<p>ಮೈಸೂರು: ಡಾ. ರಾಜಕುಮಾರ್ ಉದ್ಯಾನದಲ್ಲಿರುವ ರಾಜ್ಕುಮಾರ್ ಪ್ರತಿಮೆಗೆ ಹೂವಿನ ಹಾರ ಹಾಕಲು ಅಳವಡಿಸಿರುವ ಏಣಿಯನ್ನು ಜಯರಾಮ್ ಸಿಪಿಎಂ ಶನಿವಾರ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ‘ರಾಜ್ಕುಮಾರ್ ತಮ್ಮ ಅಭಿನಯದಿಂದ ಹೆಸರು ಮಾಡಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದರು. ಅವರ ಹೆಸರಿಗೆ ಧಕ್ಕೆಯಾಗದಂತೆ, ಕೆಲಸ ಮಾಡೋಣ’ ಎಂದರು.</p>.<p>ಏಣಿಯನ್ನು ಕೊಡುಗೆಯಾಗಿ ನೀಡಿದ ಡಾ. ರಾಜ್ ಎಲ್ಐಸಿ ಕುಟುಂಬದ ಸಿದ್ದಪ್ಪ, ‘ಈ ಉದ್ಯಾನದಲ್ಲಿ ಪ್ರತಿಮೆಗೆ ಹಾರ ಹಾಕಲು ಬಹಳ ಕಷ್ಟಪಡುತ್ತಿದ್ದರು.ಹೀಗಾಗಿ ಏಣಿಯನ್ನು ನೀಡಿದ್ದೇವೆ’ ಎಂದು ತಿಳಿಸಿದರು.</p>.<p>ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಮಾತನಾಡಿ, ‘ರಾಜ್ಕುಮಾರ್ ಮೈಸೂರಿಗೆ ಬಂದಾಗ ಜೊತೆಗೆ ಓಡಾಡುತ್ತಿದ್ದವರು ಈಗ ಇತ್ತ ತಿರುಗಿಯೂ ನೋಡುತ್ತಿಲ್ಲ. ಅವರೆಲ್ಲ ರಾಜ್ಕುಮಾರ್ ಅವರಿಂದ ಬಹಳಷ್ಟು ಸಹಾಯ ಪಡೆದು ಅವರ ಜಯಂತಿಯನ್ನೂ ಮಾಡುವುದಿಲ್ಲ’ ಎಂದು ಹೇಳಿದರು.</p>.<p>ಡಾ.ರಾಜ್ ಕನ್ನಡ ಸೇನೆ ಅಧ್ಯಕ್ಷ ಮಹದೇವ ಸ್ವಾಮಿ, ಗೋವಿಂದರಾಜು, ಹೊನಕೆರೆ ಸ್ವಾಮಿ, ನಾಗ ನಂಜಪ್ಪ, ಪ್ಯಾಲೇಸ್ ಬಾಬು, ರವಿ ನಾಲ ಬೀದಿ, ಹರೀಶ್, ಚಾಮರಾಜು ಮಂಟಗಳ್ಳಿ, ಸುರೇಶ್, ಶಿವು ಗೌಡ, ಬಿಡ ಬಾಬು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-39-993661535</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಡಾ. ರಾಜಕುಮಾರ್ ಉದ್ಯಾನದಲ್ಲಿರುವ ರಾಜ್ಕುಮಾರ್ ಪ್ರತಿಮೆಗೆ ಹೂವಿನ ಹಾರ ಹಾಕಲು ಅಳವಡಿಸಿರುವ ಏಣಿಯನ್ನು ಜಯರಾಮ್ ಸಿಪಿಎಂ ಶನಿವಾರ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ‘ರಾಜ್ಕುಮಾರ್ ತಮ್ಮ ಅಭಿನಯದಿಂದ ಹೆಸರು ಮಾಡಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದರು. ಅವರ ಹೆಸರಿಗೆ ಧಕ್ಕೆಯಾಗದಂತೆ, ಕೆಲಸ ಮಾಡೋಣ’ ಎಂದರು.</p>.<p>ಏಣಿಯನ್ನು ಕೊಡುಗೆಯಾಗಿ ನೀಡಿದ ಡಾ. ರಾಜ್ ಎಲ್ಐಸಿ ಕುಟುಂಬದ ಸಿದ್ದಪ್ಪ, ‘ಈ ಉದ್ಯಾನದಲ್ಲಿ ಪ್ರತಿಮೆಗೆ ಹಾರ ಹಾಕಲು ಬಹಳ ಕಷ್ಟಪಡುತ್ತಿದ್ದರು.ಹೀಗಾಗಿ ಏಣಿಯನ್ನು ನೀಡಿದ್ದೇವೆ’ ಎಂದು ತಿಳಿಸಿದರು.</p>.<p>ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಮಾತನಾಡಿ, ‘ರಾಜ್ಕುಮಾರ್ ಮೈಸೂರಿಗೆ ಬಂದಾಗ ಜೊತೆಗೆ ಓಡಾಡುತ್ತಿದ್ದವರು ಈಗ ಇತ್ತ ತಿರುಗಿಯೂ ನೋಡುತ್ತಿಲ್ಲ. ಅವರೆಲ್ಲ ರಾಜ್ಕುಮಾರ್ ಅವರಿಂದ ಬಹಳಷ್ಟು ಸಹಾಯ ಪಡೆದು ಅವರ ಜಯಂತಿಯನ್ನೂ ಮಾಡುವುದಿಲ್ಲ’ ಎಂದು ಹೇಳಿದರು.</p>.<p>ಡಾ.ರಾಜ್ ಕನ್ನಡ ಸೇನೆ ಅಧ್ಯಕ್ಷ ಮಹದೇವ ಸ್ವಾಮಿ, ಗೋವಿಂದರಾಜು, ಹೊನಕೆರೆ ಸ್ವಾಮಿ, ನಾಗ ನಂಜಪ್ಪ, ಪ್ಯಾಲೇಸ್ ಬಾಬು, ರವಿ ನಾಲ ಬೀದಿ, ಹರೀಶ್, ಚಾಮರಾಜು ಮಂಟಗಳ್ಳಿ, ಸುರೇಶ್, ಶಿವು ಗೌಡ, ಬಿಡ ಬಾಬು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-39-993661535</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>