<p><strong>ಮೈಸೂರು:</strong> ‘ನಗರದಲ್ಲಿ ಅನವಶ್ಯವಾಗಿ ಟ್ರಾಫಿಕ್ ಸಿಗ್ನಲ್ ಲೈಟ್ಗಳನ್ನು ಹಾಕಿರುವುದಿಲ್ಲ. ಪೊಲೀಸರು ವೈಜ್ಞಾನಿಕವಾಗಿಯೇ ಕ್ರಮ ಕೈಗೊಂಡಿರುತ್ತಾರೆ. ಆದಾಗ್ಯೂ ಏನಾದರೂ ಬದಲಾವಣೆಗಳಿದ್ದರೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.ಮೈಸೂರು | ಅಖಿಲ ಕರ್ನಾಟಕ ಭೀಮ ಜನಜಾಗೃತಿ ಮಹಾಸಭಾ: ಪದಾಧಿಕಾರಿಗಳ ಆಯ್ಕೆ.<p>ಅನಗತ್ಯವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಯಿಂದ ತೊಂದರೆ ಅಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿರುವ ಬಗ್ಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ವಾಹನಗಳ ಸುಗಮ ಸಂಚಾರಕ್ಕೆಂದು ಸಿಗ್ನಲ್ ಲೈಟ್ಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದರು.</p><p>‘ಜನರಿಗೆ ಅನಗತ್ಯ ತೊಂದರೆ ಕೊಡಲೆಂದೇ ಯಾರೂ ಸಿಗ್ನಲ್ ಲೈಟ್ ಹಾಕುವುದಿಲ್ಲ’ ಎಂದು ಹೇಳಿದರು.</p><p>ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾತನಾಡಿ, ‘ನಾನು ಪರಿಶೀಲಿಸಿದ್ದೇನೆ. ವೈಜ್ಞಾನಿಕವಾಗಿಯೇ ಸಿಗ್ನಲ್ ಲೈಟ್ ಹಾಕಲಾಗಿದೆ. ಭವಿಷ್ಯದ ಮೈಸೂರಿನ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಿದ್ದೇವೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಬಗೆ ಹರಿದಿದೆ’ ಎಂದು ಸಮರ್ಥಿಸಿಕೊಂಡರು.</p><p>‘ಮೈಸೂರಿನ ಬೆಳವಣಿಗೆ ದೃಷ್ಟಿಯಿಂದ ಸಿಗ್ನಲ್ ಲೈಟ್ಗಳ ಅವಶ್ಯಕತೆ ಇತ್ತು. ಇದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರಿಗೆ ತೊಂದರೆ ಆಗಿಲ್ಲ. ಕೆಲವೊಂದು ಕಡೆ ಎರಡು ನಿಮಿಷದ ಅವಧಿಯನ್ನು ಕಡಿಮೆ ಮಾಡುವಂತೆ ಸೂಚಿಸಿದ್ದೇನೆ. ಅನಗತ್ಯವಾಗಿ ಅಳವಡಿಕೆ ಮಾಡಿಲ್ಲ’ ಎಂದರು.</p>.ಮೈಸೂರು | ಬಾಬೂಜಿ, ಅಂಬೇಡ್ಕರ್ ಜಯಂತಿ: ಅರ್ಥಪೂರ್ಣ ಆಚರಣೆಗೆ ಕ್ರಮ: DC.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ನಗರದಲ್ಲಿ ಅನವಶ್ಯವಾಗಿ ಟ್ರಾಫಿಕ್ ಸಿಗ್ನಲ್ ಲೈಟ್ಗಳನ್ನು ಹಾಕಿರುವುದಿಲ್ಲ. ಪೊಲೀಸರು ವೈಜ್ಞಾನಿಕವಾಗಿಯೇ ಕ್ರಮ ಕೈಗೊಂಡಿರುತ್ತಾರೆ. ಆದಾಗ್ಯೂ ಏನಾದರೂ ಬದಲಾವಣೆಗಳಿದ್ದರೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.ಮೈಸೂರು | ಅಖಿಲ ಕರ್ನಾಟಕ ಭೀಮ ಜನಜಾಗೃತಿ ಮಹಾಸಭಾ: ಪದಾಧಿಕಾರಿಗಳ ಆಯ್ಕೆ.<p>ಅನಗತ್ಯವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಯಿಂದ ತೊಂದರೆ ಅಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದಿರುವ ಬಗ್ಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ವಾಹನಗಳ ಸುಗಮ ಸಂಚಾರಕ್ಕೆಂದು ಸಿಗ್ನಲ್ ಲೈಟ್ಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದರು.</p><p>‘ಜನರಿಗೆ ಅನಗತ್ಯ ತೊಂದರೆ ಕೊಡಲೆಂದೇ ಯಾರೂ ಸಿಗ್ನಲ್ ಲೈಟ್ ಹಾಕುವುದಿಲ್ಲ’ ಎಂದು ಹೇಳಿದರು.</p><p>ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾತನಾಡಿ, ‘ನಾನು ಪರಿಶೀಲಿಸಿದ್ದೇನೆ. ವೈಜ್ಞಾನಿಕವಾಗಿಯೇ ಸಿಗ್ನಲ್ ಲೈಟ್ ಹಾಕಲಾಗಿದೆ. ಭವಿಷ್ಯದ ಮೈಸೂರಿನ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಿದ್ದೇವೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಬಗೆ ಹರಿದಿದೆ’ ಎಂದು ಸಮರ್ಥಿಸಿಕೊಂಡರು.</p><p>‘ಮೈಸೂರಿನ ಬೆಳವಣಿಗೆ ದೃಷ್ಟಿಯಿಂದ ಸಿಗ್ನಲ್ ಲೈಟ್ಗಳ ಅವಶ್ಯಕತೆ ಇತ್ತು. ಇದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರಿಗೆ ತೊಂದರೆ ಆಗಿಲ್ಲ. ಕೆಲವೊಂದು ಕಡೆ ಎರಡು ನಿಮಿಷದ ಅವಧಿಯನ್ನು ಕಡಿಮೆ ಮಾಡುವಂತೆ ಸೂಚಿಸಿದ್ದೇನೆ. ಅನಗತ್ಯವಾಗಿ ಅಳವಡಿಕೆ ಮಾಡಿಲ್ಲ’ ಎಂದರು.</p>.ಮೈಸೂರು | ಬಾಬೂಜಿ, ಅಂಬೇಡ್ಕರ್ ಜಯಂತಿ: ಅರ್ಥಪೂರ್ಣ ಆಚರಣೆಗೆ ಕ್ರಮ: DC.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>