<p><strong>ಮೈಸೂರು</strong>: ಇಲ್ಲಿನ ತಿಲಕ್ನಗರದಲ್ಲಿ ಶಿಥಿಲಾವಸ್ಥೆಗೆ ತಲುಪಿ, ಆಕಸ್ಮಿಕ ಬೆಂಕಿ ಅವಘಡದಲ್ಲಿ ಹಾನಿಗೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ಸ್ಥಳೀಯರು ಮತ್ತು ಹಳೇ ವಿದ್ಯಾರ್ಥಿಗಳ ನೆರವಿನಿಂದ ‘ಅಭಿವೃದ್ಧಿಯ ಬೆಳಕು’ ಕಂಡಿದೆ. </p>.<p>ಉತ್ತರ ಶೈಕ್ಷಣಿಕ ವಲಯದಲ್ಲಿರುವ ಶತಮಾನ ಕಂಡಿರುವ ಈ ಶಾಲೆಯ ಕಟ್ಟಡಕ್ಕಾಗಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಹೊಸ ರೂಪ ನೀಡಲಾಗಿದೆ. ಕಟ್ಟಡ ಸುಣ್ಣ–ಬಣ್ಣದಿಂದ ಕಂಗೊಳಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿಗಳು ಆರಂಭವಾಗಲಿವೆ. </p>.<p>ಅಭಿವೃದ್ಧಿಗಾಗಿ ರಚನೆಯಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿತ ರಕ್ಷಣಾ ಸಮಿತಿ’ಯಲ್ಲಿರುವ 22 ಮಂದಿ ಸ್ವತಃ ದೇಣಿಗೆ ನೀಡಿ, ದಾನಿಗಳಿಂದಲೂ ಸಂಗ್ರಹಿಸಿದ್ದಾರೆ. ನಗರಪಾಲಿಕೆ ಮಾಜಿ ಸದಸ್ಯೀಹ, ಬಿಇಒ ಎಸ್.ರೇವಣ್ಣ ಅವರೂ ಆರ್ಥಿಕ ಸಹಾಯ ಮಾಡಿದವರಲ್ಲಿ ಸೇರಿದ್ದಾರೆ.</p>.<p><strong>60 ಮಕ್ಕಳಿದ್ದರು: </strong></p>.<p>ಮೈಸೂರು ಅರಸು ಸಂಸ್ಥಾನದವರು ಪ್ರಾರಂಭಿಸಿದ್ದ ಶಾಲೆಯನ್ನು ಸ್ವಾತಂತ್ರ್ಯದ ನಂತರ ಬಾಲಕಿಯರ ಶಾಲೆಯಾಗಿ ಮಾಡಲಾಗಿತ್ತು. ಸದ್ಯ ಬಾಲಕರು ಹಾಗೂ ಬಾಲಕಿಯರಿಬ್ಬರಿಗೂ ಪ್ರವೇಶಾವಕಾಶವಿದೆ.</p>.<p>ಶಾಲೆಯನ್ನು 2019ರಲ್ಲಿ ಸಮೀಪದ ಶ್ರವಣದೋಷವುಳ್ಳ ಮಕ್ಕಳ ಶಾಲೆಗೆ ಸ್ಥಳಾಂತರಿಸಲಾಗಿತ್ತು. 60 ಮಕ್ಕಳು ಅಲ್ಲಿಗೆ ಹೋಗಿದ್ದರು. ಆಗಿನ ಬಿಇಒ, ಅಲ್ಲಿ 5 ಕೊಠಡಿಗಳನ್ನು ಕೊಡಿಸಿದ್ದರು. ಕಟ್ಟಡ 2021ರಲ್ಲಿ ಆಕಸ್ಮಿಕ ಬೆಂಕಿ ಅವಘಡಕ್ಕೂ ತುತ್ತಾಗಿ ಚಾವಣಿ, ಗೋಡೆಗಳಿಗೆ ಹಾನಿಯಾಗಿತ್ತು.</p>.<p>ಏಪ್ರಿಲ್ನಿಂದ ನವೀಕರಣ ಕಾರ್ಯ ನಡೆದಿದ್ದು, ಐದು ಕೊಠಡಿ ಸಜ್ಜಾಗಿದೆ. ಬೇಲಿ ಹಾಕಿ, ಗೇಟ್ ದುರಸ್ತಿಪಡಿಸಿ, ಅಡುಗೆ ಕೋಣೆಯನ್ನೂ ನಿರ್ಮಿಸಲಾಗಿದೆ. ಶೌಚಾಲಯದ ನಿರ್ಮಾಣ ನಡೆಯುತ್ತಿದೆ. </p>.<p><strong>ಸಹಕಾರ–ಔದಾರ್ಯ:</strong></p>.<p>‘ಸ್ಥಳೀಯರು ಉದಾರವಾಗಿ ಸಹಕರಿಸಿದರು. ಕಬ್ಬಿನ, ಸಿಮೆಂಟ್ ಕೊಡಿಸಿದರು, ನವೀಕರಣಕ್ಕಾಗಿ ₹ 13ಲಕ್ಷದಿಂದ ₹ 14 ಲಕ್ಷ ವೆಚ್ಚವಾಗಿದೆ’ ಎಂದು ಬಿಇಒ ಎಸ್.ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಶಾಲೆಗೆ ಸದ್ಯ 62 ಮಕ್ಕಳು ಪ್ರವೇಶ ಪಡೆದಿದ್ದಾರೆ. 1ರಿಂದ 7ನೇ ತರಗತಿಯವರೆಗೆ ಇದೆ. ಎಲ್ಕೆಜಿ, ಯುಕೆಜಿ ಶಿಕ್ಷಣ ಪ್ರಾರಂಭಿಸಿದ್ದೇವೆ’ ಎಂದು ಮುಖ್ಯಶಿಕ್ಷಕಿ ಡಿ.ಮಂಜುಳಾಕುಮಾರಿ ತಿಳಿಸಿದರು.</p>.<div><blockquote>ಈ ಸಾಲಿನಿಂದ ಅಲ್ಲಿ ತರಗತಿಗಳು ಶುರುವಾಗಲಿವೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಜಾಸ್ತಿ ಇರುವ ಪ್ರದೇಶವದು. ಪ್ರವೇಶಾತಿ ಹೆಚ್ಚುವ ನಿರೀಕ್ಷೆ ಇದೆ</blockquote><span class="attribution"> ಎಸ್. ರೇವಣ್ಣ ಬಿಇಒ ಉತ್ತರ ವಲಯ ಮೈಸೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ತಿಲಕ್ನಗರದಲ್ಲಿ ಶಿಥಿಲಾವಸ್ಥೆಗೆ ತಲುಪಿ, ಆಕಸ್ಮಿಕ ಬೆಂಕಿ ಅವಘಡದಲ್ಲಿ ಹಾನಿಗೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ಸ್ಥಳೀಯರು ಮತ್ತು ಹಳೇ ವಿದ್ಯಾರ್ಥಿಗಳ ನೆರವಿನಿಂದ ‘ಅಭಿವೃದ್ಧಿಯ ಬೆಳಕು’ ಕಂಡಿದೆ. </p>.<p>ಉತ್ತರ ಶೈಕ್ಷಣಿಕ ವಲಯದಲ್ಲಿರುವ ಶತಮಾನ ಕಂಡಿರುವ ಈ ಶಾಲೆಯ ಕಟ್ಟಡಕ್ಕಾಗಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಹೊಸ ರೂಪ ನೀಡಲಾಗಿದೆ. ಕಟ್ಟಡ ಸುಣ್ಣ–ಬಣ್ಣದಿಂದ ಕಂಗೊಳಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿಗಳು ಆರಂಭವಾಗಲಿವೆ. </p>.<p>ಅಭಿವೃದ್ಧಿಗಾಗಿ ರಚನೆಯಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿತ ರಕ್ಷಣಾ ಸಮಿತಿ’ಯಲ್ಲಿರುವ 22 ಮಂದಿ ಸ್ವತಃ ದೇಣಿಗೆ ನೀಡಿ, ದಾನಿಗಳಿಂದಲೂ ಸಂಗ್ರಹಿಸಿದ್ದಾರೆ. ನಗರಪಾಲಿಕೆ ಮಾಜಿ ಸದಸ್ಯೀಹ, ಬಿಇಒ ಎಸ್.ರೇವಣ್ಣ ಅವರೂ ಆರ್ಥಿಕ ಸಹಾಯ ಮಾಡಿದವರಲ್ಲಿ ಸೇರಿದ್ದಾರೆ.</p>.<p><strong>60 ಮಕ್ಕಳಿದ್ದರು: </strong></p>.<p>ಮೈಸೂರು ಅರಸು ಸಂಸ್ಥಾನದವರು ಪ್ರಾರಂಭಿಸಿದ್ದ ಶಾಲೆಯನ್ನು ಸ್ವಾತಂತ್ರ್ಯದ ನಂತರ ಬಾಲಕಿಯರ ಶಾಲೆಯಾಗಿ ಮಾಡಲಾಗಿತ್ತು. ಸದ್ಯ ಬಾಲಕರು ಹಾಗೂ ಬಾಲಕಿಯರಿಬ್ಬರಿಗೂ ಪ್ರವೇಶಾವಕಾಶವಿದೆ.</p>.<p>ಶಾಲೆಯನ್ನು 2019ರಲ್ಲಿ ಸಮೀಪದ ಶ್ರವಣದೋಷವುಳ್ಳ ಮಕ್ಕಳ ಶಾಲೆಗೆ ಸ್ಥಳಾಂತರಿಸಲಾಗಿತ್ತು. 60 ಮಕ್ಕಳು ಅಲ್ಲಿಗೆ ಹೋಗಿದ್ದರು. ಆಗಿನ ಬಿಇಒ, ಅಲ್ಲಿ 5 ಕೊಠಡಿಗಳನ್ನು ಕೊಡಿಸಿದ್ದರು. ಕಟ್ಟಡ 2021ರಲ್ಲಿ ಆಕಸ್ಮಿಕ ಬೆಂಕಿ ಅವಘಡಕ್ಕೂ ತುತ್ತಾಗಿ ಚಾವಣಿ, ಗೋಡೆಗಳಿಗೆ ಹಾನಿಯಾಗಿತ್ತು.</p>.<p>ಏಪ್ರಿಲ್ನಿಂದ ನವೀಕರಣ ಕಾರ್ಯ ನಡೆದಿದ್ದು, ಐದು ಕೊಠಡಿ ಸಜ್ಜಾಗಿದೆ. ಬೇಲಿ ಹಾಕಿ, ಗೇಟ್ ದುರಸ್ತಿಪಡಿಸಿ, ಅಡುಗೆ ಕೋಣೆಯನ್ನೂ ನಿರ್ಮಿಸಲಾಗಿದೆ. ಶೌಚಾಲಯದ ನಿರ್ಮಾಣ ನಡೆಯುತ್ತಿದೆ. </p>.<p><strong>ಸಹಕಾರ–ಔದಾರ್ಯ:</strong></p>.<p>‘ಸ್ಥಳೀಯರು ಉದಾರವಾಗಿ ಸಹಕರಿಸಿದರು. ಕಬ್ಬಿನ, ಸಿಮೆಂಟ್ ಕೊಡಿಸಿದರು, ನವೀಕರಣಕ್ಕಾಗಿ ₹ 13ಲಕ್ಷದಿಂದ ₹ 14 ಲಕ್ಷ ವೆಚ್ಚವಾಗಿದೆ’ ಎಂದು ಬಿಇಒ ಎಸ್.ರೇವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಶಾಲೆಗೆ ಸದ್ಯ 62 ಮಕ್ಕಳು ಪ್ರವೇಶ ಪಡೆದಿದ್ದಾರೆ. 1ರಿಂದ 7ನೇ ತರಗತಿಯವರೆಗೆ ಇದೆ. ಎಲ್ಕೆಜಿ, ಯುಕೆಜಿ ಶಿಕ್ಷಣ ಪ್ರಾರಂಭಿಸಿದ್ದೇವೆ’ ಎಂದು ಮುಖ್ಯಶಿಕ್ಷಕಿ ಡಿ.ಮಂಜುಳಾಕುಮಾರಿ ತಿಳಿಸಿದರು.</p>.<div><blockquote>ಈ ಸಾಲಿನಿಂದ ಅಲ್ಲಿ ತರಗತಿಗಳು ಶುರುವಾಗಲಿವೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಜಾಸ್ತಿ ಇರುವ ಪ್ರದೇಶವದು. ಪ್ರವೇಶಾತಿ ಹೆಚ್ಚುವ ನಿರೀಕ್ಷೆ ಇದೆ</blockquote><span class="attribution"> ಎಸ್. ರೇವಣ್ಣ ಬಿಇಒ ಉತ್ತರ ವಲಯ ಮೈಸೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>