ದಸರಾ ಹಿನ್ನೆಲೆಯಲ್ಲಿ ಮಾಡಲಾಗಿರುವ ದೀಪಾಲಂಕಾರದ ವ್ಯವಸ್ಥೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಡುವ ಸಂಬಂಧ ಜಯಚಾಮರಾಜೇಂದ್ರ ವೃತ್ತ–ಓಲ್ಡ್ ಸ್ಟ್ಯಾಚ್ಯೂ ಸರ್ಕಲ್–ಕೆ.ಆರ್.ವೃತ್ತ–ಕಾರ್ಪೊರೇಷನ್ ವೃತ್ತ–ಗನ್ ಹೌಸ್ ವೃತ್ತ–ಕುಸ್ತಿ ಆಖಾಡ ಜಂಕ್ಷನ್ ರಸ್ತೆಗಳನ್ನು ‘ವಾಹನ ರಹಿತ ವಲಯ’ ಎಂದು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆತಿಳಿಸಿದೆ.