<p><strong>ಮೈಸೂರು</strong>: ‘ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹಗರಣಗಳ ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸದಸ್ಯರು ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಈಚೆಗೆ ಪ್ರತಿಭಟಿಸಿದರು.</p>.<p>ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ‘ಮಹಾರಾಜ ಕಾಲೇಜಿನ 17 ಖಾತೆಗಳಿಂದ ₹ 2.45 ಕೋಟಿಯನ್ನು ಮೈಸೂರು ವಿವಿಯ ಆಡಳಿತ ಮಂಡಳಿ ಗಮನಕ್ಕೂ ತಾರದೇ ಕುಲಪತಿ ಹಾಗೂ ಕುಲಸಚಿವರು ಖರ್ಚು ಮಾಡಿದ್ದಾರೆ. ಟೆಂಡರ್ಗೆ ಪ್ರಾಂಶುಪಾಲರ ಸಹಿಯಿಲ್ಲದೆ, ಸಿಂಡಿಕೇಟ್ ಸದಸ್ಯರ ಗಮನಕ್ಕೂ ತಾರದೇ ಅಕ್ರಮ ಎಸಗಿದ್ದಾರೆ’ ಎಂದು ದೂರಿದರು.</p>.<p>‘ಮೌಲ್ಯಭವನದ ಪರಿಕರಗಳ ಸಾಮಗ್ರಿಗಳ ಟೆಂಡರ್ನಲ್ಲಿ ಕುಲಪತಿಗಳು ₹ 4.96 ಕೋಟಿ ಬಳಸಿರುವುದನ್ನು ಕುಲಸಚಿವರ ಗಮನಕ್ಕೂ ತಾರದೇ ನಡೆದಿರುವ ನಿಯಬಾಹಿರ ಕ್ರಮವಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.</p>.<p>ಸಂಘಟನೆಯ ಗಾಯಿತ್ರಿ ವಿಜಯೇಂದ್ರ, ಜಿ.ಲೋಕೇಶ್ ಕುಮಾರ್, ಸುಜಾತ ಷಣ್ಮುಗಂ, ಹೇಮಂತ್ಗೌಡ, ಶಿವರಾಜ್, ವಿನಯ್, ದೇಬೂರು ವಿಜಯ, ಪುಷ್ಪಲತಾ, ಮಹೇಶ್, ಸ್ವಾಮಿ, ಅಸ್ಲಾಂ, ವಾಸ್ಸಿಂ, ಲೋಕೇಶ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-39-106352215</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹಗರಣಗಳ ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸದಸ್ಯರು ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಈಚೆಗೆ ಪ್ರತಿಭಟಿಸಿದರು.</p>.<p>ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ‘ಮಹಾರಾಜ ಕಾಲೇಜಿನ 17 ಖಾತೆಗಳಿಂದ ₹ 2.45 ಕೋಟಿಯನ್ನು ಮೈಸೂರು ವಿವಿಯ ಆಡಳಿತ ಮಂಡಳಿ ಗಮನಕ್ಕೂ ತಾರದೇ ಕುಲಪತಿ ಹಾಗೂ ಕುಲಸಚಿವರು ಖರ್ಚು ಮಾಡಿದ್ದಾರೆ. ಟೆಂಡರ್ಗೆ ಪ್ರಾಂಶುಪಾಲರ ಸಹಿಯಿಲ್ಲದೆ, ಸಿಂಡಿಕೇಟ್ ಸದಸ್ಯರ ಗಮನಕ್ಕೂ ತಾರದೇ ಅಕ್ರಮ ಎಸಗಿದ್ದಾರೆ’ ಎಂದು ದೂರಿದರು.</p>.<p>‘ಮೌಲ್ಯಭವನದ ಪರಿಕರಗಳ ಸಾಮಗ್ರಿಗಳ ಟೆಂಡರ್ನಲ್ಲಿ ಕುಲಪತಿಗಳು ₹ 4.96 ಕೋಟಿ ಬಳಸಿರುವುದನ್ನು ಕುಲಸಚಿವರ ಗಮನಕ್ಕೂ ತಾರದೇ ನಡೆದಿರುವ ನಿಯಬಾಹಿರ ಕ್ರಮವಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.</p>.<p>ಸಂಘಟನೆಯ ಗಾಯಿತ್ರಿ ವಿಜಯೇಂದ್ರ, ಜಿ.ಲೋಕೇಶ್ ಕುಮಾರ್, ಸುಜಾತ ಷಣ್ಮುಗಂ, ಹೇಮಂತ್ಗೌಡ, ಶಿವರಾಜ್, ವಿನಯ್, ದೇಬೂರು ವಿಜಯ, ಪುಷ್ಪಲತಾ, ಮಹೇಶ್, ಸ್ವಾಮಿ, ಅಸ್ಲಾಂ, ವಾಸ್ಸಿಂ, ಲೋಕೇಶ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-39-106352215</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>