<p><strong>ಮೈಸೂರು:</strong> ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಎಸ್ಎಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು. ಪ್ರಥಮ ಭಾಷೆ ಪರೀಕ್ಷೆ ಸುಲಭವಾದ್ದರಿಂದ ವಿದ್ಯಾರ್ಥಿಗಳ ಮೊಗದಲ್ಲಿ ಖುಷಿ ಇತ್ತು. ಸಂತಸದಿಂದ ಪರೀಕ್ಷಾ ಕೇಂದ್ರದಿಂದ ಹೊರ ಬಂದರು.</p>.<p>136 ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ, ಉರ್ದು, ಸಂಸ್ಕೃತ ಸೇರಿದಂತೆ ಪ್ರಥಮ ಭಾಷೆಯನ್ನು ಆಯ್ಕೆ ಮಾಡಿಕೊಂಡು ನೋಂದಾಯಿಸಿದ್ದ ಒಟ್ಟು 36,392 ವಿದ್ಯಾರ್ಥಿಗಳಲ್ಲಿ 398 ಮಂದಿ ಗೈರು ಹಾಜರಾದರು.</p>.<p>ಮೊದಲ ದಿನ ಬೆಳಿಗ್ಗೆ 9ರಿಂದಲೇ ಪರೀಕ್ಷಾ ಕೇಂದ್ರಗಳತ್ತ ಮಕ್ಕಳು ಬಂದರು. ನಗರದ ಕೃಷ್ಣವಿಲಾಸ ರಸ್ತೆಯ ಮಹಾರಾಣಿ ಸರ್ಕಾರಿ ಪಿಯು ಕಾಲೇಜು ಕೇಂದ್ರಕ್ಕೆ ಹಾಜರಾದ ವಿದ್ಯಾರ್ಥಿಗಳಿಗೆ ಮೈಸೂರು ರಕ್ಷಣಾ ವೇದಿಕೆ ಸದಸ್ಯರು ಗುಲಾಬಿ ಹೂ ನೀಡಿ ಸ್ವಾಗತಿಸಿ, ಶುಭ ಕೋರಿದರು. </p>.<p>ಕೇಂದ್ರದ ಆವರಣದಲ್ಲಿ ಹಾಕಿದ್ದ ನೋಟಿಸ್ ಬೋರ್ಡ್ ನೋಡಿ ತಾವು ಬರೆಯಲಿರುವ ಕೊಠಡಿ ಸಂಖ್ಯೆ ಖಾತ್ರಿ ಮಾಡಿಕೊಂಡರು. ಕೆಲ ವಿದ್ಯಾರ್ಥಿಗಳು ಮರದಡಿ ನಿಂತು ಪುಸ್ತಕ ತಿರುವಿ ಹಾಕುತ್ತಿದ್ದದ್ದು ಕಂಡುಬಂತು. ತಾವು ಓದಿದ ಅಂಶಗಳನ್ನು ಮನನ ಮಾಡಿಕೊಳ್ಳಲು ಅಂತಿಮ ಪ್ರಯತ್ನ ನಡೆಸಿದರು. </p>.<p>ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಡಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಿತು. ಪರೀಕ್ಷೆ ಮುಗಿದ ನಂತರ ಪ್ರವೇಶ ದ್ವಾರಗಳಲ್ಲಿ ಪೋಷಕರು ಕಾಯುತ್ತಿದ್ದರು. ‘ಸುಲಭವಾದ ಪ್ರಶ್ನೆ ಕೇಳಿದ್ದರು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆದಿದ್ದೇವೆ. ಹೆಚ್ಚಿನ ಅಂಕಗಳಿಸುವ ವಿಶ್ವಾಸವಿದೆ’ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು. </p>.<p>ಪರಿಶೀಲನೆ: ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಡಿಡಿಪಿಐ ಕಚೇರಿಯ ವೆಬ್ಕಾಸ್ಟಿಂಗ್ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. 2,500ಕ್ಕೂ ಪರೀಕ್ಷಾ ಸಿಬ್ಬಂದಿ, ಜಾಗೃತ ದಳ ಹಾಗೂ ಅಧಿಕಾರಿಗಳು ಪರೀಕ್ಷೆಗೆ ನಿಯೋಜಿಸಲಾಗಿತ್ತು. </p>.<p>‘ಜಿಲ್ಲೆಯಲ್ಲಿ 35,994 ಮಂದಿ ಪರೀಕ್ಷೆ ಬರೆದಿದ್ದಾರೆ. ಯಾವುದೇ ಕೇಂದ್ರದಲ್ಲಿ ಅಕ್ರಮ ನಡೆದಿಲ್ಲ. ಮಹಾರಾಣಿ ಸರ್ಕಾರಿ ಪಿಯು ಕಾಲೇಜು, ಅಶೋಕ ರಸ್ತೆಯ ಸೇಂಟ್ ಮೇರಿಸ್ ಪ್ರೌಢಶಾಲೆ, ಗುಡ್ ಶೆಫರ್ಡ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದೆ. ಜಿಲ್ಲೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಲು ಇಲಾಖೆಯ ಸಿಬ್ಬಂದಿ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸಹಕಾರ ನೀಡಿದರು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಡಿ.ಉದಯ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಾರ್ಚ್ 23ರಂದು (ಸೋಮವಾರ) ವಿಜ್ಞಾನ ಪರೀಕ್ಷೆ ಇದೆ. ಏ.2ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ಪರೀಕ್ಷೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಎಸ್ಎಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು. ಪ್ರಥಮ ಭಾಷೆ ಪರೀಕ್ಷೆ ಸುಲಭವಾದ್ದರಿಂದ ವಿದ್ಯಾರ್ಥಿಗಳ ಮೊಗದಲ್ಲಿ ಖುಷಿ ಇತ್ತು. ಸಂತಸದಿಂದ ಪರೀಕ್ಷಾ ಕೇಂದ್ರದಿಂದ ಹೊರ ಬಂದರು.</p>.<p>136 ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ, ಉರ್ದು, ಸಂಸ್ಕೃತ ಸೇರಿದಂತೆ ಪ್ರಥಮ ಭಾಷೆಯನ್ನು ಆಯ್ಕೆ ಮಾಡಿಕೊಂಡು ನೋಂದಾಯಿಸಿದ್ದ ಒಟ್ಟು 36,392 ವಿದ್ಯಾರ್ಥಿಗಳಲ್ಲಿ 398 ಮಂದಿ ಗೈರು ಹಾಜರಾದರು.</p>.<p>ಮೊದಲ ದಿನ ಬೆಳಿಗ್ಗೆ 9ರಿಂದಲೇ ಪರೀಕ್ಷಾ ಕೇಂದ್ರಗಳತ್ತ ಮಕ್ಕಳು ಬಂದರು. ನಗರದ ಕೃಷ್ಣವಿಲಾಸ ರಸ್ತೆಯ ಮಹಾರಾಣಿ ಸರ್ಕಾರಿ ಪಿಯು ಕಾಲೇಜು ಕೇಂದ್ರಕ್ಕೆ ಹಾಜರಾದ ವಿದ್ಯಾರ್ಥಿಗಳಿಗೆ ಮೈಸೂರು ರಕ್ಷಣಾ ವೇದಿಕೆ ಸದಸ್ಯರು ಗುಲಾಬಿ ಹೂ ನೀಡಿ ಸ್ವಾಗತಿಸಿ, ಶುಭ ಕೋರಿದರು. </p>.<p>ಕೇಂದ್ರದ ಆವರಣದಲ್ಲಿ ಹಾಕಿದ್ದ ನೋಟಿಸ್ ಬೋರ್ಡ್ ನೋಡಿ ತಾವು ಬರೆಯಲಿರುವ ಕೊಠಡಿ ಸಂಖ್ಯೆ ಖಾತ್ರಿ ಮಾಡಿಕೊಂಡರು. ಕೆಲ ವಿದ್ಯಾರ್ಥಿಗಳು ಮರದಡಿ ನಿಂತು ಪುಸ್ತಕ ತಿರುವಿ ಹಾಕುತ್ತಿದ್ದದ್ದು ಕಂಡುಬಂತು. ತಾವು ಓದಿದ ಅಂಶಗಳನ್ನು ಮನನ ಮಾಡಿಕೊಳ್ಳಲು ಅಂತಿಮ ಪ್ರಯತ್ನ ನಡೆಸಿದರು. </p>.<p>ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯಡಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಿತು. ಪರೀಕ್ಷೆ ಮುಗಿದ ನಂತರ ಪ್ರವೇಶ ದ್ವಾರಗಳಲ್ಲಿ ಪೋಷಕರು ಕಾಯುತ್ತಿದ್ದರು. ‘ಸುಲಭವಾದ ಪ್ರಶ್ನೆ ಕೇಳಿದ್ದರು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆದಿದ್ದೇವೆ. ಹೆಚ್ಚಿನ ಅಂಕಗಳಿಸುವ ವಿಶ್ವಾಸವಿದೆ’ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು. </p>.<p>ಪರಿಶೀಲನೆ: ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಡಿಡಿಪಿಐ ಕಚೇರಿಯ ವೆಬ್ಕಾಸ್ಟಿಂಗ್ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. 2,500ಕ್ಕೂ ಪರೀಕ್ಷಾ ಸಿಬ್ಬಂದಿ, ಜಾಗೃತ ದಳ ಹಾಗೂ ಅಧಿಕಾರಿಗಳು ಪರೀಕ್ಷೆಗೆ ನಿಯೋಜಿಸಲಾಗಿತ್ತು. </p>.<p>‘ಜಿಲ್ಲೆಯಲ್ಲಿ 35,994 ಮಂದಿ ಪರೀಕ್ಷೆ ಬರೆದಿದ್ದಾರೆ. ಯಾವುದೇ ಕೇಂದ್ರದಲ್ಲಿ ಅಕ್ರಮ ನಡೆದಿಲ್ಲ. ಮಹಾರಾಣಿ ಸರ್ಕಾರಿ ಪಿಯು ಕಾಲೇಜು, ಅಶೋಕ ರಸ್ತೆಯ ಸೇಂಟ್ ಮೇರಿಸ್ ಪ್ರೌಢಶಾಲೆ, ಗುಡ್ ಶೆಫರ್ಡ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದೆ. ಜಿಲ್ಲೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ನಡೆಸಲು ಇಲಾಖೆಯ ಸಿಬ್ಬಂದಿ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸಹಕಾರ ನೀಡಿದರು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಡಿ.ಉದಯ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಾರ್ಚ್ 23ರಂದು (ಸೋಮವಾರ) ವಿಜ್ಞಾನ ಪರೀಕ್ಷೆ ಇದೆ. ಏ.2ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ಪರೀಕ್ಷೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>