<p><strong>ಮೈಸೂರು:</strong> ಜೈಲಿನಲ್ಲಿ ಬೆಳೆದ ಸ್ನೇಹವು ದರೋಡೆ ಮಾಡುವವರೆಗೆ ಬೆಳೆದು, ಕೊನೆಗೆ ಅವರೆಲ್ಲರೂ ಮತ್ತೆ ಜೈಲು ಪಾಲಾದ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.</p>.<p>ಗದ್ದಿಗೆ ರಸ್ತೆಯ ಪೆಟ್ರೋಲ್ ಬಂಕ್ಗೆ ಫೆ.12ರಂದು ರಾತ್ರಿ 10ಕ್ಕೆ ನುಗ್ಗಿದ್ದ ಐವರು, ಅಲ್ಲಿದ್ದ ಇಬ್ಬರು ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿದ್ದರು. ಅವರಲ್ಲಿದ್ದ ₹ 15,300 ಕಸಿದು ಪರಾರಿಯಾಗಿದ್ದರು. ಬಂಕ್ ಮಾಲೀಕರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲೆಯ ಲಕ್ಷ್ಮಣ್ನನ್ನು ಮಾ.6ರಂದು ವಶಕ್ಕೆ ಪಡೆಯುತ್ತಾರೆ. ಈ ಒಬ್ಬ ಆರೋಪಿಯ ಬಂಧನದಿಂದ ಕುತೂಹಲಕಾರಿ ಅಂಶವೊಂದು ಬಯಲಾಗುತ್ತದೆ. ಅದುವೇ ಜೈಲಿನಲ್ಲಿ ಬೆಳೆದ ಗೆಳೆತನದಿಂದ ದರೋಡೆಗೆ ಇಳಿದ ಕಳ್ಳರು ಮತ್ತೆ ಪೊಲೀಸರ ಬಲೆಗೆ ಬೀಳುತ್ತಾರೆ.</p>.<p>ಈ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟರು.</p>.<p>ಲಕ್ಷ್ಮಣ್ ಹಿಂದೆ ಮಂಡ್ಯ ಜಿಲ್ಲೆಯ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿಯಾಗಿದ್ದ. ಅಲ್ಲಿ ದರೋಡೆ, ಕೊಲೆ ಹಾಗೂ ಪೋಕ್ಸೊ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ. ಅಲ್ಲಿ ಆತನಿಗೆ ಹಾಸನ ಜಿಲ್ಲೆಯ ಕಿರಣ, ಹುಣಸೂರು ತಾಲ್ಲೂಕಿನ ಉಮೇಶ್, ಚನ್ನಪಟ್ಟಣದ ರಕ್ಷಿತ್ ಮತ್ತು ಜಯಂತ್ನ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಈ ಸ್ನೇಹಿತರ ತಂಡವು ಕೃತ್ಯಕ್ಕೆ ಯೋಜನೆ ರೂಪಿಸಿ ದರೋಡೆ ಮಾಡುತ್ತದೆ.</p>.<p>‘ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಿಬ್ಬರು ಬೆಂಗಳೂರಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಹಳ್ಳಿಯಲ್ಲಿ ಓಲಾ ಕಾರು ಬುಕ್ ಮಾಡಿ, ದಾರಿ ಮಧ್ಯೆ ಚಾಲಕನಿಗೆ ಚಾಕು ತೋರಿಸಿ ಹಣ ದೋಚಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ’ ಎಂದು ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.</p>.<p><strong>₹29.7 ಲಕ್ಷ ಮೌಲ್ಯದ ಸ್ವತ್ತು ಪತ್ತೆ: ‘</strong>ಜಿಲ್ಲಾ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಎರಡು ತಿಂಗಳಲ್ಲಿ ₹ 29,97,788 ಮೌಲ್ಯದ ಕಳುವಾದ ವಸ್ತುಗಳನ್ನು ಪತ್ತೆ ಮಾಡಿದ್ದೇವೆ’ ಎಂದು ಅವರು ವಿವರಿಸಿದರು.</p>.<p>‘1 ಡಕಾಯಿತಿ, 2 ಸುಲಿಗೆ, 7 ಮನೆ ಕಳವು, 5 ವಾಹನ ಕಳವು, 8 ಸಾಮಾನ್ಯ ಕಳವು, 1 ಜಾನುವಾರು ಪ್ರಕರಣ ಪತ್ತೆ ಮಾಡಲಾಗಿದೆ. 279 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿ, ₹ 3.76 ಲಕ್ಷ ಹಾಗೂ ₹ 14.33 ಲಕ್ಷ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ’ ಎಂದರು.</p>.<p><strong>ಎನ್ಡಿಪಿಎಸ್ ಪ್ರಕರಣ:</strong> ‘ಇಲಾಖೆಯಿಂದ ಸನ್ಮಿತ್ರ ಯೋಜನೆ ಜಾರಿ ಮಾಡಲಾಗಿದ್ದು, ಸುಮಾರು ಐವತ್ತು ಸಿಬ್ಬಂದಿ ಡ್ರಗ್ ಪೆಡ್ಲರ್ ಹಾಗೂ ಮಾದಕ ವಸ್ತು ಸೇವನೆ ಮಾಡುವವರ ಚಲನವಲನದ ಮೇಲೆ ಗಮನ ಇಟ್ಟಿದ್ದಾರೆ. ಮಾದಕ ವಸ್ತು ಸೇವನೆ ಕುರಿತು 44 ಪ್ರಕರಣ ಸೇರಿದಂತೆ ಒಟ್ಟು 55 ಎನ್ಡಿಪಿಎಸ್ ಪ್ರಕರಣ ದಾಖಲಾಗಿದೆ. 20ರಿಂದ 30 ವರ್ಷದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ’ ಎಂದು ಹೇಳಿದರು.</p>.<p>ಎಎಸ್ಪಿಗಳಾದ ಮಲ್ಲಿಕ್ ಹಾಗೂ ನಾಗೇಶ್ ಭಾಗವಹಿಸಿದ್ದರು.</p>.<p><strong>ದರೋಡೆ: ಚಿನ್ನ ವಶ ಪಡಿಸುವುದೇ ಸವಾಲು</strong></p><p> ‘ಹುಣಸೂರಿನಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಬಿಹಾರ್ನ ಎಸ್ಟಿಎಫ್ (ಸ್ಪೆಷಲ್ ಟಾಸ್ಕ್ ಫೋರ್ಸ್) ಸಹಾಯದಲ್ಲಿ ಮತ್ತಿಬ್ಬರನ್ನು ಬಂಧಿಸಿದ್ದೇವೆ. 8 ಕೆ.ಜಿ ಚಿನ್ನ ಪತ್ತೆಯೇ ಸವಾಲಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.</p><p> ‘ಪ್ರಕರಣದಲ್ಲಿ ಆಂಧ್ರದ ಒಬ್ಬ ಹಾಗೂ 10 ಬಿಹಾರದ ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಇವರಲ್ಲಿ ಚೋಟುಸಿಂಗ್ ಪಂಕಜ್ ಮಹಮದ್ ಅರ್ಮನ್ ಸೋನುಸಿಂಗ್ ಬಂಧಿಸಲಾಗಿದೆ. ಈವರೆಗೆ 60 ಗ್ರಾಂ ಚಿನ್ನವನ್ನಷ್ಟೇ ವಶಕ್ಕೆ ಪಡೆಯಲಾಗಿದೆ. ಒಬ್ಬನನ್ನು ಒಡಿಶಾದ ಕಠಕ್ನ ಪೊಲೀಸರು ಬಂಧಿಸಿದ್ದಾರೆ.</p><p> ದರೋಡೆ ಮಾಡಿದ ಚಿನ್ನವನ್ನು ಇಬ್ಬರು ಆರೋಪಿಗಳು ಕೊಂಡೊಯ್ದಿದ್ದಾರೆ. ಅವರನ್ನು ಬಂಧಿಸಿದರೆ ಚಿನ್ನ ಏನು ಮಾಡಿದ್ದಾರೆಂದು ತಿಳಿಯುತ್ತದೆ. ಅಂತರರಾಜ್ಯ ಕಳ್ಳರನ್ನು ಬಂಧಿಸಲು ಆಂಧ್ರ ಬಿಹಾರ ಒಡಿಶಾ ಮತ್ತು ಕರ್ನಾಟಕದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಜೈಲಿನಲ್ಲಿ ಬೆಳೆದ ಸ್ನೇಹವು ದರೋಡೆ ಮಾಡುವವರೆಗೆ ಬೆಳೆದು, ಕೊನೆಗೆ ಅವರೆಲ್ಲರೂ ಮತ್ತೆ ಜೈಲು ಪಾಲಾದ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.</p>.<p>ಗದ್ದಿಗೆ ರಸ್ತೆಯ ಪೆಟ್ರೋಲ್ ಬಂಕ್ಗೆ ಫೆ.12ರಂದು ರಾತ್ರಿ 10ಕ್ಕೆ ನುಗ್ಗಿದ್ದ ಐವರು, ಅಲ್ಲಿದ್ದ ಇಬ್ಬರು ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿದ್ದರು. ಅವರಲ್ಲಿದ್ದ ₹ 15,300 ಕಸಿದು ಪರಾರಿಯಾಗಿದ್ದರು. ಬಂಕ್ ಮಾಲೀಕರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲೆಯ ಲಕ್ಷ್ಮಣ್ನನ್ನು ಮಾ.6ರಂದು ವಶಕ್ಕೆ ಪಡೆಯುತ್ತಾರೆ. ಈ ಒಬ್ಬ ಆರೋಪಿಯ ಬಂಧನದಿಂದ ಕುತೂಹಲಕಾರಿ ಅಂಶವೊಂದು ಬಯಲಾಗುತ್ತದೆ. ಅದುವೇ ಜೈಲಿನಲ್ಲಿ ಬೆಳೆದ ಗೆಳೆತನದಿಂದ ದರೋಡೆಗೆ ಇಳಿದ ಕಳ್ಳರು ಮತ್ತೆ ಪೊಲೀಸರ ಬಲೆಗೆ ಬೀಳುತ್ತಾರೆ.</p>.<p>ಈ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟರು.</p>.<p>ಲಕ್ಷ್ಮಣ್ ಹಿಂದೆ ಮಂಡ್ಯ ಜಿಲ್ಲೆಯ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿಯಾಗಿದ್ದ. ಅಲ್ಲಿ ದರೋಡೆ, ಕೊಲೆ ಹಾಗೂ ಪೋಕ್ಸೊ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ. ಅಲ್ಲಿ ಆತನಿಗೆ ಹಾಸನ ಜಿಲ್ಲೆಯ ಕಿರಣ, ಹುಣಸೂರು ತಾಲ್ಲೂಕಿನ ಉಮೇಶ್, ಚನ್ನಪಟ್ಟಣದ ರಕ್ಷಿತ್ ಮತ್ತು ಜಯಂತ್ನ ಪರಿಚಯವಾಗುತ್ತದೆ. ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಈ ಸ್ನೇಹಿತರ ತಂಡವು ಕೃತ್ಯಕ್ಕೆ ಯೋಜನೆ ರೂಪಿಸಿ ದರೋಡೆ ಮಾಡುತ್ತದೆ.</p>.<p>‘ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಿಬ್ಬರು ಬೆಂಗಳೂರಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಹಳ್ಳಿಯಲ್ಲಿ ಓಲಾ ಕಾರು ಬುಕ್ ಮಾಡಿ, ದಾರಿ ಮಧ್ಯೆ ಚಾಲಕನಿಗೆ ಚಾಕು ತೋರಿಸಿ ಹಣ ದೋಚಿದ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ’ ಎಂದು ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.</p>.<p><strong>₹29.7 ಲಕ್ಷ ಮೌಲ್ಯದ ಸ್ವತ್ತು ಪತ್ತೆ: ‘</strong>ಜಿಲ್ಲಾ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಎರಡು ತಿಂಗಳಲ್ಲಿ ₹ 29,97,788 ಮೌಲ್ಯದ ಕಳುವಾದ ವಸ್ತುಗಳನ್ನು ಪತ್ತೆ ಮಾಡಿದ್ದೇವೆ’ ಎಂದು ಅವರು ವಿವರಿಸಿದರು.</p>.<p>‘1 ಡಕಾಯಿತಿ, 2 ಸುಲಿಗೆ, 7 ಮನೆ ಕಳವು, 5 ವಾಹನ ಕಳವು, 8 ಸಾಮಾನ್ಯ ಕಳವು, 1 ಜಾನುವಾರು ಪ್ರಕರಣ ಪತ್ತೆ ಮಾಡಲಾಗಿದೆ. 279 ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿ, ₹ 3.76 ಲಕ್ಷ ಹಾಗೂ ₹ 14.33 ಲಕ್ಷ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದೆ’ ಎಂದರು.</p>.<p><strong>ಎನ್ಡಿಪಿಎಸ್ ಪ್ರಕರಣ:</strong> ‘ಇಲಾಖೆಯಿಂದ ಸನ್ಮಿತ್ರ ಯೋಜನೆ ಜಾರಿ ಮಾಡಲಾಗಿದ್ದು, ಸುಮಾರು ಐವತ್ತು ಸಿಬ್ಬಂದಿ ಡ್ರಗ್ ಪೆಡ್ಲರ್ ಹಾಗೂ ಮಾದಕ ವಸ್ತು ಸೇವನೆ ಮಾಡುವವರ ಚಲನವಲನದ ಮೇಲೆ ಗಮನ ಇಟ್ಟಿದ್ದಾರೆ. ಮಾದಕ ವಸ್ತು ಸೇವನೆ ಕುರಿತು 44 ಪ್ರಕರಣ ಸೇರಿದಂತೆ ಒಟ್ಟು 55 ಎನ್ಡಿಪಿಎಸ್ ಪ್ರಕರಣ ದಾಖಲಾಗಿದೆ. 20ರಿಂದ 30 ವರ್ಷದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ’ ಎಂದು ಹೇಳಿದರು.</p>.<p>ಎಎಸ್ಪಿಗಳಾದ ಮಲ್ಲಿಕ್ ಹಾಗೂ ನಾಗೇಶ್ ಭಾಗವಹಿಸಿದ್ದರು.</p>.<p><strong>ದರೋಡೆ: ಚಿನ್ನ ವಶ ಪಡಿಸುವುದೇ ಸವಾಲು</strong></p><p> ‘ಹುಣಸೂರಿನಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಬಿಹಾರ್ನ ಎಸ್ಟಿಎಫ್ (ಸ್ಪೆಷಲ್ ಟಾಸ್ಕ್ ಫೋರ್ಸ್) ಸಹಾಯದಲ್ಲಿ ಮತ್ತಿಬ್ಬರನ್ನು ಬಂಧಿಸಿದ್ದೇವೆ. 8 ಕೆ.ಜಿ ಚಿನ್ನ ಪತ್ತೆಯೇ ಸವಾಲಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.</p><p> ‘ಪ್ರಕರಣದಲ್ಲಿ ಆಂಧ್ರದ ಒಬ್ಬ ಹಾಗೂ 10 ಬಿಹಾರದ ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದೆ. ಇವರಲ್ಲಿ ಚೋಟುಸಿಂಗ್ ಪಂಕಜ್ ಮಹಮದ್ ಅರ್ಮನ್ ಸೋನುಸಿಂಗ್ ಬಂಧಿಸಲಾಗಿದೆ. ಈವರೆಗೆ 60 ಗ್ರಾಂ ಚಿನ್ನವನ್ನಷ್ಟೇ ವಶಕ್ಕೆ ಪಡೆಯಲಾಗಿದೆ. ಒಬ್ಬನನ್ನು ಒಡಿಶಾದ ಕಠಕ್ನ ಪೊಲೀಸರು ಬಂಧಿಸಿದ್ದಾರೆ.</p><p> ದರೋಡೆ ಮಾಡಿದ ಚಿನ್ನವನ್ನು ಇಬ್ಬರು ಆರೋಪಿಗಳು ಕೊಂಡೊಯ್ದಿದ್ದಾರೆ. ಅವರನ್ನು ಬಂಧಿಸಿದರೆ ಚಿನ್ನ ಏನು ಮಾಡಿದ್ದಾರೆಂದು ತಿಳಿಯುತ್ತದೆ. ಅಂತರರಾಜ್ಯ ಕಳ್ಳರನ್ನು ಬಂಧಿಸಲು ಆಂಧ್ರ ಬಿಹಾರ ಒಡಿಶಾ ಮತ್ತು ಕರ್ನಾಟಕದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>