<p><strong>ಮೈಸೂರು: ‘</strong>ಬನ್ನಂಜೆ ಗೋವಿಂದಾಚಾರ್ಯ ಬರವಣಿಗೆಯನ್ನೇ ಕಲೆಯಾಗಿಸಿಕೊಂಡ ದಾರ್ಶನಿಕ. ಅವರದ್ದು ಮಂತ್ರ ಸದೃಶ ವ್ಯಕ್ತಿತ್ವ’ ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಸ್ಮರಿಸಿದರು.</p>.<p>ಪರಂಪರೆ ಮೈಸೂರು ಹಾಗೂ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ನಗರದ ವೀಣೆ ಶೇಷಣ್ಣ ಭವನದ ಗಾನಭಾರತೀ ರಮಾಗೋವಿಂದ ಕಲಾ ವೇದಿಕೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಬನ್ನಂಜೆ 90ರ ವಿಶ್ವ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾಚೀನ ಸಾಹಿತ್ಯ ಹಾಗೂ ಋಷಿ ಪರಂಪರೆಯ ಮೌಲ್ಯಗಳನ್ನು ಸಮಕಾಲೀನಗೊಳಿಸಿ ಇಂದಿನ ಪ್ರಸ್ತುತತೆಯ ಬಗ್ಗೆ ಬನ್ನಂಜೆ ಅವರು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸಿದ್ದಾರೆ. ರಾಮಾಯಣ, ಮಹಾಭಾರತ, ಪುರಾಣಗಳ ಬಗ್ಗೆ ಅವರಿಗಿದ್ದ ಜ್ಞಾನ ಅಪಾರ. ಅವರ ಉಪನ್ಯಾಸಗಳನ್ನು ಕೇಳಿಯೇ ಜನರು ಬೆರಗುಗೊಂಡಿದ್ದರು’ ಎಂದು ವಿವರಿಸಿದರು.</p>.<p>‘ಬನ್ನಂಜೆ ಅವರ ಸಂಸ್ಕೃತ ವಿದ್ವತ್ ಆಳವಾದುದು. ಅದನ್ನು ಅವರ ಬರವಣಿಗೆಗಳಲ್ಲಿ ಕಾಣಬಹುದು. ಸುಮಾರು 150ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದಾರೆ. ಸಂಸ್ಕೃತ- ದೇಶಿ ಭಾಷೆಗಳ ಪೈಕಿ ಅವರ ‘ಶತರುದ್ರೀಯ’ ಕೃತಿ ಅಮೂಲ್ಯವಾದುದು. ಎಲ್ಲ ಧರ್ಮಗ್ರಂಥಗಳ ಆಳವಾದ ಓದು ಬಲ್ಲವರಾಗಿದ್ದರು. ಯಾವುದನ್ನೂ ಓದದೇ ಒಪ್ಪುತ್ತಿರಲಿಲ್ಲ’ ಎಂದು ಮೆಲುಕು ಹಾಕಿದರು.</p>.<p>ಕಲಾವಿದ ಗಂಜೀಫ ರಘುಪತಿ ಭಟ್, ‘ಬನ್ನಂಜೆ ಹಾಗೂ ನನ್ನ ಒಡನಾಟ ನಾಲ್ಕು ದಶಕದ್ದು. ಅವರ ಕೃತಿಗಳಿಗೆ ಚಿತ್ರ ರಚನೆಯಿಂದ ಅದು ಆರಂಭಗೊಂಡಿತು. ಆಚಾರ್ಯರು ಸ್ವತಃ ಕಲಾವಿದರೂ ಆಗಿದ್ದರು. ಆಚಾರ್ಯರ ಉಪನ್ಯಾಸ, ವಿದ್ಯಾಭೂಷಣರ ಹಾಡು ಹಾಗೂ ನನ್ನ ಚಿತ್ರ ರಚನೆ ಒಂದೇ ವೇದಿಕೆಯಲ್ಲಿ ಆಗಬೇಕು. ವಿಶ್ವದಾದ್ಯಂತ ಈ ಕಾರ್ಯಕ್ರಮ ನಡೆಸಬೇಕು ಎನ್ನುವ ನಮ್ಮ ಆಸೆ ಹಾಗೆಯೇ ಉಳಿಯಿತು’ ಎಂದು ನೆನೆದರು.</p>.<p>ಎರಡನೇ ಮುದ್ರಣ ಕಂಡಿರುವ ಬನ್ನಂಜೆ ಅವರ ‘ಆತ್ಮ ನಿವೇದನೆ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜರಾವ್ ಅಧ್ಯಕ್ಷತೆ ವಹಿಸಿ ಪ್ರಧಾನ ಉಪನ್ಯಾಸ ನೀಡಿದರು.</p>.<p>ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಜಯಶ್ರೀ ಶ್ಯಾನಬಾಗ್ ‘ನನ್ನ ಗೋವಿಂದಣ್ಣ’, ವಿದ್ವಾನ್ ಗ.ನಾ.ಭಟ್ಟ ‘ಬನ್ನಂಜೆ: ಸಂಸ್ಕೃತ ವಿದ್ವಾಂಸರು’ ಎಂಬ ವಿಷಯದ ಬಗ್ಗೆ ಮಾತನಾಡಿದರು.</p>.<p>ಪುತ್ರಿ ವೀಣಾ ಬನ್ನಂಜೆ, ಜ್ಯೋತಿ ಶಂಕರ್ ಇದ್ದರು. ಗಾಯಕಿಯರಾದ ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಬನ್ನಂಜೆ ಅವರ ರಚನೆಗಳ ಗೀತೆಗಾಯನ ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಬನ್ನಂಜೆ ಗೋವಿಂದಾಚಾರ್ಯ ಬರವಣಿಗೆಯನ್ನೇ ಕಲೆಯಾಗಿಸಿಕೊಂಡ ದಾರ್ಶನಿಕ. ಅವರದ್ದು ಮಂತ್ರ ಸದೃಶ ವ್ಯಕ್ತಿತ್ವ’ ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಸ್ಮರಿಸಿದರು.</p>.<p>ಪರಂಪರೆ ಮೈಸೂರು ಹಾಗೂ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ನಗರದ ವೀಣೆ ಶೇಷಣ್ಣ ಭವನದ ಗಾನಭಾರತೀ ರಮಾಗೋವಿಂದ ಕಲಾ ವೇದಿಕೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಬನ್ನಂಜೆ 90ರ ವಿಶ್ವ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾಚೀನ ಸಾಹಿತ್ಯ ಹಾಗೂ ಋಷಿ ಪರಂಪರೆಯ ಮೌಲ್ಯಗಳನ್ನು ಸಮಕಾಲೀನಗೊಳಿಸಿ ಇಂದಿನ ಪ್ರಸ್ತುತತೆಯ ಬಗ್ಗೆ ಬನ್ನಂಜೆ ಅವರು ತಮ್ಮ ಬರಹಗಳಲ್ಲಿ ವ್ಯಕ್ತಪಡಿಸಿದ್ದಾರೆ. ರಾಮಾಯಣ, ಮಹಾಭಾರತ, ಪುರಾಣಗಳ ಬಗ್ಗೆ ಅವರಿಗಿದ್ದ ಜ್ಞಾನ ಅಪಾರ. ಅವರ ಉಪನ್ಯಾಸಗಳನ್ನು ಕೇಳಿಯೇ ಜನರು ಬೆರಗುಗೊಂಡಿದ್ದರು’ ಎಂದು ವಿವರಿಸಿದರು.</p>.<p>‘ಬನ್ನಂಜೆ ಅವರ ಸಂಸ್ಕೃತ ವಿದ್ವತ್ ಆಳವಾದುದು. ಅದನ್ನು ಅವರ ಬರವಣಿಗೆಗಳಲ್ಲಿ ಕಾಣಬಹುದು. ಸುಮಾರು 150ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದಾರೆ. ಸಂಸ್ಕೃತ- ದೇಶಿ ಭಾಷೆಗಳ ಪೈಕಿ ಅವರ ‘ಶತರುದ್ರೀಯ’ ಕೃತಿ ಅಮೂಲ್ಯವಾದುದು. ಎಲ್ಲ ಧರ್ಮಗ್ರಂಥಗಳ ಆಳವಾದ ಓದು ಬಲ್ಲವರಾಗಿದ್ದರು. ಯಾವುದನ್ನೂ ಓದದೇ ಒಪ್ಪುತ್ತಿರಲಿಲ್ಲ’ ಎಂದು ಮೆಲುಕು ಹಾಕಿದರು.</p>.<p>ಕಲಾವಿದ ಗಂಜೀಫ ರಘುಪತಿ ಭಟ್, ‘ಬನ್ನಂಜೆ ಹಾಗೂ ನನ್ನ ಒಡನಾಟ ನಾಲ್ಕು ದಶಕದ್ದು. ಅವರ ಕೃತಿಗಳಿಗೆ ಚಿತ್ರ ರಚನೆಯಿಂದ ಅದು ಆರಂಭಗೊಂಡಿತು. ಆಚಾರ್ಯರು ಸ್ವತಃ ಕಲಾವಿದರೂ ಆಗಿದ್ದರು. ಆಚಾರ್ಯರ ಉಪನ್ಯಾಸ, ವಿದ್ಯಾಭೂಷಣರ ಹಾಡು ಹಾಗೂ ನನ್ನ ಚಿತ್ರ ರಚನೆ ಒಂದೇ ವೇದಿಕೆಯಲ್ಲಿ ಆಗಬೇಕು. ವಿಶ್ವದಾದ್ಯಂತ ಈ ಕಾರ್ಯಕ್ರಮ ನಡೆಸಬೇಕು ಎನ್ನುವ ನಮ್ಮ ಆಸೆ ಹಾಗೆಯೇ ಉಳಿಯಿತು’ ಎಂದು ನೆನೆದರು.</p>.<p>ಎರಡನೇ ಮುದ್ರಣ ಕಂಡಿರುವ ಬನ್ನಂಜೆ ಅವರ ‘ಆತ್ಮ ನಿವೇದನೆ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜರಾವ್ ಅಧ್ಯಕ್ಷತೆ ವಹಿಸಿ ಪ್ರಧಾನ ಉಪನ್ಯಾಸ ನೀಡಿದರು.</p>.<p>ಆಕಾಶವಾಣಿಯ ನಿವೃತ್ತ ನಿರ್ದೇಶಕಿ ಜಯಶ್ರೀ ಶ್ಯಾನಬಾಗ್ ‘ನನ್ನ ಗೋವಿಂದಣ್ಣ’, ವಿದ್ವಾನ್ ಗ.ನಾ.ಭಟ್ಟ ‘ಬನ್ನಂಜೆ: ಸಂಸ್ಕೃತ ವಿದ್ವಾಂಸರು’ ಎಂಬ ವಿಷಯದ ಬಗ್ಗೆ ಮಾತನಾಡಿದರು.</p>.<p>ಪುತ್ರಿ ವೀಣಾ ಬನ್ನಂಜೆ, ಜ್ಯೋತಿ ಶಂಕರ್ ಇದ್ದರು. ಗಾಯಕಿಯರಾದ ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಬನ್ನಂಜೆ ಅವರ ರಚನೆಗಳ ಗೀತೆಗಾಯನ ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>