<p>ಮೈಸೂರು: ನಗರದ ಜಯಲಕ್ಷ್ಮೀಪುರಂನ ಸತ್ಯಸಾಯಿ ಬಾಬಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.</p>.<p>1996ರಿಂದ 2004ರವರೆಗೆ ಕಲಿತ ವಿದ್ಯಾರ್ಥಿಗಳು ಭಾನುವಾರ ‘ಸಾಯಿ ಸ್ನೇಹ ಸಂಗಮ- 2026’ ಎಂದು ಕಾರ್ಯಕ್ರಮ ಆಯೋಜಿಸಿ, ತಮಗೆ ಕಲಿಸಿದ ಜಿ.ಎಸ್.ಸುಪ್ರಭಾ, ಸಾವಿತ್ರಮ್ಮ, ಪಿ.ಸರೋಜಮ್ಮ, ಮಹಾದೇವಮ್ಮ, ಕಮಲಮ್ಮ ಹಾಗೂ ಶಿವಮೂರ್ತಿ ಅವರನ್ನು ಗೌರವಿಸಿದರು. ಈ ಮೂಲಕ ಹಳೆಯ ವಿದ್ಯಾರ್ಥಿಗಳ ಸಮಾಗಮವೂ ಆಯಿತು. ಸಹಪಾಠಿಗಳೆಲ್ಲರೂ ವಿದ್ಯಾರ್ಥಿ ಜೀವನದ ದಿನಗಳನ್ನು ನೆನೆದು ಸಂಭ್ರಮಿಸಿದರು.</p>.<p>ಇಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ, 80 ವರ್ಷದ ಜಿ.ಎಸ್.ಸುಪ್ರಭಾ, ‘ಕಲಿಸಿದವರನ್ನು ಮರೆಯದೆ ಒಂದೆಡೆ ಸೇರಿ ಗೌರವ ಸಲ್ಲಿಸಿದ್ದು ಮೆಚ್ಚುಗೆ ಆಯಿತು’ ಎಂದರು.</p>.<p>ನಿವೃತ್ತ ಶಿಕ್ಷಕಿ ಮಹಾದೇವಮ್ಮ, ‘ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಸನ್ಮಾನಿತರಾದ ಸರೋಜ ಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಶಿವಮೂರ್ತಿ, ಹಳೆಯ ವಿದ್ಯಾರ್ಥಿ, ಗಣಿತ ಶಿಕ್ಷಕ ವೈದ್ಯನಾಥ್ ಶಿಕ್ಷಕರ ಕುರಿತು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸತ್ಯಸಾಯಿ ಬಾಬಾ ಪಿಯು ಕಾಲೇಜಿನ ಪ್ರಾಂಶುಪಾಲ ತ್ರಿಮೂರ್ತಿ ಮಾತನಾಡಿ, ‘2032ರಲ್ಲಿ ಈ ಶಾಲೆಯ ಅಮೃತ ಮಹೋತ್ಸವ ನಡೆಯಲಿದೆ. ಇದನ್ನು ಸ್ಮರಣೀಯವಾಗಿಸಲು ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯ’ ಎಂದರು.</p>.<p>ಶಾಲೆಯ ಸಿಬ್ಬಂದಿ ಅಪ್ಪಯ್ಯ ಇದ್ದರು. ಹಳೆಯ ವಿದ್ಯಾರ್ಥಿಗಳಾದ ಆರ್.ಪ್ರಶಾಂತ್, ನಾಗೇಶ್ ಎಂ., ಭವಾನಿ ಸಾಗರ, ಸುನೀಲಕುಮಾರ್, ಚೇತನಾ ಹಾಗೂ ದೀಪಾ ನೇತೃತ್ವ ವಹಿಸಿದ್ದರು. ಕಿರಣ ಕೆ.ವಿ. ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-39-1903550372</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ನಗರದ ಜಯಲಕ್ಷ್ಮೀಪುರಂನ ಸತ್ಯಸಾಯಿ ಬಾಬಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.</p>.<p>1996ರಿಂದ 2004ರವರೆಗೆ ಕಲಿತ ವಿದ್ಯಾರ್ಥಿಗಳು ಭಾನುವಾರ ‘ಸಾಯಿ ಸ್ನೇಹ ಸಂಗಮ- 2026’ ಎಂದು ಕಾರ್ಯಕ್ರಮ ಆಯೋಜಿಸಿ, ತಮಗೆ ಕಲಿಸಿದ ಜಿ.ಎಸ್.ಸುಪ್ರಭಾ, ಸಾವಿತ್ರಮ್ಮ, ಪಿ.ಸರೋಜಮ್ಮ, ಮಹಾದೇವಮ್ಮ, ಕಮಲಮ್ಮ ಹಾಗೂ ಶಿವಮೂರ್ತಿ ಅವರನ್ನು ಗೌರವಿಸಿದರು. ಈ ಮೂಲಕ ಹಳೆಯ ವಿದ್ಯಾರ್ಥಿಗಳ ಸಮಾಗಮವೂ ಆಯಿತು. ಸಹಪಾಠಿಗಳೆಲ್ಲರೂ ವಿದ್ಯಾರ್ಥಿ ಜೀವನದ ದಿನಗಳನ್ನು ನೆನೆದು ಸಂಭ್ರಮಿಸಿದರು.</p>.<p>ಇಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ, 80 ವರ್ಷದ ಜಿ.ಎಸ್.ಸುಪ್ರಭಾ, ‘ಕಲಿಸಿದವರನ್ನು ಮರೆಯದೆ ಒಂದೆಡೆ ಸೇರಿ ಗೌರವ ಸಲ್ಲಿಸಿದ್ದು ಮೆಚ್ಚುಗೆ ಆಯಿತು’ ಎಂದರು.</p>.<p>ನಿವೃತ್ತ ಶಿಕ್ಷಕಿ ಮಹಾದೇವಮ್ಮ, ‘ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಸನ್ಮಾನಿತರಾದ ಸರೋಜ ಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಶಿವಮೂರ್ತಿ, ಹಳೆಯ ವಿದ್ಯಾರ್ಥಿ, ಗಣಿತ ಶಿಕ್ಷಕ ವೈದ್ಯನಾಥ್ ಶಿಕ್ಷಕರ ಕುರಿತು ಮಾತನಾಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಸತ್ಯಸಾಯಿ ಬಾಬಾ ಪಿಯು ಕಾಲೇಜಿನ ಪ್ರಾಂಶುಪಾಲ ತ್ರಿಮೂರ್ತಿ ಮಾತನಾಡಿ, ‘2032ರಲ್ಲಿ ಈ ಶಾಲೆಯ ಅಮೃತ ಮಹೋತ್ಸವ ನಡೆಯಲಿದೆ. ಇದನ್ನು ಸ್ಮರಣೀಯವಾಗಿಸಲು ಹಳೆಯ ವಿದ್ಯಾರ್ಥಿಗಳ ಸಹಕಾರ ಅಗತ್ಯ’ ಎಂದರು.</p>.<p>ಶಾಲೆಯ ಸಿಬ್ಬಂದಿ ಅಪ್ಪಯ್ಯ ಇದ್ದರು. ಹಳೆಯ ವಿದ್ಯಾರ್ಥಿಗಳಾದ ಆರ್.ಪ್ರಶಾಂತ್, ನಾಗೇಶ್ ಎಂ., ಭವಾನಿ ಸಾಗರ, ಸುನೀಲಕುಮಾರ್, ಚೇತನಾ ಹಾಗೂ ದೀಪಾ ನೇತೃತ್ವ ವಹಿಸಿದ್ದರು. ಕಿರಣ ಕೆ.ವಿ. ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-39-1903550372</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>