‘ಮೈಸೂರಿನಿಂದ ಮಂಡ್ಯ ಜಿಲ್ಲೆಯವರೆಗೆ ಸೋಮವಾರ ನಡೆದ ಪಾದಯಾತ್ರೆಯಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಪ್ರಕಾಶ್ ರಾಜ್ ಅವರಿಗೆ ಹೈದರಾಬಾದ್ನಿಂದ ವಿಮಾನ ಲಭ್ಯವಾಗದಿದ್ದರಿಂದ ಕಾರ್ಯಕ್ರಮವು ಕೊನೆ ಕ್ಷಣದಲ್ಲಿ ರದ್ದಾಯಿತು. ಈ ಮೂವರೂ, ಯಾತ್ರೆಯಲ್ಲಿ ಮತ್ತೊಂದು ದಿನ ಭಾಗವಹಿಸಲಿದ್ದಾರೆ’ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.