<p>ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ 2021ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಅಪರಾಧಿಗೆ ಮೈಸೂರಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.</p>.<p>ಗ್ರಾಮದ ಮಹೇಶ್ಕುಮಾರ್ ಶಿಕ್ಷೆಗೊಳಗಾದ ಅಪರಾಧಿ. ಗ್ರಾಮದ ಭಾಗ್ಯಲಕ್ಷ್ಮಿ ಕೊಲೆಯಾದವರು.</p>.<p>ಮಹೇಶ್ಕುಮಾರ್ ಮತ್ತು ಭಾಗ್ಯಲಕ್ಷ್ಮಿ ಅವರ ಪುತ್ರಿ ಪೂಜಾಶ್ರೀ ಪ್ರೀತಿಸುತ್ತಿದ್ದರು.</p>.<p>ಇದೇ ವಿಚಾರವಾಗಿ ಭಾಗ್ಯಲಕ್ಷ್ಮಿ ಮಹೇಶ್ಕುಮಾರ್ನನ್ನು ಆಗಾಗನಿಂದಿಸುತ್ತಿದ್ದರು. ಇದರಿಂದ ಭಾಗ್ಯಲಕ್ಷ್ಮಿ ಮೇಲೆ ಮಹೇಶ್ಕುಮಾರ್ ಕೋಪಗೊಂಡಿದ್ದ.</p>.<p>2021ರ ಆಗಸ್ಟ್ 25ರಂದು ಭಾಗ್ಯಲಕ್ಷ್ಮಿ ಅವರು ಚಾಮರಾಜ ಬಲದಂಡೆ ನಾಲೆಯ ರಸ್ತೆ ಬಳಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ ಮಹೇಶ್ಕುಮಾರನನ್ನು ಕಂಡು ನಿಂದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಗುದ್ದಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ.</p>.<p>ಬಳಿಕ ಗೋಣಿ ಚೀಲದೊಳಗೆ ಶವ ಹಾಕಿ ಕಾಲುವೆಯ ನೀರು ಬರುವ ಪೈಪಿನೊಳಗೆ ಹಾಕಿದ್ದ.</p>.<p>ಈ ಸಂಬಂಧ ಅಂದಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಿ. ಕೃಷ್ಣಪ್ಪ ಮಹೇಶ್ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<p>ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ಅವರು ಅಪರಾಧ ಸಾಬೀತಾಗಿದ್ದರಿಂದ ಮಹೇಶ್ಕುಮಾರ್ಗೆ ಜೀವಾವಧಿ ಶಿಕ್ಷೆ ಮತ್ತು ₹ 75,000 ದಂಡ ಹಾಗೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಕ್ಕೆ 5 ವರ್ಷಗಳ ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿದ್ದಾರೆ.</p>.<p>ದಂಡದ ಮೊತ್ತವನ್ನು ಭಾಗ್ಯಲಕ್ಷ್ಮಿ ಪುತ್ರಿ ಹಾಗೂ ತಂದೆಗೆ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.</p>.<p>ಸರ್ಕಾರಿ ಅಭಿಯೋಜಕಿ ಬಿ.ಎಂ.ವೀಣಾ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-38-696846031</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ 2021ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಅಪರಾಧಿಗೆ ಮೈಸೂರಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.</p>.<p>ಗ್ರಾಮದ ಮಹೇಶ್ಕುಮಾರ್ ಶಿಕ್ಷೆಗೊಳಗಾದ ಅಪರಾಧಿ. ಗ್ರಾಮದ ಭಾಗ್ಯಲಕ್ಷ್ಮಿ ಕೊಲೆಯಾದವರು.</p>.<p>ಮಹೇಶ್ಕುಮಾರ್ ಮತ್ತು ಭಾಗ್ಯಲಕ್ಷ್ಮಿ ಅವರ ಪುತ್ರಿ ಪೂಜಾಶ್ರೀ ಪ್ರೀತಿಸುತ್ತಿದ್ದರು.</p>.<p>ಇದೇ ವಿಚಾರವಾಗಿ ಭಾಗ್ಯಲಕ್ಷ್ಮಿ ಮಹೇಶ್ಕುಮಾರ್ನನ್ನು ಆಗಾಗನಿಂದಿಸುತ್ತಿದ್ದರು. ಇದರಿಂದ ಭಾಗ್ಯಲಕ್ಷ್ಮಿ ಮೇಲೆ ಮಹೇಶ್ಕುಮಾರ್ ಕೋಪಗೊಂಡಿದ್ದ.</p>.<p>2021ರ ಆಗಸ್ಟ್ 25ರಂದು ಭಾಗ್ಯಲಕ್ಷ್ಮಿ ಅವರು ಚಾಮರಾಜ ಬಲದಂಡೆ ನಾಲೆಯ ರಸ್ತೆ ಬಳಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ ಮಹೇಶ್ಕುಮಾರನನ್ನು ಕಂಡು ನಿಂದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಗುದ್ದಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ.</p>.<p>ಬಳಿಕ ಗೋಣಿ ಚೀಲದೊಳಗೆ ಶವ ಹಾಕಿ ಕಾಲುವೆಯ ನೀರು ಬರುವ ಪೈಪಿನೊಳಗೆ ಹಾಕಿದ್ದ.</p>.<p>ಈ ಸಂಬಂಧ ಅಂದಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಿ. ಕೃಷ್ಣಪ್ಪ ಮಹೇಶ್ಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.</p>.<p>ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲನಗೌಡ ಅವರು ಅಪರಾಧ ಸಾಬೀತಾಗಿದ್ದರಿಂದ ಮಹೇಶ್ಕುಮಾರ್ಗೆ ಜೀವಾವಧಿ ಶಿಕ್ಷೆ ಮತ್ತು ₹ 75,000 ದಂಡ ಹಾಗೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಕ್ಕೆ 5 ವರ್ಷಗಳ ಶಿಕ್ಷೆ ಮತ್ತು ₹ 25,000 ದಂಡ ವಿಧಿಸಿದ್ದಾರೆ.</p>.<p>ದಂಡದ ಮೊತ್ತವನ್ನು ಭಾಗ್ಯಲಕ್ಷ್ಮಿ ಪುತ್ರಿ ಹಾಗೂ ತಂದೆಗೆ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.</p>.<p>ಸರ್ಕಾರಿ ಅಭಿಯೋಜಕಿ ಬಿ.ಎಂ.ವೀಣಾ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-38-696846031</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>