ವಿಡಿಯೊದಲ್ಲೇನಿದೆ: ‘ಸಂಜೆ 4.30ಕ್ಕೆ ಬೇಗೂರಿನ ಆಸ್ಪತ್ರೆ ಮುಚ್ಚಿತ್ತು. ಎನ್.ಬೇಗೂರಿನಿಂದ ಎಚ್.ಡಿ.ಕೋಟೆಗೆ 40 ಕಿ.ಮೀ ಆಗುತ್ತದೆ. ರಸ್ತೆಯೂ ಚೆನ್ನಾಗಿಲ್ಲ. ಆಂಬುಲೆನ್ಸ್ ಸಿಗಲಿಲ್ಲ. ಹಸುಳೆಗೆ ಸಿಪಿಆರ್ ಎಷ್ಟು ಕೊಡಲು ಸಾಧ್ಯ. ಬಿದರಹಳ್ಳಿ ಬಳಿ ಆಂಬುಲೆನ್ಸ್ ಸಿಕ್ಕಿದರೂ ಅದರಲ್ಲಿ ಆಮ್ಲಜನಕ ಸೌಲಭ್ಯ ಇರಲಿಲ್ಲ. ಎಷ್ಟು ಬಾರಿ ಉಸಿರು ನೀಡಿ ರಕ್ಷಿಸಿಕೊಳ್ಳಲು ಸಾಧ್ಯ’ ಎಂದು ದಂಪತಿ ಹೇಳಿರುವುದು ವಿಡಿಯೊದಲ್ಲಿದೆ. ಬೈಕ್ ಸವಾರ ಶಿವಲಿಂಗು ಎಂಬುವರು ವಿಡಿಯೊ ಮಾಡಿ, ವಾಟ್ಸ್ಆ್ಯಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ.