<p><strong>ಮೈಸೂರು:</strong> ನಗರದ ಶ್ರೀರಾಮಪೇಟೆಯ ಶ್ರೀರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ನಿಂದ ಹಮ್ಮಿಕೊಂಡಿರುವ 136ನೇ ಶ್ರೀರಾಮೋತ್ಸವ ಅಂಗವಾಗಿ ಆಲಮ್ಮನವರ ಛತ್ರದಲ್ಲಿ ಏರ್ಪಡಿಸಿರುವ ಸಂಗೀತೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.</p><p>ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಧಾಟಿಸಿ, ಸ್ಮರಣಸಂಚಿಕೆ ಬಿಡುಗಡೆ ಮಾಡಿದರು. ಟ್ರಸ್ಟ್ ಅಧ್ಯಕ್ಷ ಎನ್.ಶ್ರೀರಾಮ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಗದೀಶ್ ಹಾಗೂ ಖಜಾಂಚಿ ಪದ್ಮಾ ಅನಂತ್ ಪಾಲ್ಗೊಂಡಿದ್ದರು. ನಿರಾಮಯ ಹಾಗೂ ಸುಬ್ಬುಲಕ್ಷ್ಮಿ ಪ್ರಾರ್ಥಿಸಿದರು. ಕಾರ್ಯದರ್ಶಿ ಫಣೀಂದ್ರ ಸ್ವಾಗತಿಸಿದರು. ಗುರುಪ್ರಸಾದ್ ವಂದಿಸಿದರು. ಜನಾರ್ಧನ್ ನಿರೂಪಿಸಿದರು. </p><p>ಬಳಿಕ, ಸೂರ್ಯಗಾಯತ್ರಿ ಅವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಪಿಟೀಲು- ಪಿ.ವಿ. ಸುನೀಲ್ ಕುಮಾರ್, ಮೃದಂಗ- ಪಿ.ವಿ. ಅನಿಲ್ಕುಮಾರ್, ತಬಲ- ಜಗದೀಶ್ ಕುರ್ತುಕೋಟಿ, ರಿದಂ ಪ್ಯಾಡ್- ಪ್ರಣವ ದತ್ ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.</p><p>ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಒಂಟಿಕೊಪ್ಪಲು ಪ್ರಸನ್ನ ವಿದ್ಯಾಗಣಪತಿ ಸಮಿತಿಯ ಸಿ.ಆರ್. ಹಿಮಾಂಶು ಪಾಲ್ಗೊಂಡಿದ್ದರು. ಕೆಲ ವಿದೇಶಿಯರು ಕೂಡ ಪ್ರೇಕ್ಷಕರಾಗಿ ಭಾಗವಹಿಸಿದ್ದು ಗಮನಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದ ಶ್ರೀರಾಮಪೇಟೆಯ ಶ್ರೀರಾಮಾಭ್ಯುದಯ ಸಭಾ ಚಾರಿಟಬಲ್ ಟ್ರಸ್ಟ್ನಿಂದ ಹಮ್ಮಿಕೊಂಡಿರುವ 136ನೇ ಶ್ರೀರಾಮೋತ್ಸವ ಅಂಗವಾಗಿ ಆಲಮ್ಮನವರ ಛತ್ರದಲ್ಲಿ ಏರ್ಪಡಿಸಿರುವ ಸಂಗೀತೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.</p><p>ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಧಾಟಿಸಿ, ಸ್ಮರಣಸಂಚಿಕೆ ಬಿಡುಗಡೆ ಮಾಡಿದರು. ಟ್ರಸ್ಟ್ ಅಧ್ಯಕ್ಷ ಎನ್.ಶ್ರೀರಾಮ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಗದೀಶ್ ಹಾಗೂ ಖಜಾಂಚಿ ಪದ್ಮಾ ಅನಂತ್ ಪಾಲ್ಗೊಂಡಿದ್ದರು. ನಿರಾಮಯ ಹಾಗೂ ಸುಬ್ಬುಲಕ್ಷ್ಮಿ ಪ್ರಾರ್ಥಿಸಿದರು. ಕಾರ್ಯದರ್ಶಿ ಫಣೀಂದ್ರ ಸ್ವಾಗತಿಸಿದರು. ಗುರುಪ್ರಸಾದ್ ವಂದಿಸಿದರು. ಜನಾರ್ಧನ್ ನಿರೂಪಿಸಿದರು. </p><p>ಬಳಿಕ, ಸೂರ್ಯಗಾಯತ್ರಿ ಅವರು ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಪಿಟೀಲು- ಪಿ.ವಿ. ಸುನೀಲ್ ಕುಮಾರ್, ಮೃದಂಗ- ಪಿ.ವಿ. ಅನಿಲ್ಕುಮಾರ್, ತಬಲ- ಜಗದೀಶ್ ಕುರ್ತುಕೋಟಿ, ರಿದಂ ಪ್ಯಾಡ್- ಪ್ರಣವ ದತ್ ಪಕ್ಕವಾದ್ಯದಲ್ಲಿ ಸಾಥ್ ನೀಡಿದರು.</p><p>ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಒಂಟಿಕೊಪ್ಪಲು ಪ್ರಸನ್ನ ವಿದ್ಯಾಗಣಪತಿ ಸಮಿತಿಯ ಸಿ.ಆರ್. ಹಿಮಾಂಶು ಪಾಲ್ಗೊಂಡಿದ್ದರು. ಕೆಲ ವಿದೇಶಿಯರು ಕೂಡ ಪ್ರೇಕ್ಷಕರಾಗಿ ಭಾಗವಹಿಸಿದ್ದು ಗಮನಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>