<p><strong>ನಂಜನಗೂಡು (ಮೈಸೂರು ಜಿಲ್ಲೆ):</strong> ತುಂತುರು ಮಳೆಯ ಲೆಕ್ಕಿಸದೇ ಇಲ್ಲಿ ಸೇರಿದ್ದ ಅಪಾರ ಭಕ್ತರ ಜಯಘೋಷಗಳೊಂದಿಗೆ 'ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ' ಸೋಮವಾರ ಬೆಳಿಗ್ಗೆ 6.34ಕ್ಕೆ ಅದ್ದೂರಿಯಾಗಿ ನೆರವೇರಿತು.</p>.ನಂಜನಗೂಡು–ನಿಲಂಬೂರು ಮಾರ್ಗಕ್ಕೆ ಅಂತಿಮ ಸ್ಥಳ ಸಮೀಕ್ಷೆ: ವೈಷ್ಣವ್ .<p>ದಕ್ಷಿಣ ಕಾಶಿ ನಂಜನಗೂಡು ದೊಡ್ಡಜಾತ್ರೆಯ ವೈಭವಕ್ಕೆ ಕಳಶಪ್ರಾಯವಾದ ನಂಜುಂಡನ ತೇರು ರಾಜಠೀವಿಯಲ್ಲಿ ಸಾಗುತ್ತಿದ್ದರೆ, ಭಕ್ತರ ಭಕುತಿಯನ್ನು ನೋಡಿದವರ ಎದೆಯಲ್ಲಿ ಬೆರಗು ತಂದಿತು. ಕಣ್ಣುಗಳಲ್ಲಿ ಭಕ್ತಿರಸ ತುಂಬಿ ಬಂದಿತು. </p><p>ಇರುವೆಗಳಂತೆ ದೇಗುಲದ ಅಂಗಳವನ್ನು ತುಂಬಿದ್ದ ಜನರು ರಥದ ದಾರಿಯನ್ನೇ ಅನುಸರಿಸಿದರು. ರಥ ಬೀದಿಯಲ್ಲಿ ತೇರಿನ ಹೆಬ್ಬಾವಿನ ಗಾತ್ರದ ಮಿಣಿಯನ್ನು ಎಳೆದು ಹರಕೆ ತೀರಿಸಿದರು. </p><p>'ಬಂದನಾಪ್ಪ ಬಂದಾನೊ... ನಂಜುಂಡಪ್ಪ ಬಂದಾನೋ' ಎನ್ನುತ್ತ ದೊಡ್ಡರಥವನ್ನು ಎಳೆಯುತ್ತಿದ್ದರೆ, ಭಕ್ತಸಾಗರ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿತು. 'ಚಾಮುಂಡೇಶ್ವರಿ'ಗೂ ಜಯಕಾರ ಹಾಕಿದರು. </p><p>ರಥಾರೋಹಣ: ಬೆಳಿಗ್ಗೆ 6 ಗಂಟೆಗೆ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಶ್ರೀ ಮನ್ನಹಾಗೌತಮ ರಥರೋಹಣ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಮುಂಭಾಗಕ್ಕೆ ತಂದ ನಂತರ ಗೌತಮ ರಥಕ್ಕೆ ದೇವರನ್ನು ಪ್ರತಿಷ್ಠಾಪಿಸಲಾಯಿತು. </p>.ನಂಜನಗೂಡು: ಸರಣಿ ಕಳ್ಳತನ ಮಾಡಿದ್ದ ಆರೋಪಿ ಬಂಧನ.<p>ಶಾಸಕ ದರ್ಶನ್ ಧ್ರುವನಾರಾಯಣ ಅವರು ರಥದ ಚಕ್ರಕ್ಕೆ ಈಡುಗಾಯಿ ಒಡೆದು, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಹಸಿರು ಬಾವುಟ ತೋರಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಗಾರಿಯ 'ಧಿಮಿಧಿಮಿ'ಸುವ ಸದ್ದು ಮೇಳೈಸಿತು. ಬೆಳಿಗ್ಗೆ 6.34ಕ್ಕೆ ರಥವು ಚಲಿಸಿತು. </p><p>ಶ್ರೀಕಂಠೇಶ್ವರಸ್ವಾಮಿಯ 110 ಟನ್ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು 1.5 ಕಿ.ಮೀ. ದೂರದ ರಥಬೀದಿಯಲ್ಲಿ ಸಾಗಿದವು.</p><p>5 ರಥಗಳನ್ನು ವಿವಿಧ ಬಣ್ಣದ ವಸ್ತ್ರ, ಬಾವುಟಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿತ್ತು. ದೊಡ್ಡರಥವನ್ನು ಎಳೆಯಲು 100 ಮೀಟರ್ ಉದ್ದದ ಎರಡು ಬೃಹತ್ ಹಗ್ಗಗಳನ್ನು ಹೊತ್ತ ಭಕ್ತರು ಮೈಕಿನಲ್ಲಿ ಬರುತ್ತಿದ್ದ ಸೂಚನೆಗಳಿಗೆ ಕಿವಿಯಾಗಿದ್ದರೆ, ಹಸಿರು ಬಾವುಟ ಬೀಸಿದರೆ ಬಲಹಾಕಿ ಎಳೆಯುತ್ತಾ, ಕೆಂಬಾವುಟ ಬಂದರೆ ನಿಲ್ಲುತ್ತಾ 'ಭಕ್ತಿ ಸೇವೆ' ಸಲ್ಲಿಸಿದರು. </p><p>ರಥದ ಚಲನೆಯನ್ನು ನಿಯಂತ್ರಿಸಲು ಗೊದಮ ಕೊಡುವ ತಂಡದ ಸದಸ್ಯರು ಹಳದಿ ಸಮವಸ್ತ್ರ ಧರಿಸಿದ್ದರು. ಜೊತೆಯಲ್ಲಿಯೇ ರಥವನ್ನು ನಿಯಂತ್ರಿಸಲು ಜೆಸಿಬಿ, ಕ್ರೇನ್, ಆಂಬುಲೆನ್ಸ್ ವಾಹನಗಳೂ ಇದ್ದವು.</p>.ನಂಜನಗೂಡು | ದೇಗುಲದ ದಾಸೋಹ ಭವನದ ಮೆಟ್ಟಿಲ ಮೇಲೆ ಮಾಂಸಾಹಾರ ಸೇವನೆ: ಆರೋಪಿ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು (ಮೈಸೂರು ಜಿಲ್ಲೆ):</strong> ತುಂತುರು ಮಳೆಯ ಲೆಕ್ಕಿಸದೇ ಇಲ್ಲಿ ಸೇರಿದ್ದ ಅಪಾರ ಭಕ್ತರ ಜಯಘೋಷಗಳೊಂದಿಗೆ 'ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾ ರಥೋತ್ಸವ' ಸೋಮವಾರ ಬೆಳಿಗ್ಗೆ 6.34ಕ್ಕೆ ಅದ್ದೂರಿಯಾಗಿ ನೆರವೇರಿತು.</p>.ನಂಜನಗೂಡು–ನಿಲಂಬೂರು ಮಾರ್ಗಕ್ಕೆ ಅಂತಿಮ ಸ್ಥಳ ಸಮೀಕ್ಷೆ: ವೈಷ್ಣವ್ .<p>ದಕ್ಷಿಣ ಕಾಶಿ ನಂಜನಗೂಡು ದೊಡ್ಡಜಾತ್ರೆಯ ವೈಭವಕ್ಕೆ ಕಳಶಪ್ರಾಯವಾದ ನಂಜುಂಡನ ತೇರು ರಾಜಠೀವಿಯಲ್ಲಿ ಸಾಗುತ್ತಿದ್ದರೆ, ಭಕ್ತರ ಭಕುತಿಯನ್ನು ನೋಡಿದವರ ಎದೆಯಲ್ಲಿ ಬೆರಗು ತಂದಿತು. ಕಣ್ಣುಗಳಲ್ಲಿ ಭಕ್ತಿರಸ ತುಂಬಿ ಬಂದಿತು. </p><p>ಇರುವೆಗಳಂತೆ ದೇಗುಲದ ಅಂಗಳವನ್ನು ತುಂಬಿದ್ದ ಜನರು ರಥದ ದಾರಿಯನ್ನೇ ಅನುಸರಿಸಿದರು. ರಥ ಬೀದಿಯಲ್ಲಿ ತೇರಿನ ಹೆಬ್ಬಾವಿನ ಗಾತ್ರದ ಮಿಣಿಯನ್ನು ಎಳೆದು ಹರಕೆ ತೀರಿಸಿದರು. </p><p>'ಬಂದನಾಪ್ಪ ಬಂದಾನೊ... ನಂಜುಂಡಪ್ಪ ಬಂದಾನೋ' ಎನ್ನುತ್ತ ದೊಡ್ಡರಥವನ್ನು ಎಳೆಯುತ್ತಿದ್ದರೆ, ಭಕ್ತಸಾಗರ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿತು. 'ಚಾಮುಂಡೇಶ್ವರಿ'ಗೂ ಜಯಕಾರ ಹಾಕಿದರು. </p><p>ರಥಾರೋಹಣ: ಬೆಳಿಗ್ಗೆ 6 ಗಂಟೆಗೆ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಶ್ರೀ ಮನ್ನಹಾಗೌತಮ ರಥರೋಹಣ ನಡೆಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಮುಂಭಾಗಕ್ಕೆ ತಂದ ನಂತರ ಗೌತಮ ರಥಕ್ಕೆ ದೇವರನ್ನು ಪ್ರತಿಷ್ಠಾಪಿಸಲಾಯಿತು. </p>.ನಂಜನಗೂಡು: ಸರಣಿ ಕಳ್ಳತನ ಮಾಡಿದ್ದ ಆರೋಪಿ ಬಂಧನ.<p>ಶಾಸಕ ದರ್ಶನ್ ಧ್ರುವನಾರಾಯಣ ಅವರು ರಥದ ಚಕ್ರಕ್ಕೆ ಈಡುಗಾಯಿ ಒಡೆದು, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಹಸಿರು ಬಾವುಟ ತೋರಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಗಾರಿಯ 'ಧಿಮಿಧಿಮಿ'ಸುವ ಸದ್ದು ಮೇಳೈಸಿತು. ಬೆಳಿಗ್ಗೆ 6.34ಕ್ಕೆ ರಥವು ಚಲಿಸಿತು. </p><p>ಶ್ರೀಕಂಠೇಶ್ವರಸ್ವಾಮಿಯ 110 ಟನ್ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು 1.5 ಕಿ.ಮೀ. ದೂರದ ರಥಬೀದಿಯಲ್ಲಿ ಸಾಗಿದವು.</p><p>5 ರಥಗಳನ್ನು ವಿವಿಧ ಬಣ್ಣದ ವಸ್ತ್ರ, ಬಾವುಟಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿತ್ತು. ದೊಡ್ಡರಥವನ್ನು ಎಳೆಯಲು 100 ಮೀಟರ್ ಉದ್ದದ ಎರಡು ಬೃಹತ್ ಹಗ್ಗಗಳನ್ನು ಹೊತ್ತ ಭಕ್ತರು ಮೈಕಿನಲ್ಲಿ ಬರುತ್ತಿದ್ದ ಸೂಚನೆಗಳಿಗೆ ಕಿವಿಯಾಗಿದ್ದರೆ, ಹಸಿರು ಬಾವುಟ ಬೀಸಿದರೆ ಬಲಹಾಕಿ ಎಳೆಯುತ್ತಾ, ಕೆಂಬಾವುಟ ಬಂದರೆ ನಿಲ್ಲುತ್ತಾ 'ಭಕ್ತಿ ಸೇವೆ' ಸಲ್ಲಿಸಿದರು. </p><p>ರಥದ ಚಲನೆಯನ್ನು ನಿಯಂತ್ರಿಸಲು ಗೊದಮ ಕೊಡುವ ತಂಡದ ಸದಸ್ಯರು ಹಳದಿ ಸಮವಸ್ತ್ರ ಧರಿಸಿದ್ದರು. ಜೊತೆಯಲ್ಲಿಯೇ ರಥವನ್ನು ನಿಯಂತ್ರಿಸಲು ಜೆಸಿಬಿ, ಕ್ರೇನ್, ಆಂಬುಲೆನ್ಸ್ ವಾಹನಗಳೂ ಇದ್ದವು.</p>.ನಂಜನಗೂಡು | ದೇಗುಲದ ದಾಸೋಹ ಭವನದ ಮೆಟ್ಟಿಲ ಮೇಲೆ ಮಾಂಸಾಹಾರ ಸೇವನೆ: ಆರೋಪಿ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>