<p><strong>ಮೈಸೂರು</strong>: ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ರೈಲು ನಿಲ್ದಾಣದಲ್ಲಿನ ಬಳಕೆಗಾಗಿ 25 ನೀರಿನ ಮಡಕೆಗಳು ಹಾಗೂ ವೃದ್ಧರು, ಅಂಗವಿಕಲರ ಅನುಕೂಲಕ್ಕಾಗಿ 10 ಗಾಲಿ ಕುರ್ಚಿಗಳನ್ನು ದೇಣಿಗೆ ನೀಡಲಾಯಿತು.</p><p>ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ಎಂ ಮುದಿತ್ ಮಿತ್ತಲ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. </p><p>‘ಈ ಗಾಲಿ ಕುರ್ಚಿಗಳಿಂದ ವೃದ್ಧರು ಹಾಗೂ ಅಂಗವಿಕಲರಿಗೆ ಹೆಚ್ಚಿನ ಸಹಾಯವಾಗಲಿದೆ. ಇವು ಸುಲಭ ಸಂಚಾರ ಮತ್ತು ಪ್ರವೇಶ ಸೌಲಭ್ಯವನ್ನು ಒದಗಿಸಲಿವೆ. ಮಡಕೆಗಳಲ್ಲಿ ಪ್ರಯಾಣಿಕರಿಗೆ ಶುದ್ಧ ನೀರನ್ನು ಒದಗಿಸಲಾಗುವುದು’ ಎಂದು ಮಿತ್ತಲ್ ತಿಳಿಸಿದರು.</p><p>‘ಈ ದೇಣಿಗೆಯು ಎರಡೂ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೊಡುಗೆಯು ಪ್ರಯಾಣಿಕರ ಸೌಕರ್ಯ ಮತ್ತು ಒಟ್ಟಾರೆ ಸೇವಾ ಮಟ್ಟವನ್ನು ಉತ್ತಮಗೊಳಿಸುವ ನಿರೀಕ್ಷೆಯಿದೆ’ ಎಂದರು.</p><p>ಎಡಿಆರ್ಎಂ ಶಮ್ಮಾಸ್ ಹಮೀದ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತೇಶ್ವರ ಜೆ., ಝಡ್ಆರ್ಯುಸಿಸಿ ಹಾಗೂ ಡಿಆರ್ಯುಸಿಸಿ ಸದಸ್ಯರು, ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ರೈಲು ನಿಲ್ದಾಣದಲ್ಲಿನ ಬಳಕೆಗಾಗಿ 25 ನೀರಿನ ಮಡಕೆಗಳು ಹಾಗೂ ವೃದ್ಧರು, ಅಂಗವಿಕಲರ ಅನುಕೂಲಕ್ಕಾಗಿ 10 ಗಾಲಿ ಕುರ್ಚಿಗಳನ್ನು ದೇಣಿಗೆ ನೀಡಲಾಯಿತು.</p><p>ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ಎಂ ಮುದಿತ್ ಮಿತ್ತಲ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. </p><p>‘ಈ ಗಾಲಿ ಕುರ್ಚಿಗಳಿಂದ ವೃದ್ಧರು ಹಾಗೂ ಅಂಗವಿಕಲರಿಗೆ ಹೆಚ್ಚಿನ ಸಹಾಯವಾಗಲಿದೆ. ಇವು ಸುಲಭ ಸಂಚಾರ ಮತ್ತು ಪ್ರವೇಶ ಸೌಲಭ್ಯವನ್ನು ಒದಗಿಸಲಿವೆ. ಮಡಕೆಗಳಲ್ಲಿ ಪ್ರಯಾಣಿಕರಿಗೆ ಶುದ್ಧ ನೀರನ್ನು ಒದಗಿಸಲಾಗುವುದು’ ಎಂದು ಮಿತ್ತಲ್ ತಿಳಿಸಿದರು.</p><p>‘ಈ ದೇಣಿಗೆಯು ಎರಡೂ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕೊಡುಗೆಯು ಪ್ರಯಾಣಿಕರ ಸೌಕರ್ಯ ಮತ್ತು ಒಟ್ಟಾರೆ ಸೇವಾ ಮಟ್ಟವನ್ನು ಉತ್ತಮಗೊಳಿಸುವ ನಿರೀಕ್ಷೆಯಿದೆ’ ಎಂದರು.</p><p>ಎಡಿಆರ್ಎಂ ಶಮ್ಮಾಸ್ ಹಮೀದ್, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಲೋಹಿತೇಶ್ವರ ಜೆ., ಝಡ್ಆರ್ಯುಸಿಸಿ ಹಾಗೂ ಡಿಆರ್ಯುಸಿಸಿ ಸದಸ್ಯರು, ಮೈಸೂರು ವಾಣಿಜ್ಯ ಮಂಡಳಿ ಮತ್ತು ಜೈನ್ ಮಿಲನ್ ಚಾರಿಟಬಲ್ ಟ್ರಸ್ಟ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>