<blockquote>ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು | ಹೋದ ವರ್ಷ 103 ಹಳ್ಳಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು |ಮುಂಗಾರು ಪೂರ್ವ ಮಳೆ ‘ಕೈ’ ಹಿಡಿದರೆ ಸಮಸ್ಯೆ ನಿವಾರಣೆ</blockquote>.<p><strong>ಮೈಸೂರು:</strong> ಜಿಲ್ಲೆಯಲ್ಲಿ ಬೇಸಿಗೆಯಲ್ಲಿ 93 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. </p>.<p>ಹೋದ ವರ್ಷ ಉತ್ತಮ ಮಳೆಯಾದ್ದರಿಂದ, ಜಿಲ್ಲೆಯ ಕಬಿನಿ ಜಲಾಶಯ, ಕೆರೆ–ಕಟ್ಟೆಗಳು, ನೆರೆಯ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು. ಇದರಿಂದಾಗಿ ‘ನೀರ ನೆಮ್ಮದಿ’ ಇತ್ತು. ಈಗ ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದಾಗಿ ಹಾಗೂ ಮುಂಗಾರು ಪೂರ್ವ ‘ಅಡ್ಡಮಳೆ’ ಬಾರದಿದ್ದರೆ ನೀರಿಗೆ ತೊಂದರೆ ಕಂಡುಬರಬಹುದಾದ ಗ್ರಾಮಗಳ ಪಟ್ಟಿಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಸಿದ್ಧಪಡಿಸಲಾಗಿದೆ.</p>.<p>ಸಕಾಲಕ್ಕೆ ಮಳೆಯಾಗದೇ ಬರಗಾಲದ ಸನ್ನಿವೇಶ ನಿರ್ಮಾಣವಾದರೆ ಪರಿಸ್ಥಿತಿ ಉಲ್ಬಣಗೊಳ್ಳಲಿದೆ. ಈ ಕಾರಣದಿಂದ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೂ ಸಭೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. </p>.<p>ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ. ಖಾಸಗಿಯವರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದೋ ಅಥವಾ ಟ್ಯಾಂಕರ್ಗಳ ಮೂಲಕವೂ ನೀರು ಪೂರೈಕೆಗೆ ಯೋಜಿಸಲಾಗಿದೆ. </p>.<p><strong>ಅಂದಾಜಿನಂತೆ...:</strong></p>.<p>ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಅಂದಾಜಿಸಿರುವ ಪ್ರಕಾರ, ಮಾರ್ಚ್ 30ರ ವೇಳೆಗೆ 12, ಏಪ್ರಿಲ್ 15ರ ಸುಮಾರಿಗೆ 24, ಏ.30ರ ವೇಳೆಗೆ 35, ಮೇ 15ಕ್ಕೆ 71, ಮೇ 30ರ ವೇಳೆಗೆ 93 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ ಎಂದು ಪಟ್ಟಿ ಸಿದ್ಧಪಡಿಸಲಾಗಿದೆ. ಹೋದ ವರ್ಷ, 103 ಹಳ್ಳಿಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಈ ಬಾರಿ 93ಕ್ಕೆ ಇಳಿದಿದೆ.</p>.<p>ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 18 ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ನಂತರದ ಸ್ಥಾನದಲ್ಲಿ ತಿ.ನರಸೀಪುರ (16 ಹಳ್ಳಿಗಳು) ತಾಲ್ಲೂಕು ಇದೆ. </p>.<p>ಜಿಲ್ಲೆಯಲ್ಲಿ ಸದ್ಯಕ್ಕೆ ಟ್ಯಾಂಕರ್ ನೀರು ಪೂರೈಸುವ ಪರಿಸ್ಥಿತಿ ಎದುರಾಗಿಲ್ಲ. ಮುಂದಿನ ಮಳೆಗಾಲದ ಆರಂಭದವರೆಗೂ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಸಮಸ್ಯೆ ಉಂಟಾಗಬಹುದಾದ ಗ್ರಾಮಗಳಿಗೆ ಸ್ಪಂದಿಸಲೆಂದು, ಹೆಚ್ಚಿನ ಇಳುವರಿ (ಜಾಸ್ತಿ ನೀರೊದಗಿಸುವ) ಹೊಂದಿರಬಹುದಾದ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಲಾಗಿದೆ. ಅವರೊಂದಿಗೆ ಒಪ್ಪಂದ ಮಾಡಿಕೊಂಡು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಸದ್ಯಕ್ಕಿಲ್ಲ ತೊಂದರೆ:</strong> </p>.<p>‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ನೀರಿಗಾಗಿ ಟ್ಯಂಕರ್ ಬಳಸುವ ಪರಿಸ್ಥಿತಿ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಕೊರತೆ ಎದುರಾಗಬಹುದಾದ ಕೆಲವು ಗ್ರಾಮಗಳನ್ನು ಗುರುತಿಸಿ ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲೆಲ್ಲಿ ಸಮಸ್ಯೆ ಉದ್ಭವ ಆಗುತ್ತದೆಯೋ ಅಲ್ಲಿಗೆ ಟ್ಯಾಂಕರ್ನಲ್ಲಿ ಸರಬರಾಜು ಮಾಡಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ನೀರು ಬಳಸಿಕೊಳ್ಳುತ್ತೇವೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಾಮಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 25 ಕೊಳವೆಬಾವಿಗಳಿವೆ. ಅವೆಲ್ಲವೂ ಚಾಲ್ತಿಯಲ್ಲಿವೆ. ನಮ್ಮಲ್ಲಿ ಜೂನ್ವರೆಗೂ ನೀರಿಗೆ ತೊಂದರೆ ಆಗುವ ಸಾಧ್ಯತೆ ಇಲ್ಲ’ ಎಂದು ತಾಲ್ಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಕೆ.ಎಸ್. ಗಣೇಶ್ ಪ್ರತಿಕ್ರಿಯಿಸಿದರು.</p>.<p><strong>ಮುನ್ನವೇ ಕಾಣಿಸಿಕೊಂಡಿತ್ತು:</strong> </p>.<p>ಬೇಸಿಗೆ ತೀವ್ರಗೊಳ್ಳುವುದಕ್ಕೂ ಮುನ್ನವೇ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯಿತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.</p>.<p>ಜಿಲ್ಲೆಯಲ್ಲಿ 9 ತಾಲ್ಲೂಕು ಪಂಚಾಯಿತಿ, 256 ಗ್ರಾಮ ಪಂಚಾಯಿತಿಗಳು, ಒಂದು ಮಹಾನಗರಪಾಲಿಕೆ, 3 ನಗರಸಭೆ, 5 ಪುರಸಭೆ ಹಾಗೂ 5 ಪಟ್ಟಣ ಪಂಚಾಯಿತಿಗಳಿವೆ. ಈ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಎಲ್ಲೆಲ್ಲಿ ಕೊರತೆ ಉಂಟಾಗಬಹುದು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪೂರ್ವ ಮುಂಗಾರು ‘ಕೈ ಹಿಡಿದರೆ’ ಕೊರತೆಯ ಆತಂಕ ದೂರಾಗಲಿದೆ ಎನ್ನುವ ನಿರೀಕ್ಷೆ ಅಧಿಕಾರಿಗಳದ್ದಾಗಿದೆ.</p>.<div><blockquote>ನೀರಿನ ಪೈಪ್ಲೈನ್ ಪರಿಶೀಲಿಸಬೇಕು. ಹೊಡೆದಿದ್ದರೆ ತ್ವರಿತವಾಗಿ ಸರಿಪಡಿಸಬೇಕು. ನೀರಿನ ಅಭಾವ ಕಂಡುಬಂದಲ್ಲಿ ಟ್ಯಾಂಕರ್ಗಳ ಮೂಲಕ ಪೂರೈಸಬೇಕು ಎಂದು ಸೂಚಿಸಲಾಗಿದೆ</blockquote><span class="attribution">ಎಸ್.ಯುಕೇಶ್ಕುಮಾರ್ ಸಿಇಒ ಜಿಲ್ಲಾ ಪಂಚಾಯಿತಿ ಮೈಸೂರು </span></div>.<p><strong>ಜಲಾಶಯಗಳ ಸ್ಥಿತಿಗತಿ ಏನಿದೆ?</strong> </p><p>ಮೈಸೂರು ನಗರಕ್ಕೆ ಹಾಗೂ ವಿವಿಧ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಪ್ರಮುಖ ‘ಮೂಲ’ವಾಗಿರುವುದು ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ. ಅಲ್ಲಿ ಹೋದ ವರ್ಷಕ್ಕೆ ಹೋಲಿಸಿದರೆ ಈಗಿನ ನೀರಿನ ಮಟ್ಟ ಕಡಿಮೆ ಪ್ರಮಾಣದಲ್ಲಿದೆ. 2284 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಈ ಜಲಾಶಯದ ನೀರಿನ ಮಟ್ಟ ಸೋಮವಾರ 2268.92 ಅಡಿಗಳಷ್ಟಿತ್ತು. 11.16 ಟಿಎಂಸಿ ಅಡಿ ನೀರಿದೆ. ಇದೇ ದಿನ ಹೋದ ವರ್ಷ 2271.37 ಅಡಿ ಇತ್ತು. </p><p>ಮೈಸೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯ ಮತ್ತೊಂದು ಪ್ರಮುಖ ಮೂಲವೆಂದರೆ ಅದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯ. ಅಲ್ಲಿಂದ ನೀರೆತ್ತಿ ಸಂಸ್ಕರಿಸಿ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಹಲವು ಹಳ್ಳಿಗಳಿಗೆ ಪೈಪ್ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆ ಜಲಾಶಯದ ನೀರಿನ ಮಟ್ಟ ಸೋಮವಾರ 110.44 ಅಡಿಗೆ ಇಳಿದಿದೆ. ಗರಿಷ್ಠ ಸಂಗ್ರಹ ಸಾಮರ್ಥ್ಯ 124.80 ಅಡಿಗಳ ಈ ಜಲಾಶಯದಿಂದ ಸದ್ಯ ‘ಕಟ್ಟು ಪದ್ಧತಿ’ಯಲ್ಲಿ (ತಿಂಗಳಲ್ಲಿ 15 ದಿನ) ರೈತರ ಬೆಳೆಗಳಿಗಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ‘ಕಳೆದ ವರ್ಷ ಉತ್ತಮ ಮಳೆಯಾದ್ದರಿಂದ ಜಲಾಶಯ ಭರ್ತಿಯಾಗಿತ್ತು. ಇದರಲ್ಲಿ ಈಗ ಇರುವ ನೀರು ಮುಂಗಾರು ಹಂಗಾಮು ಆರಂಭದವರೆಗೂ ಕುಡಿಯುವ ಉದ್ದೇಶಕ್ಕೆ ಬಳಸುವುದಕ್ಕೆ ಸಾಕಾಗಲಿದೆ’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.</p>.<p><strong>ಮುಖ್ಯಮಂತ್ರಿ ಊರಲ್ಲಿ...</strong> </p><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾಗೂ ಅವರ ಸ್ವಗ್ರಾಮವೂ ಆದ ಸಿದ್ದರಾಮಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ಮೇನಲ್ಲಿ ಪರಿಸ್ಥಿತಿ ತೀವ್ರಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು | ಹೋದ ವರ್ಷ 103 ಹಳ್ಳಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು |ಮುಂಗಾರು ಪೂರ್ವ ಮಳೆ ‘ಕೈ’ ಹಿಡಿದರೆ ಸಮಸ್ಯೆ ನಿವಾರಣೆ</blockquote>.<p><strong>ಮೈಸೂರು:</strong> ಜಿಲ್ಲೆಯಲ್ಲಿ ಬೇಸಿಗೆಯಲ್ಲಿ 93 ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. </p>.<p>ಹೋದ ವರ್ಷ ಉತ್ತಮ ಮಳೆಯಾದ್ದರಿಂದ, ಜಿಲ್ಲೆಯ ಕಬಿನಿ ಜಲಾಶಯ, ಕೆರೆ–ಕಟ್ಟೆಗಳು, ನೆರೆಯ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು. ಇದರಿಂದಾಗಿ ‘ನೀರ ನೆಮ್ಮದಿ’ ಇತ್ತು. ಈಗ ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದಾಗಿ ಹಾಗೂ ಮುಂಗಾರು ಪೂರ್ವ ‘ಅಡ್ಡಮಳೆ’ ಬಾರದಿದ್ದರೆ ನೀರಿಗೆ ತೊಂದರೆ ಕಂಡುಬರಬಹುದಾದ ಗ್ರಾಮಗಳ ಪಟ್ಟಿಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಸಿದ್ಧಪಡಿಸಲಾಗಿದೆ.</p>.<p>ಸಕಾಲಕ್ಕೆ ಮಳೆಯಾಗದೇ ಬರಗಾಲದ ಸನ್ನಿವೇಶ ನಿರ್ಮಾಣವಾದರೆ ಪರಿಸ್ಥಿತಿ ಉಲ್ಬಣಗೊಳ್ಳಲಿದೆ. ಈ ಕಾರಣದಿಂದ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೂ ಸಭೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. </p>.<p>ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ. ಖಾಸಗಿಯವರ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದೋ ಅಥವಾ ಟ್ಯಾಂಕರ್ಗಳ ಮೂಲಕವೂ ನೀರು ಪೂರೈಕೆಗೆ ಯೋಜಿಸಲಾಗಿದೆ. </p>.<p><strong>ಅಂದಾಜಿನಂತೆ...:</strong></p>.<p>ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಅಂದಾಜಿಸಿರುವ ಪ್ರಕಾರ, ಮಾರ್ಚ್ 30ರ ವೇಳೆಗೆ 12, ಏಪ್ರಿಲ್ 15ರ ಸುಮಾರಿಗೆ 24, ಏ.30ರ ವೇಳೆಗೆ 35, ಮೇ 15ಕ್ಕೆ 71, ಮೇ 30ರ ವೇಳೆಗೆ 93 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ ಎಂದು ಪಟ್ಟಿ ಸಿದ್ಧಪಡಿಸಲಾಗಿದೆ. ಹೋದ ವರ್ಷ, 103 ಹಳ್ಳಿಗಳ ಪಟ್ಟಿಯನ್ನು ತಯಾರಿಸಲಾಗಿತ್ತು. ಈ ಬಾರಿ 93ಕ್ಕೆ ಇಳಿದಿದೆ.</p>.<p>ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 18 ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ನಂತರದ ಸ್ಥಾನದಲ್ಲಿ ತಿ.ನರಸೀಪುರ (16 ಹಳ್ಳಿಗಳು) ತಾಲ್ಲೂಕು ಇದೆ. </p>.<p>ಜಿಲ್ಲೆಯಲ್ಲಿ ಸದ್ಯಕ್ಕೆ ಟ್ಯಾಂಕರ್ ನೀರು ಪೂರೈಸುವ ಪರಿಸ್ಥಿತಿ ಎದುರಾಗಿಲ್ಲ. ಮುಂದಿನ ಮಳೆಗಾಲದ ಆರಂಭದವರೆಗೂ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಸಮಸ್ಯೆ ಉಂಟಾಗಬಹುದಾದ ಗ್ರಾಮಗಳಿಗೆ ಸ್ಪಂದಿಸಲೆಂದು, ಹೆಚ್ಚಿನ ಇಳುವರಿ (ಜಾಸ್ತಿ ನೀರೊದಗಿಸುವ) ಹೊಂದಿರಬಹುದಾದ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಲಾಗಿದೆ. ಅವರೊಂದಿಗೆ ಒಪ್ಪಂದ ಮಾಡಿಕೊಂಡು ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಸದ್ಯಕ್ಕಿಲ್ಲ ತೊಂದರೆ:</strong> </p>.<p>‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ನೀರಿಗಾಗಿ ಟ್ಯಂಕರ್ ಬಳಸುವ ಪರಿಸ್ಥಿತಿ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಕೊರತೆ ಎದುರಾಗಬಹುದಾದ ಕೆಲವು ಗ್ರಾಮಗಳನ್ನು ಗುರುತಿಸಿ ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲೆಲ್ಲಿ ಸಮಸ್ಯೆ ಉದ್ಭವ ಆಗುತ್ತದೆಯೋ ಅಲ್ಲಿಗೆ ಟ್ಯಾಂಕರ್ನಲ್ಲಿ ಸರಬರಾಜು ಮಾಡಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ನೀರು ಬಳಸಿಕೊಳ್ಳುತ್ತೇವೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಾಮಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 25 ಕೊಳವೆಬಾವಿಗಳಿವೆ. ಅವೆಲ್ಲವೂ ಚಾಲ್ತಿಯಲ್ಲಿವೆ. ನಮ್ಮಲ್ಲಿ ಜೂನ್ವರೆಗೂ ನೀರಿಗೆ ತೊಂದರೆ ಆಗುವ ಸಾಧ್ಯತೆ ಇಲ್ಲ’ ಎಂದು ತಾಲ್ಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಕೆ.ಎಸ್. ಗಣೇಶ್ ಪ್ರತಿಕ್ರಿಯಿಸಿದರು.</p>.<p><strong>ಮುನ್ನವೇ ಕಾಣಿಸಿಕೊಂಡಿತ್ತು:</strong> </p>.<p>ಬೇಸಿಗೆ ತೀವ್ರಗೊಳ್ಳುವುದಕ್ಕೂ ಮುನ್ನವೇ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯಿತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಅಲ್ಲಿಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.</p>.<p>ಜಿಲ್ಲೆಯಲ್ಲಿ 9 ತಾಲ್ಲೂಕು ಪಂಚಾಯಿತಿ, 256 ಗ್ರಾಮ ಪಂಚಾಯಿತಿಗಳು, ಒಂದು ಮಹಾನಗರಪಾಲಿಕೆ, 3 ನಗರಸಭೆ, 5 ಪುರಸಭೆ ಹಾಗೂ 5 ಪಟ್ಟಣ ಪಂಚಾಯಿತಿಗಳಿವೆ. ಈ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಎಲ್ಲೆಲ್ಲಿ ಕೊರತೆ ಉಂಟಾಗಬಹುದು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪೂರ್ವ ಮುಂಗಾರು ‘ಕೈ ಹಿಡಿದರೆ’ ಕೊರತೆಯ ಆತಂಕ ದೂರಾಗಲಿದೆ ಎನ್ನುವ ನಿರೀಕ್ಷೆ ಅಧಿಕಾರಿಗಳದ್ದಾಗಿದೆ.</p>.<div><blockquote>ನೀರಿನ ಪೈಪ್ಲೈನ್ ಪರಿಶೀಲಿಸಬೇಕು. ಹೊಡೆದಿದ್ದರೆ ತ್ವರಿತವಾಗಿ ಸರಿಪಡಿಸಬೇಕು. ನೀರಿನ ಅಭಾವ ಕಂಡುಬಂದಲ್ಲಿ ಟ್ಯಾಂಕರ್ಗಳ ಮೂಲಕ ಪೂರೈಸಬೇಕು ಎಂದು ಸೂಚಿಸಲಾಗಿದೆ</blockquote><span class="attribution">ಎಸ್.ಯುಕೇಶ್ಕುಮಾರ್ ಸಿಇಒ ಜಿಲ್ಲಾ ಪಂಚಾಯಿತಿ ಮೈಸೂರು </span></div>.<p><strong>ಜಲಾಶಯಗಳ ಸ್ಥಿತಿಗತಿ ಏನಿದೆ?</strong> </p><p>ಮೈಸೂರು ನಗರಕ್ಕೆ ಹಾಗೂ ವಿವಿಧ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಪ್ರಮುಖ ‘ಮೂಲ’ವಾಗಿರುವುದು ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ. ಅಲ್ಲಿ ಹೋದ ವರ್ಷಕ್ಕೆ ಹೋಲಿಸಿದರೆ ಈಗಿನ ನೀರಿನ ಮಟ್ಟ ಕಡಿಮೆ ಪ್ರಮಾಣದಲ್ಲಿದೆ. 2284 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಈ ಜಲಾಶಯದ ನೀರಿನ ಮಟ್ಟ ಸೋಮವಾರ 2268.92 ಅಡಿಗಳಷ್ಟಿತ್ತು. 11.16 ಟಿಎಂಸಿ ಅಡಿ ನೀರಿದೆ. ಇದೇ ದಿನ ಹೋದ ವರ್ಷ 2271.37 ಅಡಿ ಇತ್ತು. </p><p>ಮೈಸೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯ ಮತ್ತೊಂದು ಪ್ರಮುಖ ಮೂಲವೆಂದರೆ ಅದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯ. ಅಲ್ಲಿಂದ ನೀರೆತ್ತಿ ಸಂಸ್ಕರಿಸಿ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಹಲವು ಹಳ್ಳಿಗಳಿಗೆ ಪೈಪ್ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆ ಜಲಾಶಯದ ನೀರಿನ ಮಟ್ಟ ಸೋಮವಾರ 110.44 ಅಡಿಗೆ ಇಳಿದಿದೆ. ಗರಿಷ್ಠ ಸಂಗ್ರಹ ಸಾಮರ್ಥ್ಯ 124.80 ಅಡಿಗಳ ಈ ಜಲಾಶಯದಿಂದ ಸದ್ಯ ‘ಕಟ್ಟು ಪದ್ಧತಿ’ಯಲ್ಲಿ (ತಿಂಗಳಲ್ಲಿ 15 ದಿನ) ರೈತರ ಬೆಳೆಗಳಿಗಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ‘ಕಳೆದ ವರ್ಷ ಉತ್ತಮ ಮಳೆಯಾದ್ದರಿಂದ ಜಲಾಶಯ ಭರ್ತಿಯಾಗಿತ್ತು. ಇದರಲ್ಲಿ ಈಗ ಇರುವ ನೀರು ಮುಂಗಾರು ಹಂಗಾಮು ಆರಂಭದವರೆಗೂ ಕುಡಿಯುವ ಉದ್ದೇಶಕ್ಕೆ ಬಳಸುವುದಕ್ಕೆ ಸಾಕಾಗಲಿದೆ’ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.</p>.<p><strong>ಮುಖ್ಯಮಂತ್ರಿ ಊರಲ್ಲಿ...</strong> </p><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾಗೂ ಅವರ ಸ್ವಗ್ರಾಮವೂ ಆದ ಸಿದ್ದರಾಮಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ಮೇನಲ್ಲಿ ಪರಿಸ್ಥಿತಿ ತೀವ್ರಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>