‘ಜಯಲಕ್ಷ್ಮಿವಿಲಾಸ ಅರಮನೆಯನ್ನು ನೀಡುವುದಕ್ಕೆ ನಮ್ಮ ವಿರೋಧವಿದೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸುಮಾರು 25 ಎಕರೆ ಜಾಗ ಬೇಕಾಗುತ್ತದೆ. ಅಲ್ಲಿ ಶಿಲಾಶಾಸನಗಳ ವಸ್ತುಸಂಗ್ರಹಾಲಯ, ತಾಳೆಗರಿಗಳ ಮ್ಯೂಸಿಯಂ ಸ್ಥಾಪಿಸಬೇಕಾಗುತ್ತದೆ. ತಮಿಳುನಾಡಿನಲ್ಲಿ ಬಹಳ ಕೆಲಸಗಳಾಗಿವೆ. ಇಲ್ಲಿಯೂ ಪ್ರಶಸ್ತವಾದ ಸ್ಥಳವನ್ನು ಒದಗಿಸಬೇಕು’ ಎಂದು ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ಹೇಳಿದರು.