<p>ಮೈಸೂರು: ‘ಶಿಕ್ಷಣ ಉದ್ಯೋಗದ ಸಾಧನವಲ್ಲ, ಜ್ಞಾನಾರ್ಜನೆಯ ಮೂಲ. ಜ್ಞಾನ ವೃದ್ಧಿಯಾದರೆ, ಚಿಂತನೆಯ ದೃಷ್ಟಿಕೋನ ಬದಲಾಗುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.</p>.<p>ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ, ಹಳೆಯ ವಿದ್ಯಾರ್ಥಿಗಳ ನೆಟ್ವರ್ಕ್ (ಮಿಲನ್) ಸಹಯೋಗದೊಂದಿಗೆ ವಿಭಾಗದ ವಜ್ರ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಪುಟಗಳಿಂದಾಚೆ: ಸಂವಹನ ಮತ್ತು ಸೃಜನಶೀಲತೆಯತ್ತ ಗ್ರಂಥಪಾಲನೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪುಸ್ತಕ, ಲೇಖನಗಳ ಓದಿನಿಂದ ಜ್ಞಾನ ಸಾಧ್ಯ. ಪ್ರಸ್ತುತದಲ್ಲಿ ಎಲ್ಲರೂ ಜ್ಞಾನಕ್ಕಿಂತ ಹೆಚ್ಚಿನದಾಗಿ ಅಂಕಗಳ ಗಳಿಕೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಯಾವುದೇ ಕಾರಣಕ್ಕೂ ಕೌಶಲಗಳ ಬೆಳವಣಿಗೆ ಅಸಾಧ್ಯ’ ಎಂದರು.</p>.<p>‘ಯುವಜನರು ಮೊಬೈಲ್ ಫೋನ್ಗಳಲ್ಲಿ ಎಲ್ಲವನ್ನೂ ಪಿಡಿಎಫ್ ಮೂಲ ಸಂಗ್ರಹಿಸಿಕೊಳ್ಳುತ್ತಾರೆ. ಆದರೆ, ಯಾರೂ ಓದಿ ಗ್ರಹಿಸಿಕೊಳ್ಳುವುದಿಲ್ಲ. ಇದರಿಂದ ಯಾವುದೇ ವಿಷಯಗಳು ಜ್ಞಾನವಾಗಿ ತಲೆಯಲ್ಲಿ ಉಳಿಯುವುದಿಲ್ಲ. ಮೊಬೈಲ್ ಫೋನ್ ಮಾಹಿತಿ ಪರಿಕರವೇ ಹೊರತು, ಜ್ಞಾನವಲ್ಲ’ ಎಂದು ತಿಳಿಸಿದರು.</p>.<p>‘ಹಿಂದೆ ಇಂಟರ್ನೆಟ್ ಇಲ್ಲದ ಕಾರಣ ಕಲಿಕೆಗೆ, ಸಂಶೋಧನೆಗಳಿಗೆ ಗ್ರಂಥಾಲಯವೇ ಆಧಾರವಾಗಿತ್ತು. ಈಗ ಮಾಹಿತಿ ಹುಡುಕುವ ವಿಧಾನ ಹಾಗೂ ಮೂಲ ಬೇರೆಯಾಗಿದೆ. ಇಂದಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ಏನನ್ನು ಬೇಕಾದರೂ ಹುಡುಕಬಹುದಾಗಿದೆ’ ಎಂದರು.</p>.<p>‘ತಂತ್ರಜ್ಞಾನದ ಬಳಕೆಯಿಂದ ಕೃತಿಚೌರ್ಯ ಹೆಚ್ಚಾಗುತ್ತಿದೆ. ಹಲವರಲ್ಲಿ ಸಮರ್ಥವಾದ ಗ್ರಹಿಕೆಯ ಕೊರತೆ ಕಾಣುತ್ತಿದೆ. ಗ್ರಂಥಾಲಯದಿಂದ ಮಾತ್ರ ಸೃಜನಾತ್ಮಕ ವಿಚಾರಗಳು ಹುಟ್ಟಲು ಸಾಧ್ಯವಾಗಿದ್ದು, ಪ್ರಾಥಮಿಕವಾಗಿ ಶಿಕ್ಷಣದ ತರಬೇತಿ ಸಾಧನವೇ ಗ್ರಂಥಾಲಯ’ ಎಂದು ಪ್ರತಿಪಾದಿಸಿದರು. </p>.<p>ನಿವೃತ್ತ ಕುಲಪತಿ ಬಿ.ಜೆ.ಸಂಗಮೇಶ್ವರ ಮಾತನಾಡಿ, ‘ಗ್ರಂಥಾಲಯ ಒಂದು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಇವತ್ತು ಆ ಗ್ರಹಿಕೆ ಮರೆಯಾಗುತ್ತಿದೆ. ಹೆಚ್ಚಿನ ಭಾಗ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವುದನ್ನೇ ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಬೆಂಗಳೂರು ಇನ್ಫರ್ಮ್ಯಾಟಿಕ್ಸ್ ಇಂಡಿಯಾ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಸತ್ಯನಾರಾಯಣ, ‘ಮಿಲನ್’ ಅಧ್ಯಕ್ಷೆ ಬಿ.ಎಂ.ಮೀರಾ, ಗ್ರಂಥಾಲಯ ಮತ್ತು ವಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಅಧ್ಯಕ್ಷ ಪ್ರೊ.ಎಂ.ಚಂದ್ರಶೇಖರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಶಿಕ್ಷಣ ಉದ್ಯೋಗದ ಸಾಧನವಲ್ಲ, ಜ್ಞಾನಾರ್ಜನೆಯ ಮೂಲ. ಜ್ಞಾನ ವೃದ್ಧಿಯಾದರೆ, ಚಿಂತನೆಯ ದೃಷ್ಟಿಕೋನ ಬದಲಾಗುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.</p>.<p>ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ, ಹಳೆಯ ವಿದ್ಯಾರ್ಥಿಗಳ ನೆಟ್ವರ್ಕ್ (ಮಿಲನ್) ಸಹಯೋಗದೊಂದಿಗೆ ವಿಭಾಗದ ವಜ್ರ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಪುಟಗಳಿಂದಾಚೆ: ಸಂವಹನ ಮತ್ತು ಸೃಜನಶೀಲತೆಯತ್ತ ಗ್ರಂಥಪಾಲನೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಪುಸ್ತಕ, ಲೇಖನಗಳ ಓದಿನಿಂದ ಜ್ಞಾನ ಸಾಧ್ಯ. ಪ್ರಸ್ತುತದಲ್ಲಿ ಎಲ್ಲರೂ ಜ್ಞಾನಕ್ಕಿಂತ ಹೆಚ್ಚಿನದಾಗಿ ಅಂಕಗಳ ಗಳಿಕೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಯಾವುದೇ ಕಾರಣಕ್ಕೂ ಕೌಶಲಗಳ ಬೆಳವಣಿಗೆ ಅಸಾಧ್ಯ’ ಎಂದರು.</p>.<p>‘ಯುವಜನರು ಮೊಬೈಲ್ ಫೋನ್ಗಳಲ್ಲಿ ಎಲ್ಲವನ್ನೂ ಪಿಡಿಎಫ್ ಮೂಲ ಸಂಗ್ರಹಿಸಿಕೊಳ್ಳುತ್ತಾರೆ. ಆದರೆ, ಯಾರೂ ಓದಿ ಗ್ರಹಿಸಿಕೊಳ್ಳುವುದಿಲ್ಲ. ಇದರಿಂದ ಯಾವುದೇ ವಿಷಯಗಳು ಜ್ಞಾನವಾಗಿ ತಲೆಯಲ್ಲಿ ಉಳಿಯುವುದಿಲ್ಲ. ಮೊಬೈಲ್ ಫೋನ್ ಮಾಹಿತಿ ಪರಿಕರವೇ ಹೊರತು, ಜ್ಞಾನವಲ್ಲ’ ಎಂದು ತಿಳಿಸಿದರು.</p>.<p>‘ಹಿಂದೆ ಇಂಟರ್ನೆಟ್ ಇಲ್ಲದ ಕಾರಣ ಕಲಿಕೆಗೆ, ಸಂಶೋಧನೆಗಳಿಗೆ ಗ್ರಂಥಾಲಯವೇ ಆಧಾರವಾಗಿತ್ತು. ಈಗ ಮಾಹಿತಿ ಹುಡುಕುವ ವಿಧಾನ ಹಾಗೂ ಮೂಲ ಬೇರೆಯಾಗಿದೆ. ಇಂದಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ಏನನ್ನು ಬೇಕಾದರೂ ಹುಡುಕಬಹುದಾಗಿದೆ’ ಎಂದರು.</p>.<p>‘ತಂತ್ರಜ್ಞಾನದ ಬಳಕೆಯಿಂದ ಕೃತಿಚೌರ್ಯ ಹೆಚ್ಚಾಗುತ್ತಿದೆ. ಹಲವರಲ್ಲಿ ಸಮರ್ಥವಾದ ಗ್ರಹಿಕೆಯ ಕೊರತೆ ಕಾಣುತ್ತಿದೆ. ಗ್ರಂಥಾಲಯದಿಂದ ಮಾತ್ರ ಸೃಜನಾತ್ಮಕ ವಿಚಾರಗಳು ಹುಟ್ಟಲು ಸಾಧ್ಯವಾಗಿದ್ದು, ಪ್ರಾಥಮಿಕವಾಗಿ ಶಿಕ್ಷಣದ ತರಬೇತಿ ಸಾಧನವೇ ಗ್ರಂಥಾಲಯ’ ಎಂದು ಪ್ರತಿಪಾದಿಸಿದರು. </p>.<p>ನಿವೃತ್ತ ಕುಲಪತಿ ಬಿ.ಜೆ.ಸಂಗಮೇಶ್ವರ ಮಾತನಾಡಿ, ‘ಗ್ರಂಥಾಲಯ ಒಂದು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಇವತ್ತು ಆ ಗ್ರಹಿಕೆ ಮರೆಯಾಗುತ್ತಿದೆ. ಹೆಚ್ಚಿನ ಭಾಗ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗುವುದನ್ನೇ ಮರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಬೆಂಗಳೂರು ಇನ್ಫರ್ಮ್ಯಾಟಿಕ್ಸ್ ಇಂಡಿಯಾ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎನ್.ವಿ.ಸತ್ಯನಾರಾಯಣ, ‘ಮಿಲನ್’ ಅಧ್ಯಕ್ಷೆ ಬಿ.ಎಂ.ಮೀರಾ, ಗ್ರಂಥಾಲಯ ಮತ್ತು ವಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಅಧ್ಯಕ್ಷ ಪ್ರೊ.ಎಂ.ಚಂದ್ರಶೇಖರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>