎನ್ನುವ ಪ್ರಶ್ನೆ ಈಗ ಎದುರಾಗಿದೆ.</p>.<p>ಜಿಲ್ಲೆಯ ಪ್ರಾತಿನಿಧ್ಯ ಏನಾಗಲಿದೆ, ಹೊಸಬರಿಗೆ ಮಣೆಯೋ ಅಥವಾ ಅನುಭವಿಗಳಿಗೆ ಹೊಣೆಯೋ ಎಂಬ ಕುತೂಹಲವೂ ಇದೆ.</p>.<p>ಎಷ್ಟು ಅವಕಾಶ?: ತನ್ವೀರ್ ಸೇಠ್ ಅಲ್ಪಸಂಖ್ಯಾತ ಮುಸ್ಲಿಂ ಸಮಾಜಕ್ಕೆ ಸೇರಿದವರು. ಡಿಕೆಶಿ ಆಪ್ತರೂ ಹೌದು. ಅನಿಲ್ ಚಿಕ್ಕಮಾದು ಸತತ 2ನೇ ಬಾರಿಗೆ ಗೆದ್ದವರು. ಅವರು ಪರಿಶಿಷ್ಟ ಪಂಗಡ (ನಾಯಕ) ಸಮಾಜದವರು. ದರ್ಶನ್ ಧ್ರುವನಾರಾಯಣ (ಪರಿಶಿಷ್ಟ ಜಾತಿ), ಹರೀಶ್ಗೌಡ(ಒಕ್ಕಲಿಗ), ಡಿ. ರವಿಶಂಕರ್ (ಕುರುಬ) ಇದೇ ಮೊದಲಿಗೆ ಗೆದ್ದವರು.</p>.<p>ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದುಡಿದ ಮುಖಂಡರು, ಪದಾಧಿಕಾರಿಗಳು ಹಾಗೂ ನಾಯಕರು ನಿಗಮ–ಮಂಡಳಿಗಳ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಸರ್ಕಾರ ರಚನೆಯಾಗಿ ಮೂರು ವರ್ಷಗಳು ಕಳೆದಿದ್ದರೂ ಕಾರ್ಯಕರ್ತರಿಗೆ ಇನ್ನೂ ನಿಗಮ–ಮಂಡಳಿಗಳಲ್ಲಿ ಅವಕಾಶ ಸಿಕ್ಕಿಲ್ಲ. ಕೆಲವು ಮುಖಂಡರಷ್ಟೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ. ಅವರು ಅದೇ ಸ್ಥಾನದಲ್ಲಿ ಮುಂದುವರಿಯುವರೇ ಇಲ್ಲವೇ ಪಲ್ಲಟ ಆಗುವುದೇ ಎಂಬ ಚರ್ಚೆಯೂ ನಡೆದಿದೆ.</p>.<p>‘ಹೊಸ ಮುಖ್ಯಮಂತ್ರಿಯು ಎಲ್ಲ ನೇಮಕಾತಿಯನ್ನೂ ರದ್ದುಪಡಿಸುವ ಸಾಧ್ಯತೆ ಇದೆ ಹಾಗೂ ಹೊಸದಾಗಿ ಪ್ರಕ್ರಿಯೆ ನಡೆಸುತ್ತಾರೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-39-426334867</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>