<p><strong>ಮೈಸೂರು</strong>: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷರಾಗಿ ಕೆ.ಎಸ್.ಪ್ರಕಾಶ್ 1,088 ಮತಗಳನ್ನು ಪಡೆದು ಆಯ್ಕೆಯಾದರು.</p>.<p>ಇಲ್ಲಿನ ಹಾರ್ಡ್ವಿಕ್ ಶಾಲೆಯಲ್ಲಿ ಅಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 1,375 ಮತಗಳು ಚಲಾವಣೆಯಾದವು. ಪ್ರಕಾಶ್ ನಂತರದ ಸ್ಥಾನ ಪಡೆದ ಎಸ್.ಆರ್.ಶಿವಕುಮಾರ್ 178 ಹಾಗೂ ಶಿವಕುಮಾರ್ 74 ಮತಗಳನ್ನಷ್ಟೇ ಗಳಿಸಿದರು.</p>.<p>ಬೆಳಿಗ್ಗೆ 8ರಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4ಕ್ಕೆ ಮುಕ್ತಾಯಗೊಂಡಿತು. ಘಟಕದಲ್ಲಿ 3,137 ಮತದಾರರಿದ್ದರೂ ಶೇ 43ರಷ್ಟು ಮತಗಳಷ್ಟೇ ಚಲಾವಣೆಯಾದವು. ಅಧ್ಯಕ್ಷ ಸ್ಥಾನಕ್ಕೆ ಮೂವರು ಕಣದಲ್ಲಿದ್ದರೆ, 20 ನಿರ್ದೇಶಕ ಸ್ಥಾನಗಳಿಗೆ 28 ಮಂದಿ ಸ್ಪರ್ಧಿಸಿದ್ದರು.</p>.<p>‘ಅಧ್ಯಕ್ಷ ಸ್ಥಾನಕ್ಕೆ ಒಂದು ಮತ ಹಾಗೂ ನಿರ್ದೇಶಕ ಸ್ಥಾನಕ್ಕೆ 20 ಮತಗಳನ್ನು ಮಾತ್ರ ಹಾಕಬೇಕಿತ್ತು. ಪ್ರತಿ 400 ಜನರಿಗೆ ಒಂದು ಬೂತ್ ತೆರೆಯಲಾಗಿತ್ತು. 8 ಮತಗಟ್ಟೆಗಳಿದ್ದವು. ಪಾರದರ್ಶಕವಾಗಿಚುನಾವಣೆ ನಡೆದಿದೆ. 5 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು’ ಎಂದು ಚುನಾವಣಾಧಿಕಾರಿ ಬಿ.ಆರ್.ಉಮಾಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಗೆಲುವು ಸಾಧಿಸಿದವರಿಗೆ ಹಾರ ಹಾಕಿ ಬೆಂಬಲಿಗರು ಸಂಭ್ರಮಿಸಿದರು. ಪ್ರಕಾಶ್ ಅವರ ತಂಡದವರೇ ಹೆಚ್ಚು ಮಂದಿ ಆಯ್ಕೆಯಾದರು. 10 ಮಹಿಳಾ ನಿರ್ದೇಶಕರ ಸ್ಥಾನಕ್ಕೆ 12 ಮಂದಿ ಸ್ಪರ್ಧಿಸಿದ್ದರು. ಈ ವೇಳೆ ಎಸ್.ಜಗದಾಂಬಾ ಮತ್ತು ಪುಷ್ಪಾ ಸಂಶಿ ಅವರು ನಾಮಪತ್ರ ವಾಪಸ್ ಪಡೆದಿದ್ದರಿಂದ ಉಳಿದ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಘೋಷಿಸಲಾಯಿತು.</p>.<p><strong>ವಿಶ್ವಾಸವಿತ್ತು:</strong> ‘ಪ್ರಚಾರ ಸಂದರ್ಭದಲ್ಲಿಯೇ ಮತದಾರರೇ ಗೆಲ್ಲಬೇಕೆಂದುಹೇಳುತ್ತಿದ್ದರಿಂದ ವಿಶ್ವಾಸವಿತ್ತು.ಚುನಾವಣಾ ಪ್ರಣಾಳಿಕೆ ಅನುಷ್ಠಾನಗೊಳಿಸಲು ಬದ್ಧವಾಗಿ ಕೆಲಸ ಮಾಡುವೆ.ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ.ಮಹಾಸಭಾದಿಂದ ಡಾ.ರಾಜ್ಕುಮಾರ್ರಸ್ತೆಯಲ್ಲಿ ಬಸವ ಭವನ ನಿರ್ಮಿಸಲಾಗುತ್ತಿದ್ದು, ದೇಣಿಗೆ ಸಂಗ್ರಹಿಸಲಾಗುವುದು. ಮನೆಮನೆ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲಾಗುವುದು. ಪ್ರತಿಭಾಪುರಸ್ಕಾರ, ಉದ್ಯೋಗ ಮೇಳ– ಕೌಶಲ ತರಬೇತಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಅಧ್ಯಕ್ಷ ಪ್ರಕಾಶ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-39-2137073181</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೈಸೂರು ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷರಾಗಿ ಕೆ.ಎಸ್.ಪ್ರಕಾಶ್ 1,088 ಮತಗಳನ್ನು ಪಡೆದು ಆಯ್ಕೆಯಾದರು.</p>.<p>ಇಲ್ಲಿನ ಹಾರ್ಡ್ವಿಕ್ ಶಾಲೆಯಲ್ಲಿ ಅಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 1,375 ಮತಗಳು ಚಲಾವಣೆಯಾದವು. ಪ್ರಕಾಶ್ ನಂತರದ ಸ್ಥಾನ ಪಡೆದ ಎಸ್.ಆರ್.ಶಿವಕುಮಾರ್ 178 ಹಾಗೂ ಶಿವಕುಮಾರ್ 74 ಮತಗಳನ್ನಷ್ಟೇ ಗಳಿಸಿದರು.</p>.<p>ಬೆಳಿಗ್ಗೆ 8ರಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4ಕ್ಕೆ ಮುಕ್ತಾಯಗೊಂಡಿತು. ಘಟಕದಲ್ಲಿ 3,137 ಮತದಾರರಿದ್ದರೂ ಶೇ 43ರಷ್ಟು ಮತಗಳಷ್ಟೇ ಚಲಾವಣೆಯಾದವು. ಅಧ್ಯಕ್ಷ ಸ್ಥಾನಕ್ಕೆ ಮೂವರು ಕಣದಲ್ಲಿದ್ದರೆ, 20 ನಿರ್ದೇಶಕ ಸ್ಥಾನಗಳಿಗೆ 28 ಮಂದಿ ಸ್ಪರ್ಧಿಸಿದ್ದರು.</p>.<p>‘ಅಧ್ಯಕ್ಷ ಸ್ಥಾನಕ್ಕೆ ಒಂದು ಮತ ಹಾಗೂ ನಿರ್ದೇಶಕ ಸ್ಥಾನಕ್ಕೆ 20 ಮತಗಳನ್ನು ಮಾತ್ರ ಹಾಕಬೇಕಿತ್ತು. ಪ್ರತಿ 400 ಜನರಿಗೆ ಒಂದು ಬೂತ್ ತೆರೆಯಲಾಗಿತ್ತು. 8 ಮತಗಟ್ಟೆಗಳಿದ್ದವು. ಪಾರದರ್ಶಕವಾಗಿಚುನಾವಣೆ ನಡೆದಿದೆ. 5 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು’ ಎಂದು ಚುನಾವಣಾಧಿಕಾರಿ ಬಿ.ಆರ್.ಉಮಾಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಗೆಲುವು ಸಾಧಿಸಿದವರಿಗೆ ಹಾರ ಹಾಕಿ ಬೆಂಬಲಿಗರು ಸಂಭ್ರಮಿಸಿದರು. ಪ್ರಕಾಶ್ ಅವರ ತಂಡದವರೇ ಹೆಚ್ಚು ಮಂದಿ ಆಯ್ಕೆಯಾದರು. 10 ಮಹಿಳಾ ನಿರ್ದೇಶಕರ ಸ್ಥಾನಕ್ಕೆ 12 ಮಂದಿ ಸ್ಪರ್ಧಿಸಿದ್ದರು. ಈ ವೇಳೆ ಎಸ್.ಜಗದಾಂಬಾ ಮತ್ತು ಪುಷ್ಪಾ ಸಂಶಿ ಅವರು ನಾಮಪತ್ರ ವಾಪಸ್ ಪಡೆದಿದ್ದರಿಂದ ಉಳಿದ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಘೋಷಿಸಲಾಯಿತು.</p>.<p><strong>ವಿಶ್ವಾಸವಿತ್ತು:</strong> ‘ಪ್ರಚಾರ ಸಂದರ್ಭದಲ್ಲಿಯೇ ಮತದಾರರೇ ಗೆಲ್ಲಬೇಕೆಂದುಹೇಳುತ್ತಿದ್ದರಿಂದ ವಿಶ್ವಾಸವಿತ್ತು.ಚುನಾವಣಾ ಪ್ರಣಾಳಿಕೆ ಅನುಷ್ಠಾನಗೊಳಿಸಲು ಬದ್ಧವಾಗಿ ಕೆಲಸ ಮಾಡುವೆ.ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ.ಮಹಾಸಭಾದಿಂದ ಡಾ.ರಾಜ್ಕುಮಾರ್ರಸ್ತೆಯಲ್ಲಿ ಬಸವ ಭವನ ನಿರ್ಮಿಸಲಾಗುತ್ತಿದ್ದು, ದೇಣಿಗೆ ಸಂಗ್ರಹಿಸಲಾಗುವುದು. ಮನೆಮನೆ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲಾಗುವುದು. ಪ್ರತಿಭಾಪುರಸ್ಕಾರ, ಉದ್ಯೋಗ ಮೇಳ– ಕೌಶಲ ತರಬೇತಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಅಧ್ಯಕ್ಷ ಪ್ರಕಾಶ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-39-2137073181</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>