<p>ಮೈಸೂರು: ‘ತಂಬಾಕು ಬಳಕೆಯು ದೇಶದ ಅತ್ಯಂತ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲು’ ಎಂದು ಹೆಲ್ತ್ ಕೇರ್ ಗ್ಲೋಬಲ್ ಸಂಸ್ಥೆ ಹಾಗೂ ಭಾರತ್ ಕ್ಯಾನ್ಸರ್ ಆಸ್ಪತ್ರೆ(ಬಿಎಚ್ಐಓ) ಸ್ಥಾಪಕ ಅಧ್ಯಕ್ಷ, ಕ್ಯಾನ್ಸರ್ ತಜ್ಞ ಡಾ.ಬಿ.ಎಸ್.ಅಜಯ್ ಕುಮಾರ್ ಹೇಳಿದರು.</p>.<p>ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ‘ಧೂಮಪಾನ ಮುಕ್ತ ಮೈಸೂರು, ಆರೋಗ್ಯವಂತ ಮೈಸೂರು’ ಎಂಬ ವಿಷಯದ ಗೋಷ್ಠಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಾವಿರ ದಿನಗಳಲ್ಲಿ ತಂಬಾಕುಮುಕ್ತ ಮೈಸೂರು ನಿರ್ಮಾಣದ ಗುರಿ ಯಶಸ್ಸಿಗೆ ನಿಯಮಗಳ ಕಠಿಣ ಜಾರಿ, ಜನರ ಸಹಭಾಗಿತ್ವವೇ ಕೀಲಿಕೈ’ ಎಂದರು.</p>.<p>ಸಿಎಫ್ಟಿಆರ್ಐ ಮಾಜಿ ನಿರ್ದೇಶಕ ವಿ.ಪ್ರಕಾಶ್, ರೈತ ಮುಖಂಡರಾದ ರಾಮೇಗೌಡ, ಮಂಜು ಕಿರಣ್, ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹದೇವ್, ನಾಗರಾಜ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಎಸ್.ಗೋಪಿನಾಥ್, ಮಾಜಿ ಉಪಮೇಯರ್ ಪುಷ್ಪವಲ್ಲಿ, ಪತ್ರಕರ್ತರಾದ ಲೈಕ್ ಎ.ಖಾನ್, ರಾಜೀವ ಸಿ.ಜೆ. ಅಭಿಪ್ರಾಯ ಹಂಚಿಕೊಂಡರು.</p>.<p>ಬಿಎಚ್ಐಒ ಸಿಒಒ ಗೌತಮ್ ಧಮೇರ್ಲಾ, ಅಂತರ್ಧ್ವನಿ ಸಂಸ್ಥೆಯ ರಾಹುಲ್ ನಂದನ್, ಸೀತಾಲಕ್ಷ್ಮಿ ಎಸ್., ಐಎಚ್ಡಿಯುಎ ಕಾರ್ಯಕ್ರಮ ಮುಖ್ಯಸ್ಥ ಎನ್. ಮಧು, ವಿಕಿರಣ ಕ್ಯಾನ್ಸರ್ ತಜ್ಞ ಡಾ.ವಿನಯ್ ಕುಮಾರ್ ಮುತ್ತಗಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-39-284602252</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ತಂಬಾಕು ಬಳಕೆಯು ದೇಶದ ಅತ್ಯಂತ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲು’ ಎಂದು ಹೆಲ್ತ್ ಕೇರ್ ಗ್ಲೋಬಲ್ ಸಂಸ್ಥೆ ಹಾಗೂ ಭಾರತ್ ಕ್ಯಾನ್ಸರ್ ಆಸ್ಪತ್ರೆ(ಬಿಎಚ್ಐಓ) ಸ್ಥಾಪಕ ಅಧ್ಯಕ್ಷ, ಕ್ಯಾನ್ಸರ್ ತಜ್ಞ ಡಾ.ಬಿ.ಎಸ್.ಅಜಯ್ ಕುಮಾರ್ ಹೇಳಿದರು.</p>.<p>ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ‘ಧೂಮಪಾನ ಮುಕ್ತ ಮೈಸೂರು, ಆರೋಗ್ಯವಂತ ಮೈಸೂರು’ ಎಂಬ ವಿಷಯದ ಗೋಷ್ಠಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಾವಿರ ದಿನಗಳಲ್ಲಿ ತಂಬಾಕುಮುಕ್ತ ಮೈಸೂರು ನಿರ್ಮಾಣದ ಗುರಿ ಯಶಸ್ಸಿಗೆ ನಿಯಮಗಳ ಕಠಿಣ ಜಾರಿ, ಜನರ ಸಹಭಾಗಿತ್ವವೇ ಕೀಲಿಕೈ’ ಎಂದರು.</p>.<p>ಸಿಎಫ್ಟಿಆರ್ಐ ಮಾಜಿ ನಿರ್ದೇಶಕ ವಿ.ಪ್ರಕಾಶ್, ರೈತ ಮುಖಂಡರಾದ ರಾಮೇಗೌಡ, ಮಂಜು ಕಿರಣ್, ಕ್ಯಾನ್ಸರ್ನಿಂದ ಚೇತರಿಸಿಕೊಂಡ ಮಹದೇವ್, ನಾಗರಾಜ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಎಸ್.ಗೋಪಿನಾಥ್, ಮಾಜಿ ಉಪಮೇಯರ್ ಪುಷ್ಪವಲ್ಲಿ, ಪತ್ರಕರ್ತರಾದ ಲೈಕ್ ಎ.ಖಾನ್, ರಾಜೀವ ಸಿ.ಜೆ. ಅಭಿಪ್ರಾಯ ಹಂಚಿಕೊಂಡರು.</p>.<p>ಬಿಎಚ್ಐಒ ಸಿಒಒ ಗೌತಮ್ ಧಮೇರ್ಲಾ, ಅಂತರ್ಧ್ವನಿ ಸಂಸ್ಥೆಯ ರಾಹುಲ್ ನಂದನ್, ಸೀತಾಲಕ್ಷ್ಮಿ ಎಸ್., ಐಎಚ್ಡಿಯುಎ ಕಾರ್ಯಕ್ರಮ ಮುಖ್ಯಸ್ಥ ಎನ್. ಮಧು, ವಿಕಿರಣ ಕ್ಯಾನ್ಸರ್ ತಜ್ಞ ಡಾ.ವಿನಯ್ ಕುಮಾರ್ ಮುತ್ತಗಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-39-284602252</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>